<p><strong>ಬೆಂಗಳೂರು: ‘</strong>ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರ ಪರ್ವತ ಚಾರಣಕ್ಕೆ ಹೋಗುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದೇ ದಿನ 2 ಸಾವಿರದಿಂದ 3 ಸಾವಿರ ಜನರು ಒಂದೇ ಕಡೆ ಸೇರಿದರೆ ಅನಾಹುತ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ, ನಿತ್ಯ 150 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಜಾರುವ ಕಾರಣ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭೀತಿಯ ಕಾರಣಕ್ಕೆ ಚಾರಣಕ್ಕೆ ಅವಕಾಶ ಇಲ್ಲ’ ಎಂದು ವಿವರಿಸಿದರು.</p>.<p>‘ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ 24 ಕಿ.ಮೀ. ಚಾರಣ ಪಥವಿದ್ದು, ಹೋಗಿ, ಮರಳಿ ಬರಲು ಎರಡು ದಿನ ಆಗುತ್ತಿದೆ. ರಾತ್ರಿ ಅಲ್ಲೇ ಉಳಿಯಬೇಕಿತ್ತು. ಅಲ್ಲಿ ವನ್ಯಜೀವಿಗಳ ಸಂಚಾರವೂ ಇರುವ ಕಾರಣ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ 2024ರ ಜೂನ್ 5ರಂದು ಕೊಡಗು ವೃತ್ತದ ಅರಣ್ಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ನಿಧಿ ಸಭೆಯಲ್ಲಿ ರಾತ್ರಿ ತಂಗುವುದಕ್ಕೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿತ್ತು’ ಎಂದರು.</p>.<p>‘ಸುಬ್ರಹ್ಮಣ್ಯ ಮಾರ್ಗವಾಗಿ ಶೇಷ ಪರ್ವತಕ್ಕೆ ಕುಮಾರಪರ್ವತದಿಂದ 2 ಕಿ.ಮೀ. ಅಂತರವಿದೆ. ಇದು ಅತ್ಯಂತ ದುರ್ಗಮವಾಗಿರುವ ಕಾರಣ 2025ರ ಡಿಸೆಂಬರ್ನಿಂದ ಅದೇ ಚಾರಣ ಮಾರ್ಗದಲ್ಲಿ ಶೇಷ ಪರ್ವತಕ್ಕೆ 20 ಕಿ.ಮೀ.ಗೆ ಸೀಮಿತಗೊಳಿಸಿ 12 ಗಂಟೆಗಳ ಒಳಗಾಗಿ ಅಂದರೆ ಬೆಳಿಗ್ಗೆ 6ಕ್ಕೆ ಚಾರಣ ಆರಂಭಿಸಿ, ಸಂಜೆ 6ರೊಳಗೆ ಮರಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.</p>.<p>ಚಾರಣ ಆರಂಭದ ಸಮಯವನ್ನು ಬೆಳಿಗ್ಗೆ 6 ಗಂಟೆಯ ಬದಲು 5.30ಕ್ಕೆ ಆರಂಭಿಸಬೇಕೆಂಬ ಸದಸ್ಯರ ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದೂ ಖಂಡ್ರೆ ತಿಳಿಸಿದರು.</p>.<p><strong>ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಆದ್ಯತೆ</strong></p>.<p> ‘ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದರ ಜೊತೆಗೆ ಎಕ್ಸ್ಪ್ರೆಸ್ ಹೆದ್ದಾರಿ ಮೊದಲಾದ ಮೂಲಸೌಕರ್ಯ ಕಾಮಗಾರಿಗೆ ಗಜಪಥ ಛಿದ್ರವಾಗಿ ಆನೆ ಹಾವಳಿಯೂ ಹೆಚ್ಚಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.</p>.<p>ವಿಧಾನಸಭೆಯಲ್ಲಿ ಕಾಂಗ್ರೆಸ್ನ ಪಿ.ಎಂ. ನರೇಂದ್ರ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಈ ವರ್ಷ 116 ಕಿ.ಮೀ. ರೈಲು ಹಳಿ ತಡೆಗೋಡೆ (ರೈಲ್ವೆ ಬ್ಯಾರಿಕೇಡ್) ಮಂಜೂರು ಮಾಡಲಾಗಿದ್ದು, ₹201 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದರು.</p>.<p>‘ಆನೆಗಳು ನಾಡಿನತ್ತ ಬಂದಾಗ ಮರಳಿ ಕಾಡಿಗೆ ಅಟ್ಟಲು ಆನೆ ಕಾರ್ಯಪಡೆ ಮಾಡಿದ್ದೇವೆ. ಚಿರತೆ ಕಾರ್ಯಪಡೆ ರಚಿಸಿದ್ದೇವೆ. ಡ್ರೋನ್ ಕ್ಯಾಮೆರಾ ಬಳಸಿಕೊಂಡು ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡುತ್ತಿದ್ದೇವೆ. ಹೆಚ್ಚಿನ ರೈಲು ಹಳಿ ತಡೆಗೋಡೆಗೆ ಬೇಡಿಕೆ ಬಂದರೆ ಅಳವಡಿಸಿಲು ಪ್ರಯತ್ನಿಸಲಾಗುವುದು. ಉಪ ವಲಯ ಅರಣ್ಯಾಧಿಕಾರಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<div><blockquote>ಹಾವು ಕಚ್ಚಿ ಸಾವಿಗೀಡಾದ ರೈತರಿಗೆ ₹20 ಲಕ್ಷ ಪರಿಹಾರ ನೀಡುವ ಕುರಿತಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು</blockquote><span class="attribution">ಈಶ್ವರ ಖಂಡ್ರೆ, ಅರಣ್ಯ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರ ಪರ್ವತ ಚಾರಣಕ್ಕೆ ಹೋಗುವವರು ಕಡ್ಡಾಯವಾಗಿ ಆನ್ಲೈನ್ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದೇ ದಿನ 2 ಸಾವಿರದಿಂದ 3 ಸಾವಿರ ಜನರು ಒಂದೇ ಕಡೆ ಸೇರಿದರೆ ಅನಾಹುತ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ, ನಿತ್ಯ 150 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಜಾರುವ ಕಾರಣ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭೀತಿಯ ಕಾರಣಕ್ಕೆ ಚಾರಣಕ್ಕೆ ಅವಕಾಶ ಇಲ್ಲ’ ಎಂದು ವಿವರಿಸಿದರು.</p>.<p>‘ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ 24 ಕಿ.ಮೀ. ಚಾರಣ ಪಥವಿದ್ದು, ಹೋಗಿ, ಮರಳಿ ಬರಲು ಎರಡು ದಿನ ಆಗುತ್ತಿದೆ. ರಾತ್ರಿ ಅಲ್ಲೇ ಉಳಿಯಬೇಕಿತ್ತು. ಅಲ್ಲಿ ವನ್ಯಜೀವಿಗಳ ಸಂಚಾರವೂ ಇರುವ ಕಾರಣ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ 2024ರ ಜೂನ್ 5ರಂದು ಕೊಡಗು ವೃತ್ತದ ಅರಣ್ಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ನಿಧಿ ಸಭೆಯಲ್ಲಿ ರಾತ್ರಿ ತಂಗುವುದಕ್ಕೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿತ್ತು’ ಎಂದರು.</p>.<p>‘ಸುಬ್ರಹ್ಮಣ್ಯ ಮಾರ್ಗವಾಗಿ ಶೇಷ ಪರ್ವತಕ್ಕೆ ಕುಮಾರಪರ್ವತದಿಂದ 2 ಕಿ.ಮೀ. ಅಂತರವಿದೆ. ಇದು ಅತ್ಯಂತ ದುರ್ಗಮವಾಗಿರುವ ಕಾರಣ 2025ರ ಡಿಸೆಂಬರ್ನಿಂದ ಅದೇ ಚಾರಣ ಮಾರ್ಗದಲ್ಲಿ ಶೇಷ ಪರ್ವತಕ್ಕೆ 20 ಕಿ.ಮೀ.ಗೆ ಸೀಮಿತಗೊಳಿಸಿ 12 ಗಂಟೆಗಳ ಒಳಗಾಗಿ ಅಂದರೆ ಬೆಳಿಗ್ಗೆ 6ಕ್ಕೆ ಚಾರಣ ಆರಂಭಿಸಿ, ಸಂಜೆ 6ರೊಳಗೆ ಮರಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.</p>.<p>ಚಾರಣ ಆರಂಭದ ಸಮಯವನ್ನು ಬೆಳಿಗ್ಗೆ 6 ಗಂಟೆಯ ಬದಲು 5.30ಕ್ಕೆ ಆರಂಭಿಸಬೇಕೆಂಬ ಸದಸ್ಯರ ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದೂ ಖಂಡ್ರೆ ತಿಳಿಸಿದರು.</p>.<p><strong>ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಆದ್ಯತೆ</strong></p>.<p> ‘ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದರ ಜೊತೆಗೆ ಎಕ್ಸ್ಪ್ರೆಸ್ ಹೆದ್ದಾರಿ ಮೊದಲಾದ ಮೂಲಸೌಕರ್ಯ ಕಾಮಗಾರಿಗೆ ಗಜಪಥ ಛಿದ್ರವಾಗಿ ಆನೆ ಹಾವಳಿಯೂ ಹೆಚ್ಚಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.</p>.<p>ವಿಧಾನಸಭೆಯಲ್ಲಿ ಕಾಂಗ್ರೆಸ್ನ ಪಿ.ಎಂ. ನರೇಂದ್ರ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಈ ವರ್ಷ 116 ಕಿ.ಮೀ. ರೈಲು ಹಳಿ ತಡೆಗೋಡೆ (ರೈಲ್ವೆ ಬ್ಯಾರಿಕೇಡ್) ಮಂಜೂರು ಮಾಡಲಾಗಿದ್ದು, ₹201 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದರು.</p>.<p>‘ಆನೆಗಳು ನಾಡಿನತ್ತ ಬಂದಾಗ ಮರಳಿ ಕಾಡಿಗೆ ಅಟ್ಟಲು ಆನೆ ಕಾರ್ಯಪಡೆ ಮಾಡಿದ್ದೇವೆ. ಚಿರತೆ ಕಾರ್ಯಪಡೆ ರಚಿಸಿದ್ದೇವೆ. ಡ್ರೋನ್ ಕ್ಯಾಮೆರಾ ಬಳಸಿಕೊಂಡು ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡುತ್ತಿದ್ದೇವೆ. ಹೆಚ್ಚಿನ ರೈಲು ಹಳಿ ತಡೆಗೋಡೆಗೆ ಬೇಡಿಕೆ ಬಂದರೆ ಅಳವಡಿಸಿಲು ಪ್ರಯತ್ನಿಸಲಾಗುವುದು. ಉಪ ವಲಯ ಅರಣ್ಯಾಧಿಕಾರಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದರು.</p>.<div><blockquote>ಹಾವು ಕಚ್ಚಿ ಸಾವಿಗೀಡಾದ ರೈತರಿಗೆ ₹20 ಲಕ್ಷ ಪರಿಹಾರ ನೀಡುವ ಕುರಿತಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು</blockquote><span class="attribution">ಈಶ್ವರ ಖಂಡ್ರೆ, ಅರಣ್ಯ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>