<p><strong>ಬೆಂಗಳೂರು</strong>: ಕರ್ನಾಟಕದ ಸುದೀರ್ಘ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟು ಇಳಿದಿದ್ದಾರೆ.</p><p>ಆದರೆ, ಸಿದ್ದರಾಮಯ್ಯ ಅವರ ಈ ವಿದಾಯದ ಹಿಂದೆ ಹೈಕಮಾಂಡ್ಗೆ ಒಂದು ಸ್ಪಷ್ಟ ಸಂದೇಶ ಹೋಗಿದೆ ಎನ್ನಲಾಗುತ್ತಿದ್ದು ಸಿದ್ದರಾಮಯ್ಯ ಅವರು ಮೌನವಾಗಿದ್ದೇ ಎಲ್ಲ ಸಂದೇಶವನ್ನು ರವಾನಿಸಿದ್ದಾರೆ.</p><p>2019 ರಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕುರ್ಚಿ ಬಿಟ್ಟು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಜಾಗ ಕಲ್ಪಿಸಿತ್ತು.</p><p>ಆಗ, ಯಡಿಯೂರಪ್ಪ ಪರ ಹಲವು ಮಠಾಧೀಶರು ಬಿಜೆಪಿ ಮೇಲೆ ಹೈಕಮಾಂಡ್ ಒತ್ತಡ ಹಾಕಲು ಪ್ರತಿಭಟನೆಗಳು, ಪತ್ರಗಳು, ಪತ್ರಿಕಾಗೋಷ್ಠಿಗಳು ನಡೆದು ಅದೊಂದು ದೊಡ್ಡ ಪ್ರಹಸನದ ರೀತಿ ನಡೆದು ಹೋಯಿತು.</p><p>ಆದರೆ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಸಮಚಿತ್ತದಿಂದ ಸ್ವೀಕರಿಸಿದರು. ಅದಾಗ್ಯೂ ಕೆಲವರು ಸಿದ್ದು ಪರ ಅಲ್ಲಲ್ಲಿ ಪ್ರತಿಭಟನೆಗಳನ್ನು ಕೈಗೊಂಡರಾದರೂ ಹಲವು ಒಬಿಸಿ ಮಠಾಧೀಶರು ಧಾರ್ಮಿಕ ನಾಯಕರಾರು ಬಹಿರಂಗವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹೋಗಲಿಲ್ಲ.</p><p>ಆದರೆ, ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ಹೈಕಮಾಂಡ್ ಮೇಲಿನ ಅಸಮಾಧಾನ ಸೂಚ್ಯವಾಗಿ ವ್ಯಕ್ತವಾಗುವಂತೆ ನೋಡಿಕೊಂಡರು. ಹೈಕಮಾಂಡ್ಗೆ ಯಾವ ಸಂದೇಶ ಹೋಗಬೇಕೋ ಆ ಸಂದೇಶ ಹೋಗುವಂತೆ ನೋಡಿಕೊಂಡರು. ಹಾಗೆಯೇ ತಾವು ಕೊಟ್ಟ ಮಾತಿಗೆ ನಡೆದುಕೊಂಡು ವಚನ ಪಾಲಕ ಎಂಬುದನ್ನೂ ಸಾರಿದರು. ಇದು ರಾಜಕೀಯ ಮುತ್ಸದ್ಧಿಯೊಬ್ಬರ ಜಾಣ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ರಾಜ್ಯಸಭೆ ಸೇರಿದಂತೆ ಹಲವು ಆಫರ್ಗಳನ್ನು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿದೆಯಾದರೂ ಸಿದ್ದರಾಮಯ್ಯ ಅವರು ಅವುಗಳಿಗೆ ಯಾವ ಪ್ರತಿಕ್ರಿಯೆ ಕೊಡಬೇಕು ಅದನ್ನು ಕೊಟ್ಟು ಆಗಿದೆ. ಹೀಗಾಗಿ ಒಬ್ಬ ಒಬಿಸಿ ನಾಯಕನನ್ನು ಕಡೆಗಣಿಸಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ರಾಜಕೀಯ ಮಾಡುವುದು ಕಷ್ಟ ಎಂಬುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂಬುದು ಸದ್ಯದ ರಾಜಕೀಯ ಪಡಸಾಲೆಯಲ್ಲಿನ ಚರ್ಚೆ.</p>.ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಆಸೆ ನೆರವೇರಲಿಲ್ಲ .ಸಿದ್ದರಾಮಯ್ಯ ರಾಜೀನಾಮೆ; ಸಚಿವಾಕಾಂಕ್ಷಿಗಳಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕದ ಸುದೀರ್ಘ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟು ಇಳಿದಿದ್ದಾರೆ.</p><p>ಆದರೆ, ಸಿದ್ದರಾಮಯ್ಯ ಅವರ ಈ ವಿದಾಯದ ಹಿಂದೆ ಹೈಕಮಾಂಡ್ಗೆ ಒಂದು ಸ್ಪಷ್ಟ ಸಂದೇಶ ಹೋಗಿದೆ ಎನ್ನಲಾಗುತ್ತಿದ್ದು ಸಿದ್ದರಾಮಯ್ಯ ಅವರು ಮೌನವಾಗಿದ್ದೇ ಎಲ್ಲ ಸಂದೇಶವನ್ನು ರವಾನಿಸಿದ್ದಾರೆ.</p><p>2019 ರಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕುರ್ಚಿ ಬಿಟ್ಟು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಜಾಗ ಕಲ್ಪಿಸಿತ್ತು.</p><p>ಆಗ, ಯಡಿಯೂರಪ್ಪ ಪರ ಹಲವು ಮಠಾಧೀಶರು ಬಿಜೆಪಿ ಮೇಲೆ ಹೈಕಮಾಂಡ್ ಒತ್ತಡ ಹಾಕಲು ಪ್ರತಿಭಟನೆಗಳು, ಪತ್ರಗಳು, ಪತ್ರಿಕಾಗೋಷ್ಠಿಗಳು ನಡೆದು ಅದೊಂದು ದೊಡ್ಡ ಪ್ರಹಸನದ ರೀತಿ ನಡೆದು ಹೋಯಿತು.</p><p>ಆದರೆ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ಸಮಚಿತ್ತದಿಂದ ಸ್ವೀಕರಿಸಿದರು. ಅದಾಗ್ಯೂ ಕೆಲವರು ಸಿದ್ದು ಪರ ಅಲ್ಲಲ್ಲಿ ಪ್ರತಿಭಟನೆಗಳನ್ನು ಕೈಗೊಂಡರಾದರೂ ಹಲವು ಒಬಿಸಿ ಮಠಾಧೀಶರು ಧಾರ್ಮಿಕ ನಾಯಕರಾರು ಬಹಿರಂಗವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹೋಗಲಿಲ್ಲ.</p><p>ಆದರೆ, ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ಹೈಕಮಾಂಡ್ ಮೇಲಿನ ಅಸಮಾಧಾನ ಸೂಚ್ಯವಾಗಿ ವ್ಯಕ್ತವಾಗುವಂತೆ ನೋಡಿಕೊಂಡರು. ಹೈಕಮಾಂಡ್ಗೆ ಯಾವ ಸಂದೇಶ ಹೋಗಬೇಕೋ ಆ ಸಂದೇಶ ಹೋಗುವಂತೆ ನೋಡಿಕೊಂಡರು. ಹಾಗೆಯೇ ತಾವು ಕೊಟ್ಟ ಮಾತಿಗೆ ನಡೆದುಕೊಂಡು ವಚನ ಪಾಲಕ ಎಂಬುದನ್ನೂ ಸಾರಿದರು. ಇದು ರಾಜಕೀಯ ಮುತ್ಸದ್ಧಿಯೊಬ್ಬರ ಜಾಣ ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.</p><p>ರಾಜ್ಯಸಭೆ ಸೇರಿದಂತೆ ಹಲವು ಆಫರ್ಗಳನ್ನು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿದೆಯಾದರೂ ಸಿದ್ದರಾಮಯ್ಯ ಅವರು ಅವುಗಳಿಗೆ ಯಾವ ಪ್ರತಿಕ್ರಿಯೆ ಕೊಡಬೇಕು ಅದನ್ನು ಕೊಟ್ಟು ಆಗಿದೆ. ಹೀಗಾಗಿ ಒಬ್ಬ ಒಬಿಸಿ ನಾಯಕನನ್ನು ಕಡೆಗಣಿಸಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ರಾಜಕೀಯ ಮಾಡುವುದು ಕಷ್ಟ ಎಂಬುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂಬುದು ಸದ್ಯದ ರಾಜಕೀಯ ಪಡಸಾಲೆಯಲ್ಲಿನ ಚರ್ಚೆ.</p>.ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಆಸೆ ನೆರವೇರಲಿಲ್ಲ .ಸಿದ್ದರಾಮಯ್ಯ ರಾಜೀನಾಮೆ; ಸಚಿವಾಕಾಂಕ್ಷಿಗಳಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>