<p><strong>ಬೆಂಗಳೂರು</strong>: ಎಲೆ ಚುಕ್ಕೆ ರೋಗದ ಕುರಿತು ತಾವು ನೀಡಿದ ಉತ್ತರವನ್ನು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ವಾಪಸ್ ಪಡೆದರು.</p>.<p>ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯಕ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಅದರಲ್ಲಿನ ಮಾಹಿತಿಯ ಬಗ್ಗೆ ಬಿಜೆಪಿಯ ವಿ.ಸುನಿಲ್ಕುಮಾರ್ ಆಕ್ಷೇಪ ಎತ್ತಿದರು.</p>.<p>‘ರಾಜ್ಯದಲ್ಲಿ 16 ಸಾವಿರ ರೈತರು ಎಲೆ ಚುಕ್ಕೆ ರೋಗದಿಂದ ಬಾಧಿತರಾಗಿದ್ದಾರೆ ಎಂದು ಹೇಳುತ್ತೀರಿ, ಮತ್ತೊಂದು ಕಡೆ ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 22,167 ಬಾಧಿತರಾಗಿದ್ದಾರೆ ಎನ್ನುತ್ತೀರಿ. ಇದರಲ್ಲಿ ಯಾವುದು ಸರಿ? ಎಲೆಚುಕ್ಕೆ ರೋಗಕ್ಕೆ ₹62 ಕೋಟಿಯನ್ನು ಒದಗಿಸಿರುವುದಾಗಿ ತಿಳಿಸಿದ್ದೀರಿ. 10,272 ರೈತರಿಗೆ ₹5.53 ಕೋಟಿ ಪರಿಹಾರ ಕೊಟ್ಟಿದ್ದಾಗಿಯೂ ಹೇಳಿದ್ದೀರಿ. ಇದರಲ್ಲಿ ಯಾವುದನ್ನು ನಂಬಬೇಕು. ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಸುನಿಲ್ಕುಮಾರ್ ದೂರಿದರು.</p>.<p>‘ಸುಳ್ಳು ಲೆಕ್ಕವನ್ನು ನೀಡುತ್ತಿಲ್ಲ. ಒಂದು ಬಾರಿ ಅಧಿಕಾರಿಗಳನ್ನು ವಿಚಾರಿಸಿ ತಿಳಿಸುತ್ತೇನೆ. ₹8.61 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 16,866 ರೈತರಿಗೆ ಸಹಾಯಧನ ನೀಡಲಾಗಿದೆ. ಈಗ ಜಿಲ್ಲಾವಾರು ನೀಡಿರುವ ಪ್ರಸ್ತಾವನೆಯನ್ನು ಕಳಿಸಿದ್ದೇವೆ ’ ಎಂದು ಮಲ್ಲಿಕಾರ್ಜುನ ಸಮಜಾಯಿಷಿ ನೀಡಿದರೂ ಸುನಿಲ್ ಒಪ್ಪಲ್ಲಿಲ್ಲ.</p>.<p>ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ‘ಮಾಹಿತಿ ಪಡೆದು ಗೊಂದಲ ಬಗೆಹರಿಸಿ’ ಎಂದು ಸಚಿವರಿಗೆ ಸಲಹೆ ನೀಡಿದರು.</p>.<p>‘ಸರಿಯಾದ ಉತ್ತರ ನೀಡುವವರೆಗೆ ಪ್ರಶ್ನೆಯನ್ನು ತಡೆ ಹಿಡಿಯಬೇಕು’ ಎಂದು ಸುನಿಲ್ ಒತ್ತಾಯಿಸಿದರು. ತಡೆ ಹಿಡಿಯಲು ಮಲ್ಲಿಕಾರ್ಜುನ ಅವರು ಸಮ್ಮತಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎಲೆ ಚುಕ್ಕೆ ರೋಗದ ಕುರಿತು ತಾವು ನೀಡಿದ ಉತ್ತರವನ್ನು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ವಾಪಸ್ ಪಡೆದರು.</p>.<p>ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯಕ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಅದರಲ್ಲಿನ ಮಾಹಿತಿಯ ಬಗ್ಗೆ ಬಿಜೆಪಿಯ ವಿ.ಸುನಿಲ್ಕುಮಾರ್ ಆಕ್ಷೇಪ ಎತ್ತಿದರು.</p>.<p>‘ರಾಜ್ಯದಲ್ಲಿ 16 ಸಾವಿರ ರೈತರು ಎಲೆ ಚುಕ್ಕೆ ರೋಗದಿಂದ ಬಾಧಿತರಾಗಿದ್ದಾರೆ ಎಂದು ಹೇಳುತ್ತೀರಿ, ಮತ್ತೊಂದು ಕಡೆ ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 22,167 ಬಾಧಿತರಾಗಿದ್ದಾರೆ ಎನ್ನುತ್ತೀರಿ. ಇದರಲ್ಲಿ ಯಾವುದು ಸರಿ? ಎಲೆಚುಕ್ಕೆ ರೋಗಕ್ಕೆ ₹62 ಕೋಟಿಯನ್ನು ಒದಗಿಸಿರುವುದಾಗಿ ತಿಳಿಸಿದ್ದೀರಿ. 10,272 ರೈತರಿಗೆ ₹5.53 ಕೋಟಿ ಪರಿಹಾರ ಕೊಟ್ಟಿದ್ದಾಗಿಯೂ ಹೇಳಿದ್ದೀರಿ. ಇದರಲ್ಲಿ ಯಾವುದನ್ನು ನಂಬಬೇಕು. ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಸುನಿಲ್ಕುಮಾರ್ ದೂರಿದರು.</p>.<p>‘ಸುಳ್ಳು ಲೆಕ್ಕವನ್ನು ನೀಡುತ್ತಿಲ್ಲ. ಒಂದು ಬಾರಿ ಅಧಿಕಾರಿಗಳನ್ನು ವಿಚಾರಿಸಿ ತಿಳಿಸುತ್ತೇನೆ. ₹8.61 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 16,866 ರೈತರಿಗೆ ಸಹಾಯಧನ ನೀಡಲಾಗಿದೆ. ಈಗ ಜಿಲ್ಲಾವಾರು ನೀಡಿರುವ ಪ್ರಸ್ತಾವನೆಯನ್ನು ಕಳಿಸಿದ್ದೇವೆ ’ ಎಂದು ಮಲ್ಲಿಕಾರ್ಜುನ ಸಮಜಾಯಿಷಿ ನೀಡಿದರೂ ಸುನಿಲ್ ಒಪ್ಪಲ್ಲಿಲ್ಲ.</p>.<p>ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ‘ಮಾಹಿತಿ ಪಡೆದು ಗೊಂದಲ ಬಗೆಹರಿಸಿ’ ಎಂದು ಸಚಿವರಿಗೆ ಸಲಹೆ ನೀಡಿದರು.</p>.<p>‘ಸರಿಯಾದ ಉತ್ತರ ನೀಡುವವರೆಗೆ ಪ್ರಶ್ನೆಯನ್ನು ತಡೆ ಹಿಡಿಯಬೇಕು’ ಎಂದು ಸುನಿಲ್ ಒತ್ತಾಯಿಸಿದರು. ತಡೆ ಹಿಡಿಯಲು ಮಲ್ಲಿಕಾರ್ಜುನ ಅವರು ಸಮ್ಮತಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>