ಮೃತನನ್ನು ತಾಲ್ಲೂಕಿನ ಬ್ಯಾಲವಾಡಿಗೆ ಗ್ರಾಮದ ಮಂಜುನಾಥ ರಾಮಣ್ಣ ಬಂಡಿಯವರ (45) ಎಂದು ಗುರುತಿಸಲಾಗಿದೆ. ಮಂಜುನಾಥನು ಬೆಳಗ್ಗೆ ಹೆಸ್ಕಾಂ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ತರುವುದಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಮುಂಡರಗಿಯಿಂದ ಶಿರಹಟ್ಟಿಗೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.