<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಈ ಮಾಹಿತಿ ಮುಚ್ಚಿಟ್ಟಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.</p>.<p>ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಪ್ರಕಾರ ರಾಜ್ಯದಲ್ಲಿ, 2023ರಲ್ಲಿ 2,423 ಮತ್ತು 2024ರಲ್ಲಿ 2,971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.</p>.<p>‘ಒಟ್ಟು ಈ ಅವಧಿಯಲ್ಲಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಪತ್ರಿಕೆಗಳು ಹನ್ನೆರಡು ದಿನಗಳ ಹಿಂದೆ ವರದಿ ಮಾಡಿದ್ದವು. ಸರ್ಕಾರವು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಿದೆ. ಆದರೆ, ಸರ್ಕಾರವು ಈವರೆಗೂ ತುಟಿಬಿಚ್ಚಿಲ್ಲ. ಬದಲಿಗೆ ಸಾಧನಾ ಸಮಾವೇಶಗಳ ನೆಪದಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಇವರ ಗ್ಯಾರಂಟಿಗಳು ಉತ್ತಮವಾಗಿದ್ದರೆ ಮತ್ತು ಅವುಗಳಿಂದ ಜನರಿಗೆ ಅನುಕೂಲವಾಗಿದ್ದು ನಿಜವೇ ಆಗಿದ್ದರೆ, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಸರ್ಕಾರಕ್ಕೆ ಆತ್ಮಹತ್ಯೆಯ ಅಂಕಿಅಂಶಗಳು ಗೊತ್ತಿಲ್ಲವೇ ಅಥವಾ ಬೇಕೆಂದು ಈ ಮಾಹಿತಿಯನ್ನು ಮುಚ್ಚಿಟ್ಟಿದೆಯೇ? ಸರ್ಕಾರದ ವರ್ತನೆ ನೋಡಿದರೆ ಬೇಕೆಂದೇ ಸಾರ್ವಜನಿಕರಿಂದ ಈ ಮಾಹಿತಿ ಮುಚ್ಚಿಟ್ಟಿದೆ ಎಂಬುದು ದೃಢವಾಗುತ್ತದೆ’ ಎಂದರು.</p>.<p>‘ಇವರು ಸಾಧನ ಸಮಾವೇಶ ಮಾಡಿದಾಗಲೆಲ್ಲಾ ಕಂದಾಯ ಇಲಾಖೆ ಕಾರ್ಯಕ್ರಮಗಳು, ಹಕ್ಕುಪತ್ರ ವಿತರಣೆ ಬಗ್ಗೆ ಮಾತನಾಡುತ್ತಾರೆ. ತುಮಕೂರಿನ ಸಮಾವೇಶದಲ್ಲೂ ಈ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ರೈತರು ಕಂದಾಯ ಇಲಾಖೆ ಬಗ್ಗೆಯೇ ಹೆಚ್ಚು ದೂರು ಹೊತ್ತು ಬರುತ್ತಾರೆ. ರೈತರ ಜಮೀನಿನ ಸಮಸ್ಯೆ ಬಗೆಹರಿಯದೇ ಇದ್ದರೂ, ಭೂಗ್ಯಾರಂಟಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಈ ಮಾಹಿತಿ ಮುಚ್ಚಿಟ್ಟಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.</p>.<p>ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಪ್ರಕಾರ ರಾಜ್ಯದಲ್ಲಿ, 2023ರಲ್ಲಿ 2,423 ಮತ್ತು 2024ರಲ್ಲಿ 2,971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.</p>.<p>‘ಒಟ್ಟು ಈ ಅವಧಿಯಲ್ಲಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಪತ್ರಿಕೆಗಳು ಹನ್ನೆರಡು ದಿನಗಳ ಹಿಂದೆ ವರದಿ ಮಾಡಿದ್ದವು. ಸರ್ಕಾರವು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಿದೆ. ಆದರೆ, ಸರ್ಕಾರವು ಈವರೆಗೂ ತುಟಿಬಿಚ್ಚಿಲ್ಲ. ಬದಲಿಗೆ ಸಾಧನಾ ಸಮಾವೇಶಗಳ ನೆಪದಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಇವರ ಗ್ಯಾರಂಟಿಗಳು ಉತ್ತಮವಾಗಿದ್ದರೆ ಮತ್ತು ಅವುಗಳಿಂದ ಜನರಿಗೆ ಅನುಕೂಲವಾಗಿದ್ದು ನಿಜವೇ ಆಗಿದ್ದರೆ, ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಸರ್ಕಾರಕ್ಕೆ ಆತ್ಮಹತ್ಯೆಯ ಅಂಕಿಅಂಶಗಳು ಗೊತ್ತಿಲ್ಲವೇ ಅಥವಾ ಬೇಕೆಂದು ಈ ಮಾಹಿತಿಯನ್ನು ಮುಚ್ಚಿಟ್ಟಿದೆಯೇ? ಸರ್ಕಾರದ ವರ್ತನೆ ನೋಡಿದರೆ ಬೇಕೆಂದೇ ಸಾರ್ವಜನಿಕರಿಂದ ಈ ಮಾಹಿತಿ ಮುಚ್ಚಿಟ್ಟಿದೆ ಎಂಬುದು ದೃಢವಾಗುತ್ತದೆ’ ಎಂದರು.</p>.<p>‘ಇವರು ಸಾಧನ ಸಮಾವೇಶ ಮಾಡಿದಾಗಲೆಲ್ಲಾ ಕಂದಾಯ ಇಲಾಖೆ ಕಾರ್ಯಕ್ರಮಗಳು, ಹಕ್ಕುಪತ್ರ ವಿತರಣೆ ಬಗ್ಗೆ ಮಾತನಾಡುತ್ತಾರೆ. ತುಮಕೂರಿನ ಸಮಾವೇಶದಲ್ಲೂ ಈ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ರೈತರು ಕಂದಾಯ ಇಲಾಖೆ ಬಗ್ಗೆಯೇ ಹೆಚ್ಚು ದೂರು ಹೊತ್ತು ಬರುತ್ತಾರೆ. ರೈತರ ಜಮೀನಿನ ಸಮಸ್ಯೆ ಬಗೆಹರಿಯದೇ ಇದ್ದರೂ, ಭೂಗ್ಯಾರಂಟಿ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>