<p><strong>ಕಲಬುರಗಿ:</strong> ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಮೀಸಲು ಮತಕ್ಷೇತ್ರದಿಂದ ಮೂರನೇ ಸಲ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರು ಮತ್ತೊಮ್ಮೆ ಸಚಿವರಾಗಿ ಆಯ್ಕೆಯಾಗಿದ್ದಾರೆ. </p><p>ಪ್ರಿಯಾಂಕ್ ಖರ್ಗೆ ಅವರು 2013, 2018 ಹಾಗೂ 2023ರಲ್ಲಿ ಚಿತ್ತಾಪುರದಿಂದ ವಿಜೇತರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಗೆದ್ದಾಗೆಲ್ಲವೂ ಅವರಿಗೆ ಸಚಿವ ಸ್ಥಾನ ಒಲಿದಿದ್ದು ವಿಶೇಷ. 2023ರ ಚುನಾವಣೆಯಲ್ಲಿ 13,640 ಮತಗಳ ಅಂತರದಿಂದ ಗೆದ್ದಿದ್ದರು.</p><p>ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ದಂಪತಿಯ ಮೂವರು ಪುತ್ರರಲ್ಲಿ ಪ್ರಿಯಾಂಕ್ ಅವರೂ ಒಬ್ಬರು.</p><p>1978ರ ನವೆಂಬರ್ 22ರಂದು ಜನಿಸಿದರು. ಡಿಪ್ಲೊಮಾ ಇನ್ ಗ್ರಾಫಿಕ್ಸ್ ಮತ್ತು ಎನಿಮೇಷನ್ ಓದಿದ್ದಾರೆ. ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ.</p><p>ಶ್ರುತಿ ಖರ್ಗೆ ಅವರು ಪ್ರಿಯಾಂಕ್ ಖರ್ಗೆ ಪತ್ನಿ. ಈ ದಂಪತಿಗೆ ಅಮಿತಾವ್ ಹಾಗೂ ಆಕಾಂಕ್ಷ್ ಎಂಬ ಮಕ್ಕಳಿದ್ದಾರೆ.</p>. <p><strong>ಒಲಿದು ಬಂದ ಸಚಿವ ಸ್ಥಾನ:</strong></p><p>38ನೇ ವರ್ಷ ವಯಸ್ಸಿನಲ್ಲಿ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.</p><p>ಬಳಿಕ 2018ರಲ್ಲಿ ಗೆದ್ದಾಗಲೂ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾದರು. ಅಂದಿನ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಕೆಲಸ ಮಾಡಿದ್ದರು. ಆಗಲೇ ಕಲಬುರಗಿಯಲ್ಲಿ ‘ಪ್ರಬುದ್ಧ ಅಕಾಡೆಮಿ’ ಸ್ಥಾಪನೆಗೆ ಯೋಜನೆ ರೂಪಿಸಿದ್ದರು.</p><p>2023ರ ಮೇ 27ರಂದು ರಾಜ್ಯ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮತ್ತೆ ಸಿಎಂ ಆದರು. ಆಗಲೂ ಪ್ರಿಯಾಂಕ್ ಖರ್ಗೆ ಅವರು ಸಚಿವರಾದರು. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವರಾದರು. 2023ರ ಜೂನ್ 1ರಿಂದ ಅವರು ಐಟಿಬಿಟಿ ಖಾತೆಯನ್ನು ಹೆಚ್ಚುವರಿ ಹೊಣೆಗಾರಿಕೆಯನ್ನೂ ನಿಭಾಯಿಸಿದ್ದಾರೆ.</p><p>ರಾಜಕೀಯ ಪ್ರವೇಶ: 1998ರಲ್ಲಿ ಎನ್ಎಸ್ಯುಐನ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, 2001-2005ರ ತನಕ ಎನ್ಎಸ್ಯುಐ ಕಾಲೇಜು ಪ್ರಧಾನ ಕಾರ್ಯದರ್ಶಿಯಾಗಿದ್ದರು.</p><p>2005-2007ರ ತನಕ ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2007-2011ರವರೆಗೂ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 2011-2014ರ ತನಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.</p><p>ಮೊದಲ ಸೋಲು: 2009ರ ಉಪಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ್ ಖರ್ಗೆ ಸೋಲು ಕಂಡಿದ್ದರು. ಅದಾದ ಬಳಿಕ 2013ರಿಂದ ಈತನಕ ಗೆಲುವಿನ ಕುದುರೆ ಏರಿ ಮುನ್ನಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಮೀಸಲು ಮತಕ್ಷೇತ್ರದಿಂದ ಮೂರನೇ ಸಲ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರು ಮತ್ತೊಮ್ಮೆ ಸಚಿವರಾಗಿ ಆಯ್ಕೆಯಾಗಿದ್ದಾರೆ. </p><p>ಪ್ರಿಯಾಂಕ್ ಖರ್ಗೆ ಅವರು 2013, 2018 ಹಾಗೂ 2023ರಲ್ಲಿ ಚಿತ್ತಾಪುರದಿಂದ ವಿಜೇತರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಗೆದ್ದಾಗೆಲ್ಲವೂ ಅವರಿಗೆ ಸಚಿವ ಸ್ಥಾನ ಒಲಿದಿದ್ದು ವಿಶೇಷ. 2023ರ ಚುನಾವಣೆಯಲ್ಲಿ 13,640 ಮತಗಳ ಅಂತರದಿಂದ ಗೆದ್ದಿದ್ದರು.</p><p>ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ದಂಪತಿಯ ಮೂವರು ಪುತ್ರರಲ್ಲಿ ಪ್ರಿಯಾಂಕ್ ಅವರೂ ಒಬ್ಬರು.</p><p>1978ರ ನವೆಂಬರ್ 22ರಂದು ಜನಿಸಿದರು. ಡಿಪ್ಲೊಮಾ ಇನ್ ಗ್ರಾಫಿಕ್ಸ್ ಮತ್ತು ಎನಿಮೇಷನ್ ಓದಿದ್ದಾರೆ. ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ.</p><p>ಶ್ರುತಿ ಖರ್ಗೆ ಅವರು ಪ್ರಿಯಾಂಕ್ ಖರ್ಗೆ ಪತ್ನಿ. ಈ ದಂಪತಿಗೆ ಅಮಿತಾವ್ ಹಾಗೂ ಆಕಾಂಕ್ಷ್ ಎಂಬ ಮಕ್ಕಳಿದ್ದಾರೆ.</p>. <p><strong>ಒಲಿದು ಬಂದ ಸಚಿವ ಸ್ಥಾನ:</strong></p><p>38ನೇ ವರ್ಷ ವಯಸ್ಸಿನಲ್ಲಿ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.</p><p>ಬಳಿಕ 2018ರಲ್ಲಿ ಗೆದ್ದಾಗಲೂ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾದರು. ಅಂದಿನ ಸಿ.ಎಂ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಕೆಲಸ ಮಾಡಿದ್ದರು. ಆಗಲೇ ಕಲಬುರಗಿಯಲ್ಲಿ ‘ಪ್ರಬುದ್ಧ ಅಕಾಡೆಮಿ’ ಸ್ಥಾಪನೆಗೆ ಯೋಜನೆ ರೂಪಿಸಿದ್ದರು.</p><p>2023ರ ಮೇ 27ರಂದು ರಾಜ್ಯ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮತ್ತೆ ಸಿಎಂ ಆದರು. ಆಗಲೂ ಪ್ರಿಯಾಂಕ್ ಖರ್ಗೆ ಅವರು ಸಚಿವರಾದರು. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವರಾದರು. 2023ರ ಜೂನ್ 1ರಿಂದ ಅವರು ಐಟಿಬಿಟಿ ಖಾತೆಯನ್ನು ಹೆಚ್ಚುವರಿ ಹೊಣೆಗಾರಿಕೆಯನ್ನೂ ನಿಭಾಯಿಸಿದ್ದಾರೆ.</p><p>ರಾಜಕೀಯ ಪ್ರವೇಶ: 1998ರಲ್ಲಿ ಎನ್ಎಸ್ಯುಐನ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, 2001-2005ರ ತನಕ ಎನ್ಎಸ್ಯುಐ ಕಾಲೇಜು ಪ್ರಧಾನ ಕಾರ್ಯದರ್ಶಿಯಾಗಿದ್ದರು.</p><p>2005-2007ರ ತನಕ ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, 2007-2011ರವರೆಗೂ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 2011-2014ರ ತನಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.</p><p>ಮೊದಲ ಸೋಲು: 2009ರ ಉಪಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ್ ಖರ್ಗೆ ಸೋಲು ಕಂಡಿದ್ದರು. ಅದಾದ ಬಳಿಕ 2013ರಿಂದ ಈತನಕ ಗೆಲುವಿನ ಕುದುರೆ ಏರಿ ಮುನ್ನಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>