<p><strong>ಬೆಂಗಳೂರು</strong>: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿರುವ ಹಿಂದೂ ಸಮಾಜೋತ್ಸವ, ಪಥ ಸಂಚಲನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಮುಂದಿನ ಅಕ್ಟೋಬರ್ವರೆಗೆ ಮುಂದುವರಿಯಲಿದೆ’ ಎಂದು ಸಂಘದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ತಿಳಿಸಿದರು.</p><p>‘ಕರ್ನಾಟಕದಲ್ಲಿ ಈವರೆಗೂ 2194 ಹಿಂದೂ ಸಮಾಜೋತ್ಸವ ಆಯೋಜನೆಗೊಂಡು 19.61 ಲಕ್ಷ ಮಂದಿ ಭಾಗಿಯಾಗಿದ್ದಾರೆ. 562 ಪಥ ಸಂಚಲನದಲ್ಲಿ 2.21 ಲಕ್ಷ ಮಂದಿ ಭಾಗಿಯಾಗಿದ್ದಾರೆ. ಗೃಹ ಸಂಪರ್ಕ ಅಭಿಯಾನದಡಿ 48.68 ಲಕ್ಷ ಮನೆಗಳನ್ನು ಸಂಪರ್ಕಿಸಿದ್ದೇವೆ. ಕೆಲವು ಕಡೆ ಕಾರ್ಯಕ್ರಮ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದರೂ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಜನ ಭಾಗಿಯಾದರು. ಇದಕ್ಕೆ ಪ್ರಮುಖರು ಉತ್ತರ ನೀಡಿದ್ದಾರೆ. ನಿಷೇಧ, ವಿರೋಧಗಳ ನಡುವೆಯೂ ಶತಮಾನದಿಂದ ನಡೆಸುತ್ತಿರುವ ಹಿಂದೂ ಸಮಾಜ ಜಾಗೃತಿ ಚಟುವಟಿಕೆಯಲ್ಲಿ ಬದಲಾವಣೆಯಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘2025–26ರಲ್ಲಿ ಕರ್ನಾಟಕದಲ್ಲಿ ಪ್ರತಿ ದಿನ 4,127 ಶಾಖೆ, ವಾರಕ್ಕೊಮ್ಮೆ 1,389 ಮಿಲನ್, ತಿಂಗಳಿಗೊಮ್ಮೆ 60 ಮಂಡಳಿಗಳನ್ನು ನಡೆಸಲಾಗಿದೆ. 7262 ವಿಜಯದಶಮಿ ಸಂಚಲನ, ಗೃಹ ಸಂಪರ್ಕ ಅಭಿಯಾನಗಳೂ ನಡೆದಿವೆ. ಮುಂದಿನ ಸೆಪ್ಟಂಬರ್ವರೆಗೂ ಶಾಖೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ಪ್ರತಿ ಹಳ್ಳಿಯನ್ನೂ ತಲುಪುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.</p><p>‘ಸಾಮಾಜಿಕ ತಾರತಮ್ಯ ಹೋಗಲಾಡಿಸಲು ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಲೋಭನ ಕಾರ್ಯಕ್ರಮ, ತಾಲ್ಲೂಕು ಮಟ್ಟದಲ್ಲಿ ಜಾತಿಯ ಮುಖಂಡರೊಂದಿಗೆ ಸದ್ಭಾವ ಗೋಷ್ಠಿ ಆಯೋಜಿಸಲಾಗುತ್ತಿದೆ. ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಜೀವನ ಶಿಷ್ಟಾಚಾರ ಚಟುವಟಿಕೆ ವಿಸ್ತರಿಸಲಾಗುತ್ತಿದೆ’ ಎಂದು ಹೇಳಿದರು.</p><p>‘ಗೃಹ ಸಂಪರ್ಕ ಅಭಿಯಾನದ ವೇಳೆ ಮಕ್ಕಳ ಸಂಖ್ಯೆ, ಮತಾಂತರದ ಕುರಿತು ಜನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಿಂದೂಗಳು ಒಂದೇ ಮಗುವಿನ ಬದಲು 2 ಇಲ್ಲವೇ 3 ಮಗುವನ್ನು ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನಿಧಾನವಾಗಿ ಜಾಗೃತಿ ಮೂಡಿಸಲಾಗುವುದು’ ಎಂದು ತಿಪ್ಪೇಸ್ವಾಮಿ ತಿಳಿಸಿದರು.</p><p><strong>ಡ್ರಗ್ಸ್ ಮುಕ್ತ ಅಭಿಯಾನ</strong></p><p>‘ಕರ್ನಾಟಕದಲ್ಲಿ ಯುವ ಸಮುದಾಯ ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗಾಗಲೇ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ಐದು ವರ್ಷ ದೀರ್ಘಾವಧಿ ಜಾಗೃತಿ ಚಟುವಟಿಕೆ ರೂಪಿಸುತ್ತಿದೆ. ಇದರಡಿ ವಿದ್ಯಾರ್ಥಿಗಳಿಗೆ ಪ್ರಬಂಧ, ಘೋಷಣೆ, ಭಾಷಣ, ಚರ್ಚಾ ಸ್ಪರ್ಧೆ, ವಿಚಾರ ಸಂಕಿರಣ ರೂಪಿಸಲಾಗುವುದು. ಶಾಲಾ, ಕಾಲೇಜು ದಾಖಲಾತಿ ವೇಳೆ ಪರೀಕ್ಷೆ, ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ನಾ.ತಿಪ್ಪೇಸ್ವಾಮಿ ತಿಳಿಸಿದರು.</p><p>ಕರ್ನಾಟಕ ಪ್ರಾಂತ ಸಂಘ ಚಾಲಕ ಜಿ.ಎಸ್.ಉಮಾಪತಿ, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಸಂಯೋಜಕ ಅರುಣ್ ಕಿರಿ ಮಂಜೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿರುವ ಹಿಂದೂ ಸಮಾಜೋತ್ಸವ, ಪಥ ಸಂಚಲನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಮುಂದಿನ ಅಕ್ಟೋಬರ್ವರೆಗೆ ಮುಂದುವರಿಯಲಿದೆ’ ಎಂದು ಸಂಘದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ತಿಳಿಸಿದರು.</p><p>‘ಕರ್ನಾಟಕದಲ್ಲಿ ಈವರೆಗೂ 2194 ಹಿಂದೂ ಸಮಾಜೋತ್ಸವ ಆಯೋಜನೆಗೊಂಡು 19.61 ಲಕ್ಷ ಮಂದಿ ಭಾಗಿಯಾಗಿದ್ದಾರೆ. 562 ಪಥ ಸಂಚಲನದಲ್ಲಿ 2.21 ಲಕ್ಷ ಮಂದಿ ಭಾಗಿಯಾಗಿದ್ದಾರೆ. ಗೃಹ ಸಂಪರ್ಕ ಅಭಿಯಾನದಡಿ 48.68 ಲಕ್ಷ ಮನೆಗಳನ್ನು ಸಂಪರ್ಕಿಸಿದ್ದೇವೆ. ಕೆಲವು ಕಡೆ ಕಾರ್ಯಕ್ರಮ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದರೂ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಜನ ಭಾಗಿಯಾದರು. ಇದಕ್ಕೆ ಪ್ರಮುಖರು ಉತ್ತರ ನೀಡಿದ್ದಾರೆ. ನಿಷೇಧ, ವಿರೋಧಗಳ ನಡುವೆಯೂ ಶತಮಾನದಿಂದ ನಡೆಸುತ್ತಿರುವ ಹಿಂದೂ ಸಮಾಜ ಜಾಗೃತಿ ಚಟುವಟಿಕೆಯಲ್ಲಿ ಬದಲಾವಣೆಯಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘2025–26ರಲ್ಲಿ ಕರ್ನಾಟಕದಲ್ಲಿ ಪ್ರತಿ ದಿನ 4,127 ಶಾಖೆ, ವಾರಕ್ಕೊಮ್ಮೆ 1,389 ಮಿಲನ್, ತಿಂಗಳಿಗೊಮ್ಮೆ 60 ಮಂಡಳಿಗಳನ್ನು ನಡೆಸಲಾಗಿದೆ. 7262 ವಿಜಯದಶಮಿ ಸಂಚಲನ, ಗೃಹ ಸಂಪರ್ಕ ಅಭಿಯಾನಗಳೂ ನಡೆದಿವೆ. ಮುಂದಿನ ಸೆಪ್ಟಂಬರ್ವರೆಗೂ ಶಾಖೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ಪ್ರತಿ ಹಳ್ಳಿಯನ್ನೂ ತಲುಪುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.</p><p>‘ಸಾಮಾಜಿಕ ತಾರತಮ್ಯ ಹೋಗಲಾಡಿಸಲು ಎಲ್ಲರನ್ನೂ ಒಳಗೊಳ್ಳುವ ಕುಟುಂಬ ಪ್ರಲೋಭನ ಕಾರ್ಯಕ್ರಮ, ತಾಲ್ಲೂಕು ಮಟ್ಟದಲ್ಲಿ ಜಾತಿಯ ಮುಖಂಡರೊಂದಿಗೆ ಸದ್ಭಾವ ಗೋಷ್ಠಿ ಆಯೋಜಿಸಲಾಗುತ್ತಿದೆ. ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಜೀವನ ಶಿಷ್ಟಾಚಾರ ಚಟುವಟಿಕೆ ವಿಸ್ತರಿಸಲಾಗುತ್ತಿದೆ’ ಎಂದು ಹೇಳಿದರು.</p><p>‘ಗೃಹ ಸಂಪರ್ಕ ಅಭಿಯಾನದ ವೇಳೆ ಮಕ್ಕಳ ಸಂಖ್ಯೆ, ಮತಾಂತರದ ಕುರಿತು ಜನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಿಂದೂಗಳು ಒಂದೇ ಮಗುವಿನ ಬದಲು 2 ಇಲ್ಲವೇ 3 ಮಗುವನ್ನು ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನಿಧಾನವಾಗಿ ಜಾಗೃತಿ ಮೂಡಿಸಲಾಗುವುದು’ ಎಂದು ತಿಪ್ಪೇಸ್ವಾಮಿ ತಿಳಿಸಿದರು.</p><p><strong>ಡ್ರಗ್ಸ್ ಮುಕ್ತ ಅಭಿಯಾನ</strong></p><p>‘ಕರ್ನಾಟಕದಲ್ಲಿ ಯುವ ಸಮುದಾಯ ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗಾಗಲೇ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ಐದು ವರ್ಷ ದೀರ್ಘಾವಧಿ ಜಾಗೃತಿ ಚಟುವಟಿಕೆ ರೂಪಿಸುತ್ತಿದೆ. ಇದರಡಿ ವಿದ್ಯಾರ್ಥಿಗಳಿಗೆ ಪ್ರಬಂಧ, ಘೋಷಣೆ, ಭಾಷಣ, ಚರ್ಚಾ ಸ್ಪರ್ಧೆ, ವಿಚಾರ ಸಂಕಿರಣ ರೂಪಿಸಲಾಗುವುದು. ಶಾಲಾ, ಕಾಲೇಜು ದಾಖಲಾತಿ ವೇಳೆ ಪರೀಕ್ಷೆ, ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ನಾ.ತಿಪ್ಪೇಸ್ವಾಮಿ ತಿಳಿಸಿದರು.</p><p>ಕರ್ನಾಟಕ ಪ್ರಾಂತ ಸಂಘ ಚಾಲಕ ಜಿ.ಎಸ್.ಉಮಾಪತಿ, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಸಂಯೋಜಕ ಅರುಣ್ ಕಿರಿ ಮಂಜೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>