<p><strong>ಬೆಂಗಳೂರು</strong>: ‘ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಎಂಬುದೆಲ್ಲಾ ಸುಳ್ಳು. ಯಾರೋ ಹಾಕಿರುವ ಪೋಸ್ಟ್ಗೆ ಮಹತ್ವ ಕೊಡುವ ಅಗತ್ಯವಿಲ್ಲ. ಯಾವ ಸಹಿಯೂ ಹಾಕಿಲ್ಲ’ ಎಂದು ಸತೀಶ ಜಾರಕಿಹೊಳಿ ಹೇಳಿದರು.</p><p>ಸಿದ್ದರಾಮಯ್ಯ ಆಪ್ತರೇ ಚೂರಿ ಹಾಕಿದರು ಎಂಬ ವಿಚಾರಕ್ಕೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ‘37 ಜನರು ಸಿದ್ದರಾಮಯ್ಯ ವಿರುದ್ದ ಸಹಿ ಹಾಕಿದ್ದರೆ, ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದರು.</p><p>‘ಒಪ್ಪಂದದ ಪ್ರಕಾರ ಅವರು ಕೆಳಗೆ ಇಳಿದಿದ್ದಾರೆ. ಯಾವಾಗಲಾದರೂ ಕೆಳಗೆ ಇಳಿಯಲೇಬೇಕು, ಈಗ ಅಥವಾ ಎರಡು ವರ್ಷ ಆದ ಮೇಲೆ. ಹಿಂದೆ ಬಂಗಾರಪ್ಪ , ದೇವರಾಜ್ ಅರಸು ಎಲ್ಲರೂ ಇಳಿದಿದ್ದರು’ ಎಂದು ಹೇಳಿದರು.</p><p>‘ಸಿದ್ದರಾಮಯ್ಯ ಕೆಳಗಿಳಿಯಲೇಬೇಕಿತ್ತು. ನಾಯಕತ್ವ ವಿಚಾರ ದೆಹಲಿಯಲ್ಲಿ ಎಲ್ಲ ಮಾತುಕತೆ ಆಗಿರುವುದು. ಅವರು ಮಾತನಾಡುವಾಗ ಬೆಂಗಳೂರಲ್ಲಿ ಏನೂ ಆಗಿಲ್ಲ. ನಮ್ಮನ್ನು ಯಾರೂ ಆಗಲೂ ಕೇಳಿರಲಿಲ್ಲ. ಎಲ್ಲ ಅವರೇ ನಿರ್ಧಾರ ಮಾಡಿಕೊಂಡ ಪ್ರಕಾರ ಸಿದ್ದರಾಮಯ್ಯ ಕೆಳಗೆ ಇಳಿದಿದ್ದಾರೆ’ ಎಂದು ತಿಳಿಸಿದರು.</p><p>‘ಇನ್ನು ಎರಡು ವರ್ಷಗಳ ನಂತರವಾದರೂ ಸಿದ್ದರಾಮಯ್ಯ ಇಳಿಯಲೇಬೇಕಲ್ವಾ ? ಎಲ್ಲಾ ಸಂದರ್ಭಗಳಿಗೂ ನಾವು ಸಿದ್ದರಿರಬೇಕು’ ಎಂದರು.</p><p>‘ಅಹಿಂದ ಅಂದರೆ ಸುಮಾರು 500 ಜಾತಿಗಳಿವೆ. ನಾನು ಅಹಿಂದ ಧ್ವಜ ಕೊಂಡೊಯ್ತೇನೆ. ಯಾರಾದರೂ ಒಬ್ಬರು ಅಹಿಂದ ಧ್ವಜ ಒಯ್ಯಲೇಬೇಕಲ್ವಾ? ಹೊಸ ಅಹಿಂದ ನಾಯಕ ಉದಯ ಆಗಲೇಬೇಕು, ಆ ವ್ಯವಸ್ಥೆ ರಾಜ್ಯದಲ್ಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಎಂಬುದೆಲ್ಲಾ ಸುಳ್ಳು. ಯಾರೋ ಹಾಕಿರುವ ಪೋಸ್ಟ್ಗೆ ಮಹತ್ವ ಕೊಡುವ ಅಗತ್ಯವಿಲ್ಲ. ಯಾವ ಸಹಿಯೂ ಹಾಕಿಲ್ಲ’ ಎಂದು ಸತೀಶ ಜಾರಕಿಹೊಳಿ ಹೇಳಿದರು.</p><p>ಸಿದ್ದರಾಮಯ್ಯ ಆಪ್ತರೇ ಚೂರಿ ಹಾಕಿದರು ಎಂಬ ವಿಚಾರಕ್ಕೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ‘37 ಜನರು ಸಿದ್ದರಾಮಯ್ಯ ವಿರುದ್ದ ಸಹಿ ಹಾಕಿದ್ದರೆ, ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದರು.</p><p>‘ಒಪ್ಪಂದದ ಪ್ರಕಾರ ಅವರು ಕೆಳಗೆ ಇಳಿದಿದ್ದಾರೆ. ಯಾವಾಗಲಾದರೂ ಕೆಳಗೆ ಇಳಿಯಲೇಬೇಕು, ಈಗ ಅಥವಾ ಎರಡು ವರ್ಷ ಆದ ಮೇಲೆ. ಹಿಂದೆ ಬಂಗಾರಪ್ಪ , ದೇವರಾಜ್ ಅರಸು ಎಲ್ಲರೂ ಇಳಿದಿದ್ದರು’ ಎಂದು ಹೇಳಿದರು.</p><p>‘ಸಿದ್ದರಾಮಯ್ಯ ಕೆಳಗಿಳಿಯಲೇಬೇಕಿತ್ತು. ನಾಯಕತ್ವ ವಿಚಾರ ದೆಹಲಿಯಲ್ಲಿ ಎಲ್ಲ ಮಾತುಕತೆ ಆಗಿರುವುದು. ಅವರು ಮಾತನಾಡುವಾಗ ಬೆಂಗಳೂರಲ್ಲಿ ಏನೂ ಆಗಿಲ್ಲ. ನಮ್ಮನ್ನು ಯಾರೂ ಆಗಲೂ ಕೇಳಿರಲಿಲ್ಲ. ಎಲ್ಲ ಅವರೇ ನಿರ್ಧಾರ ಮಾಡಿಕೊಂಡ ಪ್ರಕಾರ ಸಿದ್ದರಾಮಯ್ಯ ಕೆಳಗೆ ಇಳಿದಿದ್ದಾರೆ’ ಎಂದು ತಿಳಿಸಿದರು.</p><p>‘ಇನ್ನು ಎರಡು ವರ್ಷಗಳ ನಂತರವಾದರೂ ಸಿದ್ದರಾಮಯ್ಯ ಇಳಿಯಲೇಬೇಕಲ್ವಾ ? ಎಲ್ಲಾ ಸಂದರ್ಭಗಳಿಗೂ ನಾವು ಸಿದ್ದರಿರಬೇಕು’ ಎಂದರು.</p><p>‘ಅಹಿಂದ ಅಂದರೆ ಸುಮಾರು 500 ಜಾತಿಗಳಿವೆ. ನಾನು ಅಹಿಂದ ಧ್ವಜ ಕೊಂಡೊಯ್ತೇನೆ. ಯಾರಾದರೂ ಒಬ್ಬರು ಅಹಿಂದ ಧ್ವಜ ಒಯ್ಯಲೇಬೇಕಲ್ವಾ? ಹೊಸ ಅಹಿಂದ ನಾಯಕ ಉದಯ ಆಗಲೇಬೇಕು, ಆ ವ್ಯವಸ್ಥೆ ರಾಜ್ಯದಲ್ಲಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>