<p>ಕಲಬುರಗಿ: ‘ಪವಿತ್ರ ರಂಜಾನ್ ಮಾಸದ ಉದ್ದಕ್ಕೂ ಜೆರುಸಲೇಂನ ಅಲ್ ಅಕ್ಸಾ ಮಸೀದಿ ಅಲ್-ಅಕ್ಸಾವನ್ನು ಮುಚ್ಚಲಾಗಿದೆ. ಆದರೆ ಮುಸ್ಲಿಂ ರಾಷ್ಟ್ರಗಳು ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ. ಇಸ್ರೇಲ್ ಮತ್ತು ಅಮೆರಿಕದ ಭಯವು ಅವರ ಹೃದಯದಲ್ಲಿ ಮನೆಮಾಡಿದ್ದು, ಈ ಮೌನವು ಅತ್ಯಂತ ವಿಷಾದನೀಯವಾಗಿದೆ’ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸೀರತ್-ಉನ್-ನಬಿ ಸ್ಟಡಿ ಅಂಡ್ ರಿಸರ್ಚ್ ಸೆಂಟರ್ ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ಅಸಗರ ಚುಲಬುಲ್ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ಪಡಾ ಅಲ್ಲಾ ಕಾಲೊನಿಯ ಉಮರ್ ಫಾರೂಕ್ ಮಸೀದಿಯಲ್ಲಿ ಈಚೆಗೆ ಆಯೋಜಿಸಿದ್ದ ‘ಯೌಮ್-ಅಲ್-ಖುದ್ಸ್’ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.</p>.<p>‘ಪ್ಯಾಲೆಸ್ಟೈನ್ ಅನ್ನು ತಕ್ಷಣವೇ ಸ್ವತಂತ್ರ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಜೆರುಸಲೇಂ ಹಾಗೂ ಗಾಜಾದ ಮೇಲಿನ ಅಕ್ರಮ ಕಬಳಿಕೆಯನ್ನು ಕೊನೆಗೊಳಿಸಲು ಇಸ್ರೇಲ್ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p>ಮೌಲಾನಾ ಫಕ್ರುದ್ದೀನ್ ಮಾನ್ಯಾಲ್, ಮೌಲಾನಾ ಶೇಖ್ ಸಲೀಮುದ್ದೀನ್ ನಿಜಾಮಿ, ಅಬ್ದುಲ್ ಜಬ್ಬಾರ್ ಗೋಲಾ, ಮೌಲಾನಾ ಯೂಸುಫ್ ಖುರೇಷಿ, ಅಫ್ಜಲ್ ಮಹಮೂದ್ ಮತ್ತಿತರರು ಮಾತನಾಡಿದರು.</p>.<p>ಖಾರಿ ಸಿದ್ದಿಕ್ ಹುಸೇನ್ ಕುರ್ಆನ್ ಪಠಣ ಮಾಡಿದರು. ಮುಹಮ್ಮದ್ ಅಫಾನ್ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-34-274875700</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಪವಿತ್ರ ರಂಜಾನ್ ಮಾಸದ ಉದ್ದಕ್ಕೂ ಜೆರುಸಲೇಂನ ಅಲ್ ಅಕ್ಸಾ ಮಸೀದಿ ಅಲ್-ಅಕ್ಸಾವನ್ನು ಮುಚ್ಚಲಾಗಿದೆ. ಆದರೆ ಮುಸ್ಲಿಂ ರಾಷ್ಟ್ರಗಳು ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ. ಇಸ್ರೇಲ್ ಮತ್ತು ಅಮೆರಿಕದ ಭಯವು ಅವರ ಹೃದಯದಲ್ಲಿ ಮನೆಮಾಡಿದ್ದು, ಈ ಮೌನವು ಅತ್ಯಂತ ವಿಷಾದನೀಯವಾಗಿದೆ’ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸೀರತ್-ಉನ್-ನಬಿ ಸ್ಟಡಿ ಅಂಡ್ ರಿಸರ್ಚ್ ಸೆಂಟರ್ ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ಅಸಗರ ಚುಲಬುಲ್ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ಪಡಾ ಅಲ್ಲಾ ಕಾಲೊನಿಯ ಉಮರ್ ಫಾರೂಕ್ ಮಸೀದಿಯಲ್ಲಿ ಈಚೆಗೆ ಆಯೋಜಿಸಿದ್ದ ‘ಯೌಮ್-ಅಲ್-ಖುದ್ಸ್’ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.</p>.<p>‘ಪ್ಯಾಲೆಸ್ಟೈನ್ ಅನ್ನು ತಕ್ಷಣವೇ ಸ್ವತಂತ್ರ ರಾಷ್ಟ್ರವೆಂದು ಘೋಷಿಸಬೇಕು ಮತ್ತು ಜೆರುಸಲೇಂ ಹಾಗೂ ಗಾಜಾದ ಮೇಲಿನ ಅಕ್ರಮ ಕಬಳಿಕೆಯನ್ನು ಕೊನೆಗೊಳಿಸಲು ಇಸ್ರೇಲ್ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p>ಮೌಲಾನಾ ಫಕ್ರುದ್ದೀನ್ ಮಾನ್ಯಾಲ್, ಮೌಲಾನಾ ಶೇಖ್ ಸಲೀಮುದ್ದೀನ್ ನಿಜಾಮಿ, ಅಬ್ದುಲ್ ಜಬ್ಬಾರ್ ಗೋಲಾ, ಮೌಲಾನಾ ಯೂಸುಫ್ ಖುರೇಷಿ, ಅಫ್ಜಲ್ ಮಹಮೂದ್ ಮತ್ತಿತರರು ಮಾತನಾಡಿದರು.</p>.<p>ಖಾರಿ ಸಿದ್ದಿಕ್ ಹುಸೇನ್ ಕುರ್ಆನ್ ಪಠಣ ಮಾಡಿದರು. ಮುಹಮ್ಮದ್ ಅಫಾನ್ ಸೇರಿದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-34-274875700</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>