<p><strong>ಬೆಂಗಳೂರು</strong>: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲೆಂದೇ ₹6.5 ಕೋಟಿ ಖರ್ಚು ಮಾಡಲಾಗಿದೆ.</p>.<p>‘ಲಂಚಮುಕ್ತ ಕರ್ನಾಟಕ’ ಸಂಘಟನೆಯ ಮಂಜುನಾಥ ಹಿರೇಚೌಟಿ ಅವರು ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗಳಲ್ಲಿ ಈ ಮಾಹಿತಿ ಇದೆ. 2023ರ ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತ್ತು. ಇದಕ್ಕೆ ₹18.81 ಕೋಟಿ ಖರ್ಚು ಮಾಡಲಾಗಿತ್ತು.</p>.<p>ಈ ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಜನರನ್ನು ಕರೆ ತರಲು 1,800 ಬಸ್ಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ₹4.11 ಕೋಟಿ ವೆಚ್ಚ ಮಾಡಲಾಗಿತ್ತು. ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಭಾಷಣದ ವೇದಿಕೆಗೆ ಮಳೆ ನಿರೋಧಕ ಜರ್ಮನ್ ಮಾದರಿಯ ಪೆಂಡಾಲ್ ಹಾಕಲು, ಗ್ರೀನ್ ರೂಂ, ಸ್ಟಾಲ್ಗಳು ಮತ್ತು ಹೂವಿನ ಅಲಂಕಾರಕ್ಕಾಗಿ ₹1.8 ಕೋಟಿ ವೆಚ್ಚ ಮಾಡಲಾಗಿತ್ತು. ಇವೆಲ್ಲದಕ್ಕೂ ವೆಚ್ಚ ಮಾಡಲು, ಲೋಕೋಪಯೋಗಿ ಇಲಾಖೆ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4(ಜಿ) ಅಡಿ ವಿನಾಯ್ತಿ ಪಡೆದಿತ್ತು.</p>.<p>ಈ ಕಾರ್ಯಕ್ರಮದ ಬಳಿಕ ಬೆಳಗಾವಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮಕ್ಕೆ ₹14.35 ಕೋಟಿ ವೆಚ್ಚ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರಲೆಂದೇ ₹2.5 ಕೋಟಿ ವೆಚ್ಚ ಮಾಡಲಾಗಿತ್ತು. ಮಂಜುನಾಥ ಅವರು ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು 2023ರ ಮಾರ್ಚ್ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. 2026ರ ಜನವರಿಯಲ್ಲಿ ಮಾಹಿತಿ ಪಡೆಯಲು ಯಶಸ್ವಿಯಾದರು.</p>.<p>‘ಹಣ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕೊರತೆ ಕಂಡುಬಂದಿದೆ. ಸಾರ್ವಜನಿಕರ ಹಣವು ಪ್ರಚಾರಕ್ಕಾಗಿ ಇರುವ ಸಂಪನ್ಮೂಲವಲ್ಲ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಚಾರಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳಬಾರದು’ ಎಂದು ಮಂಜುನಾಥ್ ಹೇಳಿದ್ದಾರೆ.</p>.<p>ಈ ಕುರಿತು ಅಂದಿನ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರನ್ನು ಪ್ರಶ್ನಿಸಿದಾಗ, ‘ವೆಚ್ಚದ ನಿರ್ದಿಷ್ಟ ಮಾಹಿತಿಗಳು ನೆನಪಿನಲ್ಲಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.</p>.<p>‘ಇಂತಹ ವೆಚ್ಚಗಳ ಮೇಲೆ ಮಿತಿ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ನಾನು ಸಚಿವನಾದ ಬಳಿಕ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಪಡೆಯುವುದಕ್ಕೆ ತಡೆ ಹಾಕಿದ್ದೇನೆ. ಆದರೆ ಪ್ರಧಾನಿಯವರ ಕಾರ್ಯಕ್ರಮಗಳಿಗೆ ವೆಚ್ಚದ ಮಿತಿ ಹೇರುವುದು ಕಷ್ಟದ ಕೆಲಸ. ಈ ಕುರಿತಂತೆ ಕಡತಗಳನ್ನು ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.</p>.<p><strong>ವೆಚ್ಚದ ಮಿತಿ ಹೇರಿಕೆ ಕಷ್ಟದ ಕೆಲಸ: ಸತೀಶ ಜಾರಕಿಹೊಳಿ</strong></p><p>‘ಇಂತಹ ವೆಚ್ಚಗಳ ಮೇಲೆ ಮಿತಿ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ನಾನು ಸಚಿವನಾದ ಬಳಿಕ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಪಡೆಯುವುದಕ್ಕೆ ತಡೆ ಹಾಕಿದ್ದೇನೆ. ಆದರೆ ಪ್ರಧಾನಿಯವರ ಕಾರ್ಯಕ್ರಮಗಳಿಗೆ ವೆಚ್ಚದ ಮಿತಿ ಹೇರುವುದು ಕಷ್ಟದ ಕೆಲಸ. ಈ ಕುರಿತಂತೆ ಕಡತಗಳನ್ನು ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲೆಂದೇ ₹6.5 ಕೋಟಿ ಖರ್ಚು ಮಾಡಲಾಗಿದೆ.</p>.<p>‘ಲಂಚಮುಕ್ತ ಕರ್ನಾಟಕ’ ಸಂಘಟನೆಯ ಮಂಜುನಾಥ ಹಿರೇಚೌಟಿ ಅವರು ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗಳಲ್ಲಿ ಈ ಮಾಹಿತಿ ಇದೆ. 2023ರ ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತ್ತು. ಇದಕ್ಕೆ ₹18.81 ಕೋಟಿ ಖರ್ಚು ಮಾಡಲಾಗಿತ್ತು.</p>.<p>ಈ ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಜನರನ್ನು ಕರೆ ತರಲು 1,800 ಬಸ್ಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ₹4.11 ಕೋಟಿ ವೆಚ್ಚ ಮಾಡಲಾಗಿತ್ತು. ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಭಾಷಣದ ವೇದಿಕೆಗೆ ಮಳೆ ನಿರೋಧಕ ಜರ್ಮನ್ ಮಾದರಿಯ ಪೆಂಡಾಲ್ ಹಾಕಲು, ಗ್ರೀನ್ ರೂಂ, ಸ್ಟಾಲ್ಗಳು ಮತ್ತು ಹೂವಿನ ಅಲಂಕಾರಕ್ಕಾಗಿ ₹1.8 ಕೋಟಿ ವೆಚ್ಚ ಮಾಡಲಾಗಿತ್ತು. ಇವೆಲ್ಲದಕ್ಕೂ ವೆಚ್ಚ ಮಾಡಲು, ಲೋಕೋಪಯೋಗಿ ಇಲಾಖೆ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4(ಜಿ) ಅಡಿ ವಿನಾಯ್ತಿ ಪಡೆದಿತ್ತು.</p>.<p>ಈ ಕಾರ್ಯಕ್ರಮದ ಬಳಿಕ ಬೆಳಗಾವಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮಕ್ಕೆ ₹14.35 ಕೋಟಿ ವೆಚ್ಚ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರಲೆಂದೇ ₹2.5 ಕೋಟಿ ವೆಚ್ಚ ಮಾಡಲಾಗಿತ್ತು. ಮಂಜುನಾಥ ಅವರು ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು 2023ರ ಮಾರ್ಚ್ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. 2026ರ ಜನವರಿಯಲ್ಲಿ ಮಾಹಿತಿ ಪಡೆಯಲು ಯಶಸ್ವಿಯಾದರು.</p>.<p>‘ಹಣ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕೊರತೆ ಕಂಡುಬಂದಿದೆ. ಸಾರ್ವಜನಿಕರ ಹಣವು ಪ್ರಚಾರಕ್ಕಾಗಿ ಇರುವ ಸಂಪನ್ಮೂಲವಲ್ಲ. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಚಾರಕ್ಕೆ ರಾಜಕೀಯ ವೇದಿಕೆಯನ್ನು ಬಳಸಿಕೊಳ್ಳಬಾರದು’ ಎಂದು ಮಂಜುನಾಥ್ ಹೇಳಿದ್ದಾರೆ.</p>.<p>ಈ ಕುರಿತು ಅಂದಿನ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರನ್ನು ಪ್ರಶ್ನಿಸಿದಾಗ, ‘ವೆಚ್ಚದ ನಿರ್ದಿಷ್ಟ ಮಾಹಿತಿಗಳು ನೆನಪಿನಲ್ಲಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.</p>.<p>‘ಇಂತಹ ವೆಚ್ಚಗಳ ಮೇಲೆ ಮಿತಿ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ನಾನು ಸಚಿವನಾದ ಬಳಿಕ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಪಡೆಯುವುದಕ್ಕೆ ತಡೆ ಹಾಕಿದ್ದೇನೆ. ಆದರೆ ಪ್ರಧಾನಿಯವರ ಕಾರ್ಯಕ್ರಮಗಳಿಗೆ ವೆಚ್ಚದ ಮಿತಿ ಹೇರುವುದು ಕಷ್ಟದ ಕೆಲಸ. ಈ ಕುರಿತಂತೆ ಕಡತಗಳನ್ನು ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.</p>.<p><strong>ವೆಚ್ಚದ ಮಿತಿ ಹೇರಿಕೆ ಕಷ್ಟದ ಕೆಲಸ: ಸತೀಶ ಜಾರಕಿಹೊಳಿ</strong></p><p>‘ಇಂತಹ ವೆಚ್ಚಗಳ ಮೇಲೆ ಮಿತಿ ವಿಧಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಆದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ನಾನು ಸಚಿವನಾದ ಬಳಿಕ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಪಡೆಯುವುದಕ್ಕೆ ತಡೆ ಹಾಕಿದ್ದೇನೆ. ಆದರೆ ಪ್ರಧಾನಿಯವರ ಕಾರ್ಯಕ್ರಮಗಳಿಗೆ ವೆಚ್ಚದ ಮಿತಿ ಹೇರುವುದು ಕಷ್ಟದ ಕೆಲಸ. ಈ ಕುರಿತಂತೆ ಕಡತಗಳನ್ನು ಪರಿಶೀಲಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>