<p><strong>ಕೊಡಿಗೇನಹಳ್ಳಿ:</strong> ಕಬಡ್ಡಿ ಆಟದ ಸಂದರ್ಭದಲ್ಲಿ ಬೆಟ್ಟಿಂಗ್ ಕಟ್ಟಿದಾಗಿ ಹೇಳಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಂದ್ರಾಳು ನಾಗಭೂಷಣ್ ಅವರ ತಂಡವು ಬುಧವಾರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತು.</p>.<p>ತುಮಕೂರು ನಗರದ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಮತ್ತು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್ ಕಟ್ಟಿ ಜನರು ಬೆಟ್ಟಿಂಗ್ ಕಟ್ಟುವಂತೆ ಪ್ರಚೋದಕಾರಿ ಸಂದೇಶ ನೀಡಿ, ಅಪರಾಧವೆಸಗಿದ್ದಾರೆಎಂದು ಹಂದ್ರಾಳು ನಾಗಭೂಷಣ್ ಆರೋಪಿಸಿದರು.</p>.<p>ಈ ಕುರಿತು ಕೊಡಿಗೇನಹಳ್ಳಿ ಪೋಲಿಸ್ ಠಾಣೆ, ಮಧುಗಿರಿ ವೃತ್ತ ನಿರೀಕ್ಷಕರು ಹಾಗೂ ತುಮಕೂರು ಎಸ್.ಪಿ.ಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಜರುಗಿಸದ ಕಾರಣ ನಾನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ದಾವೆ ಹೂಡಿದ್ದೆ. ಈ ಪ್ರಕಾರ, ಪರಮೇಶ್ವರ ಮತ್ತು ಶುಭ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ವರದಿ ನೀಡಲು ಕೋರ್ಟ್ ಆದೇಶಿಸಿದೆ ಎಂದು ಹೇಳಿದರು.</p>.<p>ನ್ಯಾಯಾಲಯದ ಆದೇಶದ ಪ್ರತಿಯನ್ನು ತಂದು ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೆ. ಆದರೆ, ತಮಗೆ ಕೋರ್ಟ್ ಕಾಪಿ ಬಂದಿಲ್ಲ. ಕೋರ್ಟ್ ಆದೇಶ ತಮಗೆ ತಲುಪುವವರೆಗೆ ಎಫ್ಐಆರ್ ದಾಖಲಿಸುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಎಫ್ಐಆರ್ ದಾಖಲಿಸದಿದ್ದರೆ, ನಾವು ರಾತ್ರಿ ಪೂರ್ತಿ ಠಾಣೆ ಎದುರು ಧರಣಿ ನಡೆಸುತ್ತೇವೆ ಎಂದರು.</p>.<p>ಈ ವೇಳೆ ವಕೀಲರಾದ ಉಮಾಪತಿ, ಸುಧಾಕಟ್ವಾ, ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ, ಮಧುಗಿರಿ ಮಹೇಶ್, ಹಂದ್ರಾಳು ನಾಗಭೂಷಣ್, ರವಿ ಸಿದ್ದಾಪುರ, ಮಧು ಗುಂಡ್ಲಹಳ್ಳಿ, ಶ್ರೀಧರ್ ದೇವರತೋಪು, ವೆಂಕಟೇಶ್ ಚಿಕ್ಕ ಹೊಸಹಳ್ಳಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-17-801081884</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ:</strong> ಕಬಡ್ಡಿ ಆಟದ ಸಂದರ್ಭದಲ್ಲಿ ಬೆಟ್ಟಿಂಗ್ ಕಟ್ಟಿದಾಗಿ ಹೇಳಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹಂದ್ರಾಳು ನಾಗಭೂಷಣ್ ಅವರ ತಂಡವು ಬುಧವಾರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತು.</p>.<p>ತುಮಕೂರು ನಗರದ ಮಹತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಮತ್ತು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್ ಕಟ್ಟಿ ಜನರು ಬೆಟ್ಟಿಂಗ್ ಕಟ್ಟುವಂತೆ ಪ್ರಚೋದಕಾರಿ ಸಂದೇಶ ನೀಡಿ, ಅಪರಾಧವೆಸಗಿದ್ದಾರೆಎಂದು ಹಂದ್ರಾಳು ನಾಗಭೂಷಣ್ ಆರೋಪಿಸಿದರು.</p>.<p>ಈ ಕುರಿತು ಕೊಡಿಗೇನಹಳ್ಳಿ ಪೋಲಿಸ್ ಠಾಣೆ, ಮಧುಗಿರಿ ವೃತ್ತ ನಿರೀಕ್ಷಕರು ಹಾಗೂ ತುಮಕೂರು ಎಸ್.ಪಿ.ಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಜರುಗಿಸದ ಕಾರಣ ನಾನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ದಾವೆ ಹೂಡಿದ್ದೆ. ಈ ಪ್ರಕಾರ, ಪರಮೇಶ್ವರ ಮತ್ತು ಶುಭ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ವರದಿ ನೀಡಲು ಕೋರ್ಟ್ ಆದೇಶಿಸಿದೆ ಎಂದು ಹೇಳಿದರು.</p>.<p>ನ್ಯಾಯಾಲಯದ ಆದೇಶದ ಪ್ರತಿಯನ್ನು ತಂದು ಪರಮೇಶ್ವರ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೆ. ಆದರೆ, ತಮಗೆ ಕೋರ್ಟ್ ಕಾಪಿ ಬಂದಿಲ್ಲ. ಕೋರ್ಟ್ ಆದೇಶ ತಮಗೆ ತಲುಪುವವರೆಗೆ ಎಫ್ಐಆರ್ ದಾಖಲಿಸುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಎಫ್ಐಆರ್ ದಾಖಲಿಸದಿದ್ದರೆ, ನಾವು ರಾತ್ರಿ ಪೂರ್ತಿ ಠಾಣೆ ಎದುರು ಧರಣಿ ನಡೆಸುತ್ತೇವೆ ಎಂದರು.</p>.<p>ಈ ವೇಳೆ ವಕೀಲರಾದ ಉಮಾಪತಿ, ಸುಧಾಕಟ್ವಾ, ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ, ಮಧುಗಿರಿ ಮಹೇಶ್, ಹಂದ್ರಾಳು ನಾಗಭೂಷಣ್, ರವಿ ಸಿದ್ದಾಪುರ, ಮಧು ಗುಂಡ್ಲಹಳ್ಳಿ, ಶ್ರೀಧರ್ ದೇವರತೋಪು, ವೆಂಕಟೇಶ್ ಚಿಕ್ಕ ಹೊಸಹಳ್ಳಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-17-801081884</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>