<p><strong>ಸಾಗರ: ‘</strong>ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ–ಮುಂತಜಿಮಾ ಮುಸ್ಲಿಮಿನ್ ಸಮಿತಿಯು ವಕ್ಫ್ ಮಂಡಳಿಯ ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಆರೋಪಿಸಿ ಮುಸ್ಲಿಂ ಸಮುದಾಯದವರು ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>‘ವಕ್ಫ್ ಮಂಡಳಿಯ ನಿಯಮಗಳ ಪ್ರಕಾರ ಒಂದು ಸಮಿತಿ ಮೂರು ವರ್ಷಗಳವರೆಗೆ ಆಡಳಿತ ನಡೆಸಬಹುದು. ಆದರೆ ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ– ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ಪದಾಧಿಕಾರಿಗಳು ಅವಧಿ ಮುಗಿದಿದ್ದರೂ ಮುಂದುವರಿದಿದ್ದಾರೆ’ ಎಂದು ದೂರಲಾಗಿದೆ.</p>.<p>‘ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ವತಿಯಿಂದ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.</p>.<p>‘ಈಗಿರುವ ಸಮಿತಿಯ ಅವಧಿ ಮುಗಿದಿರುವುದರಿಂದ ನೂತನ ಸಮಿತಿ ರಚನೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು’ ಎಂದು ಆಗ್ರಹಿಸಲಾಗಿದೆ.</p>.<p>ಪ್ರಮುಖರಾದ ತೌಫಿಕ್ ಅಹ್ಮದ್, ಮುಸೂದ್ ಅಹ್ಮದ್, ಜಮೀರ್ ಅಹ್ಮದ್ ಖಾನ್, ಮುದಸಿರ್ ಅಹ್ಮದ್ ಖಾನ್, ಸೈಯದ್ ಜುಲ್ಫಿ, ಬಿಲಾಲ್ ಅಹ್ಮದ್, ಅಸಾದುಲ್ಲಾ, ಜಬೀವುಲ್ಲಾ, ನವೀದ್ ಅಹ್ಮದ್, ಅನೀಸ್ ಅಹ್ಮದ್ ಖಾನ್, ಜಿಶಾನ್, ತಾಹೀರ್ ಅಹ್ಮದ್, ಅಜ್ಮಲ್ ಅಲಿಖಾನ್, ಆಸೀಫ್ ಅಹ್ಮದ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260307-42-1474376939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: ‘</strong>ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ–ಮುಂತಜಿಮಾ ಮುಸ್ಲಿಮಿನ್ ಸಮಿತಿಯು ವಕ್ಫ್ ಮಂಡಳಿಯ ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಆರೋಪಿಸಿ ಮುಸ್ಲಿಂ ಸಮುದಾಯದವರು ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>‘ವಕ್ಫ್ ಮಂಡಳಿಯ ನಿಯಮಗಳ ಪ್ರಕಾರ ಒಂದು ಸಮಿತಿ ಮೂರು ವರ್ಷಗಳವರೆಗೆ ಆಡಳಿತ ನಡೆಸಬಹುದು. ಆದರೆ ಇಲ್ಲಿನ ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ– ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ಪದಾಧಿಕಾರಿಗಳು ಅವಧಿ ಮುಗಿದಿದ್ದರೂ ಮುಂದುವರಿದಿದ್ದಾರೆ’ ಎಂದು ದೂರಲಾಗಿದೆ.</p>.<p>‘ಜಾಮಿಯಾ ಮಸೀದಿ ಹಾಗೂ ಮಜ್ಲಿಸೆ–ಎ– ಮುಂತಜಿಮಾ ಮುಸ್ಲಿಮಿನ್ ಸಮಿತಿ ವತಿಯಿಂದ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.</p>.<p>‘ಈಗಿರುವ ಸಮಿತಿಯ ಅವಧಿ ಮುಗಿದಿರುವುದರಿಂದ ನೂತನ ಸಮಿತಿ ರಚನೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು’ ಎಂದು ಆಗ್ರಹಿಸಲಾಗಿದೆ.</p>.<p>ಪ್ರಮುಖರಾದ ತೌಫಿಕ್ ಅಹ್ಮದ್, ಮುಸೂದ್ ಅಹ್ಮದ್, ಜಮೀರ್ ಅಹ್ಮದ್ ಖಾನ್, ಮುದಸಿರ್ ಅಹ್ಮದ್ ಖಾನ್, ಸೈಯದ್ ಜುಲ್ಫಿ, ಬಿಲಾಲ್ ಅಹ್ಮದ್, ಅಸಾದುಲ್ಲಾ, ಜಬೀವುಲ್ಲಾ, ನವೀದ್ ಅಹ್ಮದ್, ಅನೀಸ್ ಅಹ್ಮದ್ ಖಾನ್, ಜಿಶಾನ್, ತಾಹೀರ್ ಅಹ್ಮದ್, ಅಜ್ಮಲ್ ಅಲಿಖಾನ್, ಆಸೀಫ್ ಅಹ್ಮದ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260307-42-1474376939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>