ಎಸ್ಮಾ ಜಾರಿ: ಅಕ್ರಂ ಪಾಷ ಎಚ್ಚರಿಕೆ
‘ಸಾರಿಗೆ ನಿಗಮಗಳು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ–2013 (ಎಸ್ಮಾ) ಅಡಿಯಲ್ಲಿ ಇರುವ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಗಳಾಗಿರು
ವುದರಿಂದ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವಂತಿಲ್ಲ. ಹಾಗಿದ್ದೂ ಪಾಲ್ಗೊಂಡರೆ ಶಿಸ್ತುಕ್ರಮ ಮತ್ತು ವೇತನ ಕಡಿತಗೊಳಿಸಲಾಗುವುದು’ ಎಂದು ಎಚ್ಚರಿಸಿರುವ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ಅಕ್ರಂ ಪಾಷ ಎಸ್ಮಾ ಜಾರಿ ಮಾಡಿದ್ದಾರೆ.
‘ಎಸ್ಮಾ ಜಾರಿ ಇದ್ದಾಗ ಯಾವುದೇ ಸಂಘ ಸಂಸ್ಥೆಗಳು, ವ್ಯಕ್ತಿಗಳು ಮುಷ್ಕರಕ್ಕೆ ಪ್ರಚೋದನೆ ನೀಡುವಂತಿಲ್ಲ. ಜಂಟಿ ಕ್ರಿಯಾ ಸಮಿತಿಯವರು ಆಡಳಿತ ಮಂಡಳಿಗೆ ನೀಡಿರುವ ಮುಷ್ಕರದ ನೋಟಿಸ್ ಕುರಿತ ವಿವಾದವು ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದ ಹಂತದಲ್ಲಿದೆ. ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದೇ ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದ್ದಾರೆ.