<p><strong>ನವದೆಹಲಿ:</strong> ‘ಜಲಜೀವನ್ ಮಿಷನ್ ಯೋಜನೆಯಡಿ (ಜೆಜೆಎಂ) ಕರ್ನಾಟಕದಲ್ಲಿ 66,344 ಯೋಜನೆಗಳ ಪೈಕಿ 24,888 (ಶೇ 35) ಯೋಜನೆಗಳಷ್ಟೇ ಪೂರ್ಣಗೊಂಡಿವೆ’ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ </p>.<p>ರಾಜ್ಯದಲ್ಲಿ ಯೋಜನೆಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಆರ್ಥಿಕವಾಗಿ ಕೇವಲ 9,325 ಯೋಜನೆಗಳು ಮುಗಿದಿದ್ದು, ಶೇ 14ರಷ್ಟು ಪ್ರಗತಿ ಆಗಿದೆ ಎಂದು ದೂರಿದ್ದಾರೆ. </p>.<p>‘ಯೋಜನೆಯಡಿ 2019ರಿಂದ 2024ರ ವರೆಗೆ ರಾಜ್ಯಕ್ಕೆ ಕೇಂದ್ರವು ₹28,623 ಕೋಟಿ ಹಂಚಿಕೆ ಮಾಡಿತ್ತು. ಆದರೆ, ನಿಧಾನಗತಿಯ ಕಾಮಗಾರಿ ಹಾಗೂ ಸಕಾಲಕ್ಕೆ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ₹11,152 ಕೋಟಿ ಮಾತ್ರ ಬಿಡುಗಡೆ ಆಗಿದೆ. ಪಾಲಿನ ಉಳಿದ ₹16,863 ಕೋಟಿ ಬಳಸಿಕೊಳ್ಳುವಲ್ಲಿ ರಾಜ್ಯ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜೆಜೆಎಂ ಪ್ರಗತಿಯಲ್ಲಿ ರಾಜ್ಯ 22ನೇ ಸ್ಥಾನದಲ್ಲಿದೆ’ ಎಂದು ಅವರು ದೂರಿದ್ದಾರೆ. </p>.<p>‘2019ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ನಳ್ಳಿ ನೀರಿನ ಸಂಪರ್ಕ ಶೇ 24ರಷ್ಟು ಇತ್ತು. ಈಗ ಶೇ 86ರಷ್ಟಕ್ಕೆ ಏರಿಕೆಯಾಗಿದೆ. ನೂತನ ಸಂಪರ್ಕ ಕಲ್ಪಿಸುವಲ್ಲಿ ಗಮನಾರ್ಹ ಸಾಧನೆ ಆಗಿದ್ದರೂ ಹರ್ ಘರ್ ಜಲ್ ಸರ್ಟಿಫಿಕೇಷನ್ ಅತೀ ಕಡಿಮೆ ಇದೆ. 26,591 ಹಳ್ಳಿಗಳ ಪೈಕಿ ಕೇವಲ 6,986 ಹಳ್ಳಿಗಳು ಪ್ರಮಾಣಪತ್ರ ಪಡೆದಿವೆ. ರಾಜ್ಯದ ಯಾವುದೇ ಜಿಲ್ಲೆಗೆ ಪ್ರಮಾಣಪತ್ರ ಸಿಕ್ಕಿಲ್ಲ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿ’ ಎಂದು ಅವರು ಆರೋಪಿಸಿದ್ದಾರೆ. </p>.<p>ಯೋಜನೆಯ ಅನುಷ್ಥಾನದಲ್ಲಿ ಲೋಪ ಆಗಿರುವ ಕಾರಣಕ್ಕೆ ಕರ್ನಾಟಕ ಮಾತ್ರವಲ್ಲದೇ, ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. </p>.<p><strong>‘26 ಯೋಜನೆಗಳಿಗೆ ಕಾರ್ಯಾದೇಶ ನೀಡದ ರಾಜ್ಯ’</strong></p><p> ‘66,344 ಯೋಜನೆಗಳ ಪೈಕಿ ₹1,716 ಕೋಟಿ ಮೊತ್ತದ 26 ಯೋಜನೆಗಳಿಗೆ 2024ರ ಮಾರ್ಚ್ ಅಂತ್ಯದೊಳಗೆ ರಾಜ್ಯ ಸರ್ಕಾರ ಕಾರ್ಯಾದೇಶ ನೀಡಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಉದಾಹರಣೆ. ಹಲವಾರು ದೂರುಗಳು ಬಂದ ಕಾರಣ ಪರಿಶೀಲನೆಗೆ ರಾಜ್ಯಕ್ಕೆ ತಂಡ ಕಳುಹಿಸಲಾಗಿತ್ತು. ಈ ತಂಡವು ರಾಜ್ಯದ ಹಲವು ಲೋಪಗಳನ್ನು ಪತ್ತೆ ಹಚ್ಚಿದೆ. ಯೋಜನಾ ವೆಚ್ಚದ ಅನವಶ್ಯಕ ಹೆಚ್ಚಳ, ವಿನ್ಯಾಸ ಅಥವಾ ತಾಂತ್ರಿಕ ಅಂಶಗಳಲ್ಲಿ ಬದಲಾವಣೆ, ಕಾನೂನಾತ್ಮಕ ಅನುಮತಿ ವಿಳಂಬ ಸೇರಿದಂತೆ ಹಲವು ಲೋಪಗಳು ಆಗಿವೆ. ಈ ಎಲ್ಲ ಅಂಶಗಳನ್ನು ಮುಚ್ಚಿಟ್ಟು ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದು ಸೋಮಣ್ಣ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಜಲಜೀವನ್ ಮಿಷನ್ ಯೋಜನೆಯಡಿ (ಜೆಜೆಎಂ) ಕರ್ನಾಟಕದಲ್ಲಿ 66,344 ಯೋಜನೆಗಳ ಪೈಕಿ 24,888 (ಶೇ 35) ಯೋಜನೆಗಳಷ್ಟೇ ಪೂರ್ಣಗೊಂಡಿವೆ’ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ </p>.<p>ರಾಜ್ಯದಲ್ಲಿ ಯೋಜನೆಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಆರ್ಥಿಕವಾಗಿ ಕೇವಲ 9,325 ಯೋಜನೆಗಳು ಮುಗಿದಿದ್ದು, ಶೇ 14ರಷ್ಟು ಪ್ರಗತಿ ಆಗಿದೆ ಎಂದು ದೂರಿದ್ದಾರೆ. </p>.<p>‘ಯೋಜನೆಯಡಿ 2019ರಿಂದ 2024ರ ವರೆಗೆ ರಾಜ್ಯಕ್ಕೆ ಕೇಂದ್ರವು ₹28,623 ಕೋಟಿ ಹಂಚಿಕೆ ಮಾಡಿತ್ತು. ಆದರೆ, ನಿಧಾನಗತಿಯ ಕಾಮಗಾರಿ ಹಾಗೂ ಸಕಾಲಕ್ಕೆ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ₹11,152 ಕೋಟಿ ಮಾತ್ರ ಬಿಡುಗಡೆ ಆಗಿದೆ. ಪಾಲಿನ ಉಳಿದ ₹16,863 ಕೋಟಿ ಬಳಸಿಕೊಳ್ಳುವಲ್ಲಿ ರಾಜ್ಯ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜೆಜೆಎಂ ಪ್ರಗತಿಯಲ್ಲಿ ರಾಜ್ಯ 22ನೇ ಸ್ಥಾನದಲ್ಲಿದೆ’ ಎಂದು ಅವರು ದೂರಿದ್ದಾರೆ. </p>.<p>‘2019ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ನಳ್ಳಿ ನೀರಿನ ಸಂಪರ್ಕ ಶೇ 24ರಷ್ಟು ಇತ್ತು. ಈಗ ಶೇ 86ರಷ್ಟಕ್ಕೆ ಏರಿಕೆಯಾಗಿದೆ. ನೂತನ ಸಂಪರ್ಕ ಕಲ್ಪಿಸುವಲ್ಲಿ ಗಮನಾರ್ಹ ಸಾಧನೆ ಆಗಿದ್ದರೂ ಹರ್ ಘರ್ ಜಲ್ ಸರ್ಟಿಫಿಕೇಷನ್ ಅತೀ ಕಡಿಮೆ ಇದೆ. 26,591 ಹಳ್ಳಿಗಳ ಪೈಕಿ ಕೇವಲ 6,986 ಹಳ್ಳಿಗಳು ಪ್ರಮಾಣಪತ್ರ ಪಡೆದಿವೆ. ರಾಜ್ಯದ ಯಾವುದೇ ಜಿಲ್ಲೆಗೆ ಪ್ರಮಾಣಪತ್ರ ಸಿಕ್ಕಿಲ್ಲ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿ’ ಎಂದು ಅವರು ಆರೋಪಿಸಿದ್ದಾರೆ. </p>.<p>ಯೋಜನೆಯ ಅನುಷ್ಥಾನದಲ್ಲಿ ಲೋಪ ಆಗಿರುವ ಕಾರಣಕ್ಕೆ ಕರ್ನಾಟಕ ಮಾತ್ರವಲ್ಲದೇ, ಉತ್ತರ ಪ್ರದೇಶ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. </p>.<p><strong>‘26 ಯೋಜನೆಗಳಿಗೆ ಕಾರ್ಯಾದೇಶ ನೀಡದ ರಾಜ್ಯ’</strong></p><p> ‘66,344 ಯೋಜನೆಗಳ ಪೈಕಿ ₹1,716 ಕೋಟಿ ಮೊತ್ತದ 26 ಯೋಜನೆಗಳಿಗೆ 2024ರ ಮಾರ್ಚ್ ಅಂತ್ಯದೊಳಗೆ ರಾಜ್ಯ ಸರ್ಕಾರ ಕಾರ್ಯಾದೇಶ ನೀಡಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಉದಾಹರಣೆ. ಹಲವಾರು ದೂರುಗಳು ಬಂದ ಕಾರಣ ಪರಿಶೀಲನೆಗೆ ರಾಜ್ಯಕ್ಕೆ ತಂಡ ಕಳುಹಿಸಲಾಗಿತ್ತು. ಈ ತಂಡವು ರಾಜ್ಯದ ಹಲವು ಲೋಪಗಳನ್ನು ಪತ್ತೆ ಹಚ್ಚಿದೆ. ಯೋಜನಾ ವೆಚ್ಚದ ಅನವಶ್ಯಕ ಹೆಚ್ಚಳ, ವಿನ್ಯಾಸ ಅಥವಾ ತಾಂತ್ರಿಕ ಅಂಶಗಳಲ್ಲಿ ಬದಲಾವಣೆ, ಕಾನೂನಾತ್ಮಕ ಅನುಮತಿ ವಿಳಂಬ ಸೇರಿದಂತೆ ಹಲವು ಲೋಪಗಳು ಆಗಿವೆ. ಈ ಎಲ್ಲ ಅಂಶಗಳನ್ನು ಮುಚ್ಚಿಟ್ಟು ಕೇಂದ್ರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದು ಸೋಮಣ್ಣ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>