<p>ರಾಜ್ಯವನ್ನಾಳಿದ ದೀರ್ಘಾವಧಿಯ ಸಿಎಂ ಎಂಬ ಹೆಗ್ಗಳಿಕೆ ಹೊಂದಿರುವ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯನವರ ಆಡಳಿತದ ಯುಗಾಂತ್ಯವಾಗಿದೆ. ಹೋರಾಟದ ಮೂಲಕ ರಾಜಕೀಯದ ಪ್ರತಿಯೊಂದು ಮೆಟ್ಟಿಲನ್ನು ಏರಿದ್ದ ಸಿದ್ದರಾಮಯ್ಯ ಈಗ ಪದತ್ಯಾಗಕ್ಕೆ ಮುಂದಾಗಿದ್ದಾರೆ.</p> <h2>ಮಗ ರಾಜನಾಗುವ ಕನಸು ಕಂಡಿದ್ದ ತಾಯಿ </h2><h2></h2><p>ಸಿದ್ದರಾಮಯ್ಯನವರ ತಾಯಿ ಬೋರಮ್ಮ ಅವರಿಗೆ ಅವರ 5ನೇ ಮಗ ರಾಜನಾಗುತ್ತಾನೆ ಎಂಬ ಕನಸು ಬಿದ್ದಿತ್ತಂತೆ. – ತಮ್ಮ 5ನೇ ಮಗನಾದ ಸಿದ್ದರಾಮಯ್ಯ ರಾಜನಾಗುತ್ತಾನೆ ಎಂಬ ಕನಸು ಬೋರಮ್ಮ ಅವರಿಗೆ ಬಿದ್ದಿತ್ತಂತೆ. ಅದನ್ನು ಎರಡು ಬಾರಿ ನಿಜವಾಗಿಸಿದ್ದ ಸಿದ್ದರಾಮಯ್ಯ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಪೂರ್ಣಾವಧಿ ಮತ್ತು 2023ರಿಂದ ಮೂರು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಡಿ. ದೇವರಾಜ ಅರಸ್, ರಾಮಕೃಷ್ಣ ಹೆಗಡೆ, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಸಾಲಿಗೆ ಸೇರಿದ್ದಾರೆ.</p><p> 1947ರ ಆಗಸ್ಟ್ ತಿಂಗಳಲ್ಲಿ ಮೈಸೂರಿನ ಹೊರವಲಯದಲ್ಲಿರುವ ಸಿದ್ದರಾಮನಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯ, 4ನೇ ತರಗತಿಯಿಂದ ನೇರ ವಿದ್ಯಾಭ್ಯಾಸ ಆರಂಭಿಸಿದವರು. ಅದಕ್ಕೂ ಮೊದಲು ಜಾನುವಾರು ಸಾಕಾಣಿಕೆಯಯಲ್ಲಿ ತಂದೆಗೆ ನೆರವಾಗುತ್ತಿದ್ದರು.ಮೆಡಿಕಲ್ ಸೀಟು ಪಡೆಯಲು ಪಿಯುಸಿಯಲ್ಲಿ ಸಾಕಷ್ಟು ಅಂಕ ಗಳಿಸದ ಕಾರಣ ಕಾನೂನು ಪದವಿ ಪಡೆದರು.</p><p>ರಾಜಕೀಯ ಪ್ರವೇಶಕ್ಕೂ ಮುನ್ನ ಹೋರಾಟದಿಂದ ಗುರುತಿಸಿಕೊಂಡಿದ್ದ ಅವರು, ಸಮಾಜವಾದಿ ಮತ್ತು ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದ್ದರು. ಆ ಕಾಲದ ಎಲ್ಲಾ ಲೋಹಿಯಾವಾದಿಗಳಂತೆ ಗಡ್ಡಬಿಟ್ಟು ವಿಚಾರವಾದಿ, ಬಹುತೇಕ ನಾಸ್ತಿಕರೆನಿಸಿದ್ದರು.</p> <h2>12 ಚುನಾವಣೆಗಳ ಪೈಕಿ 9ರಲ್ಲಿ ಜಯ</h2><p>1978ರಲ್ಲಿ ತಾಲ್ಲೂಕು ಮಂಡಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅವರ ರಾಜಕೀಯ ಜೀವನ ಆರಂಭವಾಗಿತ್ತು. ಇದಕ್ಕೆ ಅವರ ತಂದೆ ಮನವೊಲಿಸುವ ಅಗತ್ಯವಿತ್ತು. ಅವರ ತಂದೆ ಸಿದ್ದರಾಮೇಗೌಡರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತು ರಾಜಕೀಯದಿಂದ ದೂರವಿದ್ದರು. ರಾಜಕೀಯದಲ್ಲಿ ಜನರನ್ನು ನಂಬಬೇಡ ಎಂದು ಮಗನಿಗೆ ಎಚ್ಚರಿಕೆ ನೀಡಿದ್ದರು. ಸಿದ್ದರಾಮಯ್ಯ ತಾಲ್ಲೂಕು ಮಂಡಳ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಭವಿಷ್ಯ ಆರಂಭವಾಯಿತು.</p><p>1978ರ ವಿಧಾನಸಭಾ ಚುನಾವಣೆಯಲ್ಲಿ ಚರಣ್ ಸಿಂಗ್ ಅವರ ಲೋಕದಳ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಮತ್ತೆ 1983ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ಸಿದ್ದರಾಮಯ್ಯನವರನ್ನು ನೇಮಕ ಮಾಡಲಾಗಿತ್ತು.</p><h2>17 ಬಜೆಟ್ ಮಂಡಿಸಿದ ದಾಖಲೆ</h2><p>ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎದುರಿಸಿದ 12 ಚುನಾವಣೆಗಳ ಪೈಕಿ 9ರಲ್ಲಿ ಜಯ ಕಂಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿದ್ದರಾಮಯ್ಯ 1991ರಲ್ಲಿ ಕುರುಬ ಸಮುದಾಯದ ಪ್ರಾಬಲ್ಯವಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.</p><p>ಆಡಳಿತಾತ್ಮಕವಾಗಿ ನಿಪುಣರೆಂದು ಹೆಸರುವಾಸಿಯಾದ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಸಚಿವರಾಗಿ 17 ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ.</p><p>ಮೊದಲು ಜನತಾ ಪಕ್ಷ, ನಂತರ ಜನತಾ ದಳಕ್ಕೆ ಸೇರಿದ ನಂತರ, ಸಿದ್ದರಾಮಯ್ಯ ಅವರ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರೊಂದಿಗಿನ ಒಡನಾಟ ಗಾಢವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.</p><p>1999ರಲ್ಲಿ ಜನತಾ ದಳ ವಿಭಜನೆಯಾದ ನಂತರ, ಸಿದ್ದರಾಮಯ್ಯ ಮತ್ತು ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷ 2004ರ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆದ್ದಿತ್ತು. 1996ರಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗದ ಗೌಡರು, 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗುವ ಅವಕಾಶಕ್ಕೆ ದೇವೇಗೌಡರು ತಡೆ ಹಾಕಿದರು ಎಂದು ಹೇಳಲಾಗುತ್ತದೆ. ಬಳಿಕ, ದೇವೇಗೌಡರ ಅನುಮತಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದ್ದ ಸಿದ್ದರಾಮಯ್ಯ ಅವರನ್ನು ಜೆಡಿಎಸ್ನಿಂದ ಉಚ್ಚಾಟನೆ ಮಾಡಲಾಗಿತ್ತು. </p><p> 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ. 2013ರ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದರು. ಮೂರು ವರ್ಷಗಳ ಹಿಂದೆ, ತಮ್ಮ ಮಗ ಡಾ. ಯತೀಂದ್ರ ಮತ್ತು ಮೊಮ್ಮಗ ಧವನ್ ತಮ್ಮ ರಾಜಕೀಯ ಉತ್ತರಾಧಿಕಾರಿಗಳಾಗುತ್ತಾರೆ ಎಂದು ಘೋಷಿಸಿದ್ದರು.</p><p>ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು..</p>.ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು...ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ: ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೈಟ್ಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯವನ್ನಾಳಿದ ದೀರ್ಘಾವಧಿಯ ಸಿಎಂ ಎಂಬ ಹೆಗ್ಗಳಿಕೆ ಹೊಂದಿರುವ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯನವರ ಆಡಳಿತದ ಯುಗಾಂತ್ಯವಾಗಿದೆ. ಹೋರಾಟದ ಮೂಲಕ ರಾಜಕೀಯದ ಪ್ರತಿಯೊಂದು ಮೆಟ್ಟಿಲನ್ನು ಏರಿದ್ದ ಸಿದ್ದರಾಮಯ್ಯ ಈಗ ಪದತ್ಯಾಗಕ್ಕೆ ಮುಂದಾಗಿದ್ದಾರೆ.</p> <h2>ಮಗ ರಾಜನಾಗುವ ಕನಸು ಕಂಡಿದ್ದ ತಾಯಿ </h2><h2></h2><p>ಸಿದ್ದರಾಮಯ್ಯನವರ ತಾಯಿ ಬೋರಮ್ಮ ಅವರಿಗೆ ಅವರ 5ನೇ ಮಗ ರಾಜನಾಗುತ್ತಾನೆ ಎಂಬ ಕನಸು ಬಿದ್ದಿತ್ತಂತೆ. – ತಮ್ಮ 5ನೇ ಮಗನಾದ ಸಿದ್ದರಾಮಯ್ಯ ರಾಜನಾಗುತ್ತಾನೆ ಎಂಬ ಕನಸು ಬೋರಮ್ಮ ಅವರಿಗೆ ಬಿದ್ದಿತ್ತಂತೆ. ಅದನ್ನು ಎರಡು ಬಾರಿ ನಿಜವಾಗಿಸಿದ್ದ ಸಿದ್ದರಾಮಯ್ಯ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಪೂರ್ಣಾವಧಿ ಮತ್ತು 2023ರಿಂದ ಮೂರು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಡಿ. ದೇವರಾಜ ಅರಸ್, ರಾಮಕೃಷ್ಣ ಹೆಗಡೆ, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಸಾಲಿಗೆ ಸೇರಿದ್ದಾರೆ.</p><p> 1947ರ ಆಗಸ್ಟ್ ತಿಂಗಳಲ್ಲಿ ಮೈಸೂರಿನ ಹೊರವಲಯದಲ್ಲಿರುವ ಸಿದ್ದರಾಮನಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯ, 4ನೇ ತರಗತಿಯಿಂದ ನೇರ ವಿದ್ಯಾಭ್ಯಾಸ ಆರಂಭಿಸಿದವರು. ಅದಕ್ಕೂ ಮೊದಲು ಜಾನುವಾರು ಸಾಕಾಣಿಕೆಯಯಲ್ಲಿ ತಂದೆಗೆ ನೆರವಾಗುತ್ತಿದ್ದರು.ಮೆಡಿಕಲ್ ಸೀಟು ಪಡೆಯಲು ಪಿಯುಸಿಯಲ್ಲಿ ಸಾಕಷ್ಟು ಅಂಕ ಗಳಿಸದ ಕಾರಣ ಕಾನೂನು ಪದವಿ ಪಡೆದರು.</p><p>ರಾಜಕೀಯ ಪ್ರವೇಶಕ್ಕೂ ಮುನ್ನ ಹೋರಾಟದಿಂದ ಗುರುತಿಸಿಕೊಂಡಿದ್ದ ಅವರು, ಸಮಾಜವಾದಿ ಮತ್ತು ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದ್ದರು. ಆ ಕಾಲದ ಎಲ್ಲಾ ಲೋಹಿಯಾವಾದಿಗಳಂತೆ ಗಡ್ಡಬಿಟ್ಟು ವಿಚಾರವಾದಿ, ಬಹುತೇಕ ನಾಸ್ತಿಕರೆನಿಸಿದ್ದರು.</p> <h2>12 ಚುನಾವಣೆಗಳ ಪೈಕಿ 9ರಲ್ಲಿ ಜಯ</h2><p>1978ರಲ್ಲಿ ತಾಲ್ಲೂಕು ಮಂಡಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅವರ ರಾಜಕೀಯ ಜೀವನ ಆರಂಭವಾಗಿತ್ತು. ಇದಕ್ಕೆ ಅವರ ತಂದೆ ಮನವೊಲಿಸುವ ಅಗತ್ಯವಿತ್ತು. ಅವರ ತಂದೆ ಸಿದ್ದರಾಮೇಗೌಡರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತು ರಾಜಕೀಯದಿಂದ ದೂರವಿದ್ದರು. ರಾಜಕೀಯದಲ್ಲಿ ಜನರನ್ನು ನಂಬಬೇಡ ಎಂದು ಮಗನಿಗೆ ಎಚ್ಚರಿಕೆ ನೀಡಿದ್ದರು. ಸಿದ್ದರಾಮಯ್ಯ ತಾಲ್ಲೂಕು ಮಂಡಳ ಚುನಾವಣೆಯಲ್ಲಿ ಗೆದ್ದು ತಮ್ಮ ರಾಜಕೀಯ ಭವಿಷ್ಯ ಆರಂಭವಾಯಿತು.</p><p>1978ರ ವಿಧಾನಸಭಾ ಚುನಾವಣೆಯಲ್ಲಿ ಚರಣ್ ಸಿಂಗ್ ಅವರ ಲೋಕದಳ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಮತ್ತೆ 1983ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ಸಿದ್ದರಾಮಯ್ಯನವರನ್ನು ನೇಮಕ ಮಾಡಲಾಗಿತ್ತು.</p><h2>17 ಬಜೆಟ್ ಮಂಡಿಸಿದ ದಾಖಲೆ</h2><p>ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎದುರಿಸಿದ 12 ಚುನಾವಣೆಗಳ ಪೈಕಿ 9ರಲ್ಲಿ ಜಯ ಕಂಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿದ್ದರಾಮಯ್ಯ 1991ರಲ್ಲಿ ಕುರುಬ ಸಮುದಾಯದ ಪ್ರಾಬಲ್ಯವಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.</p><p>ಆಡಳಿತಾತ್ಮಕವಾಗಿ ನಿಪುಣರೆಂದು ಹೆಸರುವಾಸಿಯಾದ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಸಚಿವರಾಗಿ 17 ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ.</p><p>ಮೊದಲು ಜನತಾ ಪಕ್ಷ, ನಂತರ ಜನತಾ ದಳಕ್ಕೆ ಸೇರಿದ ನಂತರ, ಸಿದ್ದರಾಮಯ್ಯ ಅವರ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರೊಂದಿಗಿನ ಒಡನಾಟ ಗಾಢವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.</p><p>1999ರಲ್ಲಿ ಜನತಾ ದಳ ವಿಭಜನೆಯಾದ ನಂತರ, ಸಿದ್ದರಾಮಯ್ಯ ಮತ್ತು ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷ 2004ರ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆದ್ದಿತ್ತು. 1996ರಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗದ ಗೌಡರು, 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗುವ ಅವಕಾಶಕ್ಕೆ ದೇವೇಗೌಡರು ತಡೆ ಹಾಕಿದರು ಎಂದು ಹೇಳಲಾಗುತ್ತದೆ. ಬಳಿಕ, ದೇವೇಗೌಡರ ಅನುಮತಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದ್ದ ಸಿದ್ದರಾಮಯ್ಯ ಅವರನ್ನು ಜೆಡಿಎಸ್ನಿಂದ ಉಚ್ಚಾಟನೆ ಮಾಡಲಾಗಿತ್ತು. </p><p> 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ. 2013ರ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದರು. ಮೂರು ವರ್ಷಗಳ ಹಿಂದೆ, ತಮ್ಮ ಮಗ ಡಾ. ಯತೀಂದ್ರ ಮತ್ತು ಮೊಮ್ಮಗ ಧವನ್ ತಮ್ಮ ರಾಜಕೀಯ ಉತ್ತರಾಧಿಕಾರಿಗಳಾಗುತ್ತಾರೆ ಎಂದು ಘೋಷಿಸಿದ್ದರು.</p><p>ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು..</p>.ರಾಮನಗರ ಜಿಲ್ಲೆಗೆ 5ನೇ ‘ಮುಖ್ಯಮಂತ್ರಿ’ ಪಟ್ಟ: ಇದುವರೆಗೆ ಸಿಎಂ ಹುದ್ದೆಗೇರಿದವರು...ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ: ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೈಟ್ಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>