ದಾವಣಗೆರೆ: ನಗರದ ಕ್ರೀಡಾನಿಲಯದ ಕುಸ್ತಿ ತರಬೇತಿ ಕೇಂದ್ರದ ಕುಸ್ತಿಪಟು ಎನ್. ಕಿರಣ್ ಅವರು ರಾಜಸ್ಥಾನದ ಚಿತ್ತೋರಘಡದಲ್ಲಿ ಭಾನುವಾರ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ ಹರಿಯಾಣದ ಸುನೀಲ್ ಕುಮಾರ್, 5–1ರಿಂದ ಕಿರಣ್ ಅವರನ್ನು ಮಣಿಸಿದರು. ಭದ್ರಾವತಿಯ ಹಳೆನಗರದ ದೊಡ್ಡ ಕುರುಬರ ಬೀದಿಯವರಾದ ಕಿರಣ್, ದಾವಣಗೆರೆಯ ಕುಸ್ತಿ ತರಬೇತಿ ಕೇಂದ್ರದಲ್ಲಿ ಶಿವಾನಂದ ಆರ್. ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.