<p>ಮುಂಗಾರು ಇನ್ನೂ ಕೂಡ ಆರಂಭವಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಬರಲು ಆರಂಭವಾಗಿದೆ. ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.</p>. <p>ಅತಿಯಾದ ಮಳೆಯು ಪ್ರವಾಹ, ಸಿಡಿಲು, ಗುಡುಗು ಮತ್ತು ನೀರಿನ ಸಂಗ್ರಹದ ಅಪಾಯಗಳನ್ನು ಹೆಚ್ಚಿಸುತ್ತದೆ. ಮಳೆ ಬರುವ ಸಂದರ್ಭದಲ್ಲಿ ಅಥವಾ ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಮಳೆಯಿಂದ ರಕ್ಷಣೆ ಪಡೆಯಬಹುದು.</p><p><strong>ಛತ್ರಿ ಅಥವಾ ರೈನ್ಕೋಟ್:</strong> ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು, ಹೊರಗೆ ಹೊರಡುವಾಗ ತಪ್ಪದೆ ಕೊಡೆ ಅಥವಾ ರೈನ್ಕೋಟ್ ಅನ್ನು ತೆಗೆದುಕೊಂಡು ಹೋಗುವುದು ಉತ್ತಮ.</p><p><strong>ಹಳೆ ಕಟ್ಟಡ ಅಥವಾ ಕಾಂಪೌಂಡ್ನಿಂದ ದೂರವಿರಿ: </strong>ಮಳೆ ಬಂದಾಗ ಶಿಥಿಲಗೊಂಡ ಕಟ್ಟಡ ಅಥವಾ ಹಳೆಯ ಗೋಡೆಗಳ ಬಳಿ ಆಶ್ರಯ ಪಡೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಅವು ಯಾವಾಗ ಬೇಗಾದರು ಧರೆಗುರುಳುವ ಸಾಧ್ಯತೆ ಇರುತ್ತದೆ.</p><p><strong>ವಾಹನದ ಪರಿಶೀಲನೆ ಅಗತ್ಯ: </strong>ಮಳೆಗಾಲದಲ್ಲಿ ಪ್ರಯಾಣದ ಸಂದರ್ಭದಲ್ಲಿ, ವಾಹನ ಚಾಲಕರು ವೈಪರ್, ಬ್ರೇಕ್ ಮತ್ತು ಟೈರ್ಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.</p><p><strong>ಅಂಡರ್ಪಾಸ್ಗಳಲ್ಲಿ ವಾಹನ ಚಾಲನೆ ತಪ್ಪಿಸಿ</strong>: ನೀರಿನ ಹರಿವು, ಇಳಿಜಾರು ರಸ್ತೆಗಳಲ್ಲಿ ಹಾಗೂ ಅಂಡರ್ಪಾಸ್ಗಳಲ್ಲಿ ವಾಹನ ಓಡಿಸುವುದನ್ನು ತಪ್ಪಿಸುವುದು ಉತ್ತಮ. </p><p><strong>ಮಳೆಯಲ್ಲಿ ವಾಹನ ಸವಾರಿ ತಪ್ಪಿಸಿ: </strong>ಮಳೆ ಬರುವಾಗ, ಸಣ್ಣ ನೀರಿನ ಹರಿವು ಕೂಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. </p><p><strong>ಮಳೆ ಸಂಪೂರ್ಣ ನಿಲ್ಲುವವರೆಗೂ ಕಾಯಿರಿ:</strong> ಮಳೆ ಸಣ್ಣಗೆ ಬರುತ್ತಿದೆ ಎಂದು ಹೋಗುವುದನ್ನು ತಪ್ಪಿಸಿ, ಬದಲಾಗಿ ಮಳೆ ನಿಂತ ಒಂದು ಗಂಟೆಯ ಬಳಿಕ ವಾಹನದಲ್ಲಿ ಸವಾರಿ ಮಾಡುವುದು ಉತ್ತಮ. ಸಣ್ಣ ಮಳೆ, ಅಥವಾ ಮಳೆ ನಿಂತ ಬಳಿಕವೂ ಮ್ಯಾನ್ಹೋಲ್ಳಿಂದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.</p><p><strong>ಮರಗಳ ಆಶ್ರಯ ಪಡೆಯಬೇಡಿ: </strong>ಗುಡುಗು, ಗಾಳಿ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಂತು ಆಶ್ರಯ ಪಡೆಯುವುದನ್ನು ತಪ್ಪಿಸಿ. ಮರಗಳು ಯಾವುದೇ ಸಂದರ್ಭದಲ್ಲಿಯಾದರೂ ಧರೆಗುರುಳುವ ಸಾಧ್ಯತೆ ಇರುತ್ತದೆ.</p><p><strong>ವಿದ್ಯುತ್ ಕಂಬಗಳಿಂದ ದೂರವಿರಿ: </strong>ಮಳೆಗಾಲದಲ್ಲಿ, ಅಥವಾ ಮಳೆ ಬರುವಾಗ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಕಂಬಗಳನ್ನು ಮುಟ್ಟಬೇಡಿ. ಅವುಗಳಿಂದ ಯಾವುದೇ ಸಂದರ್ಭದಲ್ಲಿಯಾದರೂ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.</p><ul><li><p>ಪ್ರಯಾಣಕ್ಕೆ ಮುನ್ನ ಹವಾಮಾನ ಮುನ್ಸೂಚನೆ ಪರಿಶೀಲಿಸಿ. ಅನಗತ್ಯ ಪ್ರಯಾಣವಾಗಿದ್ದರೆ, ಅದನ್ನು ಮುಂದೂಡುವುದು ಉತ್ತಮ.</p></li><li><p>ಹರಿಯುವ ನೀರಿನಲ್ಲಿ ನಡೆಯುವುದು ಅಥವಾ ವಾಹನ ಚಲಾಯಿಸುವುದನ್ನು ತಪ್ಪಿಸಿ. </p></li><li><p>ಮಕ್ಕಳು ಮತ್ತು ಪ್ರಾಣಿಗಳನ್ನು ಎಚ್ಚರಿಕೆಯಿಂದ ಕಾಪಾಡಿ.</p></li><li><p>ಮಳೆಯ ಮುನ್ಸೂಚನೆ ಇದ್ದರೆ, ಕಚೇರಿಯಿಂದ ಬೇಗನೆ ಹೊರಡಿ.</p></li><li><p>ಬೈಕ್ನಲ್ಲಿ ಸದಾ ಕಾಲವು ರೈನ್ ಕೋಟ್ ಇರುಂತೆ ನೋಡಿಕೊಳ್ಳಿ</p></li><li><p>ಬೀದಿಬದಿ ವ್ಯಾಪಾರಸ್ಥರು ಮತ್ತು ಪಾದಚಾರಿಗಳು ಶಿಥಿಲ ಕಟ್ಟಡಗಳು ಅಥವಾ ಗೋಡೆಗಳ ಬಳಿ ಆಶ್ರಯ ಪಡೆಯುವುದನ್ನು ತಪ್ಪಿಸಲು ಸಲಹೆ ಕೊಡಿ.</p></li><li><p>ಸರ್ಕಾರ ನೀಡುವ ಆರೆಂಜ್, ಎಲ್ಲೋ, ರೆಡ್ ಅಲೆರ್ಟ್ ಎಚ್ಚರಿಕೆಗಳನ್ನು ಪಾಲಿಸಿ.</p></li></ul><p><strong>ಆರೋಗ್ಯದ ಸಲಹೆ</strong></p><ul><li><p>ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಬಟ್ಟೆ ಬದಲಾಯಿಸಿ, ದೇಹವನ್ನು ಒಣಗಿಸಿ ಮತ್ತು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.</p></li><li><p>ಮಳೆಗಾಲದ ಸಂದರ್ಭದಲ್ಲಿ ಕುದಿಸಿ ಅಥವಾ ಶುದ್ಧೀಕರಿಸಿ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮ. ಬೀದಿಬದಿ ಆಹಾರಗಳಿಂದ ದೂರವಿರಿ.</p></li><li><p>ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆಯಿರಿ. ಮುಖ, ಮೂಗು, ಕಣ್ಣುಗಳನ್ನು ಕೈಯಿಂದ ಮುಟ್ಟಬೇಡಿ.</p></li><li><p>ಸೊಳ್ಳೆಗಳಿಂದ ರಕ್ಷಣೆಗೆ ಸೊಳ್ಳೆಪರದೆ ಬಳಸುವುದು ಸೂಕ್ತ.</p></li><li><p>ಮಕ್ಕಳು ಮತ್ತು ವೃದ್ಧರ ಆರೋಗ್ಯದತ್ತ ವಿಶೇಷ ಗಮನ ಹರಿಸಿ. ಶೀತ, ಜ್ವರ, ಡೆಂಗ್ಯೂ, ಮಲೇರಿಯಾ, ಚರ್ಮದ ಸೋಂಕುಗಳಿಂದ ಎಚ್ಚರವಹಿಸಿ. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಗಾರು ಇನ್ನೂ ಕೂಡ ಆರಂಭವಾಗಿಲ್ಲ. ಆದರೆ, ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆ ಬರಲು ಆರಂಭವಾಗಿದೆ. ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಮಾತ್ರವಲ್ಲ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.</p>. <p>ಅತಿಯಾದ ಮಳೆಯು ಪ್ರವಾಹ, ಸಿಡಿಲು, ಗುಡುಗು ಮತ್ತು ನೀರಿನ ಸಂಗ್ರಹದ ಅಪಾಯಗಳನ್ನು ಹೆಚ್ಚಿಸುತ್ತದೆ. ಮಳೆ ಬರುವ ಸಂದರ್ಭದಲ್ಲಿ ಅಥವಾ ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಮಳೆಯಿಂದ ರಕ್ಷಣೆ ಪಡೆಯಬಹುದು.</p><p><strong>ಛತ್ರಿ ಅಥವಾ ರೈನ್ಕೋಟ್:</strong> ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು, ಹೊರಗೆ ಹೊರಡುವಾಗ ತಪ್ಪದೆ ಕೊಡೆ ಅಥವಾ ರೈನ್ಕೋಟ್ ಅನ್ನು ತೆಗೆದುಕೊಂಡು ಹೋಗುವುದು ಉತ್ತಮ.</p><p><strong>ಹಳೆ ಕಟ್ಟಡ ಅಥವಾ ಕಾಂಪೌಂಡ್ನಿಂದ ದೂರವಿರಿ: </strong>ಮಳೆ ಬಂದಾಗ ಶಿಥಿಲಗೊಂಡ ಕಟ್ಟಡ ಅಥವಾ ಹಳೆಯ ಗೋಡೆಗಳ ಬಳಿ ಆಶ್ರಯ ಪಡೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಅವು ಯಾವಾಗ ಬೇಗಾದರು ಧರೆಗುರುಳುವ ಸಾಧ್ಯತೆ ಇರುತ್ತದೆ.</p><p><strong>ವಾಹನದ ಪರಿಶೀಲನೆ ಅಗತ್ಯ: </strong>ಮಳೆಗಾಲದಲ್ಲಿ ಪ್ರಯಾಣದ ಸಂದರ್ಭದಲ್ಲಿ, ವಾಹನ ಚಾಲಕರು ವೈಪರ್, ಬ್ರೇಕ್ ಮತ್ತು ಟೈರ್ಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.</p><p><strong>ಅಂಡರ್ಪಾಸ್ಗಳಲ್ಲಿ ವಾಹನ ಚಾಲನೆ ತಪ್ಪಿಸಿ</strong>: ನೀರಿನ ಹರಿವು, ಇಳಿಜಾರು ರಸ್ತೆಗಳಲ್ಲಿ ಹಾಗೂ ಅಂಡರ್ಪಾಸ್ಗಳಲ್ಲಿ ವಾಹನ ಓಡಿಸುವುದನ್ನು ತಪ್ಪಿಸುವುದು ಉತ್ತಮ. </p><p><strong>ಮಳೆಯಲ್ಲಿ ವಾಹನ ಸವಾರಿ ತಪ್ಪಿಸಿ: </strong>ಮಳೆ ಬರುವಾಗ, ಸಣ್ಣ ನೀರಿನ ಹರಿವು ಕೂಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. </p><p><strong>ಮಳೆ ಸಂಪೂರ್ಣ ನಿಲ್ಲುವವರೆಗೂ ಕಾಯಿರಿ:</strong> ಮಳೆ ಸಣ್ಣಗೆ ಬರುತ್ತಿದೆ ಎಂದು ಹೋಗುವುದನ್ನು ತಪ್ಪಿಸಿ, ಬದಲಾಗಿ ಮಳೆ ನಿಂತ ಒಂದು ಗಂಟೆಯ ಬಳಿಕ ವಾಹನದಲ್ಲಿ ಸವಾರಿ ಮಾಡುವುದು ಉತ್ತಮ. ಸಣ್ಣ ಮಳೆ, ಅಥವಾ ಮಳೆ ನಿಂತ ಬಳಿಕವೂ ಮ್ಯಾನ್ಹೋಲ್ಳಿಂದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ.</p><p><strong>ಮರಗಳ ಆಶ್ರಯ ಪಡೆಯಬೇಡಿ: </strong>ಗುಡುಗು, ಗಾಳಿ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಂತು ಆಶ್ರಯ ಪಡೆಯುವುದನ್ನು ತಪ್ಪಿಸಿ. ಮರಗಳು ಯಾವುದೇ ಸಂದರ್ಭದಲ್ಲಿಯಾದರೂ ಧರೆಗುರುಳುವ ಸಾಧ್ಯತೆ ಇರುತ್ತದೆ.</p><p><strong>ವಿದ್ಯುತ್ ಕಂಬಗಳಿಂದ ದೂರವಿರಿ: </strong>ಮಳೆಗಾಲದಲ್ಲಿ, ಅಥವಾ ಮಳೆ ಬರುವಾಗ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಕಂಬಗಳನ್ನು ಮುಟ್ಟಬೇಡಿ. ಅವುಗಳಿಂದ ಯಾವುದೇ ಸಂದರ್ಭದಲ್ಲಿಯಾದರೂ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.</p><ul><li><p>ಪ್ರಯಾಣಕ್ಕೆ ಮುನ್ನ ಹವಾಮಾನ ಮುನ್ಸೂಚನೆ ಪರಿಶೀಲಿಸಿ. ಅನಗತ್ಯ ಪ್ರಯಾಣವಾಗಿದ್ದರೆ, ಅದನ್ನು ಮುಂದೂಡುವುದು ಉತ್ತಮ.</p></li><li><p>ಹರಿಯುವ ನೀರಿನಲ್ಲಿ ನಡೆಯುವುದು ಅಥವಾ ವಾಹನ ಚಲಾಯಿಸುವುದನ್ನು ತಪ್ಪಿಸಿ. </p></li><li><p>ಮಕ್ಕಳು ಮತ್ತು ಪ್ರಾಣಿಗಳನ್ನು ಎಚ್ಚರಿಕೆಯಿಂದ ಕಾಪಾಡಿ.</p></li><li><p>ಮಳೆಯ ಮುನ್ಸೂಚನೆ ಇದ್ದರೆ, ಕಚೇರಿಯಿಂದ ಬೇಗನೆ ಹೊರಡಿ.</p></li><li><p>ಬೈಕ್ನಲ್ಲಿ ಸದಾ ಕಾಲವು ರೈನ್ ಕೋಟ್ ಇರುಂತೆ ನೋಡಿಕೊಳ್ಳಿ</p></li><li><p>ಬೀದಿಬದಿ ವ್ಯಾಪಾರಸ್ಥರು ಮತ್ತು ಪಾದಚಾರಿಗಳು ಶಿಥಿಲ ಕಟ್ಟಡಗಳು ಅಥವಾ ಗೋಡೆಗಳ ಬಳಿ ಆಶ್ರಯ ಪಡೆಯುವುದನ್ನು ತಪ್ಪಿಸಲು ಸಲಹೆ ಕೊಡಿ.</p></li><li><p>ಸರ್ಕಾರ ನೀಡುವ ಆರೆಂಜ್, ಎಲ್ಲೋ, ರೆಡ್ ಅಲೆರ್ಟ್ ಎಚ್ಚರಿಕೆಗಳನ್ನು ಪಾಲಿಸಿ.</p></li></ul><p><strong>ಆರೋಗ್ಯದ ಸಲಹೆ</strong></p><ul><li><p>ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಬಟ್ಟೆ ಬದಲಾಯಿಸಿ, ದೇಹವನ್ನು ಒಣಗಿಸಿ ಮತ್ತು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.</p></li><li><p>ಮಳೆಗಾಲದ ಸಂದರ್ಭದಲ್ಲಿ ಕುದಿಸಿ ಅಥವಾ ಶುದ್ಧೀಕರಿಸಿ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮ. ಬೀದಿಬದಿ ಆಹಾರಗಳಿಂದ ದೂರವಿರಿ.</p></li><li><p>ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆಯಿರಿ. ಮುಖ, ಮೂಗು, ಕಣ್ಣುಗಳನ್ನು ಕೈಯಿಂದ ಮುಟ್ಟಬೇಡಿ.</p></li><li><p>ಸೊಳ್ಳೆಗಳಿಂದ ರಕ್ಷಣೆಗೆ ಸೊಳ್ಳೆಪರದೆ ಬಳಸುವುದು ಸೂಕ್ತ.</p></li><li><p>ಮಕ್ಕಳು ಮತ್ತು ವೃದ್ಧರ ಆರೋಗ್ಯದತ್ತ ವಿಶೇಷ ಗಮನ ಹರಿಸಿ. ಶೀತ, ಜ್ವರ, ಡೆಂಗ್ಯೂ, ಮಲೇರಿಯಾ, ಚರ್ಮದ ಸೋಂಕುಗಳಿಂದ ಎಚ್ಚರವಹಿಸಿ. ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>