<p><strong>ಬೆಂಗಳೂರು</strong>: ಸಿದ್ದರಾಮಯ್ಯ ಅಂದರೇನೆ ಹಾಗೆ.. ನೇರ ಮಾತು.. ಖಡಕ್ ಉತ್ತರ.. ಎದುರು ನಿಂತು ಪ್ರಶ್ನಿಸುವವರು ಯಾರೇ ಇದ್ದರೂ ವಸ್ತುನಿಷ್ಠ ದಾಖಲೆಗಳನ್ನು ಮುಂದಿಟ್ಟು ಜಗಜಟ್ಟಿಯಂತೆ ಚರ್ಚೆಗೆ ನಿಲ್ಲುವ ರಾಜಕೀಯ ನಾಯಕ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಅತ್ಯಂತ ಜನಪ್ರಿಯ ಜನನಾಯಕ ಎಂದರೂ ಅತಿಶಯೋಕ್ತಿಯಲ್ಲ. ಹೋರಾಟದ ಮೂಲಕ ಒಂದೊಂದೇ ರಾಜಕೀಯ ಮೆಟ್ಟಿಲು ಏರಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿ ಆಗಲೇಬೇಕು ಎಂದು ಸವಾಲು ಹಾಕಿ ಸಿಎಂ ಆದವರು.</p><p>ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ(ಅಹಿಂದ) ನಾಯಕರೆಂದೇ ಹೆಸರಾಗಿರುವ ಸಿದ್ದರಾಮಯ್ಯ 2013ಕ್ಕೂ ಮುನ್ನ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪಗೆ ಸವಾಲು ಹಾಕಿದ್ದರು.</p><p>ವಿಧಾನಸಭೆಯಲ್ಲಿ ಚರ್ಚೆ ವೇಳೆ ಮಾತನಾಡಿದ್ದ ಈಶ್ವರಪ್ಪನವರು, ಸಿದ್ದರಾಮಯ್ಯ ಉತ್ತಮ ನಾಯಕ. ಆದರೆ, ನಿಮ್ಮ ಪಕ್ಷದವರೇ ಬಿಡುತ್ತಿಲ್ಲ. ಹಗಲು ರಾತ್ರಿ ಕನಸು ಕಾಣುತ್ತಿದ್ದೀರಿ ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಆಗಲೇಬೇಕು ರೀ.. i want to become a chief minister ಎಂದು ಪದೇ ಪದೇ ಹೇಳಿದ್ದರು. ರಾಜ್ಯದ ಜನರು ಮಾಡೋದು ಅದನ್ನು. ನಿಮ್ಮಿಂದ ತಪ್ಪಿಸಲಾಗದು. ನೀವು, ಯಡಿಯೂರಪ್ಪನೇ ಮುಖ್ಯಮಂತ್ರಿ ಆಗಬೇಕಾ? ನಾವು ಆಗಬಾರದಾ। ಎಂದು ಪ್ರಶ್ನಿಸಿದ್ದರು. ಅಲ್ಲದೇ, ನಾನು ಖಂಡಿತ ಸಿಎಂ ಆಗುತ್ತೇನೆ ಎಂದು ಹೇಳಿದ್ದರು.</p><p>ತೊಡೆ ತಟ್ಟಿ ಬಳ್ಳಾರಿ ಪಾದಯಾತ್ರೆ</p><p>2010ರಲ್ಲಿ ವಿಧಾನಸಭೆಯಲ್ಲಿ ಅಂದಿನ ಸಚಿವ ಜನಾರ್ದನ ರೆಡ್ಡಿ ಮತ್ತು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ರೆಡ್ಡಿ ನಡುವೆ ಕಾವೇರಿದ ಚರ್ಚೆ ನಡೆಯುತ್ತಿತ್ತು. ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ವರದಿ ಕುರಿತು ಸಿದ್ದರಾಮಯ್ಯ ಆರೋಪಕ್ಕೆ ತಿರುಗಿಬಿದ್ದಿದ್ದ ಜನಾರ್ದನ ರೆಡ್ಡಿ ಮತ್ತು ಸಹೋದರರು ನಿಮಗೆ ತಾಕತ್ತಿದ್ದರೆ ಬಳ್ಳಾರಿಗೆ ಬಂದುನೋಡಿ ಎಂದು ಸವಾಲು ಹಾಕಿದ್ದರು. ಈ ಸಂದರ್ಭ ತೊಡೆ ತಟ್ಟಿ ಬಂದೇ ಬರುತ್ತೀನಿ ಎಂದಿದ್ದರು. ಆ ಬಳಿಕ, ಕಾಂಗ್ರೆಸ್ ನಾಯಕರ ಜೊತೆ ಬಳ್ಳಾರಿಗೆ 320 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದ ಅವರು ಬೃಹತ್ ಸಮಾವೇಶ ನಡೆಸಿದ್ದರು. ಬಳಿಕ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಿದ್ದರಾಮಯ್ಯ ಅಂದರೇನೆ ಹಾಗೆ.. ನೇರ ಮಾತು.. ಖಡಕ್ ಉತ್ತರ.. ಎದುರು ನಿಂತು ಪ್ರಶ್ನಿಸುವವರು ಯಾರೇ ಇದ್ದರೂ ವಸ್ತುನಿಷ್ಠ ದಾಖಲೆಗಳನ್ನು ಮುಂದಿಟ್ಟು ಜಗಜಟ್ಟಿಯಂತೆ ಚರ್ಚೆಗೆ ನಿಲ್ಲುವ ರಾಜಕೀಯ ನಾಯಕ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಅತ್ಯಂತ ಜನಪ್ರಿಯ ಜನನಾಯಕ ಎಂದರೂ ಅತಿಶಯೋಕ್ತಿಯಲ್ಲ. ಹೋರಾಟದ ಮೂಲಕ ಒಂದೊಂದೇ ರಾಜಕೀಯ ಮೆಟ್ಟಿಲು ಏರಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿ ಆಗಲೇಬೇಕು ಎಂದು ಸವಾಲು ಹಾಕಿ ಸಿಎಂ ಆದವರು.</p><p>ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ(ಅಹಿಂದ) ನಾಯಕರೆಂದೇ ಹೆಸರಾಗಿರುವ ಸಿದ್ದರಾಮಯ್ಯ 2013ಕ್ಕೂ ಮುನ್ನ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪಗೆ ಸವಾಲು ಹಾಕಿದ್ದರು.</p><p>ವಿಧಾನಸಭೆಯಲ್ಲಿ ಚರ್ಚೆ ವೇಳೆ ಮಾತನಾಡಿದ್ದ ಈಶ್ವರಪ್ಪನವರು, ಸಿದ್ದರಾಮಯ್ಯ ಉತ್ತಮ ನಾಯಕ. ಆದರೆ, ನಿಮ್ಮ ಪಕ್ಷದವರೇ ಬಿಡುತ್ತಿಲ್ಲ. ಹಗಲು ರಾತ್ರಿ ಕನಸು ಕಾಣುತ್ತಿದ್ದೀರಿ ಎಂದು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಆಗಲೇಬೇಕು ರೀ.. i want to become a chief minister ಎಂದು ಪದೇ ಪದೇ ಹೇಳಿದ್ದರು. ರಾಜ್ಯದ ಜನರು ಮಾಡೋದು ಅದನ್ನು. ನಿಮ್ಮಿಂದ ತಪ್ಪಿಸಲಾಗದು. ನೀವು, ಯಡಿಯೂರಪ್ಪನೇ ಮುಖ್ಯಮಂತ್ರಿ ಆಗಬೇಕಾ? ನಾವು ಆಗಬಾರದಾ। ಎಂದು ಪ್ರಶ್ನಿಸಿದ್ದರು. ಅಲ್ಲದೇ, ನಾನು ಖಂಡಿತ ಸಿಎಂ ಆಗುತ್ತೇನೆ ಎಂದು ಹೇಳಿದ್ದರು.</p><p>ತೊಡೆ ತಟ್ಟಿ ಬಳ್ಳಾರಿ ಪಾದಯಾತ್ರೆ</p><p>2010ರಲ್ಲಿ ವಿಧಾನಸಭೆಯಲ್ಲಿ ಅಂದಿನ ಸಚಿವ ಜನಾರ್ದನ ರೆಡ್ಡಿ ಮತ್ತು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ರೆಡ್ಡಿ ನಡುವೆ ಕಾವೇರಿದ ಚರ್ಚೆ ನಡೆಯುತ್ತಿತ್ತು. ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ವರದಿ ಕುರಿತು ಸಿದ್ದರಾಮಯ್ಯ ಆರೋಪಕ್ಕೆ ತಿರುಗಿಬಿದ್ದಿದ್ದ ಜನಾರ್ದನ ರೆಡ್ಡಿ ಮತ್ತು ಸಹೋದರರು ನಿಮಗೆ ತಾಕತ್ತಿದ್ದರೆ ಬಳ್ಳಾರಿಗೆ ಬಂದುನೋಡಿ ಎಂದು ಸವಾಲು ಹಾಕಿದ್ದರು. ಈ ಸಂದರ್ಭ ತೊಡೆ ತಟ್ಟಿ ಬಂದೇ ಬರುತ್ತೀನಿ ಎಂದಿದ್ದರು. ಆ ಬಳಿಕ, ಕಾಂಗ್ರೆಸ್ ನಾಯಕರ ಜೊತೆ ಬಳ್ಳಾರಿಗೆ 320 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದ ಅವರು ಬೃಹತ್ ಸಮಾವೇಶ ನಡೆಸಿದ್ದರು. ಬಳಿಕ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>