<p>ಸಿದ್ದರಾಮಯ್ಯ ರಾಜೀನಾಮೆ ಬಳಿಕ ಕರ್ನಾಟಕ ಆಡಳಿತದ ಪ್ರಮುಖ ಅಧ್ಯಾಯವೊಂದು ಕೊನೆಗೊಂಡಿದೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಅವರು ಹೇಳಿದ್ದರೂ ರಾಜಕೀಯದ ಒಂದು ಯುಗಾಂತ್ಯ ಎಂದೇ ಬಣ್ಣಿಸಲಾಗುತ್ತಿದೆ.</p><p>ರಾಜ್ಯದ ಜನತೆಯ ಸೇವೆಯ ಬಗ್ಗೆ ಅವರ ಬದ್ಧತೆಯನ್ನು ಅವರ ಜೊತೆ ಕೆಲಸ ಮಾಡಿದ್ದ ಅಧಿಕಾರಿ ಐಎಸ್ಎನ್ ಪ್ರಸಾದ್ ವಿವರಿಸಿದ್ದಾರೆ. </p><p>ಸಿದ್ದರಾಮಯ್ಯ ಅವರ ಜೊತೆ ಪ್ರಧಾನ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ರಾಜ್ಯದ ಹಣಕಾಸು ಕಾರ್ಯದರ್ಶಿಯಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ರಾಜ್ಯದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಅವರ ಸೇವೆ ಮತ್ತು ಹಿನ್ನೆಲೆ , ಅದ್ಬುತ ರಾಜಕೀಯ ದಾಖಲೆಗಳ ಬಗ್ಗೆ ಬಹಳಷ್ಟು ಕಡೆ ಬರೆದಿದ್ದಾರೆ. ಹಾಗಾಗಿ, ಅವರ ರಾಜಕೀಯ ಜೀವನದ ಬದಲು ಅವರ ಛಲ, ಸ್ಥಿತಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಕುರಿತಾದ ಅವರ ಕೆಲ ವೈಯಕ್ತಿಕ ವಿಷಯ ಹಂಚಿಕೊಳ್ಳುತ್ತೇನೆ ಎಂದು ಅಧಿಕಾರಿ ಹೇಳಿದ್ದಾರೆ.</p><h2>ಮಗ ರಾಕೇಶ್ ಆಸ್ಪತ್ರೆಯಲ್ಲಿ.. ಸಾರಿಗೆ ಬಂದ್ ಸ್ಥಗಿತಕ್ಕೆ ಗಂಭೀರ ಚರ್ಚೆಯಲ್ಲಿ ಸಿದ್ದರಾಮಯ್ಯ</h2><h2> </h2><p>ಅದು 2016ರ ಜೂನ್ ತಿಂಗಳು. ಬರ ಸಿಡಿಲು ಬಡಿದಂತ ಸುದ್ದಿಯು ಸಿದ್ದರಾಮಯ್ಯನವರ ಕಿವಿಗೆ ಬಿದ್ದಿತ್ತು.. ಬೆಲ್ಜಿಯಂಗೆ ತೆರಳಿದ್ದ ಹಿರಿಯ ಪುತ್ರ ರಾಕೇಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮುಖ್ಯಮಂತ್ರಿಗಳು ಕೂಡಲೇ ಬೆಲ್ಜಿಯಂಗೆ ತೆರಳಲು ಮುಂದಾಗಿದ್ದರು. ನಾನೂ ಅವರ ಜೊತೆಗಿದ್ದೆ. ನಿರ್ಗಮನಕ್ಕೆ ಕೆಲ ಗಂಟೆಗಳ ಮುನ್ನ ಸಿಎಂ ನಿವಾಸ ಕಾವೇರಿಗೆ ಪ್ರತಿಭಟನಾನಿರತ ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ನಾಯಕರ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಅವರ ಮನವೊಲಿಕೆಗೆ ಮುಖ್ಯಮಂತ್ರಿ ಮತ್ತು ಸಚಿವರು ಪ್ರಯತ್ನ ನಡೆಸುತ್ತಿದ್ದರು. ಆ ಚರ್ಚೆ ವೇಳೆ ನಾನೂ ಇದ್ದೆ.</p><p>ಅತ್ಯಂತ ದೀರ್ಘಾವಧಿಗೆ ಮಾತುಕತೆ ಮುಂದುವರಿದಿತ್ತು. ಬಿಗುವಿನ ವಾತಾವರಣವಿತ್ತು. ಆದರೂ ಸಿದ್ದರಾಮಯ್ಯ ಅತ್ಯಂತ ಸ್ಥಿತಪ್ರಜ್ಞರಾಗಿದ್ದರು. ಮಗ ಅಂತಹ ಸ್ಥಿತಿಯಲ್ಲಿರುವಾಗ ಯಾವ ತಂದೆಗಾದರೂ ಮನಸ್ಸು ವಿಚಲಿತಗೊಳ್ಳುತ್ತದೆ. ಆದರೆ, ಸಿದ್ದರಾಮಯ್ಯ ಮಾತ್ರ ಆಗಲೂ ಕೋಪ ವ್ಯಕ್ತಪಡಿಸದೇ ಸಮಾಧಾನ ಚಿತ್ರರಾಗಿ ಬೇಡಿಕೆ ಆಲಿಸಿದರು. ಬಳಿಕ, ಸಂಧಾನ ಯಶಸ್ವಿಯಾಗಿ ಬಂದ್ ಹಿಂಪಡೆಲಾಯಿತು. ನಂತರ ಅವರು ವಿಮಾನ ನಿಲ್ದಣಕ್ಕೆ ತೆರಳಿದರು ಎಂದಿದ್ದಾರೆ.</p><h2>ಬೆಲ್ಜಿಯಂನಿಂದ ವಿಡಿಯೊ ಕಾನ್ಫರೆನ್ಸ್</h2><p>ಬೆಲ್ಜಿಯಂನ ಆ್ಯಂಟ್ವರ್ಪ್ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ರಾಕೇಶ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಂತಹ ನೋವಿನ ಸಂದರ್ಭದಲ್ಲೂ ಶಾಂತರಾಗಿದ್ದ ಸಿದ್ದರಾಮಯ್ಯ, ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದರು. ನಾವು ಎರಡು ದಿನ ಅಲ್ಲಿದ್ದಾಗ, ಬೆಂಗಳೂರಿನಲ್ಲಿ ಭಾರಿ ಮಳೆಯಾಗಿತ್ತು. ಕೆರೆಗಳು ತುಂಬಿ ನಗರದ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದವು. ಕೂಡಲೇ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಆಯೋಜಿಸಲು ನನಗೆ ಸೂಚಿಸಿದ್ದರು. ಅತ್ತ ಮಗನ ಸ್ಥಿತಿ ಚಿಂತಾಜನಕವಾಗಿದ್ದರೂ ಇತ್ತ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪೂರ್ಣ ಪರಿಸ್ಥಿತಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು.</p><p>ಸಭೆಯ ಉದ್ದಕ್ಕೂ ಅತ್ಯಂತ ಶಾಂತ, ಸ್ಥಿತಪ್ರಜ್ಞರಾಗಿದ್ದರು. ನಂತರದ ದುರಂತ ಎಲ್ಲರಿಗೂ ತಿಳಿದಿದೆ. ಶನಿವಾರ ಬೆಳಿಗ್ಗೆ, ರಾಕೇಶ್ ನಿಧನರಾದರು ಎಂಬ ಹೃದಯವಿದ್ರಾವಕ ಸುದ್ದಿ ನಮಗೆ ತಲುಪಿತು. ಮುಖ್ಯಮಂತ್ರಿಗಳು ತಮ್ಮ ಮಗನ ಪಾರ್ಥಿವ ಶರೀರದೊಂದಿಗೆ ತಕ್ಷಣ ಮೈಸೂರಿಗೆ ಮರಳಲು ಉತ್ಸುಕರಾಗಿದ್ದರು. ವಿಶೇಷ ವಿಮಾನ ವ್ಯವಸ್ಥೆ ಮಾಡಲು ಹೇಳಿದರೆ ಬೇಡ ವಿಳಂಬವಾದರೂ ವಾಣಿಜ್ಯ ವಿಮಾನದಲ್ಲೇ ಹೋಗೋಣ ಎಂದು ಹೇಳಿದರು.</p><p>ನಂತರ ಮೃತದೇಹದ ಸಾಗಣೆ ಸವಾಲು ಎದುರಾಯಿತು. ವಾರಾಂತ್ಯವಾಗಿದ್ದರಿಂದ ಆಸ್ಪತ್ರೆಯಿಂದ ದೇಹವನ್ನು ಪಡೆಯುವುದುವುದು ಮತ್ತು ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದು ಸುಲಭವಾಗಿರಲಿಲ್ಲ. ಬೆಲ್ಜಿಯಂನ ಭಾರತೀಯ ರಾಯಭಾರಿ ನಮಗೆ ನೆರವು ನೀಡಿದರು ಎಂದು ವಿವರಿಸಿದ್ದಾರೆ. ನಂತರ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮುಖ್ಯಮಂತ್ರಿಗೆ ವೈಯಕ್ತಿಕವಾಗಿ ಕರೆ ಮಾಡಿ ತಮ್ಮ ಸಂತಾಪ ಸೂಚಿಸಿದ್ದರು. ಎಲ್ಲ ರೀತಿಯ ಬೆಂಬಲ ನೀಡುವ ಭರವಸೆ ನೀಡಿದ್ದರು. ಆರ್.ವಿ. ದೇಶಪಾಂಡೆ ಅವರು ಜೆಟ್ ಏರ್ವೇಸ್ನ ಅಧ್ಯಕ್ಷ ನರೇಶ್ ಗೋಯಲ್ ಅವರೊಂದಿಗೆ ಸಂಪರ್ಕ ಕಲ್ಪಿಸಿದರು. ಪ್ರಯಾಣದ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ನಮಗೆ ಸಹಾಯ ಮಾಡಲು ಆಮ್ಸ್ಟರ್ ಡ್ಯಾಮ್ನ ಹಿರಿಯ ಕಾರ್ಯನಿರ್ವಾಹಕರನ್ನು ನಿಯೋಜಿಸಿದರು. ಈ ಅನುಭವವು ಸಿದ್ದರಾಮಯ್ಯ ಅವರು ಎದುರಿಸಿದ ವೈಯಕ್ತಿಕ ದುರಂತವನ್ನು ಮಾತ್ರವಲ್ಲದೆ ಅವರ ಘನತೆಯನ್ನೂ ನಮಗೆ ಪರಿಚಯಿಸಿತು ಎಂದಿದ್ದಾರೆ.</p><h2>ಮಗನ ಸಾವಿನ ನೋವಲ್ಲೂ ಸ್ವಲ್ಪ ಸಮಯದಲ್ಲೇ ಕೆಲಸಕ್ಕೆ ಹಾಜರು</h2><p>ಸಿದ್ದರಾಮಯ್ಯನವರ ವಿಚಾರದಲ್ಲಿ ಅತ್ಯಂತ ಮೆಚ್ಚುಗೆಯಾದ ವಿಷಯವೇನೆಂದರೆ, ಮಗನ ಸಾವಿನ ನಂತರ ಸ್ವಲ್ಪ ಸಮಯದಲ್ಲೇ ಸಿದ್ದರಾಮಯ್ಯ ಕಚೇರಿಗೆ ಬಂದು ಕೆಲಸದಲ್ಲಿ ತೊಡಗಿಸಿಕೊಂಡರು. ನಂತರದ ಎರಡು ವರ್ಷ ಅತ್ಯಂತ ಬದ್ಧತೆಯ ಮತ್ತು ಉತ್ಸಾಹಭರಿತ ಮುಖ್ಯಮಂತ್ರಿಯನ್ನು ಕಂಡಿದ್ದೇವೆ. ವೈಯಕ್ತಿಕ ನೋವು ಅವರ ಕೆಲಸಕ್ಕೆ ಅಡ್ಡಿಬರಲಿಲ್ಲ.</p><h2>ಸೂಕ್ಷ್ಮವಾಗಿ ಬಜೆಟ್ ಪರಿಶೀಲನೆ</h2><p>ಸಿದ್ದರಾಮಯ್ಯ ವಿಚಾರದಲ್ಲಿ ಮತ್ತೊಂದು ಹೇಳಲೇಬೇಕಾದ ವಿಚಾರವೆಂದರೆ, ವಾರ್ಷಿಕ ಬಜೆಟ್ ಬಗೆಗಿನ ಗಾಂಭೀರ್ಯ. ಪ್ರತಿ ಇಲಾಖೆಯ ಪ್ರಸ್ತಾವನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ಅವರು, ನೀತಿ ನಿರ್ಣಯಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಪ್ರಮುಖ ಘೋಷಣೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದರು. ಬಜೆಟ್ ಭಾಷಣವು ಅವರಿಗೆ ಕೇವಲ ರಾಜಕೀಯ ದಾಖಲಾತಿಗಳಾಗಿರಲಿಲ್ಲ. ಪ್ರತಿಯೊಂದು ಸಾಲನ್ನೂ ಒಂದಕ್ಕಿಂತ ಅಧಿಕ ಬಾರಿ ಓದುತ್ತಿದ್ದರು. ತಪ್ಪು ಸರಿಪಡಿಸುವಿಕೆಗೆ ಸೂಚಿಸುತ್ತಿದ್ದರು. ಬಜೆಟ್ ಚರ್ಚೆ ವೇಳೆ ತಾವು ಜನರು, ಶಾಸಕರನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ಅವರ ನಿರೀಕ್ಷೆ ಪೂರೈಸಬೇಕೆಂದು ಹೇಳುತ್ತಿದ್ದರು. ಪ್ರಣಾಳಿಕೆ ಪರಿಶೀಲನೆ ನಡೆಸಿ ಹಿಂದಿನ ಬಜೆಟ್ನಲ್ಲಿ ಏನೆಲ್ಲ ಆಗಿದೆ. ಮುಂದಿನ ಬಜೆಟ್ನಲ್ಲಿ ಏನು ಆಗಬೇಕು ಎಂದು ಸೂಚಿಸುತ್ತಿದ್ದರು.</p><p> ಅವರ ನೆನಪಿನ ಶಕ್ತಿ ಅದ್ಬುತವಾಗಿತ್ತು. ನಾವು ಅಂದಾಜು ಲೆಕ್ಕದಲ್ಲಿ ಹೇಳಿದರೆ ಅವರು ಯೋಜನೆಯ ಸಂಪೂರ್ಣ ಮೊತ್ತವನ್ನು ಮುಂದಿಡುತ್ತಿದ್ದರು. ಸರ್ ವಿ ಡೋಂಟ್ ಲೈಕ್ ಯೂ.. ನಾವು ಅಂದಾಜು ಲೆಕ್ಕ ಕೊಟ್ಟರೆ ನೀವು ಒಂದಂಕಿಯೂ ಬಿಡದೇ ಜ್ಞಾಪಕ ಇಟ್ಟುಕೊಡಿರುತ್ತೀರಿ ಎಂದು ನಾವು ತಮಾಷೆ ಮಾಡುತ್ತಿದ್ದೆವು. ಆಗ ಅವರು ಜೋರಾಗಿ ನಗುತ್ತಿದ್ದರು ಎಂದು ಹಣಕಾಸು ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಹೇಳಿದ್ದಾರೆ.</p> .ಸಿದ್ದರಾಮಯ್ಯ ಸಂಪುಟದಲ್ಲಿದ್ದ 20 ಸಚಿವರಿಗೆ ಕೊಕ್; ಹೇಗಿರಲಿದೆ ಡಿಕೆಶಿ ಸಂಪುಟ?.ಡಿಕೆಶಿ ಒಂದು ಬಾರಿಯ ಸಿಎಂ ಅಲ್ಲ, ದೀರ್ಘಾವಧಿ ಅಧಿಕಾರದಲ್ಲಿರುತ್ತಾರೆ: ಜ್ಯೋತಿಷಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದರಾಮಯ್ಯ ರಾಜೀನಾಮೆ ಬಳಿಕ ಕರ್ನಾಟಕ ಆಡಳಿತದ ಪ್ರಮುಖ ಅಧ್ಯಾಯವೊಂದು ಕೊನೆಗೊಂಡಿದೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಅವರು ಹೇಳಿದ್ದರೂ ರಾಜಕೀಯದ ಒಂದು ಯುಗಾಂತ್ಯ ಎಂದೇ ಬಣ್ಣಿಸಲಾಗುತ್ತಿದೆ.</p><p>ರಾಜ್ಯದ ಜನತೆಯ ಸೇವೆಯ ಬಗ್ಗೆ ಅವರ ಬದ್ಧತೆಯನ್ನು ಅವರ ಜೊತೆ ಕೆಲಸ ಮಾಡಿದ್ದ ಅಧಿಕಾರಿ ಐಎಸ್ಎನ್ ಪ್ರಸಾದ್ ವಿವರಿಸಿದ್ದಾರೆ. </p><p>ಸಿದ್ದರಾಮಯ್ಯ ಅವರ ಜೊತೆ ಪ್ರಧಾನ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ರಾಜ್ಯದ ಹಣಕಾಸು ಕಾರ್ಯದರ್ಶಿಯಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ರಾಜ್ಯದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಅವರ ಸೇವೆ ಮತ್ತು ಹಿನ್ನೆಲೆ , ಅದ್ಬುತ ರಾಜಕೀಯ ದಾಖಲೆಗಳ ಬಗ್ಗೆ ಬಹಳಷ್ಟು ಕಡೆ ಬರೆದಿದ್ದಾರೆ. ಹಾಗಾಗಿ, ಅವರ ರಾಜಕೀಯ ಜೀವನದ ಬದಲು ಅವರ ಛಲ, ಸ್ಥಿತಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಕುರಿತಾದ ಅವರ ಕೆಲ ವೈಯಕ್ತಿಕ ವಿಷಯ ಹಂಚಿಕೊಳ್ಳುತ್ತೇನೆ ಎಂದು ಅಧಿಕಾರಿ ಹೇಳಿದ್ದಾರೆ.</p><h2>ಮಗ ರಾಕೇಶ್ ಆಸ್ಪತ್ರೆಯಲ್ಲಿ.. ಸಾರಿಗೆ ಬಂದ್ ಸ್ಥಗಿತಕ್ಕೆ ಗಂಭೀರ ಚರ್ಚೆಯಲ್ಲಿ ಸಿದ್ದರಾಮಯ್ಯ</h2><h2> </h2><p>ಅದು 2016ರ ಜೂನ್ ತಿಂಗಳು. ಬರ ಸಿಡಿಲು ಬಡಿದಂತ ಸುದ್ದಿಯು ಸಿದ್ದರಾಮಯ್ಯನವರ ಕಿವಿಗೆ ಬಿದ್ದಿತ್ತು.. ಬೆಲ್ಜಿಯಂಗೆ ತೆರಳಿದ್ದ ಹಿರಿಯ ಪುತ್ರ ರಾಕೇಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮುಖ್ಯಮಂತ್ರಿಗಳು ಕೂಡಲೇ ಬೆಲ್ಜಿಯಂಗೆ ತೆರಳಲು ಮುಂದಾಗಿದ್ದರು. ನಾನೂ ಅವರ ಜೊತೆಗಿದ್ದೆ. ನಿರ್ಗಮನಕ್ಕೆ ಕೆಲ ಗಂಟೆಗಳ ಮುನ್ನ ಸಿಎಂ ನಿವಾಸ ಕಾವೇರಿಗೆ ಪ್ರತಿಭಟನಾನಿರತ ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ನಾಯಕರ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಅವರ ಮನವೊಲಿಕೆಗೆ ಮುಖ್ಯಮಂತ್ರಿ ಮತ್ತು ಸಚಿವರು ಪ್ರಯತ್ನ ನಡೆಸುತ್ತಿದ್ದರು. ಆ ಚರ್ಚೆ ವೇಳೆ ನಾನೂ ಇದ್ದೆ.</p><p>ಅತ್ಯಂತ ದೀರ್ಘಾವಧಿಗೆ ಮಾತುಕತೆ ಮುಂದುವರಿದಿತ್ತು. ಬಿಗುವಿನ ವಾತಾವರಣವಿತ್ತು. ಆದರೂ ಸಿದ್ದರಾಮಯ್ಯ ಅತ್ಯಂತ ಸ್ಥಿತಪ್ರಜ್ಞರಾಗಿದ್ದರು. ಮಗ ಅಂತಹ ಸ್ಥಿತಿಯಲ್ಲಿರುವಾಗ ಯಾವ ತಂದೆಗಾದರೂ ಮನಸ್ಸು ವಿಚಲಿತಗೊಳ್ಳುತ್ತದೆ. ಆದರೆ, ಸಿದ್ದರಾಮಯ್ಯ ಮಾತ್ರ ಆಗಲೂ ಕೋಪ ವ್ಯಕ್ತಪಡಿಸದೇ ಸಮಾಧಾನ ಚಿತ್ರರಾಗಿ ಬೇಡಿಕೆ ಆಲಿಸಿದರು. ಬಳಿಕ, ಸಂಧಾನ ಯಶಸ್ವಿಯಾಗಿ ಬಂದ್ ಹಿಂಪಡೆಲಾಯಿತು. ನಂತರ ಅವರು ವಿಮಾನ ನಿಲ್ದಣಕ್ಕೆ ತೆರಳಿದರು ಎಂದಿದ್ದಾರೆ.</p><h2>ಬೆಲ್ಜಿಯಂನಿಂದ ವಿಡಿಯೊ ಕಾನ್ಫರೆನ್ಸ್</h2><p>ಬೆಲ್ಜಿಯಂನ ಆ್ಯಂಟ್ವರ್ಪ್ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ರಾಕೇಶ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಂತಹ ನೋವಿನ ಸಂದರ್ಭದಲ್ಲೂ ಶಾಂತರಾಗಿದ್ದ ಸಿದ್ದರಾಮಯ್ಯ, ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದರು. ನಾವು ಎರಡು ದಿನ ಅಲ್ಲಿದ್ದಾಗ, ಬೆಂಗಳೂರಿನಲ್ಲಿ ಭಾರಿ ಮಳೆಯಾಗಿತ್ತು. ಕೆರೆಗಳು ತುಂಬಿ ನಗರದ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದವು. ಕೂಡಲೇ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಆಯೋಜಿಸಲು ನನಗೆ ಸೂಚಿಸಿದ್ದರು. ಅತ್ತ ಮಗನ ಸ್ಥಿತಿ ಚಿಂತಾಜನಕವಾಗಿದ್ದರೂ ಇತ್ತ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪೂರ್ಣ ಪರಿಸ್ಥಿತಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು.</p><p>ಸಭೆಯ ಉದ್ದಕ್ಕೂ ಅತ್ಯಂತ ಶಾಂತ, ಸ್ಥಿತಪ್ರಜ್ಞರಾಗಿದ್ದರು. ನಂತರದ ದುರಂತ ಎಲ್ಲರಿಗೂ ತಿಳಿದಿದೆ. ಶನಿವಾರ ಬೆಳಿಗ್ಗೆ, ರಾಕೇಶ್ ನಿಧನರಾದರು ಎಂಬ ಹೃದಯವಿದ್ರಾವಕ ಸುದ್ದಿ ನಮಗೆ ತಲುಪಿತು. ಮುಖ್ಯಮಂತ್ರಿಗಳು ತಮ್ಮ ಮಗನ ಪಾರ್ಥಿವ ಶರೀರದೊಂದಿಗೆ ತಕ್ಷಣ ಮೈಸೂರಿಗೆ ಮರಳಲು ಉತ್ಸುಕರಾಗಿದ್ದರು. ವಿಶೇಷ ವಿಮಾನ ವ್ಯವಸ್ಥೆ ಮಾಡಲು ಹೇಳಿದರೆ ಬೇಡ ವಿಳಂಬವಾದರೂ ವಾಣಿಜ್ಯ ವಿಮಾನದಲ್ಲೇ ಹೋಗೋಣ ಎಂದು ಹೇಳಿದರು.</p><p>ನಂತರ ಮೃತದೇಹದ ಸಾಗಣೆ ಸವಾಲು ಎದುರಾಯಿತು. ವಾರಾಂತ್ಯವಾಗಿದ್ದರಿಂದ ಆಸ್ಪತ್ರೆಯಿಂದ ದೇಹವನ್ನು ಪಡೆಯುವುದುವುದು ಮತ್ತು ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದು ಸುಲಭವಾಗಿರಲಿಲ್ಲ. ಬೆಲ್ಜಿಯಂನ ಭಾರತೀಯ ರಾಯಭಾರಿ ನಮಗೆ ನೆರವು ನೀಡಿದರು ಎಂದು ವಿವರಿಸಿದ್ದಾರೆ. ನಂತರ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮುಖ್ಯಮಂತ್ರಿಗೆ ವೈಯಕ್ತಿಕವಾಗಿ ಕರೆ ಮಾಡಿ ತಮ್ಮ ಸಂತಾಪ ಸೂಚಿಸಿದ್ದರು. ಎಲ್ಲ ರೀತಿಯ ಬೆಂಬಲ ನೀಡುವ ಭರವಸೆ ನೀಡಿದ್ದರು. ಆರ್.ವಿ. ದೇಶಪಾಂಡೆ ಅವರು ಜೆಟ್ ಏರ್ವೇಸ್ನ ಅಧ್ಯಕ್ಷ ನರೇಶ್ ಗೋಯಲ್ ಅವರೊಂದಿಗೆ ಸಂಪರ್ಕ ಕಲ್ಪಿಸಿದರು. ಪ್ರಯಾಣದ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ನಮಗೆ ಸಹಾಯ ಮಾಡಲು ಆಮ್ಸ್ಟರ್ ಡ್ಯಾಮ್ನ ಹಿರಿಯ ಕಾರ್ಯನಿರ್ವಾಹಕರನ್ನು ನಿಯೋಜಿಸಿದರು. ಈ ಅನುಭವವು ಸಿದ್ದರಾಮಯ್ಯ ಅವರು ಎದುರಿಸಿದ ವೈಯಕ್ತಿಕ ದುರಂತವನ್ನು ಮಾತ್ರವಲ್ಲದೆ ಅವರ ಘನತೆಯನ್ನೂ ನಮಗೆ ಪರಿಚಯಿಸಿತು ಎಂದಿದ್ದಾರೆ.</p><h2>ಮಗನ ಸಾವಿನ ನೋವಲ್ಲೂ ಸ್ವಲ್ಪ ಸಮಯದಲ್ಲೇ ಕೆಲಸಕ್ಕೆ ಹಾಜರು</h2><p>ಸಿದ್ದರಾಮಯ್ಯನವರ ವಿಚಾರದಲ್ಲಿ ಅತ್ಯಂತ ಮೆಚ್ಚುಗೆಯಾದ ವಿಷಯವೇನೆಂದರೆ, ಮಗನ ಸಾವಿನ ನಂತರ ಸ್ವಲ್ಪ ಸಮಯದಲ್ಲೇ ಸಿದ್ದರಾಮಯ್ಯ ಕಚೇರಿಗೆ ಬಂದು ಕೆಲಸದಲ್ಲಿ ತೊಡಗಿಸಿಕೊಂಡರು. ನಂತರದ ಎರಡು ವರ್ಷ ಅತ್ಯಂತ ಬದ್ಧತೆಯ ಮತ್ತು ಉತ್ಸಾಹಭರಿತ ಮುಖ್ಯಮಂತ್ರಿಯನ್ನು ಕಂಡಿದ್ದೇವೆ. ವೈಯಕ್ತಿಕ ನೋವು ಅವರ ಕೆಲಸಕ್ಕೆ ಅಡ್ಡಿಬರಲಿಲ್ಲ.</p><h2>ಸೂಕ್ಷ್ಮವಾಗಿ ಬಜೆಟ್ ಪರಿಶೀಲನೆ</h2><p>ಸಿದ್ದರಾಮಯ್ಯ ವಿಚಾರದಲ್ಲಿ ಮತ್ತೊಂದು ಹೇಳಲೇಬೇಕಾದ ವಿಚಾರವೆಂದರೆ, ವಾರ್ಷಿಕ ಬಜೆಟ್ ಬಗೆಗಿನ ಗಾಂಭೀರ್ಯ. ಪ್ರತಿ ಇಲಾಖೆಯ ಪ್ರಸ್ತಾವನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ಅವರು, ನೀತಿ ನಿರ್ಣಯಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಪ್ರಮುಖ ಘೋಷಣೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದರು. ಬಜೆಟ್ ಭಾಷಣವು ಅವರಿಗೆ ಕೇವಲ ರಾಜಕೀಯ ದಾಖಲಾತಿಗಳಾಗಿರಲಿಲ್ಲ. ಪ್ರತಿಯೊಂದು ಸಾಲನ್ನೂ ಒಂದಕ್ಕಿಂತ ಅಧಿಕ ಬಾರಿ ಓದುತ್ತಿದ್ದರು. ತಪ್ಪು ಸರಿಪಡಿಸುವಿಕೆಗೆ ಸೂಚಿಸುತ್ತಿದ್ದರು. ಬಜೆಟ್ ಚರ್ಚೆ ವೇಳೆ ತಾವು ಜನರು, ಶಾಸಕರನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ಅವರ ನಿರೀಕ್ಷೆ ಪೂರೈಸಬೇಕೆಂದು ಹೇಳುತ್ತಿದ್ದರು. ಪ್ರಣಾಳಿಕೆ ಪರಿಶೀಲನೆ ನಡೆಸಿ ಹಿಂದಿನ ಬಜೆಟ್ನಲ್ಲಿ ಏನೆಲ್ಲ ಆಗಿದೆ. ಮುಂದಿನ ಬಜೆಟ್ನಲ್ಲಿ ಏನು ಆಗಬೇಕು ಎಂದು ಸೂಚಿಸುತ್ತಿದ್ದರು.</p><p> ಅವರ ನೆನಪಿನ ಶಕ್ತಿ ಅದ್ಬುತವಾಗಿತ್ತು. ನಾವು ಅಂದಾಜು ಲೆಕ್ಕದಲ್ಲಿ ಹೇಳಿದರೆ ಅವರು ಯೋಜನೆಯ ಸಂಪೂರ್ಣ ಮೊತ್ತವನ್ನು ಮುಂದಿಡುತ್ತಿದ್ದರು. ಸರ್ ವಿ ಡೋಂಟ್ ಲೈಕ್ ಯೂ.. ನಾವು ಅಂದಾಜು ಲೆಕ್ಕ ಕೊಟ್ಟರೆ ನೀವು ಒಂದಂಕಿಯೂ ಬಿಡದೇ ಜ್ಞಾಪಕ ಇಟ್ಟುಕೊಡಿರುತ್ತೀರಿ ಎಂದು ನಾವು ತಮಾಷೆ ಮಾಡುತ್ತಿದ್ದೆವು. ಆಗ ಅವರು ಜೋರಾಗಿ ನಗುತ್ತಿದ್ದರು ಎಂದು ಹಣಕಾಸು ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಹೇಳಿದ್ದಾರೆ.</p> .ಸಿದ್ದರಾಮಯ್ಯ ಸಂಪುಟದಲ್ಲಿದ್ದ 20 ಸಚಿವರಿಗೆ ಕೊಕ್; ಹೇಗಿರಲಿದೆ ಡಿಕೆಶಿ ಸಂಪುಟ?.ಡಿಕೆಶಿ ಒಂದು ಬಾರಿಯ ಸಿಎಂ ಅಲ್ಲ, ದೀರ್ಘಾವಧಿ ಅಧಿಕಾರದಲ್ಲಿರುತ್ತಾರೆ: ಜ್ಯೋತಿಷಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>