<p><strong>ಬೀಜಿಂಗ್:</strong> ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿರುವುದನ್ನು ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಒಪ್ಪಿಕೊಂಡಿದೆ. </p><p>ಚೀನಾದ ಸರ್ಕಾರಿ ಸ್ವಾಮ್ಯದ 'ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ'ದ ಎಂಜಿನಿಯರ್ಗಳು ಪಾಕಿಸ್ತಾನದ ಸೇನಾ ನೆಲೆಗಳಲ್ಲಿ ಇದ್ದುಕೊಂಡು ತಾಂತ್ರಿಕ ಬೆಂಬಲ ನೀಡಿರುವುದಾಗಿ ಹೇಳಿದ್ದಾರೆ. </p><p>ಭಾರತ ವಿರುದ್ಧ ಕಾರ್ಯಾಚರಣೆಯಲ್ಲಿ ಚೀನಾ ನಿರ್ಮಿತ ಜೆ-10ಸಿಇ ಯುದ್ಧ ವಿಮಾನಗಳು ಬಳಕೆಯಾಗಿದ್ದವು. </p><p>ರಣಭೂಮಿಯಲ್ಲಿ ಯುದ್ಧ ವಿಮಾನಗಳ ಸದ್ದು ಹಾಗೂ ವೈಮಾನಿಕ ದಾಳಿಯ ಸೈರನ್ಗಳು ಮೊಳಗುತ್ತಿದ್ದವು ಎಂದು ಎಂಜಿನಿಯರ್ ಜಾಂಗ್ ಹೆಂಗ್ ನೆನಪಿಸಿಕೊಂಡಿದ್ದಾರೆ. </p><p>ಕಳೆದ ವರ್ಷ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧ ತೀವ್ರಗೊಂಡಿತ್ತು. </p>.ಆಪರೇಷನ್ ಸಿಂಧೂರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್.'ಆಪರೇಷನ್ ಸಿಂಧೂರ' ಕಾರ್ಯಾಚರಣೆಗೆ ತುಂಬಿದ ವರ್ಷ: ಆದರೂ ಗಡಿಯಲ್ಲಿ ತಪ್ಪದ ಆತಂಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಜಿಂಗ್:</strong> ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿರುವುದನ್ನು ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಒಪ್ಪಿಕೊಂಡಿದೆ. </p><p>ಚೀನಾದ ಸರ್ಕಾರಿ ಸ್ವಾಮ್ಯದ 'ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ'ದ ಎಂಜಿನಿಯರ್ಗಳು ಪಾಕಿಸ್ತಾನದ ಸೇನಾ ನೆಲೆಗಳಲ್ಲಿ ಇದ್ದುಕೊಂಡು ತಾಂತ್ರಿಕ ಬೆಂಬಲ ನೀಡಿರುವುದಾಗಿ ಹೇಳಿದ್ದಾರೆ. </p><p>ಭಾರತ ವಿರುದ್ಧ ಕಾರ್ಯಾಚರಣೆಯಲ್ಲಿ ಚೀನಾ ನಿರ್ಮಿತ ಜೆ-10ಸಿಇ ಯುದ್ಧ ವಿಮಾನಗಳು ಬಳಕೆಯಾಗಿದ್ದವು. </p><p>ರಣಭೂಮಿಯಲ್ಲಿ ಯುದ್ಧ ವಿಮಾನಗಳ ಸದ್ದು ಹಾಗೂ ವೈಮಾನಿಕ ದಾಳಿಯ ಸೈರನ್ಗಳು ಮೊಳಗುತ್ತಿದ್ದವು ಎಂದು ಎಂಜಿನಿಯರ್ ಜಾಂಗ್ ಹೆಂಗ್ ನೆನಪಿಸಿಕೊಂಡಿದ್ದಾರೆ. </p><p>ಕಳೆದ ವರ್ಷ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧ ತೀವ್ರಗೊಂಡಿತ್ತು. </p>.ಆಪರೇಷನ್ ಸಿಂಧೂರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್.'ಆಪರೇಷನ್ ಸಿಂಧೂರ' ಕಾರ್ಯಾಚರಣೆಗೆ ತುಂಬಿದ ವರ್ಷ: ಆದರೂ ಗಡಿಯಲ್ಲಿ ತಪ್ಪದ ಆತಂಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>