ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯನಿರತ ಪತ್ರಕರ್ತರ ಸಂಘ: ‘ಪ್ರಜಾವಾಣಿ’ಗೆ ಏಳು ಪ್ರಶಸ್ತಿ

Last Updated 18 ಜನವರಿ 2023, 23:03 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2020- 21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ‘ಪ್ರಜಾವಾಣಿ’ಗೆ ಏಳು, ಡೆಕ್ಕನ್‌ ಹೆರಾಲ್ಡ್‌ಗೆ ಒಂದು ಪ್ರಶಸ್ತಿ ದೊರೆತಿವೆ.

‘ಪ್ರಜಾವಾಣಿ’ ವರದಿಗಾರರ ವಿಭಾಗದ ಮುಖ್ಯಸ್ಥ ವೈ.ಗ.ಜಗದೀಶ್‌ (ಖಾದ್ರಿ ಶಾಮಣ್ಣ ಪ್ರಶಸ್ತಿ–ಅತ್ಯುತ್ತಮ ರಾಜಕೀಯ ವಿಮರ್ಶೆ), ಹಿರಿಯ ವರದಿಗಾರರಾದ ಗುರು ಪಿ.ಎಸ್‌. (ನಾಡಿಗೇರ ಕೃಷ್ಣರಾಯರ ಪ್ರಶಸ್ತಿ–ಅತ್ಯುತ್ತಮ ಲೇಖನ), ಕೆ.ಓಂಕಾರಮೂರ್ತಿ (ಪಟೇಲ್‌ ಭೈರಹನುಮಯ್ಯ ಪ್ರಶಸ್ತಿ–ಅತ್ಯುತ್ತಮ ಮಾನವೀಯ ವರದಿ), ಉಪ ಸಂಪಾದಕಿ ಕಲಾವತಿ ಬೈಚಬಾಳ (ಜಿ.ನಾರಾಯಣ ಸ್ವಾಮಿ ಪ್ರಶಸ್ತಿ–ಅತ್ಯುತ್ತಮ ಗ್ರಾಮಾಂತರ ವರದಿ), ಅರೆಕಾಲಿಕ ವರದಿಗಾರರಾದ ಅಶೋಕ ಸಾಲವಡಗಿ (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ–ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ), ಬಸವರಾಜ ಭೋಗಾವತಿ (ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ –ಅತ್ಯುತ್ತಮ ವರದಿ), ಎಸ್.ಎಸ್.ಸಚ್ಛಿತ್, ಹುಣಸೂರು (ಆರ್.ಎಲ್.ವಾಸುದೇವರಾವ್‌ ಪ್ರಶಸ್ತಿ–ಅರಣ್ಯ ಕುರಿತ ವರದಿಗೆ), ಡೆಕ್ಕನ್‌ ಹೆರಾಲ್ಡ್‌ನ ಹಿರಿಯ ವಿಶೇಷ ವರದಿಗಾರ್ತಿ ಬಿ.ಎಸ್‌. ರಶ್ಮಿ ಬೇಲೂರು (ಕೆ.ಎನ್‌.ಸುಬ್ರಹ್ಮಣ್ಯ ಪ್ರಶಸ್ತಿ–ಇಂಗ್ಲಿಷ್‌ ಪತ್ರಿಕೆ ಅತ್ಯುತ್ತಮ ವರದಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರ ವಿವರ: ಮಂಜುನಾಥ ಜೂಟಿ, ವಿಜಯ ಕರ್ನಾಟಕ, ಕಲಬುರಗಿ (ಜಿ.ನಾರಾಯಣ ಸ್ವಾಮಿ ಪ್ರಶಸ್ತಿ –ಅತ್ಯುತ್ತಮ ಗ್ರಾಮಾಂತರ ವರದಿ). ಕೂಡ್ಲಿ ಗುರುರಾಜ, ಉದಯವಾಣಿ, ಮೈಸೂರು (ಖಾದ್ರಿ ಶಾಮಣ್ಣ ಪ್ರಶಸ್ತಿ-ಅತ್ಯುತ್ತಮ ರಾಜಕೀಯ ವಿಮರ್ಶೆ), ಜಿ.ವಿ.ಸುಬ್ಬರಾವ್, ಬಳ್ಳಾರಿ ಬೆಳಗಾಯಿತು ಪತ್ರಿಕೆ, ವಿಜಯನಗರ ಜಿಲ್ಲೆ (ಪಟೇಲ್ ಭೈರಹನುಮಯ್ಯ ಪ್ರಶಸ್ತಿ-ಅತ್ಯುತ್ತಮ ಮಾನವೀಯ ವರದಿ), ವಿಜಯಲಕ್ಷ್ಮಿ ಶಿಬರೂರು, ವಿಜಯ ಟೈಮ್ಸ್, ಬೆಂಗಳೂರು, ಎಲ್.ಎಸ್.ಶ್ರೀಕಾಂತ್, ಕನ್ನಡಪ್ರಭ, ಮೈಸೂರು(ಬಿ.ಎಸ್.ವೆಂಕಟರಾಂ ಪ್ರಶಸ್ತಿ-ಅತ್ಯುತ್ತಮ ಸ್ಕೂಪ್ ವರದಿ), ಇಬ್ರಾಹಿಂ ಖಲೀಬ್, ಸುದ್ದಿ ಬಿಡುಗಡೆ, ಪುತ್ತೂರು. ಎಚ್.ಟಿ.ಪ್ರಸನ್ನ, ಪೊಲೀಸ್ ಬೇಟೆ, ಹಿರಿಯೂರು (ಗಿರಿಧರ್ ಪ್ರಶಸ್ತಿ -ಅತ್ಯುತ್ತಮ ಅಪರಾಧ ವರದಿ).

ಡಾ.ಯು.ಬಿ.ರಾಜಲಕ್ಷ್ಮಿ, ತರಂಗ, ಮಣಿಪಾಲ್. ಎಚ್.ಜಿ.ಶೋಭ, ಸ್ತ್ರೀ ಜಾಗೃತಿ ಪತ್ರಿಕೆ (ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ, ವಾರಪತ್ರಿಕೆ ವಿಭಾಗ). ಅವಿನಾಶ್ ಜೈನಹಳ್ಳಿ, ವಿಜಯವಾಣಿ, ಮೈಸೂರು. ಸ್ಪಂದನ್‌ ಕೆ. ಕನ್ನಡ ಪ್ರಭ, ಬೆಂಗಳೂರು (ನೆಟ್ಟಕಲ್ಲಪ್ಪ ಪ್ರಶಸ್ತಿ–ಅತ್ಯುತ್ತಮ ಕ್ರೀಡಾ ವರದಿ). ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಸ್ಟಾರ್ ಆಫ್ ಮೈಸೂರು, ಕೆ.ಎಸ್.ಶ್ರೀಧರ್, ವಿಜಯಕರ್ನಾಟಕ, ಆರ್.ನಾಗರಾಜ್, ತುಮಕೂರು (ಬಂಡಾಪುರ ಮುನಿರಾಜು ಪ್ರಶಸ್ತಿ–ಅತ್ಯುತ್ತಮ ಸುದ್ದಿ ಚಿತ್ರ).

ಶ್ರೀನಿವಾಸ.ಪಿ.ಎ, ಹಾಸನ (ಆರ್.ಎಲ್.ವಾಸುದೇವರಾವ್‌ ಪ್ರಶಸ್ತಿ–ಅರಣ್ಯ ಕುರಿತ ವರದಿಗೆ). ನಿರಂಜನ ಕಗ್ಗೆರೆ, ಟೈಮ್ಸ್‌ ಆಫ್ ಇಂಡಿಯಾ, ಇಮ್ರಾನ್‌ ವುಲ್ಲಾ, ಪಾವಗಡ, ಗುರುದತ್ ಭಟ್, ವಿಜಯ ಕರ್ನಾಟಕ, ಬೆಳಗಾವಿ (ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ–ವನ್ಯಪ್ರಾಣಿಗಳ ಅತ್ಯುತ್ತಮ ವರದಿಗೆ).

ಕೆ.ಬಿ.ಜಗದೀಶ್‌ ಜೇಡುಬೀಟೆ, ಗೋಣಿಕೊಪ್ಪ, ಕೊಡಗು, ಕೆ.ಎಸ್.ಸೋಮಶೇಖರ, ಇಂದುಸಂಜೆ, ಬೆಂಗಳೂರು (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ–ಆರ್ಥಿಕ ದುರ್ಬಲ ವರ್ಗದ ಅತ್ಯುತ್ತಮ ವರದಿಗೆ), ಎಚ್.ಆರ್.ದೇವರಾಜ್‌, ಕಡೂರು, ಚಿಕ್ಕಮಗಳೂರು ಜಿಲ್ಲೆ, ರಾಘವೇಂದ್ರ ವೆಂಕಟರಾವ್‌ ಗುಮಾಸ್ತೆ, ಸಂಯುಕ್ತ ಕರ್ನಾಟಕ, ರಾಯಚೂರು ಜಿಲ್ಲೆ, ಸದಾಶಿವ ರಾಮಪ್ಪ ಬಡಿಗೇರ, ರಾಯಭಾಗ, ಬೆಳಗಾವಿ ಜಿಲ್ಲೆ (ಮಂಡಿಬೆಲೆ ಶಾಮಣ್ಣ ಪ್ರಶಸ್ತಿ –ಗ್ರಾಮೀಣ ವಿಭಾಗ).

ಎನ್.ಬಿ.ನಾರಾಯಣ, ಮಂಗಳ ಪತ್ರಿಕೆ, ಆರ್.ಜಿ.ಹಳ್ಳಿ ನಾಗರಾಜ್, ಬೆಂಗಳೂರು, ಗಂಗಾಧರ ಕುಷ್ಟಗಿ, ಲಂಕೇಶ್ ಪತ್ರಿಕೆ, ಪುಟ್ಟಸ್ವಾಮರಾಧ್ಯ, ಬೆಂಗಳೂರು (ನಾಡಪ್ರಭು ಕೆಂಪೇಗೌಡ ಪ್ರಶಸ್ತಿ). ರಾಜು ಖಾರ್ವಿ, ಉದಯವಾಣಿ, ಬೆಂಗಳೂರು, ಕೆ.ಪ್ರಕಾಶ್‌, ವಿಜಯ ಕರ್ನಾಟಕ, ಮುಳಬಾಗಿಲು (ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ –ಅತ್ಯುತ್ತಮ ಕೃಷಿ ವರದಿ). ಬಿ.ಎನ್.ಮಲ್ಲೇಶ್, ನಗರವಾಣಿ, ದಾವಣಗೆರೆ (ನಾಡಿಗೇರ ಕೃಷ್ಣರಾಯರ ಪ್ರಶಸ್ತಿ –ಅತ್ಯುತ್ತಮ ಲೇಖನ). ಹರೀಶ್‌ ಕುಮಾರ್. ಆರ್, ವಿಜಯವಾಣಿ, ಎಸ್.ಆರ್.ರೋಹಿತ್, ನಾವಿಕ ಪತ್ರಿಕೆ, ಶಿವಮೊಗ್ಗ (ಅತ್ಯುತ್ತಮ ಪುಟ ವಿನ್ಯಾಸಗಾರರು). ಪಿ.ರಾಜೇಂದ್ರ, ಹೊಸದಿಗಂತ, ಜಗನ್ .ಆರ್‌, ವಿಜಯವಾಣಿ (ನ್ಯಾಯಾಲಯ ವಿಭಾಗ). ಪಿ.ಪಿ.ಕಾಳಯ್ಯ, ಶಕ್ತಿ ದಿನಪತ್ರಿಕೆ, ಕೊಡಗು (ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ –ಅತ್ಯುತ್ತಮ ವರದಿ), ಪ್ರವೀಣ್ ಎಚ್.ಪರ, ದಿ ಹಿಂದೂ, ಕಲಬುರಗಿ, ಚೇತನ ಬೆಳಗೆರೆ, ಬೆಂಗಳೂರು (ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ –ಇಂಗ್ಲಿಷ್ ಪತ್ರಿಕೆ ಅತ್ಯುತ್ತಮ ವರದಿ). ಆನಂದ ಸೌದಿ, ಕನ್ನಡ ಪ್ರಭ, ಯಾದಗಿರಿ ಜಿಲ್ಲೆ, ಜಿ.ಮಹಾಂತೇಶ್, ದಿ ಫೈಲ್ಸ್‌ (ಅತ್ಯುತ್ತಮ ತನಿಖಾ ವರದಿ). ನಾಗರಾಜ ಭಟ್, ವಿಜಯವಾಣಿ, ರಾಧಾಕೃಷ್ಣ ಬಡ್ತಿ, ವಿಶ್ವವಾಣಿ, ಶಶಿಧರ್, ಸಂಯುಕ್ತ ಕರ್ನಾಟಕ, ಡಿ.ಜಿ.ಮಮತಾ, ಉದಯಕಾಲ (ಅತ್ಯುತ್ತಮ ಡೆಸ್ಕ್‌ ನಿರ್ವಹಣೆ), ಅಜಿತ್ ಹನುಮಕ್ಕನವರ, ಸುವರ್ಣ ಟಿವಿ, ಸಿದ್ದು ಕಾಳೋಜಿ, ದಿಗ್ವಿಜಯ ಟಿವಿ, ಸುಕನ್ಯ, ಟಿವಿ 9 (ವಿದ್ಯುನ್ಮಾನ ವಿಭಾಗ), ರವೀಶ್, ಪಬ್ಲಿಕ್ ಟಿವಿ, ವಿನಾಯಕ ಗಂಗೊಳ್ಳಿ, ಫಸ್ಟ್‌ ನ್ಯೂಸ್‌, ಮಾರುತಿ ಪಾವಗಡ, ವಿಸ್ತಾರ ನ್ಯೂಸ್‌, ಎಸ್.ಚಂದ್ರಶೇಖರ್‌ ಚಂದನ ಟಿವಿ, ಕೋಲಾರ, ಕೆಪಿಎಸ್ ಪ್ರಮೋದ್, ಪ್ರಜಾ ಟಿವಿ, ಎಚ್.ಜಿ.ಶಾಂತಿನಾಥ, ಈ ಟಿವಿ ಭಾರತ್, ತುಮಕೂರು, ಕೆ.ಎಸ್.ದೀಪ, ಕಸ್ತೂರಿ ಟಿವಿ, ಸಿದ್ದುಬಿರಾದರ್, ಪವರ್ ಟಿವಿ (ವಿದ್ಯುನ್ಮಾನ ವಿಭಾಗ–ವರದಿ).

ವಿಜಯಪುರದಲ್ಲಿ ಫೆಬ್ರುವರಿ 4 ಮತ್ತು 5ರಂದು ನಡೆಯುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT