<p><strong>ಕಾರವಾರ:</strong> ಪ್ರಾಕೃತಿಕ ವೈಶಿಷ್ಟ್ಯದ ಯಾಣ ಪ್ರದೇಶವನ್ನು ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಿಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (ಜಿಎಸ್ಐ) ತನ್ನ 176ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನಿರ್ಧರಿಸಿದೆ.</p>.<p>‘2,700 ದಶಲಕ್ಷ ವರ್ಷಗಳ ಹಿಂದೆಸುಣ್ಣದ ಕಲ್ಲಿನ ರಚನೆಯಂತಹ ಬಂಡೆ ಗಳಿಂದ ರಚನೆಯಾದ ಅಪರೂಪದ ತಾಣವಾದ ಯಾಣ ಭೂ ಸಂರಕ್ಷಣೆ, ಭೂ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವಾಗಿಸಲು ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಗಿದೆ’ ಎಂದು ಜಿಎಸ್ಐ ಏ.13ರಂದುರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದೆ.</p>.<p>‘ಯಾಣದಲ್ಲಿರುವ ಗುಹೆಗಳ ಸುಣ್ಣದ ಕಲ್ಲಿನ ರಚನೆಗಳು ಭೂದೃಶ್ಯದಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೈಸರ್ಗಿಕ ಪ್ರಯೋಗಾಲಯದಂತಿವೆ. ಈ ಸ್ಥಳವು ಹೆಚ್ಚಿನ ಭೌಗೋಳಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಹೊಂದಿದ್ದು,ಜೀವವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಹುದುಗಿರುವ ಭೂರೂಪಗಳ ನಿಧಾನ ಭೂವೈಜ್ಞಾನಿಕ ಪ್ರಕ್ರಿಯೆಗಳ ಶಕ್ತಿಯನ್ನು ಪ್ರದರ್ಶಿಸುತ್ತವೆ. ಇಲ್ಲಿನಶಿಲೆಗಳನ್ನು ರಕ್ಷಿಸುವುದು, ಸಂರಕ್ಷಿಸು ವುದು ಮತ್ತು ನಿರ್ವಹಿಸು ವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಯ ಜ್ಞಾನಕ್ಕಾಗಿ ಇಂತಹ ತಾಣದ ಸಂರಕ್ಷಣೆ ತುರ್ತು ಅಗತ್ಯ’ ಎಂದು ಜಿಎಸ್ಐ ಹೇಳಿದೆ.</p>.<p>‘ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ, ಮೂಲಸೌಕರ್ಯಗಳಿಗೆ ಬಲಬರಬಹುದು. ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು’ ಎಂದು ಸ್ಥಳೀಯ ಜಿ.ಎಂ.ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಪ್ರಾಕೃತಿಕ ವೈಶಿಷ್ಟ್ಯದ ಯಾಣ ಪ್ರದೇಶವನ್ನು ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಿಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (ಜಿಎಸ್ಐ) ತನ್ನ 176ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನಿರ್ಧರಿಸಿದೆ.</p>.<p>‘2,700 ದಶಲಕ್ಷ ವರ್ಷಗಳ ಹಿಂದೆಸುಣ್ಣದ ಕಲ್ಲಿನ ರಚನೆಯಂತಹ ಬಂಡೆ ಗಳಿಂದ ರಚನೆಯಾದ ಅಪರೂಪದ ತಾಣವಾದ ಯಾಣ ಭೂ ಸಂರಕ್ಷಣೆ, ಭೂ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವಾಗಿಸಲು ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಗಿದೆ’ ಎಂದು ಜಿಎಸ್ಐ ಏ.13ರಂದುರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದೆ.</p>.<p>‘ಯಾಣದಲ್ಲಿರುವ ಗುಹೆಗಳ ಸುಣ್ಣದ ಕಲ್ಲಿನ ರಚನೆಗಳು ಭೂದೃಶ್ಯದಪ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೈಸರ್ಗಿಕ ಪ್ರಯೋಗಾಲಯದಂತಿವೆ. ಈ ಸ್ಥಳವು ಹೆಚ್ಚಿನ ಭೌಗೋಳಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಹೊಂದಿದ್ದು,ಜೀವವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಹುದುಗಿರುವ ಭೂರೂಪಗಳ ನಿಧಾನ ಭೂವೈಜ್ಞಾನಿಕ ಪ್ರಕ್ರಿಯೆಗಳ ಶಕ್ತಿಯನ್ನು ಪ್ರದರ್ಶಿಸುತ್ತವೆ. ಇಲ್ಲಿನಶಿಲೆಗಳನ್ನು ರಕ್ಷಿಸುವುದು, ಸಂರಕ್ಷಿಸು ವುದು ಮತ್ತು ನಿರ್ವಹಿಸು ವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಯ ಜ್ಞಾನಕ್ಕಾಗಿ ಇಂತಹ ತಾಣದ ಸಂರಕ್ಷಣೆ ತುರ್ತು ಅಗತ್ಯ’ ಎಂದು ಜಿಎಸ್ಐ ಹೇಳಿದೆ.</p>.<p>‘ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ, ಮೂಲಸೌಕರ್ಯಗಳಿಗೆ ಬಲಬರಬಹುದು. ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು’ ಎಂದು ಸ್ಥಳೀಯ ಜಿ.ಎಂ.ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>