<p><strong>ಭಟ್ಕಳ</strong>: 'ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಬಿಟ್ಟು ಕೊಟ್ಟಿದ್ದಲ್ಲ, ಡಿ.ಕೆ.ಶಿವಕುಮಾರ್ ಅದನ್ನು ಒದ್ದು ಕಿತ್ತುಕೊಂಡಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.</p><p>'ಸಿದ್ದರಾಮಯ್ಯ ಇನ್ನೂ ಸ್ವಲ್ಪ ಕಾಲಾವಕಾಶ ಕೋರುತ್ತಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕಾಲಾವಕಾಶ ನೀಡದೆ ರಾಜೀನಾಮೆ ಪಡೆದಿದೆ. ಅದರ ಹಿಂದೆ ಪದೇ ಪದೇ ಡಿ.ಕೆ.ಶಿವಕುಮಾರ ಹೇರುತ್ತಿದ್ದ ಒತ್ತಡವಿದೆ' ಎಂದು ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುವಾಗ ಹೇಳಿದರು.</p><p>'ಮುಂದಿನ ಎರಡು ವರ್ಷ ರಾಜ್ಯದಲ್ಲಿ ಲೂಟಿ ಹೆಚ್ಚಲಿದೆ. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಲಿ ಎನ್ನುವಂತ ಸ್ಥಿತಿ ಆಗಿದೆ. ಸಿದ್ದರಾಮಯ್ಯ ಅವಧಿಯಲ್ಲೂ ಭ್ರಷ್ಟಾಚಾರವಿತ್ತು. ಈಗ ಇನ್ನಷ್ಟು ಹೆಚ್ಚಲಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿರಲಿದೆ. ಡಿ.ಕೆ.ಶಿವಕುಮಾರ ಎಟಿಎಂ ಮುಖ್ಯಸ್ಥರಾಗಿದ್ದಾರೆ' ಎಂದು ಆರೋಪಿಸಿದರು.</p><p>'ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದ ಉಗ್ರನನ್ನು ಬ್ರದರ್ ಎಂದು ಕರೆದಿದ್ದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಗುಣವೂ ಒಂದೇ. ಇಬ್ಬರೂ ಭ್ರಷ್ಟಾಚಾರಿಗಳು' ಎಂದು ಭಟ್ಕಳದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.</p><p>'ಮುರಿನಕಟ್ಟೆ ತೆರವುಗೊಂಡ ಜಾಗದಲ್ಲೇ ಮರುನಿರ್ಮಾಣ ಆಗಬೇಕು. ಸರ್ಕಾರವೇ ಕಟ್ಟೆ ನಿರ್ಮಿಸಲು ಸೂಚಿಸಿದ್ದೇನೆ. ಅವರು ನಿರ್ಮಿಸದಿದ್ದರೆ ನಾನೇ ಮುರಿನಕಟ್ಟೆ ನಿರ್ಮಿಸುವೆ' ಎಂದರು.</p><p>ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ಸುನೀಲ ಹೆಗಡೆ, ಶಿವಾನಂದ ನಾಯ್ಕ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ</strong>: 'ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಬಿಟ್ಟು ಕೊಟ್ಟಿದ್ದಲ್ಲ, ಡಿ.ಕೆ.ಶಿವಕುಮಾರ್ ಅದನ್ನು ಒದ್ದು ಕಿತ್ತುಕೊಂಡಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.</p><p>'ಸಿದ್ದರಾಮಯ್ಯ ಇನ್ನೂ ಸ್ವಲ್ಪ ಕಾಲಾವಕಾಶ ಕೋರುತ್ತಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕಾಲಾವಕಾಶ ನೀಡದೆ ರಾಜೀನಾಮೆ ಪಡೆದಿದೆ. ಅದರ ಹಿಂದೆ ಪದೇ ಪದೇ ಡಿ.ಕೆ.ಶಿವಕುಮಾರ ಹೇರುತ್ತಿದ್ದ ಒತ್ತಡವಿದೆ' ಎಂದು ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುವಾಗ ಹೇಳಿದರು.</p><p>'ಮುಂದಿನ ಎರಡು ವರ್ಷ ರಾಜ್ಯದಲ್ಲಿ ಲೂಟಿ ಹೆಚ್ಚಲಿದೆ. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಲಿ ಎನ್ನುವಂತ ಸ್ಥಿತಿ ಆಗಿದೆ. ಸಿದ್ದರಾಮಯ್ಯ ಅವಧಿಯಲ್ಲೂ ಭ್ರಷ್ಟಾಚಾರವಿತ್ತು. ಈಗ ಇನ್ನಷ್ಟು ಹೆಚ್ಚಲಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿರಲಿದೆ. ಡಿ.ಕೆ.ಶಿವಕುಮಾರ ಎಟಿಎಂ ಮುಖ್ಯಸ್ಥರಾಗಿದ್ದಾರೆ' ಎಂದು ಆರೋಪಿಸಿದರು.</p><p>'ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದ ಉಗ್ರನನ್ನು ಬ್ರದರ್ ಎಂದು ಕರೆದಿದ್ದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಗುಣವೂ ಒಂದೇ. ಇಬ್ಬರೂ ಭ್ರಷ್ಟಾಚಾರಿಗಳು' ಎಂದು ಭಟ್ಕಳದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.</p><p>'ಮುರಿನಕಟ್ಟೆ ತೆರವುಗೊಂಡ ಜಾಗದಲ್ಲೇ ಮರುನಿರ್ಮಾಣ ಆಗಬೇಕು. ಸರ್ಕಾರವೇ ಕಟ್ಟೆ ನಿರ್ಮಿಸಲು ಸೂಚಿಸಿದ್ದೇನೆ. ಅವರು ನಿರ್ಮಿಸದಿದ್ದರೆ ನಾನೇ ಮುರಿನಕಟ್ಟೆ ನಿರ್ಮಿಸುವೆ' ಎಂದರು.</p><p>ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ಸುನೀಲ ಹೆಗಡೆ, ಶಿವಾನಂದ ನಾಯ್ಕ, ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>