ಜಕಾರ್ತ, ಇಂಡೊನೇಷ್ಯಾ: ಇಂಡೊನೇಷ್ಯಾದ ಸುಮಾರ್ತ ಪ್ರಾಂತ್ಯದ ಸವಲುಂಟೊ ಜಿಲ್ಲೆಯಲ್ಲಿರುವ ಖಾಸಗಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 9 ಗಣಿ ಕಾರ್ಮಿಕರು ಮೃತರಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಕಾಣೆಯಾದ ಒಬ್ಬರಿಗಾಗಿ ಸ್ಥಳೀಯ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಗಣಿಯಲ್ಲಿ ಮೀಥೇನ್ ಹಾಗೂ ಹಾನಿಕಾರಕ ಅನಿಲಗಳಿಂದ ಸ್ಫೋಟ ಸಂಭವಿಸಿದ್ದು, ಒಟ್ಟು 12 ಕಾರ್ಮಿಕರು ಇದ್ದರು ಎನ್ನಲಾಗಿದೆ.