"ಎಲ್ಲರೂ ಮಾಡುವುದು ಅಧಿಕಾರಕ್ಕಾಗಿ. ಅಧಿಕಾರ ಇದ್ರೆ ಸಾಧನೆ ಮಾಡಲು ಸಾಧ್ಯ.ಯೋಚನೆ ಮಾಡ್ತೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ ಎಂದೂ ಹೇಳಿದರು.
ಬಿಡಿಎ ಅಧ್ಯಕ್ಷ, ದೆಹಲಿಯ ವಿಶೇಷ ಪ್ರತಿನಿಧಿ, ಯೋಜನಾ ಆಯೋಗದ ಅಧ್ಯಕ್ಷ ಸ್ಥಾನ ವಿಚಾರದ ಬಗ್ಗೆ ಕೇಳಿದಾಗ, 'ನೋಡೊಣ ಏನು ಮಾಡುತ್ತಾರೋ ಗೊತ್ತಿಲ್ಲ. ನಾನು ಏನು ಕೇಳುತ್ತೇನೆ ಎನ್ನುವುದರ ಮೇಲೆ ಬರುವುದಿಲ್ಲ. ಅವರು ಏನು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ.ನಾನು ನಿರ್ದಿಷ್ಟವಾಗಿ ಏನನ್ನೂ ಕೇಳಿಲ್ಲ ಎಂದರು.
ಗ್ಯಾರಂಟಿಗಳ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಚಿವ ಸಂಪುಟದಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು. ತೀರ್ಮಾನಕ್ಕೆ ಬರೋವರೆಗೂ ಸಚಿವರು ವಿಶ್ಲೇಷಿಸುವುದು ಸರಿಯಲ್ಲ. ಸಚಿವ ಸಂಪುಟದಲ್ಲಿ ವಿಸ್ತ್ರತ ಚರ್ಚೆ ನಡೆದ ಬಳಿಕ ತೀರ್ಮಾನ ಆಗೋದು. ಹಾರಿಕೆ ಉತ್ತರ ಕೊಟ್ಟರೇ ಜನರ ಮನಸ್ಸಿನಲ್ಲಿ ಗೊಂದಲ ಮೂಡುತ್ತದೆ. ಹೀಗಾಗಿ ಯಾವ ಮಂತ್ರಿಗಳು ಮಾತಾಡಬಾರದು' ಎಂದು ಸಲಹೆ ನೀಡಿದರು.