<p><strong>ಮೈಸೂರು:</strong> ಸಿದ್ದರಾಮಯ್ಯ ಅವರು ಸದಾ ಹಳ್ಳಿ ಸೊಗಡಿನ ನಡವಳಿಕೆಯಿಂದಲೇ ನೆಲದ ನಾಯಕನಾಗಿ ಗುರುತಿಸಿಕೊಂಡವರು. ನಾನು ಹಳ್ಳಿಗಾಡಿನಿಂದ ಬಂದವನು, ಶಿಕ್ಷಣ ಪಡೆಯದೇ ಇದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಈ ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದೇ ಹೇಳುತ್ತಿರುತ್ತಾರೆ.</p><p>ಇದೇ ವರ್ಷದ ಮಾರ್ಚ್ 7ರಂದು ಮೈಸೂರು ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ದಂಡಿನಮಾರಮ್ಮ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ತಮ್ಮೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಬಂಧುಗಳನ್ನು ನೋಡಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.</p><p>ದೇವರಿಗೆ ಆರತಿ ತೆಗೆದುಕೊಂಡು ಹೋಗುವಾಗ ತಂಬಿಟ್ಟು ತಿನ್ನೋದೇ ಮಜಾ... ಎಂದು ನೆನೆದಿದ್ದರು.</p><p>‘ನಮ್ಮ ಊರಿನಲ್ಲೂ (ಸಿದ್ದರಾಮನಹುಂಡಿ) ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾವು ಚಿಕ್ಕವರಿದ್ದಾಗ ಜಾತ್ರೆಯಂದು ದೇವಸ್ಥಾನಕ್ಕೆ ತಂಬಿಟ್ಟಿನ ಆರತಿ ತೆಗೆದುಕೊಂಡು ಹೋಗುತ್ತಿದ್ದೆವು. ಆಗ ತಂಬಿಟ್ಟು ತಿನ್ನುವುದೇ ಮಜಾ’ ಎಂದು ಹಂಚಿಕೊಂಡಿದ್ದರು.</p>. <p>‘ನಾವು ಚಿಕ್ಕವರಿದ್ದಾಗ ಹಳ್ಳಿಗಾಡಿನಲ್ಲಿ ಸಿಗುತ್ತಿದ್ದ ಸಿಹಿ ತಿನಿಸುಗಳೆಂದರೆ ತಂಬಿಟ್ಟು ಹಾಗೂ ಕೊಬ್ಬರಿ ಮಿಠಾಯಿ ಮಾತ್ರವೇ. ಅದನ್ನೇ ತಿನ್ನುತ್ತಿದ್ದೆವು. ನಾನು ಚಿಕ್ಕವನಿದ್ದಾಗಿನಿಂದಲೂ ದಂಡಿನಮಾರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದೆ. ದೇವರು ದೇವಸ್ಥಾನದಲ್ಲಿ ಮಾತ್ರ ಇಲ್ಲ. ಎಲ್ಲ ಕಡೆಯೂ ಇದ್ದಾನೆ. ದೇವನೊಬ್ಬ ನಾಮ ಹಲವು. ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯುವ ಬದಲಿಗೆ ಯಾವಾಗಲೂ ದೇವರನ್ನು ನೆನೆಯಬೇಕು. ದೇವರು ಎಲ್ಲ ಕಡೆಯೂ ಇದ್ದಾನೆ. ನಮ್ಮಲ್ಲೂ ಇದ್ದಾನೆ ಎನ್ನುವುದು ನನ್ನ ಬಲವಾದ ನಂಬಿಕೆ’ ಎಂದು ಪ್ರತಿಪಾದಿಸಿದ್ದರು.</p><p>‘ಮೂರ್ತಿ ಪೂಜೆಯಿಂದ ಮಾತ್ರವೇ ದೇವರು ಒಲಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು. ಯಾರಿಗೂ ಕೇಡು ಬಯಸಬಾರದು. ಯಾವ ದೇವರೂ ಅಥವಾ ಧರ್ಮವೂ ದ್ವೇಷ ಮಾಡಿ ಎಂದು ಹೇಳಿಲ್ಲ, ಪ್ರೀತಿಸಿ ಎಂದೇ ಹೇಳುತ್ತದೆ. ಅದನ್ನು ಎಲ್ಲರೂ ಪಾಲಿಸಬೇಕು. ಎಲ್ಲರನ್ನೂ ಪ್ರೀತಿಸಬೇಕು’ ಎಂಬ ಸಲಹೆ ಅವರದಾಗಿತ್ತು. ಇದನ್ನು ಹಲವು ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತಾರೆ.</p><p>‘ಅಧಿಕಾರ ಎಂದಿಗೂ ಬಲಾಢ್ಯರ ಕೈಯಲ್ಲಿ ಇರಬಾರದು. ಎಲ್ಲರನ್ನೂ ಪ್ರೀತಿಸುವವರು, ಎಲ್ಲರನ್ನೂ ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು’ ಎಂದು ಪ್ರತಿಪಾದಿಸುತ್ತಲೇ ಬಂದವರು.</p><p>‘ಚಿಕ್ಕವನಿದ್ದಾಗ ನಾನೂ ವೀರಮಕ್ಕಳ ಕುಣಿತ ಮಾಡುತ್ತಿದ್ದೆ. ಅದನ್ನು ಕಲಿಯುವುದಕ್ಕೆ ಹೋಗುತ್ತಿದ್ದರಿಂದಲೇ ನಮ್ಮಪ್ಪ ನನ್ನನ್ನು ಶಾಲೆಗೆ ಸೇರಿಸಿರಲಿಲ್ಲ. ಹೀಗಾಗಿಯೇ ನೇರವಾಗಿ 5ನೇ ತರಗತಿಗೆ ಸೇರಿದೆ. ರಾಜಪ್ಪ ಎಂಬ ಮೇಷ್ಟ್ರು ನನ್ನನ್ನು ಶಾಲೆಗೆ ಸೇರಿಸಿಕೊಳ್ಳದೇ ಇದ್ದಿದ್ದರೆ ನಾನು ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡಲು ಆಗುತ್ತಿರಲಿಲ್ಲ’ ಎಂದು ನೆನೆಯುತ್ತಲೇ ಇರುತ್ತಾರೆ.</p>.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....Karnataka Politics: ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸಿದ್ದರಾಮಯ್ಯ ಅವರು ಸದಾ ಹಳ್ಳಿ ಸೊಗಡಿನ ನಡವಳಿಕೆಯಿಂದಲೇ ನೆಲದ ನಾಯಕನಾಗಿ ಗುರುತಿಸಿಕೊಂಡವರು. ನಾನು ಹಳ್ಳಿಗಾಡಿನಿಂದ ಬಂದವನು, ಶಿಕ್ಷಣ ಪಡೆಯದೇ ಇದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಈ ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದೇ ಹೇಳುತ್ತಿರುತ್ತಾರೆ.</p><p>ಇದೇ ವರ್ಷದ ಮಾರ್ಚ್ 7ರಂದು ಮೈಸೂರು ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ದಂಡಿನಮಾರಮ್ಮ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ತಮ್ಮೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಬಂಧುಗಳನ್ನು ನೋಡಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.</p><p>ದೇವರಿಗೆ ಆರತಿ ತೆಗೆದುಕೊಂಡು ಹೋಗುವಾಗ ತಂಬಿಟ್ಟು ತಿನ್ನೋದೇ ಮಜಾ... ಎಂದು ನೆನೆದಿದ್ದರು.</p><p>‘ನಮ್ಮ ಊರಿನಲ್ಲೂ (ಸಿದ್ದರಾಮನಹುಂಡಿ) ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾವು ಚಿಕ್ಕವರಿದ್ದಾಗ ಜಾತ್ರೆಯಂದು ದೇವಸ್ಥಾನಕ್ಕೆ ತಂಬಿಟ್ಟಿನ ಆರತಿ ತೆಗೆದುಕೊಂಡು ಹೋಗುತ್ತಿದ್ದೆವು. ಆಗ ತಂಬಿಟ್ಟು ತಿನ್ನುವುದೇ ಮಜಾ’ ಎಂದು ಹಂಚಿಕೊಂಡಿದ್ದರು.</p>. <p>‘ನಾವು ಚಿಕ್ಕವರಿದ್ದಾಗ ಹಳ್ಳಿಗಾಡಿನಲ್ಲಿ ಸಿಗುತ್ತಿದ್ದ ಸಿಹಿ ತಿನಿಸುಗಳೆಂದರೆ ತಂಬಿಟ್ಟು ಹಾಗೂ ಕೊಬ್ಬರಿ ಮಿಠಾಯಿ ಮಾತ್ರವೇ. ಅದನ್ನೇ ತಿನ್ನುತ್ತಿದ್ದೆವು. ನಾನು ಚಿಕ್ಕವನಿದ್ದಾಗಿನಿಂದಲೂ ದಂಡಿನಮಾರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದೆ. ದೇವರು ದೇವಸ್ಥಾನದಲ್ಲಿ ಮಾತ್ರ ಇಲ್ಲ. ಎಲ್ಲ ಕಡೆಯೂ ಇದ್ದಾನೆ. ದೇವನೊಬ್ಬ ನಾಮ ಹಲವು. ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯುವ ಬದಲಿಗೆ ಯಾವಾಗಲೂ ದೇವರನ್ನು ನೆನೆಯಬೇಕು. ದೇವರು ಎಲ್ಲ ಕಡೆಯೂ ಇದ್ದಾನೆ. ನಮ್ಮಲ್ಲೂ ಇದ್ದಾನೆ ಎನ್ನುವುದು ನನ್ನ ಬಲವಾದ ನಂಬಿಕೆ’ ಎಂದು ಪ್ರತಿಪಾದಿಸಿದ್ದರು.</p><p>‘ಮೂರ್ತಿ ಪೂಜೆಯಿಂದ ಮಾತ್ರವೇ ದೇವರು ಒಲಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು. ಯಾರಿಗೂ ಕೇಡು ಬಯಸಬಾರದು. ಯಾವ ದೇವರೂ ಅಥವಾ ಧರ್ಮವೂ ದ್ವೇಷ ಮಾಡಿ ಎಂದು ಹೇಳಿಲ್ಲ, ಪ್ರೀತಿಸಿ ಎಂದೇ ಹೇಳುತ್ತದೆ. ಅದನ್ನು ಎಲ್ಲರೂ ಪಾಲಿಸಬೇಕು. ಎಲ್ಲರನ್ನೂ ಪ್ರೀತಿಸಬೇಕು’ ಎಂಬ ಸಲಹೆ ಅವರದಾಗಿತ್ತು. ಇದನ್ನು ಹಲವು ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತಾರೆ.</p><p>‘ಅಧಿಕಾರ ಎಂದಿಗೂ ಬಲಾಢ್ಯರ ಕೈಯಲ್ಲಿ ಇರಬಾರದು. ಎಲ್ಲರನ್ನೂ ಪ್ರೀತಿಸುವವರು, ಎಲ್ಲರನ್ನೂ ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು’ ಎಂದು ಪ್ರತಿಪಾದಿಸುತ್ತಲೇ ಬಂದವರು.</p><p>‘ಚಿಕ್ಕವನಿದ್ದಾಗ ನಾನೂ ವೀರಮಕ್ಕಳ ಕುಣಿತ ಮಾಡುತ್ತಿದ್ದೆ. ಅದನ್ನು ಕಲಿಯುವುದಕ್ಕೆ ಹೋಗುತ್ತಿದ್ದರಿಂದಲೇ ನಮ್ಮಪ್ಪ ನನ್ನನ್ನು ಶಾಲೆಗೆ ಸೇರಿಸಿರಲಿಲ್ಲ. ಹೀಗಾಗಿಯೇ ನೇರವಾಗಿ 5ನೇ ತರಗತಿಗೆ ಸೇರಿದೆ. ರಾಜಪ್ಪ ಎಂಬ ಮೇಷ್ಟ್ರು ನನ್ನನ್ನು ಶಾಲೆಗೆ ಸೇರಿಸಿಕೊಳ್ಳದೇ ಇದ್ದಿದ್ದರೆ ನಾನು ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡಲು ಆಗುತ್ತಿರಲಿಲ್ಲ’ ಎಂದು ನೆನೆಯುತ್ತಲೇ ಇರುತ್ತಾರೆ.</p>.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....Karnataka Politics: ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>