<p>ನಾಲತವಾಡ: ‘ಬಿಜೆಪಿಯು ಎಂದಿಗೂ ನಿಂತ ನೀರಲ್ಲ. ಪಕ್ಷದ ತತ್ವ–ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಹಮ್ಮಿಕೊಂಡ ಮಹತ್ವದ ಪ್ರಶಿಕ್ಷಣ ಅಭಿಯಾನವಾಗಿದೆ’ ಎಂದು ಬಿಜೆಪಿ ಮಂಡಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಜಗದೀಶ ಪಂಪಣ್ಣನವರು ಹೇಳಿದರು.</p>.<p>ಇಲ್ಲಿಯ ಹಳ್ಳೂರ ಪ್ಯಾಲೇಸ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಮಂಡಲ ಸಹಯೋಗದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದಲ್ಲಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಆರ್. ಬಿರಾದಾರ ಮಾತನಾಡಿ, ‘ದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬಿಜೆಪಿಯನ್ನು ತಳ ಮಟ್ಟದಲ್ಲೇ ಗಟ್ಟಿಗೊಳಿಸುವ ಉದ್ದೇಶ ಎಲ್ಲರೂ ಹೊಂದಬೇಕು’ ಎಂದರು.</p>.<p>ಗಿರೀಶಗೌಡ ಪಾಟೀಲ(ಮುರಾಳ), ಮುತ್ತು ಅಂಗಡಿ, ಸಂಗಮೇಶ ಮೇಟಿ ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್. ಬಿರಾದಾರ, ಪಕ್ಷದ ಮುಖಂಡರಾದ ಎಂ.ಎಸ್. ಪಾಟೀಲ, ಪ್ರಭು ಕಡಿ, ಜಗದೀಶ ಪಂಪಣ್ಣನವರ, ಮಂಜುನಾಥ ಮೀಸೆ ಗುರುನಾಥ ದೇಶಮುಖ, ಮುನ್ನಾಧಣಿ ನಾಡಗೌಡ, ಸಂಗಮ್ಮ ದೇವರಳ್ಳಿ ಸುವರ್ಣಾ ಬಿರಾದಾರ, ಬಸವರಾಜ ಬಿರಾದಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-26-248484326</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಲತವಾಡ: ‘ಬಿಜೆಪಿಯು ಎಂದಿಗೂ ನಿಂತ ನೀರಲ್ಲ. ಪಕ್ಷದ ತತ್ವ–ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಹಮ್ಮಿಕೊಂಡ ಮಹತ್ವದ ಪ್ರಶಿಕ್ಷಣ ಅಭಿಯಾನವಾಗಿದೆ’ ಎಂದು ಬಿಜೆಪಿ ಮಂಡಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಜಗದೀಶ ಪಂಪಣ್ಣನವರು ಹೇಳಿದರು.</p>.<p>ಇಲ್ಲಿಯ ಹಳ್ಳೂರ ಪ್ಯಾಲೇಸ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಮಂಡಲ ಸಹಯೋಗದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದಲ್ಲಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಆರ್. ಬಿರಾದಾರ ಮಾತನಾಡಿ, ‘ದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬಿಜೆಪಿಯನ್ನು ತಳ ಮಟ್ಟದಲ್ಲೇ ಗಟ್ಟಿಗೊಳಿಸುವ ಉದ್ದೇಶ ಎಲ್ಲರೂ ಹೊಂದಬೇಕು’ ಎಂದರು.</p>.<p>ಗಿರೀಶಗೌಡ ಪಾಟೀಲ(ಮುರಾಳ), ಮುತ್ತು ಅಂಗಡಿ, ಸಂಗಮೇಶ ಮೇಟಿ ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್. ಬಿರಾದಾರ, ಪಕ್ಷದ ಮುಖಂಡರಾದ ಎಂ.ಎಸ್. ಪಾಟೀಲ, ಪ್ರಭು ಕಡಿ, ಜಗದೀಶ ಪಂಪಣ್ಣನವರ, ಮಂಜುನಾಥ ಮೀಸೆ ಗುರುನಾಥ ದೇಶಮುಖ, ಮುನ್ನಾಧಣಿ ನಾಡಗೌಡ, ಸಂಗಮ್ಮ ದೇವರಳ್ಳಿ ಸುವರ್ಣಾ ಬಿರಾದಾರ, ಬಸವರಾಜ ಬಿರಾದಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260531-26-248484326</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>