<p><strong>ಬಿಡದಿ (ರಾಮನಗರ): </strong>ಇಲ್ಲಿನ ವಂಡರ್ಲಾ ರೆಸಾರ್ಟ್ನಲ್ಲಿ ನೆಲೆಸಿರುವ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಶುಕ್ರವಾರ ರೆಸಾರ್ಟ್ಗೆ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ ಭೇಟಿ ಮಾಡಿದರು.</p><p>ಶಿವಕುಮಾರ್ ಅವರು ರೆಸಾರ್ಟ್ಗೆ ಬರುವುದಕ್ಕೆ ಮುಂಚೆಯೇ ವಿದ್ಯಾ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ಕಾಯುತ್ತಾ ಕುಳಿತಿದ್ದರು. ಡಿಸಿಎಂ ಬಂದು ಕಾರಿನಿಂದ ಬಂದಿಳಿಯುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಅವರನ್ನು ಮುತ್ತಿಕೊಂಡರು. ಇದೇ ವೇಳೆ, ಮುಖಂಡರೊಬ್ಬರು ವಿದ್ಯಾ ಅವರನ್ನು ಡಿಸಿಎಂ ಬಳಿ ಕರೆದು ಪರಿಚಯಿಸಿದರು.</p><p>ಡಿಸಿಎಂಗೆ ಫೋಟೊ ನೀಡಿ ನಮಸ್ಕರಿಸಿದ ವಿದ್ಯಾ, ತಮ್ಮ ಬಗ್ಗೆ ಭೇಟಿ ಉದ್ದೇಶ ಹೇಳಲು ಮುಂದಾದರು. ಆಗ ಶಿವಕುಮಾರ್ ಅವರು ಆಮೇಲೆ ಮಾತನಾಡುವೆ ಎಂದು ಕೈ ಸನ್ನೆ ಮಾಡುತ್ತಾ, ರೆಸಾರ್ಟ್ ಒಳಕ್ಕೆ ಹೋದರು.</p><p>ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತವನ್ನು ವಿದ್ಯಾ ಅವರು ಹೊಂದಿದ್ದಾರೆ. ಆ ಕುರಿತು ಮಾತನಾಡಲು ಶಿವಕುಮಾರ್ ಭೇಟಿಗಾಗಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ (ರಾಮನಗರ): </strong>ಇಲ್ಲಿನ ವಂಡರ್ಲಾ ರೆಸಾರ್ಟ್ನಲ್ಲಿ ನೆಲೆಸಿರುವ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಶುಕ್ರವಾರ ರೆಸಾರ್ಟ್ಗೆ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ ಭೇಟಿ ಮಾಡಿದರು.</p><p>ಶಿವಕುಮಾರ್ ಅವರು ರೆಸಾರ್ಟ್ಗೆ ಬರುವುದಕ್ಕೆ ಮುಂಚೆಯೇ ವಿದ್ಯಾ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ಕಾಯುತ್ತಾ ಕುಳಿತಿದ್ದರು. ಡಿಸಿಎಂ ಬಂದು ಕಾರಿನಿಂದ ಬಂದಿಳಿಯುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಅವರನ್ನು ಮುತ್ತಿಕೊಂಡರು. ಇದೇ ವೇಳೆ, ಮುಖಂಡರೊಬ್ಬರು ವಿದ್ಯಾ ಅವರನ್ನು ಡಿಸಿಎಂ ಬಳಿ ಕರೆದು ಪರಿಚಯಿಸಿದರು.</p><p>ಡಿಸಿಎಂಗೆ ಫೋಟೊ ನೀಡಿ ನಮಸ್ಕರಿಸಿದ ವಿದ್ಯಾ, ತಮ್ಮ ಬಗ್ಗೆ ಭೇಟಿ ಉದ್ದೇಶ ಹೇಳಲು ಮುಂದಾದರು. ಆಗ ಶಿವಕುಮಾರ್ ಅವರು ಆಮೇಲೆ ಮಾತನಾಡುವೆ ಎಂದು ಕೈ ಸನ್ನೆ ಮಾಡುತ್ತಾ, ರೆಸಾರ್ಟ್ ಒಳಕ್ಕೆ ಹೋದರು.</p><p>ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತವನ್ನು ವಿದ್ಯಾ ಅವರು ಹೊಂದಿದ್ದಾರೆ. ಆ ಕುರಿತು ಮಾತನಾಡಲು ಶಿವಕುಮಾರ್ ಭೇಟಿಗಾಗಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>