<p><strong>ಬೆಂಗಳೂರು:</strong> ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ತಾಯಂದಿರ ಜತೆಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಜೈಲು ಸೇರಿ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾದ ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ‘ಶಿಶು ಪಾಲನಾ ಕೇಂದ್ರ’ ಸ್ಥಾಪಿಸಲಾಗಿದೆ.</p>.<p>ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ (ಡಿಸಿಪಿ) ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ವಿದೇಶಿ ಆರೋಪಿಗಳ ಮಕ್ಕಳೂ ಸೇರಿದಂತೆ ಒಂಬತ್ತು ಮಕ್ಕಳು ನಲಿಯುತ್ತಾ ಕಲಿಯುತ್ತಿದ್ದಾರೆ.</p>.<p>ಕಾರಾಗೃಹದೊಳಗೆ ಡ್ರಗ್ಸ್ ಪೂರೈಕೆ, ವಿಐಪಿ ಕೈದಿಗಳಿಗೆ ವಿಶೇಷ ಆತಿಥ್ಯ, ಮೊಬೈಲ್ ಫೋನ್ಗಳನ್ನು ಕದ್ದುಮುಚ್ಚಿ ಸಾಗಣೆ, ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳು ನಡುವೆ ಗಲಾಟೆ, ಜೈಲಿನ ಒಳಗಿನಿಂದಲೇ ಬೆದರಿಕೆ, ಜೈಲಿನ ಸಿಬ್ಬಂದಿಗೆ ನಿಂದನೆಯಂತಹ ಪ್ರಕರಣಗಳಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸದಾ ಸುದ್ದಿ ಆಗುತ್ತಿತ್ತು. ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ‘ಶಿಶು ಪಾಲನಾ ಕೇಂದ್ರ’ ಆರಂಭಿಸುವ ಮೂಲಕ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ.</p>.<p>ಕಾರಾಗೃಹದ ಕಠಿಣ ವಾತಾವರಣದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ. ‘ನಮಗೂ ಹೊಸ ಜೀವನ ಇದೆ’ ಎಂಬ ಆಶಾಭಾವನೆಯನ್ನು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ಕೊಲೆ, ಕಳ್ಳತನ ಸೇರಿ ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ತಾಯಂದಿರು ಜೈಲು ಸೇರಿದಾಗ ಅವರೊಂದಿಗೆ ಹಸುಗೂಸುಗಳು, ಆರು ವರ್ಷದೊಳಗಿನ ಮಕ್ಕಳೂ ಜೈಲಿಗೆ ಸೇರಬೇಕಾದ ಅನಿವಾರ್ಯ ಇದೆ. ತಾಯಂದಿರು ಜಾಮೀನು ಪಡೆದು ಹೊರಬರುವ ತನಕವೂ ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ಮಾಡದ ತಪ್ಪಿಗೆ ಮಕ್ಕಳ ಭವಿಷ್ಯ ಕಮರುತ್ತಿತ್ತು. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಈ ಕೇಂದ್ರ ಆರಂಭಿಸಲಾಗಿದೆ.</p>.<p>ಕೊಠಡಿಗೆ ಬಣ್ಣ, ಮೂಡಿದ ಚಿತ್ರಕಲೆ: ‘ಈ ಕೇಂದ್ರ ಸ್ಥಾಪಿಸಲು ಕಾರಾಗೃಹ ಇಲಾಖೆ ಪ್ರತ್ಯೇಕ ಕೊಠಡಿಗಳನ್ನು ನೀಡಿದೆ. ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರನ್ನು ಡಿಸಿಪಿ ಅಧಿಕಾರಿಗಳು ಖುದ್ದು ಸಂಪರ್ಕಿಸಿ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ಚಿತ್ರಗಳನ್ನು ಗೋಡೆಯ ಮೇಲೆ ರಚಿಸಿಕೊಡುವಂತೆ ಕೋರಿದ್ದರು. ಅಧಿಕಾರಿಗಳ ಕೋರಿಕೆಯಂತೆ ಜೈಲಿನ ಗೋಡೆಗಳಲ್ಲಿ ಮಕ್ಕಳಿಗೆ ಮುದ ನೀಡುವ ಚಿತ್ರಗಳನ್ನು ನಂಜುಂಡಸ್ವಾಮಿ ತಂಡ ರಚಿಸಿದೆ. ಅಲ್ಲದೇ ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಕೈ ತೊಳೆಯುವ ವ್ಯವಸ್ಥೆ, ಆಟವಾಡುವ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ. ಇಡೀ ಕೊಠಡಿಗಳಿಗೆ ಜ್ಞಾನ ಜ್ಯೋತಿ ಎಂದು ಹೆಸರಿಡಲಾಗಿದೆ. ನರ್ಸರಿ ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜೈಲಿನೊಳಗೆ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆಯೂ ನಿಗಾ ಇಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<p>ಇಬ್ಬರು ಶಿಕ್ಷಕರ ನಿಯೋಜನೆ: ‘ಇಲಾಖೆಯಿಂದ ಇಬ್ಬರು ಶಿಕ್ಷಕಿಯರನ್ನು ನೇಮಿಸಲಾಗಿದೆ. ರಜಾ ದಿನ ಹೊರತು ಪಡಿಸಿ ಉಳಿದ ದಿನಗಳಂದು ಶಿಕ್ಷಕಿಯರು ಜೈಲಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಬರುತ್ತಾರೆ. ವರ್ಣಮಾಲೆ, ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ಆರಂಭದಲ್ಲಿ ಮಕ್ಕಳನ್ನು ಕಳುಹಿಸಲು ತಾಯಂದಿರು ಹಿಂದೇಟು ಹಾಕಿದ್ದರು. ಮಕ್ಕಳ ಕಲಿಕಾ ಸಾಮರ್ಥ್ಯ ಕಂಡು ಪೋಷಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಡಿಸಿಪಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪ್ರತಿ ತಿಂಗಳು ತಾಯಂದಿರ ಜತೆಗೆ ಸಭೆ ನಡೆಸಿ ಪ್ರತಿಕ್ರಿಯೆ ಕೇಳಲಾಗುತ್ತಿದೆ. ಅವರು ನೀಡಿದ ಸಲಹೆಯಂತೆ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.</p>.<div><blockquote>ಕಾರಾಗೃಹದ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಈ ಕೇಂದ್ರ ಆರಂಭಿಸಲಾಗಿದೆ</blockquote><span class="attribution"> ಸ್ನೇಹಾ ನಿರ್ದೇಶಕಿ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ</span></div>.<h2> ದತ್ತು ಶಿಕ್ಷಣಕ್ಕೆ ನೆರವು</h2>.<p> ತಾಯಂದಿರು ಹೆಚ್ಚು ಅವಧಿಯ ಶಿಕ್ಷೆಗೆ ಒಳಗಾದರೆ ಅಂತಹವರ ಮಕ್ಕಳ ಕುಟುಂಬಸ್ಥರನ್ನು ಸಂಪರ್ಕಿಸಲಾಗುತ್ತದೆ. ಕುಟುಂಬದವರು ಜವಾಬ್ದಾರಿ ವಹಿಸಿಕೊಳ್ಳದಿದ್ದರೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು ಮುಂದಿನ ಶಿಕ್ಷಣವನ್ನು ಕೊಡಿಸಲಾಗುತ್ತಿದೆ. ಜತೆಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಆಸಕ್ತಿ ಇದ್ದವರನ್ನು ಸಂಪರ್ಕಿಸಿ ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆ ಅಡಿ ಮಕ್ಕಳಿಗೆ ಆರ್ಥಿಕ ನೆರವು ಸಹ ಒದಗಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ತಾಯಂದಿರ ಜತೆಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಜೈಲು ಸೇರಿ ನಾಲ್ಕು ಗೋಡೆಗಳ ಮಧ್ಯೆ ಬೆಳೆಯಬೇಕಾದ ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ‘ಶಿಶು ಪಾಲನಾ ಕೇಂದ್ರ’ ಸ್ಥಾಪಿಸಲಾಗಿದೆ.</p>.<p>ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ (ಡಿಸಿಪಿ) ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ವಿದೇಶಿ ಆರೋಪಿಗಳ ಮಕ್ಕಳೂ ಸೇರಿದಂತೆ ಒಂಬತ್ತು ಮಕ್ಕಳು ನಲಿಯುತ್ತಾ ಕಲಿಯುತ್ತಿದ್ದಾರೆ.</p>.<p>ಕಾರಾಗೃಹದೊಳಗೆ ಡ್ರಗ್ಸ್ ಪೂರೈಕೆ, ವಿಐಪಿ ಕೈದಿಗಳಿಗೆ ವಿಶೇಷ ಆತಿಥ್ಯ, ಮೊಬೈಲ್ ಫೋನ್ಗಳನ್ನು ಕದ್ದುಮುಚ್ಚಿ ಸಾಗಣೆ, ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳು ನಡುವೆ ಗಲಾಟೆ, ಜೈಲಿನ ಒಳಗಿನಿಂದಲೇ ಬೆದರಿಕೆ, ಜೈಲಿನ ಸಿಬ್ಬಂದಿಗೆ ನಿಂದನೆಯಂತಹ ಪ್ರಕರಣಗಳಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸದಾ ಸುದ್ದಿ ಆಗುತ್ತಿತ್ತು. ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ‘ಶಿಶು ಪಾಲನಾ ಕೇಂದ್ರ’ ಆರಂಭಿಸುವ ಮೂಲಕ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ.</p>.<p>ಕಾರಾಗೃಹದ ಕಠಿಣ ವಾತಾವರಣದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗಿದೆ. ‘ನಮಗೂ ಹೊಸ ಜೀವನ ಇದೆ’ ಎಂಬ ಆಶಾಭಾವನೆಯನ್ನು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ಕೊಲೆ, ಕಳ್ಳತನ ಸೇರಿ ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ತಾಯಂದಿರು ಜೈಲು ಸೇರಿದಾಗ ಅವರೊಂದಿಗೆ ಹಸುಗೂಸುಗಳು, ಆರು ವರ್ಷದೊಳಗಿನ ಮಕ್ಕಳೂ ಜೈಲಿಗೆ ಸೇರಬೇಕಾದ ಅನಿವಾರ್ಯ ಇದೆ. ತಾಯಂದಿರು ಜಾಮೀನು ಪಡೆದು ಹೊರಬರುವ ತನಕವೂ ಮಕ್ಕಳ ಭವಿಷ್ಯ ಹಾಳಾಗುತ್ತಿತ್ತು. ಮಾಡದ ತಪ್ಪಿಗೆ ಮಕ್ಕಳ ಭವಿಷ್ಯ ಕಮರುತ್ತಿತ್ತು. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಈ ಕೇಂದ್ರ ಆರಂಭಿಸಲಾಗಿದೆ.</p>.<p>ಕೊಠಡಿಗೆ ಬಣ್ಣ, ಮೂಡಿದ ಚಿತ್ರಕಲೆ: ‘ಈ ಕೇಂದ್ರ ಸ್ಥಾಪಿಸಲು ಕಾರಾಗೃಹ ಇಲಾಖೆ ಪ್ರತ್ಯೇಕ ಕೊಠಡಿಗಳನ್ನು ನೀಡಿದೆ. ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರನ್ನು ಡಿಸಿಪಿ ಅಧಿಕಾರಿಗಳು ಖುದ್ದು ಸಂಪರ್ಕಿಸಿ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ಚಿತ್ರಗಳನ್ನು ಗೋಡೆಯ ಮೇಲೆ ರಚಿಸಿಕೊಡುವಂತೆ ಕೋರಿದ್ದರು. ಅಧಿಕಾರಿಗಳ ಕೋರಿಕೆಯಂತೆ ಜೈಲಿನ ಗೋಡೆಗಳಲ್ಲಿ ಮಕ್ಕಳಿಗೆ ಮುದ ನೀಡುವ ಚಿತ್ರಗಳನ್ನು ನಂಜುಂಡಸ್ವಾಮಿ ತಂಡ ರಚಿಸಿದೆ. ಅಲ್ಲದೇ ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ. ಕೈ ತೊಳೆಯುವ ವ್ಯವಸ್ಥೆ, ಆಟವಾಡುವ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ. ಇಡೀ ಕೊಠಡಿಗಳಿಗೆ ಜ್ಞಾನ ಜ್ಯೋತಿ ಎಂದು ಹೆಸರಿಡಲಾಗಿದೆ. ನರ್ಸರಿ ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜೈಲಿನೊಳಗೆ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆಯೂ ನಿಗಾ ಇಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<p>ಇಬ್ಬರು ಶಿಕ್ಷಕರ ನಿಯೋಜನೆ: ‘ಇಲಾಖೆಯಿಂದ ಇಬ್ಬರು ಶಿಕ್ಷಕಿಯರನ್ನು ನೇಮಿಸಲಾಗಿದೆ. ರಜಾ ದಿನ ಹೊರತು ಪಡಿಸಿ ಉಳಿದ ದಿನಗಳಂದು ಶಿಕ್ಷಕಿಯರು ಜೈಲಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಬರುತ್ತಾರೆ. ವರ್ಣಮಾಲೆ, ಪ್ರಾಸಬದ್ಧ ಹಾಡುಗಳು ಮತ್ತು ಸೃಜನಶೀಲ ಕಲೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ಆರಂಭದಲ್ಲಿ ಮಕ್ಕಳನ್ನು ಕಳುಹಿಸಲು ತಾಯಂದಿರು ಹಿಂದೇಟು ಹಾಕಿದ್ದರು. ಮಕ್ಕಳ ಕಲಿಕಾ ಸಾಮರ್ಥ್ಯ ಕಂಡು ಪೋಷಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಡಿಸಿಪಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಪ್ರತಿ ತಿಂಗಳು ತಾಯಂದಿರ ಜತೆಗೆ ಸಭೆ ನಡೆಸಿ ಪ್ರತಿಕ್ರಿಯೆ ಕೇಳಲಾಗುತ್ತಿದೆ. ಅವರು ನೀಡಿದ ಸಲಹೆಯಂತೆ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.</p>.<div><blockquote>ಕಾರಾಗೃಹದ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಈ ಕೇಂದ್ರ ಆರಂಭಿಸಲಾಗಿದೆ</blockquote><span class="attribution"> ಸ್ನೇಹಾ ನಿರ್ದೇಶಕಿ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ</span></div>.<h2> ದತ್ತು ಶಿಕ್ಷಣಕ್ಕೆ ನೆರವು</h2>.<p> ತಾಯಂದಿರು ಹೆಚ್ಚು ಅವಧಿಯ ಶಿಕ್ಷೆಗೆ ಒಳಗಾದರೆ ಅಂತಹವರ ಮಕ್ಕಳ ಕುಟುಂಬಸ್ಥರನ್ನು ಸಂಪರ್ಕಿಸಲಾಗುತ್ತದೆ. ಕುಟುಂಬದವರು ಜವಾಬ್ದಾರಿ ವಹಿಸಿಕೊಳ್ಳದಿದ್ದರೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು ಮುಂದಿನ ಶಿಕ್ಷಣವನ್ನು ಕೊಡಿಸಲಾಗುತ್ತಿದೆ. ಜತೆಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಆಸಕ್ತಿ ಇದ್ದವರನ್ನು ಸಂಪರ್ಕಿಸಿ ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆ ಅಡಿ ಮಕ್ಕಳಿಗೆ ಆರ್ಥಿಕ ನೆರವು ಸಹ ಒದಗಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>