<p><strong>ಬೆಂಗಳೂರು:</strong> ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಜೈಲಿನಿಂದ ಹೊರಬಂದ ಬಳಿಕ ಉತ್ತಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಅಗತ್ಯ ಎಂಬುದನ್ನು ಮನಗಂಡು, ಕಾರಾಗೃಹದಲ್ಲೇ ಕೈದಿಗಳಿಗೆ ಉದ್ಯೋಗ ಆಧಾರಿತ ಕೌಶಲ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.</p><p>ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಮತ್ತು ಆರ್.ವಿ. ಎಂಜಿನಿಯರಿಂಗ್ ಕಾಲೇಜು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರುವ ಕೈದಿಗಳಿಗೆ ಕಾಲೇಜಿನ ವತಿಯಿಂದ<br>ಉಚಿತ ಕೌಶಲ ತರಬೇತಿ ನೀಡುವ ಕಾರ್ಯ ಒಂದು ವಾರದಲ್ಲಿ ಆರಂಭವಾಗಲಿದೆ.</p><p>‘ಸೆಲ್ ಟು ಸ್ಕಿಲ್’ ಕಾರ್ಯಕ್ರಮದಡಿ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಕಾರಾಗೃಹದಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲಾಗಿದೆ. ತರಬೇತಿಗಾಗಿ ಇಲ್ಲಿ 30 ಕಂಪ್ಯೂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತವಾದ ಈ ಲ್ಯಾಬ್ನಲ್ಲಿ ನಿತ್ಯ ಮೂರು ಗಂಟೆಗಳ ಕಾಲ ಕೈದಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ.</p><p>ಕಂಪ್ಯೂಟರ್ ಹಾರ್ಡ್ವೇರ್ ಅಸೆಂಬ್ಲಿ, ನೆಟ್ವರ್ಕಿಂಗ್ ಮತ್ತು ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ಸಾಕ್ಷರತೆ, ಡಿಜಿಟಲ್ ಸಂವಹನ, ಡೆಸ್ಕ್ಟಾಪ್ ಪಬ್ಲಿಷಿಂಗ್ ಮತ್ತು ಸೃಜನಾತ್ಮಕ ಸಂವಹನ, ಪೋಸ್ಟರ್ಗಳ ವಿನ್ಯಾಸ, ಎಂಎಸ್ ವರ್ಡ್, ಎಕ್ಸೆಲ್, ಪವರ್ಪಾಯಿಂಟ್, ಇ–ಮೇಲ್ ಆ್ಯಂಡ್ ಡಾಕ್ಯುಮೆಂಟೆಷನ್, ಲ್ಯಾನ್, ಕೇಬಲಿಂಗ್, ತಾಂತ್ರಿಕ ಮತ್ತು ಡಿಜಿಟಲ್ ಕೌಶಲ, ನೆಟ್ವರ್ಕಿಂಗ್ ಆ್ಯಂಡ್ ಕನೆಕ್ಟಿವಿಟಿ ಸ್ಕಿಲ್ ಇತ್ಯಾದಿಗಳ ಬಗ್ಗೆ ಕಲಿಸಲಾಗುತ್ತದೆ.</p><p>ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಅಥವಾ ಆರೋಪ ಸಾಬೀತಾಗದೆ ಜೈಲಿ<br>ನಿಂದ ಹೊರ ಬಂದ ನಂತರ ಬದುಕು ಕಟ್ಟಿಕೊಳ್ಳಲು ಹಣದ ಅಗತ್ಯವಿರುತ್ತದೆ. ಆರ್ಥಿಕವಾಗಿ ಸ್ವಾವಲಂಬಿಯಾಗದೆ ಇದ್ದರೆ ಮತ್ತೆ ಕಳ್ಳತನ, ಸುಲಿಗೆ ಮಾಡು<br>ತ್ತಾರೆ. ಇದರಿಂದ ಅವರನ್ನು ಹೊರ ತರಬೇಕಾದರೆ ಯಾವುದಾದರೂ<br>ಉದ್ಯೋಗದಲ್ಲಿ ತೊಡಗುವಂತಾಗ ಬೇಕು ಎಂಬ ಉದ್ದೇಶದಿಂದ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಕೈದಿಗಳಿಗೆ ಡಿಜಿಟಲ್ ಮತ್ತು ವೃತ್ತಿ ಪರ ಕೌಶಲಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ. ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ಪಾದನೆ ಮತ್ತು ತರಬೇತಿಯಲ್ಲಿ ನಾವು ಹಿಂದೆ ಇದ್ದೇವೆ. ಇದನ್ನು ಮನಗಂಡು ಆರ್.ವಿ. ಕಾಲೇಜಿನವರು ಸ್ವಯಂ ಪ್ರೇರಣೆಯಿಂದ ಕೌಶಲ ತರಬೇತಿ ನೀಡಲು ಮುಂದೆ ಬಂದಿದ್ದಾರೆ’ ಎಂದರು.</p><p><strong>10ನೇ ತರಗತಿ ಉತ್ತೀರ್ಣ</strong>: ತರಬೇತಿ ಪಡೆಯಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಕಂಪ್ಯೂಟರ್ ಬಗ್ಗೆ ಏನೂ ಗೊತ್ತಿಲ್ಲದೆ ಇದ್ದರೆ ತರಬೇತಿ ನೀಡಿದರೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಸ್ವಲ್ಪಮಟ್ಟಿಗೆ ಅರಿವು ಇರುವ ಹಾಗೂ ಒಂದು ವರ್ಷದಲ್ಲಿ ಜೈಲಿನಿಂದ ಹೊರಗೆ ಹೋಗುವವರನ್ನು ಗುರುತಿಸಿ, ಕೌಶಲ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.</p><p>ಮೊದಲಿಗೆ ಕೇಂದ್ರ ಕಾರಾಗೃಹದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ ಬೇರೆ ಕಾರಾಗೃಹಗಳಿಗೂ ಇದನ್ನು ವಿಸ್ತರಿಸ ಲಾಗುವುದು. ಕೇಂದ್ರ ಕಾರಾಗೃಹದಲ್ಲಿ ಸುಮಾರು 3,500 ಮಂದಿ ವಿಚಾರಣಾ ಧೀನ ಕೈದಿಗಳಿದ್ದಾರೆ. ಇವರೂ ಸೇರಿದಂತೆ ಶಿಕ್ಷೆ ಅನುಭವಿಸಿ ಹೊರ ಹೋಗುವ ಕೈದಿಗಳನ್ನು ತಂಡಗಳನ್ನಾಗಿ ಮಾಡಿ, ತರಬೇತಿ ನೀಡಲಾಗುತ್ತದೆ.</p><p>‘ಜೈಲಿನಿಂದ ಹೊರಬರುವ ಪ್ರತಿಯೊಬ್ಬರಿಗೂ ಗೌರವಯುತವಾದ ಜೀವನವನ್ನು ಮತ್ತೆ ರೂಪಿಸಿಕೊಳ್ಳಲು ಅವಕಾಶ ಸಿಗಬೇಕು. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಬದುಕಬಲ್ಲೆವು ಎಂಬ ನಂಬಿಕೆ, ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿಸುವ ಅಗತ್ಯವಿದೆ. ಇದನ್ನು ಮನಗಂಡು ನಮ್ಮ ಸಂಸ್ಥೆ ವತಿಯಿಂದ ತರಬೇತಿ ನೀಡಲು ಮುಂದಾಗಿದ್ದೇವೆ’ ಎಂದು ಅರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಸುಬ್ರಹ್ಮಣ್ಯ ತಿಳಿಸಿದರು.</p><p>ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಜೀವನದಲ್ಲಿ ಎರಡನೇ ಅವಕಾಶದ ಹುಡುಕಾಟದಲ್ಲಿರುವ ವ್ಯಕ್ತಿಗಳಿಗೆ ಸಹಕಾರದ ಅಗತ್ಯವಿರುತ್ತದೆ. ಅವರನ್ನು ಗೌರವದಿಂದ ಕಾಣುವ ಮೂಲಕ ಬದುಕು ರೂಪಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಇದರಿಂದ ಅವರ ಜೀವನದಲ್ಲಿ ಸುಧಾರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.</p>.<div><blockquote>ಹತ್ತು ತಂಡಗಳಾಗಿ ವಿಂಗಡಿಸಿ ಪ್ರತಿ ವರ್ಷ 200ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ತರಬೇತಿ ಅವಧಿ ಒಟ್ಟು 120 ಗಂಟೆಯಾಗಿರಲಿದೆ</blockquote><span class="attribution">ಕೆ.ಎನ್. ಸುಬ್ರಹ್ಮಣ್ಯ, ಪ್ರಾಂಶುಪಾಲರು, ಆರ್.ವಿ.ಎಂಜಿನಿಯರಿಂಗ್ ಕಾಲೇಜು.</span></div>.<div><blockquote>ಕೌಶಲ ತರಬೇತಿ ಇನ್ನು ಮುಂದೆ ನಿರಂತರ ಪ್ರಕ್ರಿಯೆಯಾಗಲಿದೆ. ಪ್ಲಂಬಿಂಗ್ ಕೆಲಸ, ಎಸಿ, ಟಿವಿ ರಿಪೇರಿ ಇತ್ಯಾದಿಗಳ ತರಬೇತಿ ನೀಡಲಾಗುವುದು </blockquote><span class="attribution">ಅಲೋಕ್ ಕುಮಾರ್, ಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ</span></div>.<p><strong>ಬಯಲು ಕಾರಾಗೃಹದಲ್ಲೂ ತರಬೇತಿ</strong></p><p>ದೇವನಹಳ್ಳಿಯ ಬಯಲು ಕಾರಾಗೃಹದಲ್ಲಿ ಸುಮಾರು 70 ಎಕರೆ ಜಾಗವಿದೆ. ಅಲ್ಲಿ ಕೈದಿಗಳಿಗೆ ವೈಜ್ಞಾನಿಕವಾಗಿ ಕೃಷಿ, ಮೀನು ಸಾಕಾಣಿಕೆ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿ ಇರಲು ಅನುಕೂಲವಾಗಲಿದೆ ಎಂದು ಅಲೋಕ್ ಕುಮಾರ್<br>ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಜೈಲಿನಿಂದ ಹೊರಬಂದ ಬಳಿಕ ಉತ್ತಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಅಗತ್ಯ ಎಂಬುದನ್ನು ಮನಗಂಡು, ಕಾರಾಗೃಹದಲ್ಲೇ ಕೈದಿಗಳಿಗೆ ಉದ್ಯೋಗ ಆಧಾರಿತ ಕೌಶಲ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.</p><p>ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಮತ್ತು ಆರ್.ವಿ. ಎಂಜಿನಿಯರಿಂಗ್ ಕಾಲೇಜು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರುವ ಕೈದಿಗಳಿಗೆ ಕಾಲೇಜಿನ ವತಿಯಿಂದ<br>ಉಚಿತ ಕೌಶಲ ತರಬೇತಿ ನೀಡುವ ಕಾರ್ಯ ಒಂದು ವಾರದಲ್ಲಿ ಆರಂಭವಾಗಲಿದೆ.</p><p>‘ಸೆಲ್ ಟು ಸ್ಕಿಲ್’ ಕಾರ್ಯಕ್ರಮದಡಿ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಕಾರಾಗೃಹದಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲಾಗಿದೆ. ತರಬೇತಿಗಾಗಿ ಇಲ್ಲಿ 30 ಕಂಪ್ಯೂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತವಾದ ಈ ಲ್ಯಾಬ್ನಲ್ಲಿ ನಿತ್ಯ ಮೂರು ಗಂಟೆಗಳ ಕಾಲ ಕೈದಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ.</p><p>ಕಂಪ್ಯೂಟರ್ ಹಾರ್ಡ್ವೇರ್ ಅಸೆಂಬ್ಲಿ, ನೆಟ್ವರ್ಕಿಂಗ್ ಮತ್ತು ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ಸಾಕ್ಷರತೆ, ಡಿಜಿಟಲ್ ಸಂವಹನ, ಡೆಸ್ಕ್ಟಾಪ್ ಪಬ್ಲಿಷಿಂಗ್ ಮತ್ತು ಸೃಜನಾತ್ಮಕ ಸಂವಹನ, ಪೋಸ್ಟರ್ಗಳ ವಿನ್ಯಾಸ, ಎಂಎಸ್ ವರ್ಡ್, ಎಕ್ಸೆಲ್, ಪವರ್ಪಾಯಿಂಟ್, ಇ–ಮೇಲ್ ಆ್ಯಂಡ್ ಡಾಕ್ಯುಮೆಂಟೆಷನ್, ಲ್ಯಾನ್, ಕೇಬಲಿಂಗ್, ತಾಂತ್ರಿಕ ಮತ್ತು ಡಿಜಿಟಲ್ ಕೌಶಲ, ನೆಟ್ವರ್ಕಿಂಗ್ ಆ್ಯಂಡ್ ಕನೆಕ್ಟಿವಿಟಿ ಸ್ಕಿಲ್ ಇತ್ಯಾದಿಗಳ ಬಗ್ಗೆ ಕಲಿಸಲಾಗುತ್ತದೆ.</p><p>ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಅಥವಾ ಆರೋಪ ಸಾಬೀತಾಗದೆ ಜೈಲಿ<br>ನಿಂದ ಹೊರ ಬಂದ ನಂತರ ಬದುಕು ಕಟ್ಟಿಕೊಳ್ಳಲು ಹಣದ ಅಗತ್ಯವಿರುತ್ತದೆ. ಆರ್ಥಿಕವಾಗಿ ಸ್ವಾವಲಂಬಿಯಾಗದೆ ಇದ್ದರೆ ಮತ್ತೆ ಕಳ್ಳತನ, ಸುಲಿಗೆ ಮಾಡು<br>ತ್ತಾರೆ. ಇದರಿಂದ ಅವರನ್ನು ಹೊರ ತರಬೇಕಾದರೆ ಯಾವುದಾದರೂ<br>ಉದ್ಯೋಗದಲ್ಲಿ ತೊಡಗುವಂತಾಗ ಬೇಕು ಎಂಬ ಉದ್ದೇಶದಿಂದ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಕೈದಿಗಳಿಗೆ ಡಿಜಿಟಲ್ ಮತ್ತು ವೃತ್ತಿ ಪರ ಕೌಶಲಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ. ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ಪಾದನೆ ಮತ್ತು ತರಬೇತಿಯಲ್ಲಿ ನಾವು ಹಿಂದೆ ಇದ್ದೇವೆ. ಇದನ್ನು ಮನಗಂಡು ಆರ್.ವಿ. ಕಾಲೇಜಿನವರು ಸ್ವಯಂ ಪ್ರೇರಣೆಯಿಂದ ಕೌಶಲ ತರಬೇತಿ ನೀಡಲು ಮುಂದೆ ಬಂದಿದ್ದಾರೆ’ ಎಂದರು.</p><p><strong>10ನೇ ತರಗತಿ ಉತ್ತೀರ್ಣ</strong>: ತರಬೇತಿ ಪಡೆಯಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಕಂಪ್ಯೂಟರ್ ಬಗ್ಗೆ ಏನೂ ಗೊತ್ತಿಲ್ಲದೆ ಇದ್ದರೆ ತರಬೇತಿ ನೀಡಿದರೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಸ್ವಲ್ಪಮಟ್ಟಿಗೆ ಅರಿವು ಇರುವ ಹಾಗೂ ಒಂದು ವರ್ಷದಲ್ಲಿ ಜೈಲಿನಿಂದ ಹೊರಗೆ ಹೋಗುವವರನ್ನು ಗುರುತಿಸಿ, ಕೌಶಲ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.</p><p>ಮೊದಲಿಗೆ ಕೇಂದ್ರ ಕಾರಾಗೃಹದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ ಬೇರೆ ಕಾರಾಗೃಹಗಳಿಗೂ ಇದನ್ನು ವಿಸ್ತರಿಸ ಲಾಗುವುದು. ಕೇಂದ್ರ ಕಾರಾಗೃಹದಲ್ಲಿ ಸುಮಾರು 3,500 ಮಂದಿ ವಿಚಾರಣಾ ಧೀನ ಕೈದಿಗಳಿದ್ದಾರೆ. ಇವರೂ ಸೇರಿದಂತೆ ಶಿಕ್ಷೆ ಅನುಭವಿಸಿ ಹೊರ ಹೋಗುವ ಕೈದಿಗಳನ್ನು ತಂಡಗಳನ್ನಾಗಿ ಮಾಡಿ, ತರಬೇತಿ ನೀಡಲಾಗುತ್ತದೆ.</p><p>‘ಜೈಲಿನಿಂದ ಹೊರಬರುವ ಪ್ರತಿಯೊಬ್ಬರಿಗೂ ಗೌರವಯುತವಾದ ಜೀವನವನ್ನು ಮತ್ತೆ ರೂಪಿಸಿಕೊಳ್ಳಲು ಅವಕಾಶ ಸಿಗಬೇಕು. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಬದುಕಬಲ್ಲೆವು ಎಂಬ ನಂಬಿಕೆ, ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿಸುವ ಅಗತ್ಯವಿದೆ. ಇದನ್ನು ಮನಗಂಡು ನಮ್ಮ ಸಂಸ್ಥೆ ವತಿಯಿಂದ ತರಬೇತಿ ನೀಡಲು ಮುಂದಾಗಿದ್ದೇವೆ’ ಎಂದು ಅರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಸುಬ್ರಹ್ಮಣ್ಯ ತಿಳಿಸಿದರು.</p><p>ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಜೀವನದಲ್ಲಿ ಎರಡನೇ ಅವಕಾಶದ ಹುಡುಕಾಟದಲ್ಲಿರುವ ವ್ಯಕ್ತಿಗಳಿಗೆ ಸಹಕಾರದ ಅಗತ್ಯವಿರುತ್ತದೆ. ಅವರನ್ನು ಗೌರವದಿಂದ ಕಾಣುವ ಮೂಲಕ ಬದುಕು ರೂಪಿಸಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಇದರಿಂದ ಅವರ ಜೀವನದಲ್ಲಿ ಸುಧಾರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.</p>.<div><blockquote>ಹತ್ತು ತಂಡಗಳಾಗಿ ವಿಂಗಡಿಸಿ ಪ್ರತಿ ವರ್ಷ 200ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ತರಬೇತಿ ಅವಧಿ ಒಟ್ಟು 120 ಗಂಟೆಯಾಗಿರಲಿದೆ</blockquote><span class="attribution">ಕೆ.ಎನ್. ಸುಬ್ರಹ್ಮಣ್ಯ, ಪ್ರಾಂಶುಪಾಲರು, ಆರ್.ವಿ.ಎಂಜಿನಿಯರಿಂಗ್ ಕಾಲೇಜು.</span></div>.<div><blockquote>ಕೌಶಲ ತರಬೇತಿ ಇನ್ನು ಮುಂದೆ ನಿರಂತರ ಪ್ರಕ್ರಿಯೆಯಾಗಲಿದೆ. ಪ್ಲಂಬಿಂಗ್ ಕೆಲಸ, ಎಸಿ, ಟಿವಿ ರಿಪೇರಿ ಇತ್ಯಾದಿಗಳ ತರಬೇತಿ ನೀಡಲಾಗುವುದು </blockquote><span class="attribution">ಅಲೋಕ್ ಕುಮಾರ್, ಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ</span></div>.<p><strong>ಬಯಲು ಕಾರಾಗೃಹದಲ್ಲೂ ತರಬೇತಿ</strong></p><p>ದೇವನಹಳ್ಳಿಯ ಬಯಲು ಕಾರಾಗೃಹದಲ್ಲಿ ಸುಮಾರು 70 ಎಕರೆ ಜಾಗವಿದೆ. ಅಲ್ಲಿ ಕೈದಿಗಳಿಗೆ ವೈಜ್ಞಾನಿಕವಾಗಿ ಕೃಷಿ, ಮೀನು ಸಾಕಾಣಿಕೆ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿ ಇರಲು ಅನುಕೂಲವಾಗಲಿದೆ ಎಂದು ಅಲೋಕ್ ಕುಮಾರ್<br>ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>