<p><strong>ರಾಯಪುರ (ಛತ್ತೀಸ್ಗಢ</strong>): ಬ್ಯಾಂಕುಗಳ ‘ಕೆವೈಸಿ’ ಪ್ರಕ್ರಿಯೆ ಕೆಲವೊಬ್ಬರಿಗೆ ಯಾವ ಪರಿ ಹಿಂಸೆ ನೀಡುತ್ತದೆ ಅದರಲ್ಲೂ ಕೆಲ ರಾಷ್ಟ್ರೀಕೃತ ಬ್ಯಾಂಕುಗಳ ಮೊಂಡು ಧೋರಣೆಗಳು ಅನಕ್ಷರಸ್ಥ ಜನಸಾಮಾನ್ಯರನ್ನು ಹೇಗೆ ಹಿಂಸಿಸುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.</p><p>ಮಾಸಿಕ ಪಿಂಚಣಿ ಪಡೆಯುವ ಸಲುವಾಗಿ ಕೆವೈಸಿ ಪ್ರಕ್ರಿಯೆ ಪೂರೈಸಲು ತನ್ನ ವಯೋವೃದ್ಧ ಅತ್ತೆಯನ್ನು ಸೊಸೆಯೊಬ್ಬರು ಬೆನ್ನ ಮೇಲೆ ಹೊತ್ತು ಮೂರು ಕಿ.ಮೀ ನಡೆದು ಬ್ಯಾಂಕ್ಗೆ ತೆರಳಿದ್ದಾರೆ.</p><p>ಈ ಘಟನೆ ಶನಿವಾರ ಛತ್ತೀಸಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಗಮನ ಸೆಳೆದು ಚರ್ಚೆ ಹುಟ್ಟುಹಾಕಿದೆ.</p><p>ಸುರ್ಗುಜಾ ಜಿಲ್ಲೆಯ ಮಾಣಿಪತ್ ವಲಯದ ಜಂಗಲ್ಪಾರಾ ಎಂಬ ಹಳ್ಳಿಯ ಸುಖಮಾನ್ಯ ಎಂಬ ಬುಡಕಟ್ಟು ಮಹಿಳೆಯ 90 ವರ್ಷದ ಅತ್ತೆಗೆ ಮಾಸಿಕ ವೃದ್ದಾಪ್ಯ ವೇತನ ₹500 ಸಿಗುತ್ತಿತ್ತು. ಆದರೆ, ಮಾಣಿಪತ್ನ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿನ ವೃದ್ಧೆಯ ಬ್ಯಾಂಕ್ ಖಾತೆಯ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಕಳೆದ ನಾಲ್ಕು ತಿಂಗಳಿನಿಂದ ಹಣ ಬಿಡುಗಡೆ ಆಗಿರಲಿಲ್ಲ.</p><p>ಸುಖಮಾನ್ಯ ಅವರು ಹಲವು ಸಲ ಬ್ಯಾಂಕ್ಗೆ ಅಲೆದಾಡಿದರೂ ಅವರಿಗೆ ವಿಷಯ ಸ್ಪಷ್ಟವಾಗಿಲ್ಲ. ಬಳಿಕ ನಡೆಯಲು ಆಗದ ತನ್ನ ಅತ್ತೆಯನ್ನು ಬೆನ್ನಮೇಲೆ ಹೊತ್ತು ಬರೋಬ್ಬರಿ 3 ಕಿ.ಮೀ ನಡೆದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆವೈಸಿ ಪೂರ್ಣಗೊಳಿಸಿದ್ದಾರೆ.</p><p>ಕೆವೈಸಿ ಪೂರ್ಣಗೊಂಡಿದ್ದರಿಂದ ಸದ್ಯ ಬ್ಯಾಂಕ್ನವರು ವೃದ್ಧೆಗೆ ಒಟ್ಟಿಗೆ ನಾಲ್ಕೂ ತಿಂಗಳ ₹2,000 ಹಣವನ್ನು ಜಮಾ ಮಾಡಿದ್ದಾರೆ.</p><p>ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಮಾಣಿಪತ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖುಸ್ಬೂ ಶಾಸ್ತ್ರಿ ಅವರು, ‘ಬ್ಯಾಂಕ್ ಮಿತ್ರ‘ ಮೂಲಕ ಬ್ಯಾಂಕ್ಗೆ ಬರಲಾಗದವರಿಗೆ ಪಿಂಚಣಿ, ಇತ್ಯಾದಿ ಸಹಾಯಧನ ಸಿಗುತ್ತಿದೆ. ಆದರೆ, ಈ ಪ್ರಕರಣದಲ್ಲಿ ಕೆವೈಸಿ ಅಡ್ಡಿಯಾಗಿತ್ತು. ವೃದ್ಧೆಯ ಕೆವೈಸಿ ಸಂಪೂರ್ಣವಾಗಿದ್ದು ಇನ್ಮುಂದೆ ‘ಬ್ಯಾಂಕ್ ಮಿತ್ರ’ ಮೂಲಕವೇ ಪಿಂಚಣಿ ಸಿಗಲಿದೆ. ಗ್ರಾಮಕ್ಕೆ ವಾಹನದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.</p><p>ಈ ಘಟನೆ ಭಾರತದ ಗ್ರಾಮೀಣ ಜನರ ಹಾಗೂ ಬುಡಕಟ್ಟು ಜನರ ಅಭಿವೃದ್ದಿಯ ಅಸಮಾನತೆಯನ್ನು ತೆರೆದಿಡುತ್ತದೆ ಎಂದು ಹಲವರು ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.ಸುಟ್ಟು ಕರಕಲಾಗಿದ್ದ ಕಾರಿನಲ್ಲಿದ್ದ ಅಸ್ಥಿಪಂಜರ ದೇವನಹಳ್ಳಿ ಉಪನ್ಯಾಸಕಿಯದ್ದು.ಬ್ಯಾಂಕ್ಗೆ ಅಸ್ಥಿಪಂಜರ ತಂದಿದ್ದ ಬುಡಕಟ್ಟು ವ್ಯಕ್ತಿಗೆ ಅಂತೂ ಸಿಕ್ತು ಠೇವಣಿ ಹಣ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ (ಛತ್ತೀಸ್ಗಢ</strong>): ಬ್ಯಾಂಕುಗಳ ‘ಕೆವೈಸಿ’ ಪ್ರಕ್ರಿಯೆ ಕೆಲವೊಬ್ಬರಿಗೆ ಯಾವ ಪರಿ ಹಿಂಸೆ ನೀಡುತ್ತದೆ ಅದರಲ್ಲೂ ಕೆಲ ರಾಷ್ಟ್ರೀಕೃತ ಬ್ಯಾಂಕುಗಳ ಮೊಂಡು ಧೋರಣೆಗಳು ಅನಕ್ಷರಸ್ಥ ಜನಸಾಮಾನ್ಯರನ್ನು ಹೇಗೆ ಹಿಂಸಿಸುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.</p><p>ಮಾಸಿಕ ಪಿಂಚಣಿ ಪಡೆಯುವ ಸಲುವಾಗಿ ಕೆವೈಸಿ ಪ್ರಕ್ರಿಯೆ ಪೂರೈಸಲು ತನ್ನ ವಯೋವೃದ್ಧ ಅತ್ತೆಯನ್ನು ಸೊಸೆಯೊಬ್ಬರು ಬೆನ್ನ ಮೇಲೆ ಹೊತ್ತು ಮೂರು ಕಿ.ಮೀ ನಡೆದು ಬ್ಯಾಂಕ್ಗೆ ತೆರಳಿದ್ದಾರೆ.</p><p>ಈ ಘಟನೆ ಶನಿವಾರ ಛತ್ತೀಸಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಗಮನ ಸೆಳೆದು ಚರ್ಚೆ ಹುಟ್ಟುಹಾಕಿದೆ.</p><p>ಸುರ್ಗುಜಾ ಜಿಲ್ಲೆಯ ಮಾಣಿಪತ್ ವಲಯದ ಜಂಗಲ್ಪಾರಾ ಎಂಬ ಹಳ್ಳಿಯ ಸುಖಮಾನ್ಯ ಎಂಬ ಬುಡಕಟ್ಟು ಮಹಿಳೆಯ 90 ವರ್ಷದ ಅತ್ತೆಗೆ ಮಾಸಿಕ ವೃದ್ದಾಪ್ಯ ವೇತನ ₹500 ಸಿಗುತ್ತಿತ್ತು. ಆದರೆ, ಮಾಣಿಪತ್ನ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿನ ವೃದ್ಧೆಯ ಬ್ಯಾಂಕ್ ಖಾತೆಯ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಕಳೆದ ನಾಲ್ಕು ತಿಂಗಳಿನಿಂದ ಹಣ ಬಿಡುಗಡೆ ಆಗಿರಲಿಲ್ಲ.</p><p>ಸುಖಮಾನ್ಯ ಅವರು ಹಲವು ಸಲ ಬ್ಯಾಂಕ್ಗೆ ಅಲೆದಾಡಿದರೂ ಅವರಿಗೆ ವಿಷಯ ಸ್ಪಷ್ಟವಾಗಿಲ್ಲ. ಬಳಿಕ ನಡೆಯಲು ಆಗದ ತನ್ನ ಅತ್ತೆಯನ್ನು ಬೆನ್ನಮೇಲೆ ಹೊತ್ತು ಬರೋಬ್ಬರಿ 3 ಕಿ.ಮೀ ನಡೆದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆವೈಸಿ ಪೂರ್ಣಗೊಳಿಸಿದ್ದಾರೆ.</p><p>ಕೆವೈಸಿ ಪೂರ್ಣಗೊಂಡಿದ್ದರಿಂದ ಸದ್ಯ ಬ್ಯಾಂಕ್ನವರು ವೃದ್ಧೆಗೆ ಒಟ್ಟಿಗೆ ನಾಲ್ಕೂ ತಿಂಗಳ ₹2,000 ಹಣವನ್ನು ಜಮಾ ಮಾಡಿದ್ದಾರೆ.</p><p>ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಮಾಣಿಪತ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖುಸ್ಬೂ ಶಾಸ್ತ್ರಿ ಅವರು, ‘ಬ್ಯಾಂಕ್ ಮಿತ್ರ‘ ಮೂಲಕ ಬ್ಯಾಂಕ್ಗೆ ಬರಲಾಗದವರಿಗೆ ಪಿಂಚಣಿ, ಇತ್ಯಾದಿ ಸಹಾಯಧನ ಸಿಗುತ್ತಿದೆ. ಆದರೆ, ಈ ಪ್ರಕರಣದಲ್ಲಿ ಕೆವೈಸಿ ಅಡ್ಡಿಯಾಗಿತ್ತು. ವೃದ್ಧೆಯ ಕೆವೈಸಿ ಸಂಪೂರ್ಣವಾಗಿದ್ದು ಇನ್ಮುಂದೆ ‘ಬ್ಯಾಂಕ್ ಮಿತ್ರ’ ಮೂಲಕವೇ ಪಿಂಚಣಿ ಸಿಗಲಿದೆ. ಗ್ರಾಮಕ್ಕೆ ವಾಹನದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.</p><p>ಈ ಘಟನೆ ಭಾರತದ ಗ್ರಾಮೀಣ ಜನರ ಹಾಗೂ ಬುಡಕಟ್ಟು ಜನರ ಅಭಿವೃದ್ದಿಯ ಅಸಮಾನತೆಯನ್ನು ತೆರೆದಿಡುತ್ತದೆ ಎಂದು ಹಲವರು ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.ಸುಟ್ಟು ಕರಕಲಾಗಿದ್ದ ಕಾರಿನಲ್ಲಿದ್ದ ಅಸ್ಥಿಪಂಜರ ದೇವನಹಳ್ಳಿ ಉಪನ್ಯಾಸಕಿಯದ್ದು.ಬ್ಯಾಂಕ್ಗೆ ಅಸ್ಥಿಪಂಜರ ತಂದಿದ್ದ ಬುಡಕಟ್ಟು ವ್ಯಕ್ತಿಗೆ ಅಂತೂ ಸಿಕ್ತು ಠೇವಣಿ ಹಣ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>