<p><strong>ಬೆಂಗಳೂರು</strong>: ನಿನ್ನೆ ಸಂಜೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಟ್ಟಿತನಕ್ಕೆ ಹೆಸರಾಗಿರುವ ಬಿಎಂಡಬ್ಲ್ಯೂ ಕಾರೇ ಅಪ್ಪಚ್ಚಿಯಾಗಿದೆ.</p><p>ಆಂಧ್ರಪ್ರದೇಶದ ಕಂಚಿಕಾಚರ್ಲಾ ತಾಲ್ಲೂಕಿನ ಹೈದರಾಬಾದ್–ವಿಜಯವಾಡ ರಾಷ್ಟ್ರೀಯ ಹೆದ್ದಾರಿಯ ಕೀಸಾರಾ ಟೋಲ್ ಪ್ಲಾಜಾದಲ್ಲಿ ಸಂಭವಿದ ಲಾರಿ ಅಪಘಾತದಲ್ಲಿ ಬಿಎಂಡಬ್ಲ್ಯೂ ಕಾರು ಸಂಪೂರ್ಣ ಜಖಂ ಆಗಿದ್ದು ಆ ಕಾರಿನಲ್ಲಿದ್ದ ಹೈಕೋರ್ಟ್ ವಕೀಲರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.</p><p>ಟೋಲ್ ಪ್ಲಾಜಾದ ಸರದಿಯಲ್ಲಿ ನಿಂತಿದ್ದ ದುಬಾರಿ ಬೆಲೆಯ ಕಾರಿನ ಮೇಲೆ ಅದರ ಪಕ್ಕದ ಮಾರ್ಗದಲ್ಲಿ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ನಿಯಂತ್ರಣ ತಪ್ಪಿ, ಕಾರಿನ ಮೇಲೆ ಉರುಳಿ ಬಿದ್ದಿದೆ.</p><p>ಇದರಿಂದ ಕಾರು ಸಂಪೂರ್ಣ ಜಖಂ ಆಗಿ ಕಾರಿನಲ್ಲಿದ್ದ ವ್ಯಕ್ತಿ ಹೊರಬರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೃಹತ್ ಗಾತ್ರದ ಸಿಮೆಂಟ್ ಮಿಕ್ಸರ್ ಉರುಳಿ ಬಿದ್ದಿದ್ದರಿಂದ ನೂರಾರು ಜನ ಸ್ಥಳದಲ್ಲಿದ್ದರೂ ಏನೂ ಮಾಡದೇ ಅಸಹಾಯಕರಾಗಿದ್ದರು.</p><p>ಮೃತ ವ್ಯಕ್ತಿಯನ್ನು ಹೈಕೋರ್ಟ್ನ ಖ್ಯಾತ ವಕೀಲ ಬಿ. ಶ್ರೀನಿವಾಸ್ ರಾವ್ ಎಂದು ಗುರುತಿಸಲಾಗಿದ್ದು, ಜೆಸಿಬಿ ಬಳಸಿ ಮೃತದೇಹವನ್ನು ಹೊರತೆಗೆಯಲಾಗಿದೆ.</p><p>ಅಮರಾವತಿಯಲ್ಲಿ ಬಾರ್ ಕೌನ್ಸಿಲ್ ಚುನಾವಣೆ ಮುಗಿಸಿ ಹೈದರಾಬಾದ್ಗೆ ಮರಳುತ್ತಿದ್ದ ಶ್ರೀನಿವಾಸ್ ರಾವ್ ಅವರು ಶನಿವಾರ ಸಂಜೆ 4.40 ರ ವೇಳೆ ಕೀಸಾರಾ ಟೋಲ್ ಪ್ಲಾಜಾ ಪ್ರವೇಶಿಸಿದಾಗ ಈ ದುರ್ಘಟನೆ ನಡೆದಿದೆ. ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಆರೋಪದ ಮೇಲೆ ಲಾರಿ ಚಾಲಕನನ್ನು ಬಂಧಿಸಿ ತನಿಖೆ ನಡೆಸಲಾಗಿದೆ ಎಂದು ವಿಜಯವಾಡ ಎಸ್ಪಿ ಎಸ್.ವಿ ರಾಜಶೇಖರ್ ಬಾಬು ಅವರು ತಿಳಿಸಿದ್ದಾರೆ.</p><p>ಈ ಘಟನೆಯ ಫೋಟೊ, ವಿಡಿಯೊಗಳನ್ನು ಹಂಚಿಕೊಂಡು ಅನೇಕರು ಬಿಎಂಡಬ್ಲ್ಯೂ ಕಾರಿನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಿನ್ನೆ ಸಂಜೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಟ್ಟಿತನಕ್ಕೆ ಹೆಸರಾಗಿರುವ ಬಿಎಂಡಬ್ಲ್ಯೂ ಕಾರೇ ಅಪ್ಪಚ್ಚಿಯಾಗಿದೆ.</p><p>ಆಂಧ್ರಪ್ರದೇಶದ ಕಂಚಿಕಾಚರ್ಲಾ ತಾಲ್ಲೂಕಿನ ಹೈದರಾಬಾದ್–ವಿಜಯವಾಡ ರಾಷ್ಟ್ರೀಯ ಹೆದ್ದಾರಿಯ ಕೀಸಾರಾ ಟೋಲ್ ಪ್ಲಾಜಾದಲ್ಲಿ ಸಂಭವಿದ ಲಾರಿ ಅಪಘಾತದಲ್ಲಿ ಬಿಎಂಡಬ್ಲ್ಯೂ ಕಾರು ಸಂಪೂರ್ಣ ಜಖಂ ಆಗಿದ್ದು ಆ ಕಾರಿನಲ್ಲಿದ್ದ ಹೈಕೋರ್ಟ್ ವಕೀಲರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.</p><p>ಟೋಲ್ ಪ್ಲಾಜಾದ ಸರದಿಯಲ್ಲಿ ನಿಂತಿದ್ದ ದುಬಾರಿ ಬೆಲೆಯ ಕಾರಿನ ಮೇಲೆ ಅದರ ಪಕ್ಕದ ಮಾರ್ಗದಲ್ಲಿ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ನಿಯಂತ್ರಣ ತಪ್ಪಿ, ಕಾರಿನ ಮೇಲೆ ಉರುಳಿ ಬಿದ್ದಿದೆ.</p><p>ಇದರಿಂದ ಕಾರು ಸಂಪೂರ್ಣ ಜಖಂ ಆಗಿ ಕಾರಿನಲ್ಲಿದ್ದ ವ್ಯಕ್ತಿ ಹೊರಬರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೃಹತ್ ಗಾತ್ರದ ಸಿಮೆಂಟ್ ಮಿಕ್ಸರ್ ಉರುಳಿ ಬಿದ್ದಿದ್ದರಿಂದ ನೂರಾರು ಜನ ಸ್ಥಳದಲ್ಲಿದ್ದರೂ ಏನೂ ಮಾಡದೇ ಅಸಹಾಯಕರಾಗಿದ್ದರು.</p><p>ಮೃತ ವ್ಯಕ್ತಿಯನ್ನು ಹೈಕೋರ್ಟ್ನ ಖ್ಯಾತ ವಕೀಲ ಬಿ. ಶ್ರೀನಿವಾಸ್ ರಾವ್ ಎಂದು ಗುರುತಿಸಲಾಗಿದ್ದು, ಜೆಸಿಬಿ ಬಳಸಿ ಮೃತದೇಹವನ್ನು ಹೊರತೆಗೆಯಲಾಗಿದೆ.</p><p>ಅಮರಾವತಿಯಲ್ಲಿ ಬಾರ್ ಕೌನ್ಸಿಲ್ ಚುನಾವಣೆ ಮುಗಿಸಿ ಹೈದರಾಬಾದ್ಗೆ ಮರಳುತ್ತಿದ್ದ ಶ್ರೀನಿವಾಸ್ ರಾವ್ ಅವರು ಶನಿವಾರ ಸಂಜೆ 4.40 ರ ವೇಳೆ ಕೀಸಾರಾ ಟೋಲ್ ಪ್ಲಾಜಾ ಪ್ರವೇಶಿಸಿದಾಗ ಈ ದುರ್ಘಟನೆ ನಡೆದಿದೆ. ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಆರೋಪದ ಮೇಲೆ ಲಾರಿ ಚಾಲಕನನ್ನು ಬಂಧಿಸಿ ತನಿಖೆ ನಡೆಸಲಾಗಿದೆ ಎಂದು ವಿಜಯವಾಡ ಎಸ್ಪಿ ಎಸ್.ವಿ ರಾಜಶೇಖರ್ ಬಾಬು ಅವರು ತಿಳಿಸಿದ್ದಾರೆ.</p><p>ಈ ಘಟನೆಯ ಫೋಟೊ, ವಿಡಿಯೊಗಳನ್ನು ಹಂಚಿಕೊಂಡು ಅನೇಕರು ಬಿಎಂಡಬ್ಲ್ಯೂ ಕಾರಿನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>