<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ 9 ಅಧಿಕಾರಿಗಳಿಗೆ ಸೇರಿದ 42 ಸ್ಥಳಗಳಲ್ಲಿ ದಾಳಿ ನಡಸಿದ ಲೋಕಾಯುಕ್ತ ಪೊಲೀಸರು ₹34.46 ಕೋಟಿಯಷ್ಟು ಅಕ್ರಮ ಸಂಪತ್ತು ಪತ್ತೆ ಮಾಡಿದ್ದಾರೆ.</p>.<p>ಬೆಂಗಳೂರು ನಗರ, ಮಂಡ್ಯ, ಗದಗ, ಮೈಸೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿನ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ 5ರ ಹೊತ್ತಿಗೆ ದಾಳಿ ನಡೆಸಿದರು. ರಾತ್ರಿಯವರೆಗೂ ನಡೆದ ದಾಳಿಯಲ್ಲಿ ಒಟ್ಟು ₹43.12 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ ₹8.64 ಕೋಟಿಯಷ್ಟು ಮಾತ್ರವೇ ಅಧಿಕೃತ ಮತ್ತು ಘೋಷಿತ ಆದಾಯದ ಸಂಪತ್ತು.</p>.<p>ಮೈಸೂರಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಸಿಫ್ ಇಕ್ಬಾಲ್ ಖಲೀಲ್ ಅವರಿಗೆ ಸೇರಿದ ಒಟ್ಟು ನಾಲ್ಕು ಸ್ಥಳಗಳಲ್ಲಿ ದಾಳಿ ನಡೆದಿದೆ. ಒಟ್ಟು ₹8.81 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ ಅಕ್ರಮ ಸಂಪತ್ತಿನ ಮೌಲ್ಯವೇ ₹6.89 ಕೋಟಿಯಷ್ಟಾಗುತ್ತದೆ. ಗುರುವಾರದ ದಾಳಿಯಲ್ಲಿ ಅತಿಹೆಚ್ಚು ಆಸ್ತಿ ಪತ್ತೆಯಾಗಿರುವುದು ಈ ಪ್ರಕರಣದಲ್ಲಿ.</p>.<p>ಎಂಟೂ ಅಧಿಕಾರಿಗಳಿಗೆ ಸೇರಿದ, ಒಟ್ಟು ₹30.03 ಕೋಟಿಯಷ್ಟು ಸ್ಥಿರಾಸ್ತಿ ಪತ್ತೆಯಾಗಿದೆ. ₹13.05 ಕೋಟಿ ಮೌಲ್ಯದಷ್ಟು ಚರಾಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳು ಮತ್ತು ಅವರ ಆಪ್ತರಿಗೆ ಸೇರಿದ ಬ್ಯಾಂಕ್ ಲಾಕರ್ಗಳ ಪರಿಶೀಲನೆ ಮುಂದುವರೆದಿದ್ದು, ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಾಗಬಹುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ 9 ಅಧಿಕಾರಿಗಳಿಗೆ ಸೇರಿದ 42 ಸ್ಥಳಗಳಲ್ಲಿ ದಾಳಿ ನಡಸಿದ ಲೋಕಾಯುಕ್ತ ಪೊಲೀಸರು ₹34.46 ಕೋಟಿಯಷ್ಟು ಅಕ್ರಮ ಸಂಪತ್ತು ಪತ್ತೆ ಮಾಡಿದ್ದಾರೆ.</p>.<p>ಬೆಂಗಳೂರು ನಗರ, ಮಂಡ್ಯ, ಗದಗ, ಮೈಸೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿನ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ 5ರ ಹೊತ್ತಿಗೆ ದಾಳಿ ನಡೆಸಿದರು. ರಾತ್ರಿಯವರೆಗೂ ನಡೆದ ದಾಳಿಯಲ್ಲಿ ಒಟ್ಟು ₹43.12 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ ₹8.64 ಕೋಟಿಯಷ್ಟು ಮಾತ್ರವೇ ಅಧಿಕೃತ ಮತ್ತು ಘೋಷಿತ ಆದಾಯದ ಸಂಪತ್ತು.</p>.<p>ಮೈಸೂರಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಸಿಫ್ ಇಕ್ಬಾಲ್ ಖಲೀಲ್ ಅವರಿಗೆ ಸೇರಿದ ಒಟ್ಟು ನಾಲ್ಕು ಸ್ಥಳಗಳಲ್ಲಿ ದಾಳಿ ನಡೆದಿದೆ. ಒಟ್ಟು ₹8.81 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಅದರಲ್ಲಿ ಅಕ್ರಮ ಸಂಪತ್ತಿನ ಮೌಲ್ಯವೇ ₹6.89 ಕೋಟಿಯಷ್ಟಾಗುತ್ತದೆ. ಗುರುವಾರದ ದಾಳಿಯಲ್ಲಿ ಅತಿಹೆಚ್ಚು ಆಸ್ತಿ ಪತ್ತೆಯಾಗಿರುವುದು ಈ ಪ್ರಕರಣದಲ್ಲಿ.</p>.<p>ಎಂಟೂ ಅಧಿಕಾರಿಗಳಿಗೆ ಸೇರಿದ, ಒಟ್ಟು ₹30.03 ಕೋಟಿಯಷ್ಟು ಸ್ಥಿರಾಸ್ತಿ ಪತ್ತೆಯಾಗಿದೆ. ₹13.05 ಕೋಟಿ ಮೌಲ್ಯದಷ್ಟು ಚರಾಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳು ಮತ್ತು ಅವರ ಆಪ್ತರಿಗೆ ಸೇರಿದ ಬ್ಯಾಂಕ್ ಲಾಕರ್ಗಳ ಪರಿಶೀಲನೆ ಮುಂದುವರೆದಿದ್ದು, ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಾಗಬಹುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>