<p><strong>ಬೆಂಗಳೂರು:</strong> ಇದೇ 14ರಂದು ರಾಜ್ಯದಾದ್ಯಂತ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 55.85 ಲಕ್ಷ ಕೇಸುಗಳು ಇತ್ಯರ್ಥವಾಗಿದ್ದು, ಸಂಬಂಧಿಸಿದವರಿಗೆ ₹3,428 ಕೋಟಿ ಮೊತ್ತವನ್ನು ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ.</p>.<p>ಈ ಕುರಿತಾದ ವಿವರಗಳನ್ನು ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಯೂ ಆಗಿರುವ ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ’ದ ಕಾರ್ಯ ನಿರ್ವಾಹಕ ಅಧ್ಯಕ್ಷೆ ಅನು ಶಿವರಾಮನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒದಗಿಸಿದರು.</p>.<p>‘ಅದಾಲತ್ನ 951 ಪೀಠಗಳಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,61,160 ಪ್ರಕರಣ, 53,23,976 ವ್ಯಾಜ್ಯಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 55,85,136 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.</p>.<p><strong>ಪ್ರಮುಖಾಂಶಗಳು:</strong></p>.<p>* 2,321 ವೈವಾಹಿಕ ವ್ಯಾಜ್ಯಗಳ ಇತ್ಯರ್ಥ: ₹6 ಕೋಟಿ ಪರಿಹಾರ ಪಾವತಿ</p>.<p>* 3,351 ವಿಭಾಗ ದಾವೆಗಳ (ಪಾರ್ಟಿಷನ್ ಸೂಟ್) ವಿಲೇವಾರಿ: ₹30 ಕೋಟಿ ಪರಿಹಾರ</p>.<p>* 4,496 ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ₹290 ಕೋಟಿ ಪರಿಹಾರ ಪಾವತಿ</p>.<p>* 14,371 ಚೆಕ್ ಬೌನ್ಸ್ ಕೇಸುಗಳ ವಿಲೇವಾರಿ: ₹1,029 ಕೋಟಿ ಪರಿಹಾರ</p>.<p>* 5 ವರ್ಷಕ್ಕೂ ಹೆಚ್ಚಿನ 2,235 ಮತ್ತು 10 ವರ್ಷಕ್ಕೂ ಹಿಂದಿನ 333 ಹಾಗೂ 15 ವರ್ಷ ಕಳೆದಿರುವ 58 ಬಾಕಿ ಪ್ರಕರಣಗಳ ಇತ್ಯರ್ಥ</p>.<p>* ಹಿರಿಯ ನಾಗರಿಕರ 3,330 ಕೇಸುಗಳ ವಿಲೇವಾರಿ</p>.<p>* ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ 328 ದಂಪತಿಗಳು</p>.<p>* ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ 18 ವರ್ಷಗಳಿಂದ ಬಾಕಿ ಇದ್ದ 93 ವರ್ಷದ ವೃದ್ಧೆಯೊಬ್ಬರ ವಿಭಾಗ ದಾವೆ ಇತ್ಯರ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇದೇ 14ರಂದು ರಾಜ್ಯದಾದ್ಯಂತ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 55.85 ಲಕ್ಷ ಕೇಸುಗಳು ಇತ್ಯರ್ಥವಾಗಿದ್ದು, ಸಂಬಂಧಿಸಿದವರಿಗೆ ₹3,428 ಕೋಟಿ ಮೊತ್ತವನ್ನು ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ.</p>.<p>ಈ ಕುರಿತಾದ ವಿವರಗಳನ್ನು ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಯೂ ಆಗಿರುವ ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ’ದ ಕಾರ್ಯ ನಿರ್ವಾಹಕ ಅಧ್ಯಕ್ಷೆ ಅನು ಶಿವರಾಮನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒದಗಿಸಿದರು.</p>.<p>‘ಅದಾಲತ್ನ 951 ಪೀಠಗಳಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2,61,160 ಪ್ರಕರಣ, 53,23,976 ವ್ಯಾಜ್ಯಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 55,85,136 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.</p>.<p><strong>ಪ್ರಮುಖಾಂಶಗಳು:</strong></p>.<p>* 2,321 ವೈವಾಹಿಕ ವ್ಯಾಜ್ಯಗಳ ಇತ್ಯರ್ಥ: ₹6 ಕೋಟಿ ಪರಿಹಾರ ಪಾವತಿ</p>.<p>* 3,351 ವಿಭಾಗ ದಾವೆಗಳ (ಪಾರ್ಟಿಷನ್ ಸೂಟ್) ವಿಲೇವಾರಿ: ₹30 ಕೋಟಿ ಪರಿಹಾರ</p>.<p>* 4,496 ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ₹290 ಕೋಟಿ ಪರಿಹಾರ ಪಾವತಿ</p>.<p>* 14,371 ಚೆಕ್ ಬೌನ್ಸ್ ಕೇಸುಗಳ ವಿಲೇವಾರಿ: ₹1,029 ಕೋಟಿ ಪರಿಹಾರ</p>.<p>* 5 ವರ್ಷಕ್ಕೂ ಹೆಚ್ಚಿನ 2,235 ಮತ್ತು 10 ವರ್ಷಕ್ಕೂ ಹಿಂದಿನ 333 ಹಾಗೂ 15 ವರ್ಷ ಕಳೆದಿರುವ 58 ಬಾಕಿ ಪ್ರಕರಣಗಳ ಇತ್ಯರ್ಥ</p>.<p>* ಹಿರಿಯ ನಾಗರಿಕರ 3,330 ಕೇಸುಗಳ ವಿಲೇವಾರಿ</p>.<p>* ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ 328 ದಂಪತಿಗಳು</p>.<p>* ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ 18 ವರ್ಷಗಳಿಂದ ಬಾಕಿ ಇದ್ದ 93 ವರ್ಷದ ವೃದ್ಧೆಯೊಬ್ಬರ ವಿಭಾಗ ದಾವೆ ಇತ್ಯರ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>