<p>ಯಾದಗಿರಿ: ಬಾಗಿಲು ಹಾಕಿದ್ದ ಲ್ಯಾಬ್ ಒಂದನ್ನು ತೆರೆಯಲು ₹ 50 ಸಾವಿರ ಲಂಚ ಪಡೆದ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಡಿಎಚ್ಒ) ಹಿರಿಯ ಆರೋಗ್ಯ ತಪಾಸಣಾ ಅಧಿಕಾರಿ ಹಾಗೂ ಮಧ್ಯವರ್ತಿಯಾಗಿದ್ದ ಖಾಸಗಿ ಲ್ಯಾಬ್ನ ಟೆಕ್ನಿಷಿಯನ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.</p>.<p>ಹಿರಿಯ ಆರೋಗ್ಯ ಅಧಿಕಾರಿ ಸೂಗೂರಪ್ಪ ತಿಪ್ಪಣ್ಣ ಹಾಗೂ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಸಂತೋಷ ಶರಣಪ್ಪಗೌಡ ಲಂಚ ಪಡೆದ ಆರೋಪಿಗಳು. ಶ್ರೀ ಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ನ ರಾಹುಲ್ ಸಾಬಣ್ಣ ಕೊಲ್ಲೂರು ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.</p>.<p>ಪ್ರಕರಣ ಒಂದರಲ್ಲಿ ರಾಹುಲ್ ಸಾಬಣ್ಣ ಅವರ ಶ್ರೀಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ಗೆ ಬೀಗ ಹಾಕಲಾಗಿತ್ತು. ಲ್ಯಾಬ್ನ ಬೀಗ ತೆಗೆಯಲು ಆರೋಪಿಯು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿ ಮೂಲಕ ₹50 ಸಾವಿರ ಲಂಚದ ಹಣವನ್ನು ಪಡೆಯುವಾಗ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ್, ಇನ್ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರಿದ್ದ ತಂಡವು ದಾಳಿ ಮಾಡಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-30-939037685</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಬಾಗಿಲು ಹಾಕಿದ್ದ ಲ್ಯಾಬ್ ಒಂದನ್ನು ತೆರೆಯಲು ₹ 50 ಸಾವಿರ ಲಂಚ ಪಡೆದ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಡಿಎಚ್ಒ) ಹಿರಿಯ ಆರೋಗ್ಯ ತಪಾಸಣಾ ಅಧಿಕಾರಿ ಹಾಗೂ ಮಧ್ಯವರ್ತಿಯಾಗಿದ್ದ ಖಾಸಗಿ ಲ್ಯಾಬ್ನ ಟೆಕ್ನಿಷಿಯನ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.</p>.<p>ಹಿರಿಯ ಆರೋಗ್ಯ ಅಧಿಕಾರಿ ಸೂಗೂರಪ್ಪ ತಿಪ್ಪಣ್ಣ ಹಾಗೂ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಸಂತೋಷ ಶರಣಪ್ಪಗೌಡ ಲಂಚ ಪಡೆದ ಆರೋಪಿಗಳು. ಶ್ರೀ ಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ನ ರಾಹುಲ್ ಸಾಬಣ್ಣ ಕೊಲ್ಲೂರು ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.</p>.<p>ಪ್ರಕರಣ ಒಂದರಲ್ಲಿ ರಾಹುಲ್ ಸಾಬಣ್ಣ ಅವರ ಶ್ರೀಸಾಯಿ ರಾಮ್ ಡೈಗ್ನೋಸ್ಟಿಕ್ ಲ್ಯಾಬ್ಗೆ ಬೀಗ ಹಾಕಲಾಗಿತ್ತು. ಲ್ಯಾಬ್ನ ಬೀಗ ತೆಗೆಯಲು ಆರೋಪಿಯು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿ ಮೂಲಕ ₹50 ಸಾವಿರ ಲಂಚದ ಹಣವನ್ನು ಪಡೆಯುವಾಗ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<p>ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ್, ಇನ್ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರಿದ್ದ ತಂಡವು ದಾಳಿ ಮಾಡಿತ್ತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-30-939037685</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>