<p>ಪ್ರತಿ ಬಾರಿ ಮಾತನಾಡುವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಸಿದ್ಧಾಂತಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯನವರು ಅಧಿಕಾರದ ಗದ್ದುಗೆ ಏರಿದಾಗಲೂ ಅದನ್ನು ಪಾಲಿಸಿದ್ದಾರೆ. ಎರಡು ಬಾರಿ ಸಿಎಂ ಆಗಿ ಆಡಳಿತ ನಡೆಸಿರುವ ಅವರು ಭಾಗ್ಯಗಳಿಂದ ಗ್ಯಾರಂಟಿವರೆಗೆ ಅದರ ಪಾಲನೆ ಮಾಡಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.</p><p>ಸಾಮಾಜಿಕ ನ್ಯಾಯ ತತ್ವದ ಮೇಲೆ ನಂಬಿಕೆ ಇಟ್ಟಿರುವವನು ಎಂದು ಹೇಳುತ್ತಿದ್ದ ಅವರು, ಬಡವರು, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಸೇರಿದಂತೆ ತುಳಿತಕ್ಕೊಳಗಾದ ಜನರ ಏಳಿಗೆಗೆ ಯೋಜನೆಗಳನ್ನು ರೂಪಿಸಿದ್ದರು. ಈ ಪೈಕಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಅವರ ಮೊದಲಾವಧಿಯ ಅನ್ನಭಾಗ್ಯ ಯೋಜನೆ.</p><p>ರಾಜ್ಯದಲ್ಲಿ ಹಸಿದುಕೊಂಡು ಯಾರೂ ಇರಬಾರದು. ಬಡತನ ನಿರ್ಮೂಲನೆ ಮಾಡಬೇಕು ಎಂಬ ಉದಾತ್ತ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಅಂತ್ಯೋದಯ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯನ್ನು ತಮ್ಮ ಮೊದಲಾವಧಿಯಲ್ಲೇ ಸಿದ್ದರಾಮಯ್ಯ ಜಾರಿಗೆ ತಂದಿದ್ದರು. ಪ್ರಣಾಳಿಕೆಯ ಭಾಗವಾಗಿದ್ದ ಈ ಭರವಸೆಯನ್ನು ಮೊದಲ ಸಂಪುಟ ಸಭೆಯಲ್ಲೇ ಕಾರ್ಯಗತಗೊಳಿಸಿದ್ದರು. ಬಳಿಕ, ಬಂದ ಬಿಜೆಪಿ ಸರ್ಕಾರವು ಅದನ್ನು 5 ಕೆ.ಜಿಗೆ ಇಳಿಸಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಬದಲಿಗೆ ಹಣ, ಇಂದಿರಾ ಕಿಟ್ ನೀಡುತ್ತಿದೆ.</p><p> <strong>ಅನ್ನಭಾಗ್ಯ ಯೋಜನೆ ಹಿಂದೆ ಸಿದ್ದರಾಮಯ್ಯ ಕಂಡಿದ್ದ ಬಡತನದ ನೆನಪು</strong></p><p>ಹಳ್ಳಿಗಾಡಿನ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯನವರು ಬಾಲ್ಯದಿಂದಲೇ ಬಡತನವನ್ನು ಕಣ್ಣಾರೆ ಕಂಡವರು. ಜನರಲ್ಲಿ ಊಟಕ್ಕೆ ಯಾವ ರೀತಿಯ ಸಮಸ್ಯೆ ಇತ್ತು ಎಂಬುದು ಅವರಿಗೆ ತಿಳಿದಿತ್ತು. ಹಾಗಾಗಿಯೇ ರಾಜ್ಯದ ಯಾವೊಬ್ಬರೂ ಹಸಿದು ಮಲಗಬಾರದು. ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾಗಿ ಹೇಳಿದ್ದರು.</p><p>ನಮ್ಮೂರಿನ ಬಡಕುಟುಂಬಗಳಿಗೆ ನಿತ್ಯ ಅನ್ನ ಮಾಡಿಕೊಂಡು ಊಟ ಮಾಡುವ ಸಾಮರ್ಥ್ಯ ಇರಲಿಲ್ಲ. ರಾಗಿ ಮುದ್ದೆ ಉಂಡೇ ಜೀವನ ನಡೆಸುತ್ತಿದ್ದರು. ಮಕ್ಕಳಿಗೆ ಅಜೀರ್ಣ, ಬೇಧಿ ಸಮಸ್ಯೆಯಾದಾಗ ಶ್ರೀಮಂತರ ಮನೆಗಳ ಮುಂದೆ ತುತ್ತು ಅನ್ನ ಕೇಳಿಕೊಂಡು ನಿಲ್ಲುತ್ತಿದ್ದರು. ಆ ದೃಶ್ಯವು ಈ ಅನ್ನಭಾಗ್ಯ ಯೋಜನೆ ಜಾರಿಗೆ ಪ್ರೇರೇಪಿಸಿತು ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು.</p><p>ಶಾಲಾ ಮಕ್ಕಳಿಗೆ ಶೂಭಾಗ್ಯ, ಉಚಿತ ಲ್ಯಾಪ್ಟಾಪ್ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿಗೆ ಬಂದ ಹಲವು ಜನ ಕಲ್ಯಾಣ ಯೋಜನೆಗಳು ಬಡವರ ಏಳಿಗೆಯ ಉದಾತ್ತ ಉದ್ದೇಶಗಳನ್ನು ಹೊಂದಿದ್ದವು ಎನ್ನುತ್ತಾರೆ ವಿಶ್ಲೇಷಕರು.</p><p><strong>ವಿದ್ಯಾರ್ಥಿನಿಯ ಮೀಸಲಾತಿ ತಾರತಮ್ಯ ಪ್ರಶ್ನೆಗೆ ಹೀಗಿತ್ತು ಸಿದ್ದರಾಮಯ್ಯ ಉತ್ತರ..</strong></p><p>ಮೀಸಲಾತಿ ಹೆಸರಲ್ಲಿ ಕೆಲವರಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ಮತ್ತು ಇತರೆ ಸೌಲಭ್ಯಗಳನ್ನು ಏಕೆ ನೀಡುತ್ತಿದ್ದೀರಿ ಎಂದು ಹಿಂದೊಮ್ಮೆ ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬರು, ರಾಹುಲ್ ಗಾಂಧಿಗೆ ಪ್ರಶ್ನೆ ಹಾಕಿದ್ದರು. ರಾಹುಲ್ ಈ ಪ್ರಶ್ನೆಯನ್ನು ಸಿದ್ದರಾಮಯ್ಯಗೆ ವರ್ಗಾಯಿಸಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ಸಮಾಜದಲ್ಲಿ ನೂರಾರು ವರ್ಷಗಳಿಂದ ತಾರತಮ್ಯ ಹುಟ್ಟುಹಾಕಲಾಗಿದೆ. ಬಡವರು, ಶ್ರೀಮಂತರು ಎಂದು ಸಮಾಜದಲ್ಲಿ ಅಸಮತೋಲನ ಇದೆ. ಮನೆಯಲ್ಲಿ ದುರ್ಬಲ ಮಗುವಿಗೆ ಹೆಚ್ಚಿನ ಆರೈಕೆ ನೀಡಿ ಅದರ ಏಳಿಗೆಗೆ ಹೇಗೆ ಆದ್ಯತೆ ನೀಡುತ್ತೇವೆಯೋ ಹಾಗೆಯೋ ಸಮಾಜದಲ್ಲಿ ತುಳಿತಕ್ಕೊಳಗಾದವರ, ಬಡವರ ಏಳಿಗೆಗೆ ಮೀಸಲಾತಿ ಮೂಲಕ ವಿಶೇಷ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ, ಸಮಾಜದಲ್ಲಿ ಅಸಮಾನತೆ ಹೀಗೇ ಮುಂದುವರಿಯುತ್ತದೆ ಎಂದಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರತಿ ಬಾರಿ ಮಾತನಾಡುವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಗಾಂಧೀಜಿಯವರ ಸಿದ್ಧಾಂತಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯನವರು ಅಧಿಕಾರದ ಗದ್ದುಗೆ ಏರಿದಾಗಲೂ ಅದನ್ನು ಪಾಲಿಸಿದ್ದಾರೆ. ಎರಡು ಬಾರಿ ಸಿಎಂ ಆಗಿ ಆಡಳಿತ ನಡೆಸಿರುವ ಅವರು ಭಾಗ್ಯಗಳಿಂದ ಗ್ಯಾರಂಟಿವರೆಗೆ ಅದರ ಪಾಲನೆ ಮಾಡಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.</p><p>ಸಾಮಾಜಿಕ ನ್ಯಾಯ ತತ್ವದ ಮೇಲೆ ನಂಬಿಕೆ ಇಟ್ಟಿರುವವನು ಎಂದು ಹೇಳುತ್ತಿದ್ದ ಅವರು, ಬಡವರು, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಸೇರಿದಂತೆ ತುಳಿತಕ್ಕೊಳಗಾದ ಜನರ ಏಳಿಗೆಗೆ ಯೋಜನೆಗಳನ್ನು ರೂಪಿಸಿದ್ದರು. ಈ ಪೈಕಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಅವರ ಮೊದಲಾವಧಿಯ ಅನ್ನಭಾಗ್ಯ ಯೋಜನೆ.</p><p>ರಾಜ್ಯದಲ್ಲಿ ಹಸಿದುಕೊಂಡು ಯಾರೂ ಇರಬಾರದು. ಬಡತನ ನಿರ್ಮೂಲನೆ ಮಾಡಬೇಕು ಎಂಬ ಉದಾತ್ತ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಅಂತ್ಯೋದಯ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯನ್ನು ತಮ್ಮ ಮೊದಲಾವಧಿಯಲ್ಲೇ ಸಿದ್ದರಾಮಯ್ಯ ಜಾರಿಗೆ ತಂದಿದ್ದರು. ಪ್ರಣಾಳಿಕೆಯ ಭಾಗವಾಗಿದ್ದ ಈ ಭರವಸೆಯನ್ನು ಮೊದಲ ಸಂಪುಟ ಸಭೆಯಲ್ಲೇ ಕಾರ್ಯಗತಗೊಳಿಸಿದ್ದರು. ಬಳಿಕ, ಬಂದ ಬಿಜೆಪಿ ಸರ್ಕಾರವು ಅದನ್ನು 5 ಕೆ.ಜಿಗೆ ಇಳಿಸಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು 5 ಕೆ.ಜಿ ಅಕ್ಕಿ ಮತ್ತು ಉಳಿದ 5 ಕೆ.ಜಿ ಬದಲಿಗೆ ಹಣ, ಇಂದಿರಾ ಕಿಟ್ ನೀಡುತ್ತಿದೆ.</p><p> <strong>ಅನ್ನಭಾಗ್ಯ ಯೋಜನೆ ಹಿಂದೆ ಸಿದ್ದರಾಮಯ್ಯ ಕಂಡಿದ್ದ ಬಡತನದ ನೆನಪು</strong></p><p>ಹಳ್ಳಿಗಾಡಿನ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯನವರು ಬಾಲ್ಯದಿಂದಲೇ ಬಡತನವನ್ನು ಕಣ್ಣಾರೆ ಕಂಡವರು. ಜನರಲ್ಲಿ ಊಟಕ್ಕೆ ಯಾವ ರೀತಿಯ ಸಮಸ್ಯೆ ಇತ್ತು ಎಂಬುದು ಅವರಿಗೆ ತಿಳಿದಿತ್ತು. ಹಾಗಾಗಿಯೇ ರಾಜ್ಯದ ಯಾವೊಬ್ಬರೂ ಹಸಿದು ಮಲಗಬಾರದು. ಎರಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾಗಿ ಹೇಳಿದ್ದರು.</p><p>ನಮ್ಮೂರಿನ ಬಡಕುಟುಂಬಗಳಿಗೆ ನಿತ್ಯ ಅನ್ನ ಮಾಡಿಕೊಂಡು ಊಟ ಮಾಡುವ ಸಾಮರ್ಥ್ಯ ಇರಲಿಲ್ಲ. ರಾಗಿ ಮುದ್ದೆ ಉಂಡೇ ಜೀವನ ನಡೆಸುತ್ತಿದ್ದರು. ಮಕ್ಕಳಿಗೆ ಅಜೀರ್ಣ, ಬೇಧಿ ಸಮಸ್ಯೆಯಾದಾಗ ಶ್ರೀಮಂತರ ಮನೆಗಳ ಮುಂದೆ ತುತ್ತು ಅನ್ನ ಕೇಳಿಕೊಂಡು ನಿಲ್ಲುತ್ತಿದ್ದರು. ಆ ದೃಶ್ಯವು ಈ ಅನ್ನಭಾಗ್ಯ ಯೋಜನೆ ಜಾರಿಗೆ ಪ್ರೇರೇಪಿಸಿತು ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು.</p><p>ಶಾಲಾ ಮಕ್ಕಳಿಗೆ ಶೂಭಾಗ್ಯ, ಉಚಿತ ಲ್ಯಾಪ್ಟಾಪ್ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿಗೆ ಬಂದ ಹಲವು ಜನ ಕಲ್ಯಾಣ ಯೋಜನೆಗಳು ಬಡವರ ಏಳಿಗೆಯ ಉದಾತ್ತ ಉದ್ದೇಶಗಳನ್ನು ಹೊಂದಿದ್ದವು ಎನ್ನುತ್ತಾರೆ ವಿಶ್ಲೇಷಕರು.</p><p><strong>ವಿದ್ಯಾರ್ಥಿನಿಯ ಮೀಸಲಾತಿ ತಾರತಮ್ಯ ಪ್ರಶ್ನೆಗೆ ಹೀಗಿತ್ತು ಸಿದ್ದರಾಮಯ್ಯ ಉತ್ತರ..</strong></p><p>ಮೀಸಲಾತಿ ಹೆಸರಲ್ಲಿ ಕೆಲವರಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ಮತ್ತು ಇತರೆ ಸೌಲಭ್ಯಗಳನ್ನು ಏಕೆ ನೀಡುತ್ತಿದ್ದೀರಿ ಎಂದು ಹಿಂದೊಮ್ಮೆ ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬರು, ರಾಹುಲ್ ಗಾಂಧಿಗೆ ಪ್ರಶ್ನೆ ಹಾಕಿದ್ದರು. ರಾಹುಲ್ ಈ ಪ್ರಶ್ನೆಯನ್ನು ಸಿದ್ದರಾಮಯ್ಯಗೆ ವರ್ಗಾಯಿಸಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ಸಮಾಜದಲ್ಲಿ ನೂರಾರು ವರ್ಷಗಳಿಂದ ತಾರತಮ್ಯ ಹುಟ್ಟುಹಾಕಲಾಗಿದೆ. ಬಡವರು, ಶ್ರೀಮಂತರು ಎಂದು ಸಮಾಜದಲ್ಲಿ ಅಸಮತೋಲನ ಇದೆ. ಮನೆಯಲ್ಲಿ ದುರ್ಬಲ ಮಗುವಿಗೆ ಹೆಚ್ಚಿನ ಆರೈಕೆ ನೀಡಿ ಅದರ ಏಳಿಗೆಗೆ ಹೇಗೆ ಆದ್ಯತೆ ನೀಡುತ್ತೇವೆಯೋ ಹಾಗೆಯೋ ಸಮಾಜದಲ್ಲಿ ತುಳಿತಕ್ಕೊಳಗಾದವರ, ಬಡವರ ಏಳಿಗೆಗೆ ಮೀಸಲಾತಿ ಮೂಲಕ ವಿಶೇಷ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ, ಸಮಾಜದಲ್ಲಿ ಅಸಮಾನತೆ ಹೀಗೇ ಮುಂದುವರಿಯುತ್ತದೆ ಎಂದಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>