<p><strong>ಬೆಂಗಳೂರು:</strong> ಮುಂದಿನ ಕಬ್ಬು ನುರಿಸುವ ಹಂಗಾಮಿನ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.</p>.<p>ವಿಧಾನ ಪರಿಷತ್ತಿನ ವಿರೋಧ ಪಕ್ಷದಗಳ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಂಗಳವಾರದ ಕಲಾಪದ ವೇಳೆ ನಿಯಮ 330ರ ಅಡಿಯಲ್ಲಿ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ವಿಷಯ ಪ್ರಸ್ತಾಪಿಸಿದರು.</p>.<p>‘ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವು ಎಥೆನಾಲ್ ಖರೀದಿಸಿಲ್ಲ ಎಂದು ಹೇಳದೆ, ಪರಿಹಾರಗಳನ್ನು ಸೂಚಿಸಬೇಕು’ ಎಂದು ಒತ್ತಾಯಿಸಿದರು.</p>.<p>ಆಗ ಸಚಿವ ಶಿವಾನಂದ ಪಾಟೀಲ, ‘ಕಾರ್ಖಾನೆಗಳು ಸಾಲ ಮಾಡಿ, ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಿವೆ. ಉತ್ಪಾದನಾ ಸಾಮರ್ಥ್ಯದ ಶೇ 20 ರಷ್ಟು ಎಥೆನಾಲ್ ಮಾತ್ರ ಕೇಂದ್ರ ಸರ್ಕಾರ ಖರೀದಿಸುತ್ತಿದೆ. ಸಹಜವಾಗಿಯೇ ಕಾರ್ಖಾನೆಗಳು ನಷ್ಟ ಅನುಭವಿಸುತ್ತವೆ. ಈ ಬಗ್ಗೆ ಕೇಂದ್ರ ಆಹಾರ ಸಚಿವರ ಬಳಿಗೆ ನಿಯೋಗ ಹೋಗೋಣ’ ಎಂದರು.</p>.<p>‘ಹಿಂದಿನ ವರ್ಷದ ಹಂಗಾಮಿನಲ್ಲಿ ರೈತರಿಗೆ ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ₹20,000 ಕೋಟಿ ಕೊಡಬೇಕಿದ್ದ ಕಡೆ, ಕಾರ್ಖಾನೆಗಳ ಪ್ರಮಾಣವನ್ನೂ ಸೇರಿಸಿ ₹21,000 ಕೋಟಿಯನ್ನು ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿದ್ದೇವೆ. ಈ ಬಾರಿ ಈಗಾಗಲೇ ₹17,000 ಕೋಟಿ ಪಾವತಿ ಮಾಡಲಾಗಿದೆ. ಹಂಗಾಮು ಮುಗಿಯುವ ಹೊತ್ತಿಗೆ ಪೂರ್ಣ ಹಣ ಪಾವತಿ ಮಾಡಲಾಗುವುದು’ ಎಂದರು.</p>.<p>‘ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸಿದರೆ ಅವುಗಳಮೇಲಿನ ಹೊರೆ ಸ್ವಲ್ಪ ಕಡಿಮೆಯಾಗಲಿದೆ. ಅದು ಮಾತ್ರ ನಮ್ಮ ವ್ಯಾಪ್ತಿಯಲ್ಲಿದೆ. ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಅನುಮತ ನೀಡಬೇಕು. ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಸಕ್ಕರೆಗೆ ಭಿನ್ನ ದರ ನಿಗದಿ ಮಾಡಬೇಕು. ಆಗ ಕಾರ್ಖಾನೆಗಳ ಆದಾಯ ಹೆಚ್ಚಿ, ನಷ್ಟದಿಂದ ಹೊರಗೆ ಬರುತ್ತವೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವು ಇಚ್ಛಾಶಕ್ತಿ ತೋರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಂದಿನ ಕಬ್ಬು ನುರಿಸುವ ಹಂಗಾಮಿನ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.</p>.<p>ವಿಧಾನ ಪರಿಷತ್ತಿನ ವಿರೋಧ ಪಕ್ಷದಗಳ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಂಗಳವಾರದ ಕಲಾಪದ ವೇಳೆ ನಿಯಮ 330ರ ಅಡಿಯಲ್ಲಿ ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ವಿಷಯ ಪ್ರಸ್ತಾಪಿಸಿದರು.</p>.<p>‘ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವು ಎಥೆನಾಲ್ ಖರೀದಿಸಿಲ್ಲ ಎಂದು ಹೇಳದೆ, ಪರಿಹಾರಗಳನ್ನು ಸೂಚಿಸಬೇಕು’ ಎಂದು ಒತ್ತಾಯಿಸಿದರು.</p>.<p>ಆಗ ಸಚಿವ ಶಿವಾನಂದ ಪಾಟೀಲ, ‘ಕಾರ್ಖಾನೆಗಳು ಸಾಲ ಮಾಡಿ, ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಿವೆ. ಉತ್ಪಾದನಾ ಸಾಮರ್ಥ್ಯದ ಶೇ 20 ರಷ್ಟು ಎಥೆನಾಲ್ ಮಾತ್ರ ಕೇಂದ್ರ ಸರ್ಕಾರ ಖರೀದಿಸುತ್ತಿದೆ. ಸಹಜವಾಗಿಯೇ ಕಾರ್ಖಾನೆಗಳು ನಷ್ಟ ಅನುಭವಿಸುತ್ತವೆ. ಈ ಬಗ್ಗೆ ಕೇಂದ್ರ ಆಹಾರ ಸಚಿವರ ಬಳಿಗೆ ನಿಯೋಗ ಹೋಗೋಣ’ ಎಂದರು.</p>.<p>‘ಹಿಂದಿನ ವರ್ಷದ ಹಂಗಾಮಿನಲ್ಲಿ ರೈತರಿಗೆ ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ₹20,000 ಕೋಟಿ ಕೊಡಬೇಕಿದ್ದ ಕಡೆ, ಕಾರ್ಖಾನೆಗಳ ಪ್ರಮಾಣವನ್ನೂ ಸೇರಿಸಿ ₹21,000 ಕೋಟಿಯನ್ನು ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿದ್ದೇವೆ. ಈ ಬಾರಿ ಈಗಾಗಲೇ ₹17,000 ಕೋಟಿ ಪಾವತಿ ಮಾಡಲಾಗಿದೆ. ಹಂಗಾಮು ಮುಗಿಯುವ ಹೊತ್ತಿಗೆ ಪೂರ್ಣ ಹಣ ಪಾವತಿ ಮಾಡಲಾಗುವುದು’ ಎಂದರು.</p>.<p>‘ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸಿದರೆ ಅವುಗಳಮೇಲಿನ ಹೊರೆ ಸ್ವಲ್ಪ ಕಡಿಮೆಯಾಗಲಿದೆ. ಅದು ಮಾತ್ರ ನಮ್ಮ ವ್ಯಾಪ್ತಿಯಲ್ಲಿದೆ. ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಅನುಮತ ನೀಡಬೇಕು. ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಸಕ್ಕರೆಗೆ ಭಿನ್ನ ದರ ನಿಗದಿ ಮಾಡಬೇಕು. ಆಗ ಕಾರ್ಖಾನೆಗಳ ಆದಾಯ ಹೆಚ್ಚಿ, ನಷ್ಟದಿಂದ ಹೊರಗೆ ಬರುತ್ತವೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರವು ಇಚ್ಛಾಶಕ್ತಿ ತೋರಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>