<p><strong>ನವದೆಹಲಿ/ಬೆಂಗಳೂರು:</strong> ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ನಾಯಕತ್ವ ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.</p>.<p>ದೆಹಲಿಯಲ್ಲಿ ಇಡೀ ದಿನ ನಡೆದ ಸರಣಿ ಸಭೆಯ ಬಳಿಕ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿತು ಎಂದು ಗೊತ್ತಾಗಿದೆ. ರಾತ್ರಿ ಎಂಟೂವರೆಗೆ ವಿಶೇಷ ವಿಮಾನದಲ್ಲಿ ಹೊರಟ ಸಿದ್ದರಾಮಯ್ಯ ಅವರು 11ರ ಸುಮಾರಿಗೆ ಬೆಂಗಳೂರಿಗೆ ತಲುಪಿದರು. ಬುಧವಾರ (ಮೇ 27) ಅಥವಾ ಒಂದೆರಡು ದಿನಗಳಲ್ಲಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಂಭವ ಇದೆ ಎಂದು ಗೊತ್ತಾಗಿದೆ. </p>.<p>ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಒಪ್ಪಂದವಾಗಿತ್ತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡಿದ್ದವು. ಅಧಿಕಾರಕ್ಕೆ ತ್ಯಾಗಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ತಮ್ಮದೇ ಚಾಣಾಕ್ಷ ನಡೆಯಿಂದ ತಮ್ಮ ಅಧಿಕಾರ ಅವಧಿಯನ್ನು ವಿಸ್ತರಿಸಿಕೊಂಡು ಬಂದಿದ್ದರು. ಕೊನೆಗೂ ಅವರನ್ನು ಕುರ್ಚಿಯಿಂದ ಇಳಿಸಲು ಹಾಗೂ ಪಕ್ಷ ಕಷ್ಟದಲ್ಲಿದ್ದಾಗ ಆಸರೆಯಾಗಿ ನಿಂತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧರಿಸಿದೆ.</p>.<p>ಹಾಗಿದ್ದರೂ, ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಿದ ಬಳಿಕ ನಡೆಯಬಹುದಾದ ರಾಜಕೀಯ ವಿದ್ಯಮಾನ ಹಾಗೂ ಸ್ಥಿತ್ಯಂತರಗಳು ಸರ್ಕಾರದ ಮುಂದಿನ ನಾಯಕತ್ವ ಯಾರದ್ದು ಎಂಬುದನ್ನು ನಿರ್ಧರಿಸುವ ಸಾಧ್ಯತೆಯೂ ಇದೆ. </p>.<p><strong>ದಿಢೀರ್ ಬೆಳವಣಿಗೆ:</strong> ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ 20ಕ್ಕೆ ಮೂರು ವರ್ಷ ಪೂರೈಸಿದೆ. ಈ ಬೆನ್ನಲ್ಲೇ, ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಮಂಗಳವಾರ ದೆಹಲಿಗೆ ಕರೆಯಿಸಿಕೊಂಡಿದ್ದರು. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ, ರಾಜ್ಯಸಭೆ ಹಾಗೂ ಪರಿಷತ್ತಿನ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯ ಚರ್ಚೆಯ ನಡೆಯಬಹುದು ಎಂದೂ ಹೇಳಲಾಗಿತ್ತು.</p>.<p>ಸಿದ್ದರಾಮಯ್ಯ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆ ನಡೆಸಿದರು. </p>.<p>ಬಳಿಕ ಸಿದ್ದರಾಮಯ್ಯ ಅವರ ಜತೆಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪಿಸಿದ ರಾಹುಲ್, ನೀವೇ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ‘ನಾನೇನು ತೀರ್ಮಾನ ತೆಗೆದುಕೊಳ್ಳುವುದಿಲ್ಲ; ನೀವು ಸೂಚಿಸಿದಂತೆ ನಡೆದುಕೊಳ್ಳುವೆ’ ಎಂದು ಸಿದ್ದರಾಮಯ್ಯ ಹೇಳಿದರು ಎಂದು ಗೊತ್ತಾಗಿದೆ.</p>.<p>ಬಳಿಕ, ಪಕ್ಷದ ವರಿಷ್ಠೆ ಹಾಗೂ ತಮ್ಮ ತಾಯಿ ಸೋನಿಯಾಗಾಂಧಿ ಅವರ ಮನೆಗೆ ತೆರಳಿದ ರಾಹುಲ್ ಅವರ ಜತೆ ಸಮಾಲೋಚನೆ ನಡೆಸಿದರು. ಮಧ್ಯಾಹ್ನದ ಭೋಜನದ ಬಳಿಕ ಮತ್ತೆ ಇಂದಿರಾ ಭವನದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಹುಲ್, ರಾಜೀನಾಮೆ ಕೊಡುವಂತೆ ಸೂಚಿಸಿದರು. ಈ ವೇಳೆ, ‘ನೀವು ಸೂಚಿಸಿದಂತೆ ನಡೆದುಕೊಳ್ಳುವೆ, ಮುಂದೆ ಯಾರನ್ನು ಕೂರಿಸುತ್ತೀರಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.</p>.<h2><strong>ಮುಂದಿನ ನಡೆ ಏನು, ಎತ್ತ?</strong></h2><p>ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗುತ್ತದೆ.</p><p>ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದಂತೆ ಡಿ.ಕೆ. ಶಿವಕುಮಾರ್ ಅವರೇ ಉತ್ತರಾಧಿಕಾರಿ ಆಗಬಹುದಾದರೂ ಅದಕ್ಕೆ ಶಾಸಕರ ಬಹುಮತ ಅಗತ್ಯ. ವಾಡಿಕೆಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು, ಅಲ್ಲಿ ನಾಯಕನನ್ನು ಆಯ್ಕೆ ಮಾಡಬೇಕು. ಬಳಿಕ ಅಗತ್ಯ ಸಂಖ್ಯಾಬಲದ ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ, ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಬೇಕು.</p><p>ಹೈಕಮಾಂಡ್ ಸೂಚನೆಯಂತೆ ಶಾಸಕರೆಲ್ಲರೂ ಶಿವಕುಮಾರ್ ಅವರ ನಾಯಕತ್ವ ಬೆಂಬಲಿಸಬಹುದು. ಅದು ಕಾಂಗ್ರೆಸ್ನಲ್ಲಿ ಸಂಪ್ರದಾಯ. ಆದರೆ, ಶಾಸಕಾಂಗ ಪಕ್ಷದ ಸಭೆಯಲ್ಲೇ ಮತದಾನದ ಮೂಲಕ ನಾಯಕನ ಆಯ್ಕೆಯಾಗಲಿ ಎಂದು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಪಟ್ಟು ಹಿಡಿದರೆ, ಆಗ ಆ ಪ್ರಕ್ರಿಯೆಯನ್ನು ನಡೆಸಲೇಬೇಕಾಗುತ್ತದೆ.</p>.<h2>ಸಿ.ಎಂ ಗಂಭೀರ–ಡಿ.ಸಿ.ಎಂ ಹಸನ್ಮುಖ</h2><p>ಸಭೆ ಮುಗಿಸಿ ಹೊರ ಬಂದಾಗ ಸಿದ್ದರಾಮಯ್ಯ ಗಂಭೀರವಾಗಿದ್ದರು. ಶಿವಕುಮಾರ್ ಅವರು ನಗುನಗುತ್ತಾ ಹೊರಬಂದರು. ಮಾಧ್ಯಮಗಳ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಒಂದು ಸಾಲಿನ ಉತ್ತರ ನೀಡಿದರು. ಆ ಬಳಿಕ ಇಂಧನ ಸಚಿವ ಕೆ.ಜೆ.ಜಾರ್ಜ್ ನಿವಾಸಕ್ಕೆ ತೆರಳಿ ಆಪ್ತ ಸಚಿವರೊಂದಿಗೆ ಸಮಾಲೋಚಿಸಿದರು. ನಂತರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು. ಈ ನಡುವೆ, ಮುಖ್ಯಮಂತ್ರಿ ಬಣದ ನಾಯಕರು ಮೌನಕ್ಕೆ ಶರಣಾದರು.</p><p>ಸಭೆಯ ಬಳಿಕ ಶಿವಕುಮಾರ್ ಅವರು ಕರ್ನಾಟಕ ಭವನಕ್ಕೆ ಬಂದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಭವನದಲ್ಲಿರುವ ಮುಖ್ಯಮಂತ್ರಿ ಸ್ವೀಟ್ಗೆ ತೆರಳುವಾಗ ಲಿಫ್ಟ್ನಲ್ಲಿ ವಿಜಯದ ಸಂಕೇತ ತೋರಿದರು. ಸಹೋದರ ಡಿ.ಕೆ. ಸುರೇಶ್, ಆಪ್ತ ಶಾಸಕರು ಹಾಗೂ ಮುಖಂಡರು ಶಿವಕುಮಾರ್ ಅವರ ಜತೆಗೂಡಿದರು. ಶಿವಕುಮಾರ್ ಸ್ವಲ್ಪ ಕಾಲ ಅನ್ಯಮನಸ್ಕರಾಗಿದ್ದರು. ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಸುತ್ತಮುತ್ತ ಕಾಣಿಸಿಕೊಂಡಿದ್ದ ನಾಯಕರೆಲ್ಲ ಶಿವಕುಮಾರ್ ಅವರನ್ನು ಕಾಣಲು ಬಂದರು. ಆ ಬಳಿಕ ಶಿವಕುಮಾರ್ ಅವರ ಖದರು ಬದಲಾಯಿತು. ನಾಯಕರೊಂದಿಗೆ ಉಲ್ಲಾಸದಿಂದ ಹಾಗೂ ಆಪ್ತವಾಗಿ ಮಾತನಾಡಿದರು. 40 ವರ್ಷಗಳ ಹಿಂದೆ ಪಕ್ಷ ಸಂಘಟನೆಯಲ್ಲಿ ಭಾಗಿಯಾದ ಹಳೆಯ ಚಿತ್ರಗಳನ್ನು ನಾಯಕರಿಗೆ ತೋರಿಸಿ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ಬೆಂಗಳೂರು:</strong> ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ನಾಯಕತ್ವ ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.</p>.<p>ದೆಹಲಿಯಲ್ಲಿ ಇಡೀ ದಿನ ನಡೆದ ಸರಣಿ ಸಭೆಯ ಬಳಿಕ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿತು ಎಂದು ಗೊತ್ತಾಗಿದೆ. ರಾತ್ರಿ ಎಂಟೂವರೆಗೆ ವಿಶೇಷ ವಿಮಾನದಲ್ಲಿ ಹೊರಟ ಸಿದ್ದರಾಮಯ್ಯ ಅವರು 11ರ ಸುಮಾರಿಗೆ ಬೆಂಗಳೂರಿಗೆ ತಲುಪಿದರು. ಬುಧವಾರ (ಮೇ 27) ಅಥವಾ ಒಂದೆರಡು ದಿನಗಳಲ್ಲಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಂಭವ ಇದೆ ಎಂದು ಗೊತ್ತಾಗಿದೆ. </p>.<p>ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಒಪ್ಪಂದವಾಗಿತ್ತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡಿದ್ದವು. ಅಧಿಕಾರಕ್ಕೆ ತ್ಯಾಗಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ತಮ್ಮದೇ ಚಾಣಾಕ್ಷ ನಡೆಯಿಂದ ತಮ್ಮ ಅಧಿಕಾರ ಅವಧಿಯನ್ನು ವಿಸ್ತರಿಸಿಕೊಂಡು ಬಂದಿದ್ದರು. ಕೊನೆಗೂ ಅವರನ್ನು ಕುರ್ಚಿಯಿಂದ ಇಳಿಸಲು ಹಾಗೂ ಪಕ್ಷ ಕಷ್ಟದಲ್ಲಿದ್ದಾಗ ಆಸರೆಯಾಗಿ ನಿಂತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧರಿಸಿದೆ.</p>.<p>ಹಾಗಿದ್ದರೂ, ಸಿದ್ದರಾಮಯ್ಯ ಅವರು ಪದತ್ಯಾಗ ಮಾಡಿದ ಬಳಿಕ ನಡೆಯಬಹುದಾದ ರಾಜಕೀಯ ವಿದ್ಯಮಾನ ಹಾಗೂ ಸ್ಥಿತ್ಯಂತರಗಳು ಸರ್ಕಾರದ ಮುಂದಿನ ನಾಯಕತ್ವ ಯಾರದ್ದು ಎಂಬುದನ್ನು ನಿರ್ಧರಿಸುವ ಸಾಧ್ಯತೆಯೂ ಇದೆ. </p>.<p><strong>ದಿಢೀರ್ ಬೆಳವಣಿಗೆ:</strong> ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ 20ಕ್ಕೆ ಮೂರು ವರ್ಷ ಪೂರೈಸಿದೆ. ಈ ಬೆನ್ನಲ್ಲೇ, ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಮಂಗಳವಾರ ದೆಹಲಿಗೆ ಕರೆಯಿಸಿಕೊಂಡಿದ್ದರು. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ, ರಾಜ್ಯಸಭೆ ಹಾಗೂ ಪರಿಷತ್ತಿನ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆಯ ಚರ್ಚೆಯ ನಡೆಯಬಹುದು ಎಂದೂ ಹೇಳಲಾಗಿತ್ತು.</p>.<p>ಸಿದ್ದರಾಮಯ್ಯ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆ ನಡೆಸಿದರು. </p>.<p>ಬಳಿಕ ಸಿದ್ದರಾಮಯ್ಯ ಅವರ ಜತೆಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪಿಸಿದ ರಾಹುಲ್, ನೀವೇ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ‘ನಾನೇನು ತೀರ್ಮಾನ ತೆಗೆದುಕೊಳ್ಳುವುದಿಲ್ಲ; ನೀವು ಸೂಚಿಸಿದಂತೆ ನಡೆದುಕೊಳ್ಳುವೆ’ ಎಂದು ಸಿದ್ದರಾಮಯ್ಯ ಹೇಳಿದರು ಎಂದು ಗೊತ್ತಾಗಿದೆ.</p>.<p>ಬಳಿಕ, ಪಕ್ಷದ ವರಿಷ್ಠೆ ಹಾಗೂ ತಮ್ಮ ತಾಯಿ ಸೋನಿಯಾಗಾಂಧಿ ಅವರ ಮನೆಗೆ ತೆರಳಿದ ರಾಹುಲ್ ಅವರ ಜತೆ ಸಮಾಲೋಚನೆ ನಡೆಸಿದರು. ಮಧ್ಯಾಹ್ನದ ಭೋಜನದ ಬಳಿಕ ಮತ್ತೆ ಇಂದಿರಾ ಭವನದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಹುಲ್, ರಾಜೀನಾಮೆ ಕೊಡುವಂತೆ ಸೂಚಿಸಿದರು. ಈ ವೇಳೆ, ‘ನೀವು ಸೂಚಿಸಿದಂತೆ ನಡೆದುಕೊಳ್ಳುವೆ, ಮುಂದೆ ಯಾರನ್ನು ಕೂರಿಸುತ್ತೀರಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.</p>.<h2><strong>ಮುಂದಿನ ನಡೆ ಏನು, ಎತ್ತ?</strong></h2><p>ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗುತ್ತದೆ.</p><p>ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದಂತೆ ಡಿ.ಕೆ. ಶಿವಕುಮಾರ್ ಅವರೇ ಉತ್ತರಾಧಿಕಾರಿ ಆಗಬಹುದಾದರೂ ಅದಕ್ಕೆ ಶಾಸಕರ ಬಹುಮತ ಅಗತ್ಯ. ವಾಡಿಕೆಯಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು, ಅಲ್ಲಿ ನಾಯಕನನ್ನು ಆಯ್ಕೆ ಮಾಡಬೇಕು. ಬಳಿಕ ಅಗತ್ಯ ಸಂಖ್ಯಾಬಲದ ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ, ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಬೇಕು.</p><p>ಹೈಕಮಾಂಡ್ ಸೂಚನೆಯಂತೆ ಶಾಸಕರೆಲ್ಲರೂ ಶಿವಕುಮಾರ್ ಅವರ ನಾಯಕತ್ವ ಬೆಂಬಲಿಸಬಹುದು. ಅದು ಕಾಂಗ್ರೆಸ್ನಲ್ಲಿ ಸಂಪ್ರದಾಯ. ಆದರೆ, ಶಾಸಕಾಂಗ ಪಕ್ಷದ ಸಭೆಯಲ್ಲೇ ಮತದಾನದ ಮೂಲಕ ನಾಯಕನ ಆಯ್ಕೆಯಾಗಲಿ ಎಂದು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಪಟ್ಟು ಹಿಡಿದರೆ, ಆಗ ಆ ಪ್ರಕ್ರಿಯೆಯನ್ನು ನಡೆಸಲೇಬೇಕಾಗುತ್ತದೆ.</p>.<h2>ಸಿ.ಎಂ ಗಂಭೀರ–ಡಿ.ಸಿ.ಎಂ ಹಸನ್ಮುಖ</h2><p>ಸಭೆ ಮುಗಿಸಿ ಹೊರ ಬಂದಾಗ ಸಿದ್ದರಾಮಯ್ಯ ಗಂಭೀರವಾಗಿದ್ದರು. ಶಿವಕುಮಾರ್ ಅವರು ನಗುನಗುತ್ತಾ ಹೊರಬಂದರು. ಮಾಧ್ಯಮಗಳ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಒಂದು ಸಾಲಿನ ಉತ್ತರ ನೀಡಿದರು. ಆ ಬಳಿಕ ಇಂಧನ ಸಚಿವ ಕೆ.ಜೆ.ಜಾರ್ಜ್ ನಿವಾಸಕ್ಕೆ ತೆರಳಿ ಆಪ್ತ ಸಚಿವರೊಂದಿಗೆ ಸಮಾಲೋಚಿಸಿದರು. ನಂತರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ನಿರ್ಗಮಿಸಿದರು. ಈ ನಡುವೆ, ಮುಖ್ಯಮಂತ್ರಿ ಬಣದ ನಾಯಕರು ಮೌನಕ್ಕೆ ಶರಣಾದರು.</p><p>ಸಭೆಯ ಬಳಿಕ ಶಿವಕುಮಾರ್ ಅವರು ಕರ್ನಾಟಕ ಭವನಕ್ಕೆ ಬಂದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಭವನದಲ್ಲಿರುವ ಮುಖ್ಯಮಂತ್ರಿ ಸ್ವೀಟ್ಗೆ ತೆರಳುವಾಗ ಲಿಫ್ಟ್ನಲ್ಲಿ ವಿಜಯದ ಸಂಕೇತ ತೋರಿದರು. ಸಹೋದರ ಡಿ.ಕೆ. ಸುರೇಶ್, ಆಪ್ತ ಶಾಸಕರು ಹಾಗೂ ಮುಖಂಡರು ಶಿವಕುಮಾರ್ ಅವರ ಜತೆಗೂಡಿದರು. ಶಿವಕುಮಾರ್ ಸ್ವಲ್ಪ ಕಾಲ ಅನ್ಯಮನಸ್ಕರಾಗಿದ್ದರು. ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಸುತ್ತಮುತ್ತ ಕಾಣಿಸಿಕೊಂಡಿದ್ದ ನಾಯಕರೆಲ್ಲ ಶಿವಕುಮಾರ್ ಅವರನ್ನು ಕಾಣಲು ಬಂದರು. ಆ ಬಳಿಕ ಶಿವಕುಮಾರ್ ಅವರ ಖದರು ಬದಲಾಯಿತು. ನಾಯಕರೊಂದಿಗೆ ಉಲ್ಲಾಸದಿಂದ ಹಾಗೂ ಆಪ್ತವಾಗಿ ಮಾತನಾಡಿದರು. 40 ವರ್ಷಗಳ ಹಿಂದೆ ಪಕ್ಷ ಸಂಘಟನೆಯಲ್ಲಿ ಭಾಗಿಯಾದ ಹಳೆಯ ಚಿತ್ರಗಳನ್ನು ನಾಯಕರಿಗೆ ತೋರಿಸಿ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>