<p><strong>ಬೆಂಗಳೂರು:</strong> ಇಲ್ಲಿಯವರೆಗೆ ‘ಗ್ಯಾರಂಟಿ’ ಎಂದು ಡೊಳ್ಳು ಬಾರಿಸಿದ್ದ ರಾಜ್ಯ ಸರ್ಕಾರ, ಈಗ ಏಕಾಏಕಿ ಫಲಾನುಭವಿಗಳ ಮರುಪರಿಶೀಲನೆ, ಮರುನೋಂದಣಿ, ವಿಶೇಷ ಅಭಿಯಾನ ಎಂಬ ಹೊಸ ನಾಟಕ ಶುರು ಆರಂಭಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.</p>.<p>ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಗಿಮಿಕ್ ಮಾತ್ರವೇ ಹೊರತು, ಬಡವರ ಬದುಕಿನ ಬಗ್ಗೆ ಇರುವ ನಿಜವಾದ ಕಾಳಜಿ ಅಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.</p>.<p>ಈ ಕುರಿತು ಅಶೋಕ ಅವರು ಸರ್ಕಾರ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ:</p>.<p>*ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವುದು ಸರ್ಕಾರದ ದೈನಂದಿನ ನಿರಂತರ ಆಡಳಿತಾತ್ಮಕ ಪ್ರಕ್ರಿಯೆ. ಅದಕ್ಕಾಗಿ ವಿಶೇಷ ಅಭಿಯಾನ ಅಗತ್ಯವಿದೆಯೇ?</p>.<p>*ಬಡವರು ಮತ್ತೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಲ್ಲವಂತೆ ಮಾಡಲು ಹೊರಟಿರುವುದರ ಹಿಂದಿನ ರಹಸ್ಯವೇನು?</p>.<p>* ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ನಿಲ್ಲಿಸಲು ಪೀಠಿಕೆ ಸಿದ್ಧವಾಗುತ್ತಿದೆಯೇ ಅಥವಾ ಸ್ಥಳೀಯ ಸಂಸ್ಥೆ ಮತ್ತು ಜಿಬಿಎ ಚುನಾವಣೆಯವರೆಗೆ ಮಾತ್ರ ಹಣ ಕೊಟ್ಟು ಚುನಾವಣೆ ಮುಗಿದ ನಂತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಕೈತೊಳೆಯುವ ರಹಸ್ಯ ಯೋಜನೆ ಏನಾದರೂ ಇದೆಯಾ?</p>.<p>*ಮರುಪರಿಶೀಲನೆ ಪ್ರಕ್ರಿಯೆ ಮುಗಿಯುವವರೆಗೆ ಯೋಜನೆಗಳ ಹಣವನ್ನು ತಡೆ ಹಿಡಿಯಲಾಗುತ್ತದೆಯೇ? ಲಕ್ಷಾಂತರ ತಾಯಂದಿರಿಗೆ ಬರುತ್ತಿರುವ ಗೃಹಲಕ್ಷ್ಮೀ ಹಣ ನಿಲ್ಲುತ್ತದೆಯೇ? ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಕಡಿತಗೊಳಿಸುವ ಗುಪ್ತ ಕಾರ್ಯಾಚರಣೆ ನಡೆಯುತ್ತಿದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಲ್ಲಿಯವರೆಗೆ ‘ಗ್ಯಾರಂಟಿ’ ಎಂದು ಡೊಳ್ಳು ಬಾರಿಸಿದ್ದ ರಾಜ್ಯ ಸರ್ಕಾರ, ಈಗ ಏಕಾಏಕಿ ಫಲಾನುಭವಿಗಳ ಮರುಪರಿಶೀಲನೆ, ಮರುನೋಂದಣಿ, ವಿಶೇಷ ಅಭಿಯಾನ ಎಂಬ ಹೊಸ ನಾಟಕ ಶುರು ಆರಂಭಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.</p>.<p>ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಗಿಮಿಕ್ ಮಾತ್ರವೇ ಹೊರತು, ಬಡವರ ಬದುಕಿನ ಬಗ್ಗೆ ಇರುವ ನಿಜವಾದ ಕಾಳಜಿ ಅಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.</p>.<p>ಈ ಕುರಿತು ಅಶೋಕ ಅವರು ಸರ್ಕಾರ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ:</p>.<p>*ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವುದು ಸರ್ಕಾರದ ದೈನಂದಿನ ನಿರಂತರ ಆಡಳಿತಾತ್ಮಕ ಪ್ರಕ್ರಿಯೆ. ಅದಕ್ಕಾಗಿ ವಿಶೇಷ ಅಭಿಯಾನ ಅಗತ್ಯವಿದೆಯೇ?</p>.<p>*ಬಡವರು ಮತ್ತೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಲ್ಲವಂತೆ ಮಾಡಲು ಹೊರಟಿರುವುದರ ಹಿಂದಿನ ರಹಸ್ಯವೇನು?</p>.<p>* ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ನಿಲ್ಲಿಸಲು ಪೀಠಿಕೆ ಸಿದ್ಧವಾಗುತ್ತಿದೆಯೇ ಅಥವಾ ಸ್ಥಳೀಯ ಸಂಸ್ಥೆ ಮತ್ತು ಜಿಬಿಎ ಚುನಾವಣೆಯವರೆಗೆ ಮಾತ್ರ ಹಣ ಕೊಟ್ಟು ಚುನಾವಣೆ ಮುಗಿದ ನಂತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಕೈತೊಳೆಯುವ ರಹಸ್ಯ ಯೋಜನೆ ಏನಾದರೂ ಇದೆಯಾ?</p>.<p>*ಮರುಪರಿಶೀಲನೆ ಪ್ರಕ್ರಿಯೆ ಮುಗಿಯುವವರೆಗೆ ಯೋಜನೆಗಳ ಹಣವನ್ನು ತಡೆ ಹಿಡಿಯಲಾಗುತ್ತದೆಯೇ? ಲಕ್ಷಾಂತರ ತಾಯಂದಿರಿಗೆ ಬರುತ್ತಿರುವ ಗೃಹಲಕ್ಷ್ಮೀ ಹಣ ನಿಲ್ಲುತ್ತದೆಯೇ? ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಕಡಿತಗೊಳಿಸುವ ಗುಪ್ತ ಕಾರ್ಯಾಚರಣೆ ನಡೆಯುತ್ತಿದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>