<p>ಮಂತ್ರ ಶರೀರ ಮಾಡಿಕೊಂಡ ಮನುಷ್ಯ ಪ್ರತಿದಿನ ಇಷ್ಟಲಿಂಗ ಧಾರಣೆ ಮಾಡಬೇಕು. ಮನುಷ್ಯ ನಿತ್ಯ ಧಾರಣೆ ಮಾಡಬೇಕು. ಮನಸ್ಸಿಗೆ ಧ್ಯಾನ ಬಹಳ ಅಗತ್ಯ. ಆತ್ಮಕ್ಕೆ ಶಿವಯೋಗ ಅಗತ್ಯ. ಶರೀರಕ್ಕೆ ಆಹಾರ ಹೇಗೆ ಬೇಕೋ ಹಾಗೆ ಇವುಗಳು ಕೂಡ. ಲಿಂಗಾಯತರಾದವರು ಮಕ್ಕಳಿಗೆ ಪ್ರತಿದಿನ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಕುರಿತು ತಿಳಿಸಬೇಕು. ಮಂತ್ರ ಶರೀರವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಮನುಷ್ಯನಿಗೆ ಗುರು, ಲಿಂಗ, ಜಂಗಮ, ವಿಭೂತಿ ಬೇಕು. ಮನುಷ್ಯನಿಗೆ ಜ್ಞಾನ ಸುಜ್ಞಾನವಾಗಬೇಕು.</p>.<p>ಬಸವಾದಿ ಶರಣರು ಅತಿ ಅದ್ಭುತವಾದ ಯೋಗ ಸೂತ್ರ ಕೊಟ್ಟಿದ್ದಾರೆ. ನಮಃ ಶಿವಾಯ ಓಂ ಬಸವ ಎಂದು. ಬಸವ ಎಂಬ ಶಬ್ದ ಅದು ವ್ಯಕ್ತಿಯಲ್ಲ, ಮನುಷ್ಯ ಸಾಧನೆಗೆ ಹೇಳಿರುವ ಮಂತ್ರ. ಶಿವಯೋಗದ ಮಂತ್ರ. ಶರಣರ ಭಕ್ತಿ, ವಿಚಾರಧಾರೆಗಳು ದೇವರನ್ನು ನೋಡುವುದಲ್ಲ, ನಮ್ಮೊಳಗೆ ಇರುವ ದೇವರನ್ನು ಕಂಡುಕೊಂಡು ಆನಂದ ಪಡುವುದೇ ಶಿವಯೋಗ. ಶಿವಯೋಗ ಸಾಧಿಸಿದವರು ಲಿಂಗಾಚಾರ ಬಿಟ್ಟು ಮತ್ತೊಂದೆಡೆ ಹೋಗಲಿಲ್ಲ. ಲಿಂಗವೇ ಶ್ರೇಷ್ಠ, ಅದುವೇ ಅಂತಿಮ, ಜೀವನದ ಗುರಿ, ಆರಾಧ್ಯ ದೈವ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಬಾರದು.</p>.<p>ಲಿಂಗಾಯತರಿಗೆ ಒಂದು ಧರ್ಮ, ಪರಂಪರೆಯ ಇತಿಹಾಸವಿದೆ. ನಮ್ಮದೇ ಆದ ಅವೈದಿಕ ಸಂಸ್ಕೃತಿ ಇದೆ. ಇನ್ನೊಬ್ಬರ ಮನೆಯ ಎರವಲು ಪಡೆವ ಅಗತ್ಯವಿಲ್ಲ. ಬಸವಣ್ಣ ಎಲ್ಲ ಚೆಲ್ಲಿ ಹೋಗಿದ್ದಾರೆ. ಲಿಂಗ ಜಾತಿ ಕುರುಹು ಅಲ್ಲ, ಸಾಧನೆ ಮಾಡುವವರ ಆಧ್ಯಾತ್ಮದ ಕುರುಹು. ಹಾಗಾಗಿ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದಳು. ಎಲ್ಲಿ ಉಡುತಡಿ ಎಲ್ಲಿ ಕಲ್ಯಾಣ? ಎಲ್ಲಿ ಕಾಶ್ಮೀರ ಎಲ್ಲಿ ಕಲ್ಯಾಣ? ಹೀಗೆ ಬೇರೆ ಬೇರೆ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಬಂದರು. ಲಿಂಗಾಯತ ಧರ್ಮದ ಹೃದಯ ಬಸವಣ್ಣ. ಲಿಂಗಾಯತರು ಈ ಹೃದಯ ತೆಗೆದು ಬದುಕಲು ಸಾಧ್ಯವೇ? ಬಸವ ಜಯಂತಿ ಅಂದರೆ ಮನೆಯಲ್ಲಿ ಹಬ್ಬದ ವಾತಾವರಣ ಇರಬೇಕು. ಎಲ್ಲರೂ ಮನೆಯಲ್ಲಿ ಬಸವಣ್ಣನ ಭಾವಚಿತ್ರ ಹಾಕಿ, ಷಟಸ್ಥಲ ಧ್ವಜ ಹಾರಿಸಬೇಕು. ಪ್ರತಿಯೊಬ್ಬರಿಗೂ ದಾಸೋಹ ವ್ಯವಸ್ಥೆ ಮಾಡಬೇಕು. ಕಾಯಕಕ್ಕೆ ದೈವತ್ವ ತಂದುಕೊಟ್ಟವರು ಬಸವಣ್ಣ. ಸತ್ಯ ಶುದ್ಧ ಕಾಯಕ ಮಾಡುವವರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ಎನ್ನುತ್ತಾರೆ ಶರಣರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-33-2108205246</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂತ್ರ ಶರೀರ ಮಾಡಿಕೊಂಡ ಮನುಷ್ಯ ಪ್ರತಿದಿನ ಇಷ್ಟಲಿಂಗ ಧಾರಣೆ ಮಾಡಬೇಕು. ಮನುಷ್ಯ ನಿತ್ಯ ಧಾರಣೆ ಮಾಡಬೇಕು. ಮನಸ್ಸಿಗೆ ಧ್ಯಾನ ಬಹಳ ಅಗತ್ಯ. ಆತ್ಮಕ್ಕೆ ಶಿವಯೋಗ ಅಗತ್ಯ. ಶರೀರಕ್ಕೆ ಆಹಾರ ಹೇಗೆ ಬೇಕೋ ಹಾಗೆ ಇವುಗಳು ಕೂಡ. ಲಿಂಗಾಯತರಾದವರು ಮಕ್ಕಳಿಗೆ ಪ್ರತಿದಿನ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಕುರಿತು ತಿಳಿಸಬೇಕು. ಮಂತ್ರ ಶರೀರವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಮನುಷ್ಯನಿಗೆ ಗುರು, ಲಿಂಗ, ಜಂಗಮ, ವಿಭೂತಿ ಬೇಕು. ಮನುಷ್ಯನಿಗೆ ಜ್ಞಾನ ಸುಜ್ಞಾನವಾಗಬೇಕು.</p>.<p>ಬಸವಾದಿ ಶರಣರು ಅತಿ ಅದ್ಭುತವಾದ ಯೋಗ ಸೂತ್ರ ಕೊಟ್ಟಿದ್ದಾರೆ. ನಮಃ ಶಿವಾಯ ಓಂ ಬಸವ ಎಂದು. ಬಸವ ಎಂಬ ಶಬ್ದ ಅದು ವ್ಯಕ್ತಿಯಲ್ಲ, ಮನುಷ್ಯ ಸಾಧನೆಗೆ ಹೇಳಿರುವ ಮಂತ್ರ. ಶಿವಯೋಗದ ಮಂತ್ರ. ಶರಣರ ಭಕ್ತಿ, ವಿಚಾರಧಾರೆಗಳು ದೇವರನ್ನು ನೋಡುವುದಲ್ಲ, ನಮ್ಮೊಳಗೆ ಇರುವ ದೇವರನ್ನು ಕಂಡುಕೊಂಡು ಆನಂದ ಪಡುವುದೇ ಶಿವಯೋಗ. ಶಿವಯೋಗ ಸಾಧಿಸಿದವರು ಲಿಂಗಾಚಾರ ಬಿಟ್ಟು ಮತ್ತೊಂದೆಡೆ ಹೋಗಲಿಲ್ಲ. ಲಿಂಗವೇ ಶ್ರೇಷ್ಠ, ಅದುವೇ ಅಂತಿಮ, ಜೀವನದ ಗುರಿ, ಆರಾಧ್ಯ ದೈವ. ಅದನ್ನು ಬಿಟ್ಟು ಬೇರೆ ಏನನ್ನೂ ಮಾಡಬಾರದು.</p>.<p>ಲಿಂಗಾಯತರಿಗೆ ಒಂದು ಧರ್ಮ, ಪರಂಪರೆಯ ಇತಿಹಾಸವಿದೆ. ನಮ್ಮದೇ ಆದ ಅವೈದಿಕ ಸಂಸ್ಕೃತಿ ಇದೆ. ಇನ್ನೊಬ್ಬರ ಮನೆಯ ಎರವಲು ಪಡೆವ ಅಗತ್ಯವಿಲ್ಲ. ಬಸವಣ್ಣ ಎಲ್ಲ ಚೆಲ್ಲಿ ಹೋಗಿದ್ದಾರೆ. ಲಿಂಗ ಜಾತಿ ಕುರುಹು ಅಲ್ಲ, ಸಾಧನೆ ಮಾಡುವವರ ಆಧ್ಯಾತ್ಮದ ಕುರುಹು. ಹಾಗಾಗಿ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದಳು. ಎಲ್ಲಿ ಉಡುತಡಿ ಎಲ್ಲಿ ಕಲ್ಯಾಣ? ಎಲ್ಲಿ ಕಾಶ್ಮೀರ ಎಲ್ಲಿ ಕಲ್ಯಾಣ? ಹೀಗೆ ಬೇರೆ ಬೇರೆ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಬಂದರು. ಲಿಂಗಾಯತ ಧರ್ಮದ ಹೃದಯ ಬಸವಣ್ಣ. ಲಿಂಗಾಯತರು ಈ ಹೃದಯ ತೆಗೆದು ಬದುಕಲು ಸಾಧ್ಯವೇ? ಬಸವ ಜಯಂತಿ ಅಂದರೆ ಮನೆಯಲ್ಲಿ ಹಬ್ಬದ ವಾತಾವರಣ ಇರಬೇಕು. ಎಲ್ಲರೂ ಮನೆಯಲ್ಲಿ ಬಸವಣ್ಣನ ಭಾವಚಿತ್ರ ಹಾಕಿ, ಷಟಸ್ಥಲ ಧ್ವಜ ಹಾರಿಸಬೇಕು. ಪ್ರತಿಯೊಬ್ಬರಿಗೂ ದಾಸೋಹ ವ್ಯವಸ್ಥೆ ಮಾಡಬೇಕು. ಕಾಯಕಕ್ಕೆ ದೈವತ್ವ ತಂದುಕೊಟ್ಟವರು ಬಸವಣ್ಣ. ಸತ್ಯ ಶುದ್ಧ ಕಾಯಕ ಮಾಡುವವರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ಎನ್ನುತ್ತಾರೆ ಶರಣರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-33-2108205246</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>