<p><strong>ಮೈಸೂರು:</strong> ಅನೇಕ ಕಲಾವಿದರು, ಶಿಲ್ಪಿಗಳನ್ನು ದೇಶ–ವಿದೇಶಕ್ಕೆ ಪರಿಚಯಿಸಿದ ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಹಳೇ ಕಟ್ಟಡವು ಶಿಥಿಲವಾಗುತ್ತಿದ್ದು, ‘ಗಮನಹರಿಸಿ’ ಎಂದು ಗೋಗರೆಯುತ್ತಿದೆ.</p>.<p>1910ರಲ್ಲಿ ನಿರ್ಮಿಸಿದ ಈ ಪಾರಂಪರಿಕ ಕಟ್ಟಡದ ಮೇಲ್ಭಾಗದ ಸಂದುಗಳಲ್ಲಿ ಗಿಡಗಳು ಚಿಗುರಿ ಮರವಾಗುತ್ತಿವೆ. ಗೋಡೆಗಳ ಗಾರೆ ಕಿತ್ತುಹೋಗಿದೆ. ಚಾವಣಿಯ ನೀರನ್ನು ನೆಲಕ್ಕಿಳಿಸುವ ಪೈಪ್ಗಳು ಹಾನಿಯಾಗಿದ್ದು, ಗೋಡೆಯ ಮೇಲೆ ಸುರಿಯುತ್ತಿದೆ. ಕಿಟಕಿಗಳ ಸಜ್ಜೆಗಳು ಮುರಿದಿವೆ.</p>.<p>ರಾಜ್ಯ ಸರ್ಕಾರದ ಉದ್ಯಮಗಳಾದ ಕಾವೇರಿ ಎಂಫೊರಿಯಂ, ಲಿಡ್ಕರ್, ತೆಂಗಿನ ನಾರಿನ ಉತ್ಪನ್ನಗಳು, ಕೈಗಾರಿಕಾ ಅರ್ಬನ್ ಹಾತ್ ಮುಂತಾದ ಮಳಿಗೆಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ, ನೀರು ಸೋರುವುದನ್ನು, ಹೊರ ಆವರಣ ಶಿಥಿಲವಾಗುವುದನ್ನು ಯಾರೂ ತಡೆಯುತ್ತಿಲ್ಲ. </p>.<p>ಕಟ್ಟಡದ ಮುಂಭಾಗವನ್ನು ತಕ್ಕಮಟ್ಟಿಗೆ ಉತ್ತಮವಾಗಿ ಇರಿಸಲಾಗಿದೆ. ಆದರೆ ಹಿಂಭಾಗವಂತೂ ದುರವಸ್ಥೆಯಲ್ಲಿದೆ. ಮರಗಳ ಹೆರೆಗಳು ಕಟ್ಟಡಕ್ಕೆ ತಾಗಿ ನಿಂತಿದ್ದು, ಗೋಡೆಗಳನ್ನು ಮಳೆಗಾಲದಲ್ಲಿ ಒದ್ದೆಯಾಗಿಸುತ್ತಿದೆ. ಕಿಟಕಿಯ ಗಾಜುಗಳು ಒಡೆದಿವೆ, ನೆಲಗಟ್ಟನ್ನು ಹೊಂದಿದಂತೆ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಸುರಿಯಲಾಗಿದೆ.</p>.<p><strong>ಹಗ್ಗದ ಆಸರೆ:</strong> ಕಟ್ಟಡ ಆವರಣದಲ್ಲಿರುವ ಕಂಪೌಂಡ್ ದುರಸ್ತಿಗೆ ಕಾಯುತ್ತಿದೆ. ಪಾದಚಾರಿ ಮಾರ್ಗಕ್ಕೆ ಮುರಿದು ಬೀಳುವಂತಿರುವ ಅದಕ್ಕೆ ಹಗ್ಗವನ್ನು ಕಟ್ಟಿ ಮರಕ್ಕೆ ಬಿಗಿದು ನಿಲ್ಲಿಸಲಾಗಿದೆ. ನಿತ್ಯ ನೂರಾರು ಜನ ಆತಂಕದಲ್ಲಿ ಓಡಾಡುತ್ತಿದ್ದಾರೆ.</p>.<p>‘ವ್ಯಾಪಾರ ನಡೆಯುತ್ತಿರುವ ಕಟ್ಟಡದ ಭಾಗಗಳ ನಿರ್ವಹಣೆ ನಡೆದಿದೆ. ಹೊರಭಾಗದ ಸಮಸ್ಯೆಯತ್ತ ಯಾರೂ ಗಮನಹರಿಸುತ್ತಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಿಂತು ಕಟ್ಟಡವನ್ನು ನೋಡಿದರೆ ಪಾಳು ಬಿದ್ದ ಕಟ್ಟಡದಂತೆ ಭಾಸವಾಗುತ್ತದೆ’ ಎಂದು ಪಾರಂಪರಿಕ ಕಟ್ಟಡಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>ವೇಲ್ಸ್ ರಾಜಕುಮಾರನಿಂದ ಅಡಿಪಾಯ !</strong></p><p>ಮೈಸೂರಿಗೆ ಭೇಟಿ ನೀಡಿದ್ದ ವೇಲ್ಸ್ ರಾಜಕುಮಾರ ಜಾರ್ಜ್ ಈ ಕಟ್ಟಡಕ್ಕೆ 1906ರಲ್ಲಿ ಅಡಿಪಾಯ ಹಾಕಿದ್ದರು. ಆದರೆ, 1910ರಲ್ಲಿ ಆರಂಭವಾದ ಕಟ್ಟಡದ ಕೆಲಸವು 1913ರಲ್ಲಿ ಮುಗಿಯಿತು. ಎರಡು ಮಹಡಿಗಳು, ತಲಾ 14 ಕೋಣೆಗಳುಳ್ಳ ಕಟ್ಟಡದಲ್ಲಿ ಫ್ರೆಂಚ್ ನವೋದಯ ವಿನ್ಯಾಸದ ಮ್ಯಾನ್ಸಾರ್ಡ್ ಚಾವಣಿಯ ಗುಮ್ಮಟಗಳಿರುವುದು ವಿಶೇಷ. ಅಂದಿನ ಕಾಲದಲ್ಲಿ ಅದಕ್ಕೆ ₹2.41 ಲಕ್ಷ ವೆಚ್ಚವಾಗಿತ್ತು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮರಾಜೇಂದ್ರ ಒಡೆಯರ್ ಸ್ಮರಣಾರ್ಥ ಇಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ(ಸಿಟಿಐ) ಸ್ಥಾಪಿಸಿದರು. ಇದೇ ಕಟ್ಟಡದಲ್ಲಿ ನಗರ ಗ್ರಂಥಾಲಯಕ್ಕೆ ಸ್ಥಳ ನೀಡಲಾಯಿತು. 1981ರಲ್ಲಿ ಕಾವಾ ಆರಂಭವಾಯಿತು.</p><p><strong>ಸ್ವದೇಶಿ ಚಳವಳಿಗೆ ಶಕ್ತಿ: </strong>ಸಿಟಿಐ ಎಂಜಿನಿಯರಿಂಗ್, ಕೈಗಾರಿಕೆ, ಕಲಾ ಶಾಲೆಗಳು ಮತ್ತು ಕಾರ್ಯಾಗಾರ ಸಮೂಹ ಹೊಂದಿದ್ದು, ದೇಶವು ಸ್ವದೇಶಿ ಚಳುವಳಿಯಲ್ಲಿದ್ದಾಗ ಮೈಸೂರು ಮತ್ತು ಸುತ್ತಮುತ್ತಲಿನ ಪ್ರತಿಭಾನ್ವಿತ ಯುವಕರನ್ನು ಆಕರ್ಷಿಸುವ ಮೂಲಕ ಕೌಶಲ ಹೆಚ್ಚಿಸುವ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಇತಿಹಾಸಕಾರರು.</p>.<div><blockquote>ಕಟ್ಟಡವು ಸಮಸ್ಯೆ ಎದುರಿಸುತ್ತಿದೆ. ಅನುದಾನ ಕೊರತೆಯಿಂದ ನಿರ್ವಹಣೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅನುದಾನ ದೊರತರೆ ಶೀಘ್ರವೇ ಕ್ರಮವಹಿಸುತ್ತೇವೆ.</blockquote><span class="attribution"> –ಸಯ್ಯದ್ ನಜೀರ್ ಅಹ್ಮದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ (ಹೆಚ್ಚುವರಿ ಪ್ರಭಾರ)</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260520-39-355186922</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಅನೇಕ ಕಲಾವಿದರು, ಶಿಲ್ಪಿಗಳನ್ನು ದೇಶ–ವಿದೇಶಕ್ಕೆ ಪರಿಚಯಿಸಿದ ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಹಳೇ ಕಟ್ಟಡವು ಶಿಥಿಲವಾಗುತ್ತಿದ್ದು, ‘ಗಮನಹರಿಸಿ’ ಎಂದು ಗೋಗರೆಯುತ್ತಿದೆ.</p>.<p>1910ರಲ್ಲಿ ನಿರ್ಮಿಸಿದ ಈ ಪಾರಂಪರಿಕ ಕಟ್ಟಡದ ಮೇಲ್ಭಾಗದ ಸಂದುಗಳಲ್ಲಿ ಗಿಡಗಳು ಚಿಗುರಿ ಮರವಾಗುತ್ತಿವೆ. ಗೋಡೆಗಳ ಗಾರೆ ಕಿತ್ತುಹೋಗಿದೆ. ಚಾವಣಿಯ ನೀರನ್ನು ನೆಲಕ್ಕಿಳಿಸುವ ಪೈಪ್ಗಳು ಹಾನಿಯಾಗಿದ್ದು, ಗೋಡೆಯ ಮೇಲೆ ಸುರಿಯುತ್ತಿದೆ. ಕಿಟಕಿಗಳ ಸಜ್ಜೆಗಳು ಮುರಿದಿವೆ.</p>.<p>ರಾಜ್ಯ ಸರ್ಕಾರದ ಉದ್ಯಮಗಳಾದ ಕಾವೇರಿ ಎಂಫೊರಿಯಂ, ಲಿಡ್ಕರ್, ತೆಂಗಿನ ನಾರಿನ ಉತ್ಪನ್ನಗಳು, ಕೈಗಾರಿಕಾ ಅರ್ಬನ್ ಹಾತ್ ಮುಂತಾದ ಮಳಿಗೆಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ, ನೀರು ಸೋರುವುದನ್ನು, ಹೊರ ಆವರಣ ಶಿಥಿಲವಾಗುವುದನ್ನು ಯಾರೂ ತಡೆಯುತ್ತಿಲ್ಲ. </p>.<p>ಕಟ್ಟಡದ ಮುಂಭಾಗವನ್ನು ತಕ್ಕಮಟ್ಟಿಗೆ ಉತ್ತಮವಾಗಿ ಇರಿಸಲಾಗಿದೆ. ಆದರೆ ಹಿಂಭಾಗವಂತೂ ದುರವಸ್ಥೆಯಲ್ಲಿದೆ. ಮರಗಳ ಹೆರೆಗಳು ಕಟ್ಟಡಕ್ಕೆ ತಾಗಿ ನಿಂತಿದ್ದು, ಗೋಡೆಗಳನ್ನು ಮಳೆಗಾಲದಲ್ಲಿ ಒದ್ದೆಯಾಗಿಸುತ್ತಿದೆ. ಕಿಟಕಿಯ ಗಾಜುಗಳು ಒಡೆದಿವೆ, ನೆಲಗಟ್ಟನ್ನು ಹೊಂದಿದಂತೆ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಸುರಿಯಲಾಗಿದೆ.</p>.<p><strong>ಹಗ್ಗದ ಆಸರೆ:</strong> ಕಟ್ಟಡ ಆವರಣದಲ್ಲಿರುವ ಕಂಪೌಂಡ್ ದುರಸ್ತಿಗೆ ಕಾಯುತ್ತಿದೆ. ಪಾದಚಾರಿ ಮಾರ್ಗಕ್ಕೆ ಮುರಿದು ಬೀಳುವಂತಿರುವ ಅದಕ್ಕೆ ಹಗ್ಗವನ್ನು ಕಟ್ಟಿ ಮರಕ್ಕೆ ಬಿಗಿದು ನಿಲ್ಲಿಸಲಾಗಿದೆ. ನಿತ್ಯ ನೂರಾರು ಜನ ಆತಂಕದಲ್ಲಿ ಓಡಾಡುತ್ತಿದ್ದಾರೆ.</p>.<p>‘ವ್ಯಾಪಾರ ನಡೆಯುತ್ತಿರುವ ಕಟ್ಟಡದ ಭಾಗಗಳ ನಿರ್ವಹಣೆ ನಡೆದಿದೆ. ಹೊರಭಾಗದ ಸಮಸ್ಯೆಯತ್ತ ಯಾರೂ ಗಮನಹರಿಸುತ್ತಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಿಂತು ಕಟ್ಟಡವನ್ನು ನೋಡಿದರೆ ಪಾಳು ಬಿದ್ದ ಕಟ್ಟಡದಂತೆ ಭಾಸವಾಗುತ್ತದೆ’ ಎಂದು ಪಾರಂಪರಿಕ ಕಟ್ಟಡಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.</p>.<p><strong>ವೇಲ್ಸ್ ರಾಜಕುಮಾರನಿಂದ ಅಡಿಪಾಯ !</strong></p><p>ಮೈಸೂರಿಗೆ ಭೇಟಿ ನೀಡಿದ್ದ ವೇಲ್ಸ್ ರಾಜಕುಮಾರ ಜಾರ್ಜ್ ಈ ಕಟ್ಟಡಕ್ಕೆ 1906ರಲ್ಲಿ ಅಡಿಪಾಯ ಹಾಕಿದ್ದರು. ಆದರೆ, 1910ರಲ್ಲಿ ಆರಂಭವಾದ ಕಟ್ಟಡದ ಕೆಲಸವು 1913ರಲ್ಲಿ ಮುಗಿಯಿತು. ಎರಡು ಮಹಡಿಗಳು, ತಲಾ 14 ಕೋಣೆಗಳುಳ್ಳ ಕಟ್ಟಡದಲ್ಲಿ ಫ್ರೆಂಚ್ ನವೋದಯ ವಿನ್ಯಾಸದ ಮ್ಯಾನ್ಸಾರ್ಡ್ ಚಾವಣಿಯ ಗುಮ್ಮಟಗಳಿರುವುದು ವಿಶೇಷ. ಅಂದಿನ ಕಾಲದಲ್ಲಿ ಅದಕ್ಕೆ ₹2.41 ಲಕ್ಷ ವೆಚ್ಚವಾಗಿತ್ತು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮರಾಜೇಂದ್ರ ಒಡೆಯರ್ ಸ್ಮರಣಾರ್ಥ ಇಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ(ಸಿಟಿಐ) ಸ್ಥಾಪಿಸಿದರು. ಇದೇ ಕಟ್ಟಡದಲ್ಲಿ ನಗರ ಗ್ರಂಥಾಲಯಕ್ಕೆ ಸ್ಥಳ ನೀಡಲಾಯಿತು. 1981ರಲ್ಲಿ ಕಾವಾ ಆರಂಭವಾಯಿತು.</p><p><strong>ಸ್ವದೇಶಿ ಚಳವಳಿಗೆ ಶಕ್ತಿ: </strong>ಸಿಟಿಐ ಎಂಜಿನಿಯರಿಂಗ್, ಕೈಗಾರಿಕೆ, ಕಲಾ ಶಾಲೆಗಳು ಮತ್ತು ಕಾರ್ಯಾಗಾರ ಸಮೂಹ ಹೊಂದಿದ್ದು, ದೇಶವು ಸ್ವದೇಶಿ ಚಳುವಳಿಯಲ್ಲಿದ್ದಾಗ ಮೈಸೂರು ಮತ್ತು ಸುತ್ತಮುತ್ತಲಿನ ಪ್ರತಿಭಾನ್ವಿತ ಯುವಕರನ್ನು ಆಕರ್ಷಿಸುವ ಮೂಲಕ ಕೌಶಲ ಹೆಚ್ಚಿಸುವ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಇತಿಹಾಸಕಾರರು.</p>.<div><blockquote>ಕಟ್ಟಡವು ಸಮಸ್ಯೆ ಎದುರಿಸುತ್ತಿದೆ. ಅನುದಾನ ಕೊರತೆಯಿಂದ ನಿರ್ವಹಣೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅನುದಾನ ದೊರತರೆ ಶೀಘ್ರವೇ ಕ್ರಮವಹಿಸುತ್ತೇವೆ.</blockquote><span class="attribution"> –ಸಯ್ಯದ್ ನಜೀರ್ ಅಹ್ಮದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ (ಹೆಚ್ಚುವರಿ ಪ್ರಭಾರ)</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260520-39-355186922</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>