<p><strong>ಬೆಂಗಳೂರು</strong>: ‘ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣವೆಂಬ ಅನುಮಾನವಿದೆ. ಈ ಕುರಿತು ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಈಗಾಗಲೇ ಅನರೋಬಿಕ್ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. </p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 2,600 ಸರ್ಜರಿಗಳು ನಡೆದಿವೆ. ಸಾಕಷ್ಟು ಸಿಸೇರಿಯನ್ಗಳನ್ನು ಮಾಡಲಾಗಿದೆ. ಯಾರೊಬ್ಬರ ಸಾವು ಸಂಭವಿಸಿರಲಿಲ್ಲ. ಮೊದಲ ಬಾರಿಗೆ ನಾಲ್ವರು ಬಾಣಂತಿಯರು ಸಾವಿಗೀಡಾಗಿರುವುದು ಈ ದ್ರಾವಣದ ಮೇಲೆ ಅನುಮಾನ ಬರುವಂತೆ ಮಾಡಿದೆ’ ಎಂದರು.</p>.<p>‘ದ್ರಾವಣದ ಗುಣಮಟ್ಟ ಪರೀಕ್ಷೆಯ ವರದಿ ಬರಲು ಒಂಬತ್ತು ದಿನ ಬೇಕು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.</p>.<p>‘ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿದ ಕಂಪನಿಯನ್ನು ನಾವು ಕಪ್ಪುಪಟ್ಟಿಗೆ ಸೇರಿಸಿದ್ದೆವು. ಆದರೆ, ಕಂಪನಿಯವರು ಹೈಕೋರ್ಟ್ ಮೊರೆ ಹೋಗಿ ಕೇಂದ್ರ ಔಷಧ ಪ್ರಯೋಗಾಲಯದಿಂದ ಐವಿ ದ್ರಾವಣ ಬಳಕೆ ಮಾಡಬಹುದು ಎಂದು ದೃಢೀಕರಣ ವರದಿ ತಂದಿದ್ದರು. ಔಷಧ ನಿಯಂತ್ರಕರು 92 ಬ್ಯಾಚ್ ಪರೀಕ್ಷೆ ಮಾಡಿದ್ದರು. ಈ ಪೈಕಿ, 22 ಬ್ಯಾಚ್ಗಳ ದ್ರಾವಣವು ಗುಣಮಟ್ಟ ಹೊಂದಿಲ್ಲ ಎಂದು ವರದಿ ನೀಡಿದ್ದರು. ಕೇಂದ್ರ ಔಷಧ ಪ್ರಯೋಗಾಲಯದಿಂದ ಐವಿ ದ್ರಾವಣ ಬಳಕೆ ಮಾಡಬಹುದೆಂದು ವರದಿ ನೀಡಿದ್ದರೂ, ಔಷಧ ನಿಯಂತ್ರಕರ ವರದಿಯಲ್ಲಿ ಪತ್ತೆಯಾಗಿದ್ದ ಗುಣಮಟ್ಟ ಇಲ್ಲದ 22 ಬ್ಯಾಚ್ಗಳ ದ್ರಾವಣವನ್ನು ಆಸ್ಪತ್ರೆಗಳಿಗೆ ಪೂರೈಸಿಲ್ಲ. ಗುಣಮಟ್ಟ ಇದೆ ಎಂದು ಹೇಳಿದ್ದ ಕೆಲವು ಬ್ಯಾಚ್ಗಳನ್ನು ಮಾತ್ರ ಔಷಧಿ ಸರಬರಾಜು ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು’ ಎಂದರು.</p>.<p>ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬಳ್ಳಾರಿ ಪ್ರಕರಣದಲ್ಲಿ ವೈದ್ಯರ ತಪ್ಪಿಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣವೆಂಬ ಅನುಮಾನವಿದೆ. ಈ ಕುರಿತು ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಈಗಾಗಲೇ ಅನರೋಬಿಕ್ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. </p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 2,600 ಸರ್ಜರಿಗಳು ನಡೆದಿವೆ. ಸಾಕಷ್ಟು ಸಿಸೇರಿಯನ್ಗಳನ್ನು ಮಾಡಲಾಗಿದೆ. ಯಾರೊಬ್ಬರ ಸಾವು ಸಂಭವಿಸಿರಲಿಲ್ಲ. ಮೊದಲ ಬಾರಿಗೆ ನಾಲ್ವರು ಬಾಣಂತಿಯರು ಸಾವಿಗೀಡಾಗಿರುವುದು ಈ ದ್ರಾವಣದ ಮೇಲೆ ಅನುಮಾನ ಬರುವಂತೆ ಮಾಡಿದೆ’ ಎಂದರು.</p>.<p>‘ದ್ರಾವಣದ ಗುಣಮಟ್ಟ ಪರೀಕ್ಷೆಯ ವರದಿ ಬರಲು ಒಂಬತ್ತು ದಿನ ಬೇಕು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.</p>.<p>‘ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿದ ಕಂಪನಿಯನ್ನು ನಾವು ಕಪ್ಪುಪಟ್ಟಿಗೆ ಸೇರಿಸಿದ್ದೆವು. ಆದರೆ, ಕಂಪನಿಯವರು ಹೈಕೋರ್ಟ್ ಮೊರೆ ಹೋಗಿ ಕೇಂದ್ರ ಔಷಧ ಪ್ರಯೋಗಾಲಯದಿಂದ ಐವಿ ದ್ರಾವಣ ಬಳಕೆ ಮಾಡಬಹುದು ಎಂದು ದೃಢೀಕರಣ ವರದಿ ತಂದಿದ್ದರು. ಔಷಧ ನಿಯಂತ್ರಕರು 92 ಬ್ಯಾಚ್ ಪರೀಕ್ಷೆ ಮಾಡಿದ್ದರು. ಈ ಪೈಕಿ, 22 ಬ್ಯಾಚ್ಗಳ ದ್ರಾವಣವು ಗುಣಮಟ್ಟ ಹೊಂದಿಲ್ಲ ಎಂದು ವರದಿ ನೀಡಿದ್ದರು. ಕೇಂದ್ರ ಔಷಧ ಪ್ರಯೋಗಾಲಯದಿಂದ ಐವಿ ದ್ರಾವಣ ಬಳಕೆ ಮಾಡಬಹುದೆಂದು ವರದಿ ನೀಡಿದ್ದರೂ, ಔಷಧ ನಿಯಂತ್ರಕರ ವರದಿಯಲ್ಲಿ ಪತ್ತೆಯಾಗಿದ್ದ ಗುಣಮಟ್ಟ ಇಲ್ಲದ 22 ಬ್ಯಾಚ್ಗಳ ದ್ರಾವಣವನ್ನು ಆಸ್ಪತ್ರೆಗಳಿಗೆ ಪೂರೈಸಿಲ್ಲ. ಗುಣಮಟ್ಟ ಇದೆ ಎಂದು ಹೇಳಿದ್ದ ಕೆಲವು ಬ್ಯಾಚ್ಗಳನ್ನು ಮಾತ್ರ ಔಷಧಿ ಸರಬರಾಜು ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು’ ಎಂದರು.</p>.<p>ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬಳ್ಳಾರಿ ಪ್ರಕರಣದಲ್ಲಿ ವೈದ್ಯರ ತಪ್ಪಿಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>