<p><strong>ಮಂಗಳೂರು:</strong> ಊಟಕ್ಕೆ ಹಣ ಇಲ್ಲದೇ ಅಲೆದಾಡುತ್ತಿದ್ದ ಕಾಲ. ಹೊಟ್ಟೆ ಹೊರೆಯುವುದಕ್ಕಾಗಿ ಹೊಟೇಲ್ನಲ್ಲಿ ಪ್ಲೇಟ್ ತೊಳೆಯುವ ಕೆಲಸ ಮಾಡುತ್ತಿದ್ದವರು ಸಂಬಳ ಸಿಗುತ್ತದೆ ಎಂದು ಯಕ್ಷಗಾನಕ್ಕೆ ಸೇರಿದರು. ಹಾಗೆ ಆಯ್ದುಕೊಂಡ ಯಕ್ಷಗಾನಕ್ಕೇ ಕೀರ್ತಿ ತಂದುಕೊಟ್ಟವರು ಸೂರಿಕುಮೇರು ಕೆ. ಗೋವಿಂದ ಭಟ್ಟರು. </p><p>ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧ ರಾಗಿದ್ದ ಇವರು, ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಸಾಧಕ. ದಾಖಲೆಯ 71 ವರ್ಷಗಳ ಕಾಲ ತಿರುಗಾಟದಲ್ಲಿ ಬದುಕನ್ನು ಸವೆಸಿದರು. ಹೊಸಹಿತ್ಲು ಮಹಾಲಿಂಗ ಭಟ್ಟರು, ‘ಯಕ್ಷಗಾನ ಮೇಳದಲ್ಲಿ ನನಗೆ ಒಂದು ತಿರುಗಾಟಕ್ಕೆ 500 ರೂಪಾಯಿ ಕೊಡುತ್ತಾರೆ’ ಎಂದು ಹೇಳಿದ್ದನ್ನು ಕೇಳಿ ಯಕ್ಷಗಾನದ ಕಡೆಗೆ ಹೊರಳಿದವನು ನಾನು ಎಂದು ಇವರು ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.</p><p>ಮಿತ್ತನಡ್ಕದಲ್ಲಿ ವಿಠಲ ಶಾಸ್ತ್ರಿಗಳು ಆರಂಭಿಸಿದ್ದ ಯಕ್ಷಗಾನ ಶಿಬಿರದಲ್ಲಿ ಪಾಲ್ಗೊಂಡ ಇವರು ಯಕ್ಷನಾಟ್ಯದ ಜೊತೆಗೆ ಭರತನಾಟ್ಯ ಶಿಕ್ಷಣ ಪಡೆದರು. ಧರ್ಮಸ್ಥಳ ಮೇಳವೊಂದರಲ್ಲೇ 54 ವರ್ಷಗಳ ಸೇವೆ ಸಲ್ಲಿಸಿದ್ದಾರೆ. </p><p>ಸೂರಿಕುಮೇರು ಗೋವಿಂದ ಭಟ್ಟರ ತಂದೆ ಕಿನಿಲ ಶಂಕರನಾರಾಯಣ ಭಟ್ಟರು, ತಾಯಿ ಲಕ್ಷ್ಮೀ. ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ಕಲಿತರು. ಗೋವಿಂದ ಭಟ್ಟರನ್ನು ಸಹಕಲಾವಿದರು ‘ಗುರು ಗೋವಿಂದ ಭಟ್ಟರು‘ ಎಂದೇ ಕರೆಯುತ್ತಿದ್ದರು. ಆರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿದರು, ನಂತರ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು. </p><p>ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಮುಂತಾದ ಪಾತ್ರಗಳು ಪ್ರಸಿದ್ಧ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಭಟ್ಟರ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ , ಮಾಗಧ, ಶಿಶುಪಾಲ ಮುಂತಾದ ಪಾತ್ರಗಳು ಅವಿಸ್ಮರಣೀಯ.</p><p>ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮುಂತಾದ ಪ್ರಸಂಗಗಳನ್ನು ಇವರು ರಚಿಸಿದ್ದಾರೆ.</p>.<p><strong>ಅನ್ನವನ್ನರಸುತ್ತಾ....</strong></p><p>ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾದದ್ದು ಅನ್ನ. ಹೊಟ್ಟೆ ತುಂಬುವಲ್ಲಿಯವರೆಗೆ ಮನುಷ್ಯ ಪಶು, ಶುದ್ಧ ಪಶುವಾಗಿರುತ್ತಾನೆ. ಹೊಟ್ಟೆ ತುಂಬಿದ ಮೇಲೆ ಅವನಿಗೆ ಎಲ್ಲದರ ಅರಿವಾಗುವುದು. ಅಲ್ಲಿಂದ ಅವನು ಧಾರ್ಮಿಕನಾಗಲು, ನಾಗರಿಕನಾಗಲು, ಧರ್ಮಿಷ್ಠನಾಗಲು, ಒಟ್ಟಿನಲ್ಲಿ ‘ಸುಭಗ’ನಾಗಲು ತೊಡಗುತ್ತಾನೆ. ಇಂದು ನನ್ನನ್ನು ಜನ ‘ಯಕ್ಷ ಕಲಾವಿದ’ನೆಂದು ಗುರುತಿಸುತ್ತಿದ್ದಾರೆ. ಆದರೆ ಕಲೆಯ ಬಗ್ಗೆ ನನಗೆ ಅರಿವು ಮೂಡಿದ್ದೇ ಬಹಳ ತಡವಾಗಿ. ದೈಗೋಳಿ ಎಂಬಲ್ಲಿ ಹೊಟೇಲ್ ಕೆಲಸದಲ್ಲಿದ್ದರೂ ಯಾವುದೇ ಸಂಬಳ ಇಲ್ಲದೇ ಇದ್ದ ಕಾರಣಕ್ಕಾಗಿ ನನ್ನ ಮನಸ್ಸು ಸಂಬಳ ಸಿಗುವ ಯಕ್ಷಗಾನದ ಕಡೆಗೆ ವಾಲಿತ್ತು ಎಂದು ’ಎಪ್ಪತ್ತು ತಿರುಗಾಟಗಳು‘ ಎಂಬ ತಮ್ಮ ಕೃತಿಯಲ್ಲಿ ಅವರು ನೆನಪಿಸಿಕೊಂಡಿದ್ದರು. </p>.ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಇನ್ನಿಲ್ಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಊಟಕ್ಕೆ ಹಣ ಇಲ್ಲದೇ ಅಲೆದಾಡುತ್ತಿದ್ದ ಕಾಲ. ಹೊಟ್ಟೆ ಹೊರೆಯುವುದಕ್ಕಾಗಿ ಹೊಟೇಲ್ನಲ್ಲಿ ಪ್ಲೇಟ್ ತೊಳೆಯುವ ಕೆಲಸ ಮಾಡುತ್ತಿದ್ದವರು ಸಂಬಳ ಸಿಗುತ್ತದೆ ಎಂದು ಯಕ್ಷಗಾನಕ್ಕೆ ಸೇರಿದರು. ಹಾಗೆ ಆಯ್ದುಕೊಂಡ ಯಕ್ಷಗಾನಕ್ಕೇ ಕೀರ್ತಿ ತಂದುಕೊಟ್ಟವರು ಸೂರಿಕುಮೇರು ಕೆ. ಗೋವಿಂದ ಭಟ್ಟರು. </p><p>ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧ ರಾಗಿದ್ದ ಇವರು, ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಸಾಧಕ. ದಾಖಲೆಯ 71 ವರ್ಷಗಳ ಕಾಲ ತಿರುಗಾಟದಲ್ಲಿ ಬದುಕನ್ನು ಸವೆಸಿದರು. ಹೊಸಹಿತ್ಲು ಮಹಾಲಿಂಗ ಭಟ್ಟರು, ‘ಯಕ್ಷಗಾನ ಮೇಳದಲ್ಲಿ ನನಗೆ ಒಂದು ತಿರುಗಾಟಕ್ಕೆ 500 ರೂಪಾಯಿ ಕೊಡುತ್ತಾರೆ’ ಎಂದು ಹೇಳಿದ್ದನ್ನು ಕೇಳಿ ಯಕ್ಷಗಾನದ ಕಡೆಗೆ ಹೊರಳಿದವನು ನಾನು ಎಂದು ಇವರು ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.</p><p>ಮಿತ್ತನಡ್ಕದಲ್ಲಿ ವಿಠಲ ಶಾಸ್ತ್ರಿಗಳು ಆರಂಭಿಸಿದ್ದ ಯಕ್ಷಗಾನ ಶಿಬಿರದಲ್ಲಿ ಪಾಲ್ಗೊಂಡ ಇವರು ಯಕ್ಷನಾಟ್ಯದ ಜೊತೆಗೆ ಭರತನಾಟ್ಯ ಶಿಕ್ಷಣ ಪಡೆದರು. ಧರ್ಮಸ್ಥಳ ಮೇಳವೊಂದರಲ್ಲೇ 54 ವರ್ಷಗಳ ಸೇವೆ ಸಲ್ಲಿಸಿದ್ದಾರೆ. </p><p>ಸೂರಿಕುಮೇರು ಗೋವಿಂದ ಭಟ್ಟರ ತಂದೆ ಕಿನಿಲ ಶಂಕರನಾರಾಯಣ ಭಟ್ಟರು, ತಾಯಿ ಲಕ್ಷ್ಮೀ. ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ಕಲಿತರು. ಗೋವಿಂದ ಭಟ್ಟರನ್ನು ಸಹಕಲಾವಿದರು ‘ಗುರು ಗೋವಿಂದ ಭಟ್ಟರು‘ ಎಂದೇ ಕರೆಯುತ್ತಿದ್ದರು. ಆರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿದರು, ನಂತರ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು. </p><p>ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಮುಂತಾದ ಪಾತ್ರಗಳು ಪ್ರಸಿದ್ಧ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಭಟ್ಟರ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ , ಮಾಗಧ, ಶಿಶುಪಾಲ ಮುಂತಾದ ಪಾತ್ರಗಳು ಅವಿಸ್ಮರಣೀಯ.</p><p>ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮುಂತಾದ ಪ್ರಸಂಗಗಳನ್ನು ಇವರು ರಚಿಸಿದ್ದಾರೆ.</p>.<p><strong>ಅನ್ನವನ್ನರಸುತ್ತಾ....</strong></p><p>ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾದದ್ದು ಅನ್ನ. ಹೊಟ್ಟೆ ತುಂಬುವಲ್ಲಿಯವರೆಗೆ ಮನುಷ್ಯ ಪಶು, ಶುದ್ಧ ಪಶುವಾಗಿರುತ್ತಾನೆ. ಹೊಟ್ಟೆ ತುಂಬಿದ ಮೇಲೆ ಅವನಿಗೆ ಎಲ್ಲದರ ಅರಿವಾಗುವುದು. ಅಲ್ಲಿಂದ ಅವನು ಧಾರ್ಮಿಕನಾಗಲು, ನಾಗರಿಕನಾಗಲು, ಧರ್ಮಿಷ್ಠನಾಗಲು, ಒಟ್ಟಿನಲ್ಲಿ ‘ಸುಭಗ’ನಾಗಲು ತೊಡಗುತ್ತಾನೆ. ಇಂದು ನನ್ನನ್ನು ಜನ ‘ಯಕ್ಷ ಕಲಾವಿದ’ನೆಂದು ಗುರುತಿಸುತ್ತಿದ್ದಾರೆ. ಆದರೆ ಕಲೆಯ ಬಗ್ಗೆ ನನಗೆ ಅರಿವು ಮೂಡಿದ್ದೇ ಬಹಳ ತಡವಾಗಿ. ದೈಗೋಳಿ ಎಂಬಲ್ಲಿ ಹೊಟೇಲ್ ಕೆಲಸದಲ್ಲಿದ್ದರೂ ಯಾವುದೇ ಸಂಬಳ ಇಲ್ಲದೇ ಇದ್ದ ಕಾರಣಕ್ಕಾಗಿ ನನ್ನ ಮನಸ್ಸು ಸಂಬಳ ಸಿಗುವ ಯಕ್ಷಗಾನದ ಕಡೆಗೆ ವಾಲಿತ್ತು ಎಂದು ’ಎಪ್ಪತ್ತು ತಿರುಗಾಟಗಳು‘ ಎಂಬ ತಮ್ಮ ಕೃತಿಯಲ್ಲಿ ಅವರು ನೆನಪಿಸಿಕೊಂಡಿದ್ದರು. </p>.ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಇನ್ನಿಲ್ಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>