<p><strong>ರಾಮನಗರ:</strong> ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಡಿಶಾದ ಕಾಂಗ್ರೆಸ್ಗೆ ಅಡ್ಡ ಮತದಾನ ಹಾಗೂ ಆಪರೇಷನ್ ಕಮಲ ಭೀತಿ ಎದುರಾಗಿದೆ. ಹೀಗಾಗಿ, ಮೊದಲ ಸಲ ಗೆದ್ದಿರುವ 8 ಶಾಸಕರನ್ನು ಗುರುವಾರ ರಾತ್ರಿ ಕರ್ನಾಟಕಕ್ಕೆ ಕಳಿಸಿದ್ದು, ಅವರ ಹೊಣೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿದೆ.</p><p>ಒಡಿಶಾದ ಭುವನೇಶ್ವರದಿಂದ ಹೊರಟು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 11 ಗಂಟೆಗೆ ಬಂದಿಳಿದ ಶಾಸಕರನ್ನು, ಶಿವಕುಮಾರ್ ಆಪ್ತರು ಬರಮಾಡಿಕೊಂಡರು. ನಿಲ್ದಾಣದಿಂದ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ಗೆ ಕರೆ ತರಲಾಯಿತು.</p><p>ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರೊಂದಿಗೆ ಶಾಸಕರಾದ ರಾಜನ್ ಎಕ್ಕ, ಅಶೋಕ್ ದಾಸ್, ಸತ್ಯಜಿತ್ ಗೊಮಂಗೊ, ಅಪ್ಪಲ ಕುಮಾರಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ ಹಾಗೂ ಪ್ರಫುಲ್ಲ ಪ್ರಧಾನ್ ರೆಸಾರ್ಟ್ಗೆ ಬಂದು ತಂಗಿದ್ದಾರೆ. ರೆಸಾರ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p><p>ಸಂಜೆ ಡಿ.ಕೆ. ಶಿವಕುಮಾರ್ ಅವರು ರೆಸಾರ್ಟ್ಗೆ ಬಂದು ಶಾಸಕರನ್ನು ಭೇಟಿ ಮಾಡಿದರು. ಕೆಲ ನಿಮಿಷ ಶಾಸಕರ ಜೊತೆ ಸಭೆ ನಡೆಸಿದ ಅವರು, ಶಾಸಕರೊಂದಿಗೆ ಹೊರಗಡೆ ಬಂದು ಫೋಟೊ ತೆಗೆಸಿಕೊಂಡರು. ಸ್ಥಳೀಯ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಜೊತೆಗಿದ್ದರು.</p><p><strong>ಗೆಲುವಿಗೆ ಬೇಕು 30 ಮತ:</strong> ಒಡಿಶಾ ವಿಧಾನಸಭೆಯು 147 ಶಾಸಕರ ಬಲವನ್ನು ಹೊಂದಿದೆ. ಈ ಪೈಕಿ, ರಾಜ್ಯಸಭೆಯ 4 ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸಿದ್ದಾರೆ. ಇದರಲ್ಲಿ ಬಿಜೆಪಿಯ 3, ಬಿಜೆಡಿಯ 1 ಹಾಗೂ ಕಾಂಗ್ರೆಸ್ ಮತ್ತು ಬಿಜು ಜನತಾ ದಳದ (ಬಿಜೆಡಿ) ಅಭ್ಯರ್ಥಿಯಾಗಿ ಒಡಿಶಾ ವೈದ್ಯಕೀಯ ವಿಶ್ವವಿದ್ಯಾಲಯ ಮಾಜಿ ನಿರ್ದೇಶಕ ಹಾಗೂ ಖ್ಯಾತ ಯುರೋಲಾಜಿಸಿಸ್ಟ್ ಡಾ. ದತ್ತೇಶ್ವರ್ ಹೋಟ ಸ್ಪರ್ಧಿಸಿದ್ದಾರೆ. ಗೆಲುವಿಗೆ ಪ್ರತಿ ಅಭ್ಯರ್ಥಿ 30 ಮತಗಳನ್ನು ಪಡೆಯಬೇಕು. ಸದ್ಯ ಬಿಜೆಡಿಯ 18, ಕಾಂಗ್ರೆಸ್ನ 14 ಹಾಗೂ ಸಿಪಿಐ(ಎಂ)ನ ಒಬ್ಬರು ಸೇರಿದಂತೆ 32 ಲಭ್ಯ ಮತಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.</p>.<h3>ಬಿಜೆಪಿಯಿಂದ ‘ಕೈ’ ಶಾಸಕರಿಗೆ ಆಮಿಷ: ಡಿಕೆಶಿ</h3><p>ಶಾಸಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಒಡಿಶಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ನಮ್ಮ ಶಾಸಕರಿಗೆ ವಿವಿಧ ಆಮಿಷಗಳ ಜೊತೆಗೆ ಒಡ್ಡುತ್ತಾ ಒತ್ತಡ ಹೇರುತ್ತಿದೆ. ಹಾಗಾಗಿ, ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ಮತದಾನದ ದಿನದವರೆಗೆ ಶಾಸಕರೊಂದಿಗೆ ಕರ್ನಾಟಕಕ್ಕೆ ಬಂದು ಇರುವುದಾಗಿ ಹೇಳಿದರು. ಅದಕ್ಕೆ ನಾವಿಲ್ಲಿ ವ್ಯವಸ್ಥೆ ಮಾಡಿದ್ದೇವೆ. ಕಾಂಗ್ರೆಸ್, ಬಿಜೆಡಿ ಹಾಗೂ ಕಮುನಿಷ್ಟ್ ಪಕ್ಷದವರು ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಈ ಗೆಲುವು ಇಂಡಿಯಾ ಮೈತ್ರಿಕೂಟಕ್ಕೆ ಬಲ ತುಂಬಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಡಿಶಾದ ಕಾಂಗ್ರೆಸ್ಗೆ ಅಡ್ಡ ಮತದಾನ ಹಾಗೂ ಆಪರೇಷನ್ ಕಮಲ ಭೀತಿ ಎದುರಾಗಿದೆ. ಹೀಗಾಗಿ, ಮೊದಲ ಸಲ ಗೆದ್ದಿರುವ 8 ಶಾಸಕರನ್ನು ಗುರುವಾರ ರಾತ್ರಿ ಕರ್ನಾಟಕಕ್ಕೆ ಕಳಿಸಿದ್ದು, ಅವರ ಹೊಣೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿದೆ.</p><p>ಒಡಿಶಾದ ಭುವನೇಶ್ವರದಿಂದ ಹೊರಟು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 11 ಗಂಟೆಗೆ ಬಂದಿಳಿದ ಶಾಸಕರನ್ನು, ಶಿವಕುಮಾರ್ ಆಪ್ತರು ಬರಮಾಡಿಕೊಂಡರು. ನಿಲ್ದಾಣದಿಂದ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್ಗೆ ಕರೆ ತರಲಾಯಿತು.</p><p>ಒಡಿಶಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರೊಂದಿಗೆ ಶಾಸಕರಾದ ರಾಜನ್ ಎಕ್ಕ, ಅಶೋಕ್ ದಾಸ್, ಸತ್ಯಜಿತ್ ಗೊಮಂಗೊ, ಅಪ್ಪಲ ಕುಮಾರಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ ಹಾಗೂ ಪ್ರಫುಲ್ಲ ಪ್ರಧಾನ್ ರೆಸಾರ್ಟ್ಗೆ ಬಂದು ತಂಗಿದ್ದಾರೆ. ರೆಸಾರ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p><p>ಸಂಜೆ ಡಿ.ಕೆ. ಶಿವಕುಮಾರ್ ಅವರು ರೆಸಾರ್ಟ್ಗೆ ಬಂದು ಶಾಸಕರನ್ನು ಭೇಟಿ ಮಾಡಿದರು. ಕೆಲ ನಿಮಿಷ ಶಾಸಕರ ಜೊತೆ ಸಭೆ ನಡೆಸಿದ ಅವರು, ಶಾಸಕರೊಂದಿಗೆ ಹೊರಗಡೆ ಬಂದು ಫೋಟೊ ತೆಗೆಸಿಕೊಂಡರು. ಸ್ಥಳೀಯ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಜೊತೆಗಿದ್ದರು.</p><p><strong>ಗೆಲುವಿಗೆ ಬೇಕು 30 ಮತ:</strong> ಒಡಿಶಾ ವಿಧಾನಸಭೆಯು 147 ಶಾಸಕರ ಬಲವನ್ನು ಹೊಂದಿದೆ. ಈ ಪೈಕಿ, ರಾಜ್ಯಸಭೆಯ 4 ಸ್ಥಾನಗಳಿಗೆ 5 ಮಂದಿ ಸ್ಪರ್ಧಿಸಿದ್ದಾರೆ. ಇದರಲ್ಲಿ ಬಿಜೆಪಿಯ 3, ಬಿಜೆಡಿಯ 1 ಹಾಗೂ ಕಾಂಗ್ರೆಸ್ ಮತ್ತು ಬಿಜು ಜನತಾ ದಳದ (ಬಿಜೆಡಿ) ಅಭ್ಯರ್ಥಿಯಾಗಿ ಒಡಿಶಾ ವೈದ್ಯಕೀಯ ವಿಶ್ವವಿದ್ಯಾಲಯ ಮಾಜಿ ನಿರ್ದೇಶಕ ಹಾಗೂ ಖ್ಯಾತ ಯುರೋಲಾಜಿಸಿಸ್ಟ್ ಡಾ. ದತ್ತೇಶ್ವರ್ ಹೋಟ ಸ್ಪರ್ಧಿಸಿದ್ದಾರೆ. ಗೆಲುವಿಗೆ ಪ್ರತಿ ಅಭ್ಯರ್ಥಿ 30 ಮತಗಳನ್ನು ಪಡೆಯಬೇಕು. ಸದ್ಯ ಬಿಜೆಡಿಯ 18, ಕಾಂಗ್ರೆಸ್ನ 14 ಹಾಗೂ ಸಿಪಿಐ(ಎಂ)ನ ಒಬ್ಬರು ಸೇರಿದಂತೆ 32 ಲಭ್ಯ ಮತಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.</p>.<h3>ಬಿಜೆಪಿಯಿಂದ ‘ಕೈ’ ಶಾಸಕರಿಗೆ ಆಮಿಷ: ಡಿಕೆಶಿ</h3><p>ಶಾಸಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಒಡಿಶಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ನಮ್ಮ ಶಾಸಕರಿಗೆ ವಿವಿಧ ಆಮಿಷಗಳ ಜೊತೆಗೆ ಒಡ್ಡುತ್ತಾ ಒತ್ತಡ ಹೇರುತ್ತಿದೆ. ಹಾಗಾಗಿ, ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ಮತದಾನದ ದಿನದವರೆಗೆ ಶಾಸಕರೊಂದಿಗೆ ಕರ್ನಾಟಕಕ್ಕೆ ಬಂದು ಇರುವುದಾಗಿ ಹೇಳಿದರು. ಅದಕ್ಕೆ ನಾವಿಲ್ಲಿ ವ್ಯವಸ್ಥೆ ಮಾಡಿದ್ದೇವೆ. ಕಾಂಗ್ರೆಸ್, ಬಿಜೆಡಿ ಹಾಗೂ ಕಮುನಿಷ್ಟ್ ಪಕ್ಷದವರು ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಈ ಗೆಲುವು ಇಂಡಿಯಾ ಮೈತ್ರಿಕೂಟಕ್ಕೆ ಬಲ ತುಂಬಲಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>