<p><strong>ಗಂಡಾಬೊಯನಪಲ್ಲಿ, ಆಂಧ್ರಪ್ರದೇಶ: </strong>ಟೋಲ್ ಪ್ಲಾಜಾದಲ್ಲಿ ಆಡಳಿತಾರೂಢ ಟಿಡಿಪಿ ಶಾಸಕನೊಬ್ಬನ ಬೆಂಬಲಿಗರು ಭಾರಿ ಗುಂಡಾಗಿರಿ ಮೆರೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.</p><p>ಏಪ್ರಿಲ್ 25 ರಂದು ಅಣ್ಣಮ್ಮಯ್ಯ ಜಿಲ್ಲೆಯ ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕ ಸುರೇಂದ್ರ ಬಾಬು ಅವರು ತಿರುಪತಿಯಿಂದ ಕಲ್ಯಾಣದುರ್ಗಕ್ಕೆ ತೆರಳುತ್ತಿದ್ದರು.</p><p>ಈ ವೇಳೆ ತಿರುಪತಿ–ಮದನಪಲ್ಲಿ ಹೆದ್ದಾರಿಯ ಗಂಡಾಬೊಯನಪಲ್ಲಿ ಬಳಿ ಇರುವ ಟೋಲ್ ಪ್ಲಾಜಾವನ್ನು ಬೆಳಿಗ್ಗೆ 9.25ಕ್ಕೆ ಸುರೇಂದ್ರ ಬಾಬು ಅವರು ಕಾರಿನ ಮೂಲಕ ಪಾಸಾಗುತ್ತಿದ್ದರು. ಅವರ ಜೊತೆ ಭದ್ರತಾ ಸಿಬ್ಬಂದಿ, ಕೆಲ ಬೆಂಬಲಿಗರು ಇದ್ದರು.</p><p>ಟೋಲ್ ಪ್ಲಾಜಾದಲ್ಲಿ ಸುರೇಂದ್ರ ಬಾಬು ಕಾರಿನ ಮುಂದೆ ಇನ್ನೂ ಎರಡೂ ವಾಹನಗಳು ಆನ್ಲೈನ್ ಪೇಮೆಂಟ್ ವಿಚಾರವಾಗಿ ವಿಳಂಬ ಅನುಭವಿಸಿದ್ದವು. ಇದರಿಂದ ಕುಪಿತಗೊಂಡ ಸುರೇಂದ್ರ ಬಾಬು ಬೆಂಬಲಿಗರು ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಹೊರಎಳೆದು ಜಗಳ ತೆಗೆದಿದ್ದಾರೆ.</p><p>ಇಷ್ಟಕ್ಕೇ ಸುಮ್ಮನಾಗದ ಬೆಂಬಲಿಗರು ಟೋಲ್ನ ಮ್ಯಾನೇಜರ್, ಇಬ್ಬರು ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ಕೂದಲು ಹಿಡಿದು ಎಳೆದಿದ್ದಾರೆ. ಗಂಭೀರವಾಗಿ ಹಲ್ಲೆ ಮಾಡಿ ಭಾರಿ ಗುಂಡಾಗಿರಿ ಮೆರೆದಿದ್ದಾರೆ. ಅಲ್ಲದೇ ಮ್ಯಾನೇಜರ್ನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ.</p><p>ಈ ಘಟನೆ ಟೋಲ್ನ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆಡಳಿತಾಡೂಢ ಟಿಡಿಪಿ ಶಾಸಕರು ಹಾಗೂ ಅವರ ಬೆಂಬಲಿಗರ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಶಾಸಕ ಸುರೇಂದ್ರ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಸಿಎಂ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಡಾಬೊಯನಪಲ್ಲಿ, ಆಂಧ್ರಪ್ರದೇಶ: </strong>ಟೋಲ್ ಪ್ಲಾಜಾದಲ್ಲಿ ಆಡಳಿತಾರೂಢ ಟಿಡಿಪಿ ಶಾಸಕನೊಬ್ಬನ ಬೆಂಬಲಿಗರು ಭಾರಿ ಗುಂಡಾಗಿರಿ ಮೆರೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.</p><p>ಏಪ್ರಿಲ್ 25 ರಂದು ಅಣ್ಣಮ್ಮಯ್ಯ ಜಿಲ್ಲೆಯ ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕ ಸುರೇಂದ್ರ ಬಾಬು ಅವರು ತಿರುಪತಿಯಿಂದ ಕಲ್ಯಾಣದುರ್ಗಕ್ಕೆ ತೆರಳುತ್ತಿದ್ದರು.</p><p>ಈ ವೇಳೆ ತಿರುಪತಿ–ಮದನಪಲ್ಲಿ ಹೆದ್ದಾರಿಯ ಗಂಡಾಬೊಯನಪಲ್ಲಿ ಬಳಿ ಇರುವ ಟೋಲ್ ಪ್ಲಾಜಾವನ್ನು ಬೆಳಿಗ್ಗೆ 9.25ಕ್ಕೆ ಸುರೇಂದ್ರ ಬಾಬು ಅವರು ಕಾರಿನ ಮೂಲಕ ಪಾಸಾಗುತ್ತಿದ್ದರು. ಅವರ ಜೊತೆ ಭದ್ರತಾ ಸಿಬ್ಬಂದಿ, ಕೆಲ ಬೆಂಬಲಿಗರು ಇದ್ದರು.</p><p>ಟೋಲ್ ಪ್ಲಾಜಾದಲ್ಲಿ ಸುರೇಂದ್ರ ಬಾಬು ಕಾರಿನ ಮುಂದೆ ಇನ್ನೂ ಎರಡೂ ವಾಹನಗಳು ಆನ್ಲೈನ್ ಪೇಮೆಂಟ್ ವಿಚಾರವಾಗಿ ವಿಳಂಬ ಅನುಭವಿಸಿದ್ದವು. ಇದರಿಂದ ಕುಪಿತಗೊಂಡ ಸುರೇಂದ್ರ ಬಾಬು ಬೆಂಬಲಿಗರು ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಹೊರಎಳೆದು ಜಗಳ ತೆಗೆದಿದ್ದಾರೆ.</p><p>ಇಷ್ಟಕ್ಕೇ ಸುಮ್ಮನಾಗದ ಬೆಂಬಲಿಗರು ಟೋಲ್ನ ಮ್ಯಾನೇಜರ್, ಇಬ್ಬರು ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ಕೂದಲು ಹಿಡಿದು ಎಳೆದಿದ್ದಾರೆ. ಗಂಭೀರವಾಗಿ ಹಲ್ಲೆ ಮಾಡಿ ಭಾರಿ ಗುಂಡಾಗಿರಿ ಮೆರೆದಿದ್ದಾರೆ. ಅಲ್ಲದೇ ಮ್ಯಾನೇಜರ್ನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ.</p><p>ಈ ಘಟನೆ ಟೋಲ್ನ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆಡಳಿತಾಡೂಢ ಟಿಡಿಪಿ ಶಾಸಕರು ಹಾಗೂ ಅವರ ಬೆಂಬಲಿಗರ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಶಾಸಕ ಸುರೇಂದ್ರ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p><p>ಸಿಎಂ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>