ನಗರದ ಚಾಮರಾಜ ಕ್ಷೇತ್ರದ ಮಂಚೇಗೌಡನ ಕೊಪ್ಪಲಿನಲ್ಲಿ ಸಂಜೆ ರೋಡ್ ಶೋ ವೇಳೆ ಅವರು ತಮ್ಮ ಭಾಷಣದಲ್ಲಿ, ‘ಸ್ಮಾರ್ಟ್ ಸಿಟಿ’ಗೆ ಸಾವಿರ ಕೋಟಿ ಅನುದಾನ ನೀಡಲಾಗಿದೆ’ ಎಂದಿದ್ದಕ್ಕೆ, ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ‘ತಾಂತ್ರಿಕ ಕಾರಣದಿಂದ ನಗರವನ್ನು ಯೋಜನೆಗೆ ಆಯ್ಕೆ ಮಾಡಿಲ್ಲ. ಆದರೂ ಹಣ ಹೇಗೆ ಬಿಡುಗಡೆಯಾಯಿತು’ ಎಂದು ಜನರು ಪ್ರಶ್ನಿಸಿದರು.