ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ ವಿಚಾರ |ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಲಿ: ಚೀನಾ

Published : 4 ಜುಲೈ 2025, 14:55 IST
Last Updated : 4 ಜುಲೈ 2025, 14:55 IST
ಫಾಲೋ ಮಾಡಿ
Comments
‘ದಲೈ ಲಾಮಾ ಅವರೇ ನಿರ್ಧರಿಸಲಿ ಎಂಬುದು ಭಕ್ತರ ಇಂಗಿತ’
ಉತ್ತರಾಧಿಕಾರಿ ಯಾರಾಗಬೇಕು ಎಂದು ಟಿಬೆಟ್‌ನ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರೇ ನಿರ್ಧರಿಸಬೇಕು ಎಂಬುದು ಅವರ ಭಕ್ತರು ಮತ್ತು ಅನುಯಾಯಿಗಳ ಇಂಗಿತ ಎಂದು ಕಿರಣ್‌ ರಿಜಿಜು ಶುಕ್ರವಾರ ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ‘ನಾನು ಭಾರತ ಸರ್ಕಾರದ ಪರವಾಗಿ ಅಥವಾ ಚೀನಾದ ಅಭಿಪ್ರಾಯಕ್ಕೆ ಪ್ರತಿಯಾಗಿ ಈ ಹೇಳಿಕೆ ನೀಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು. ‘ದಲೈ ಲಾಮಾ ಅವರ ಅನುಯಾಯಿಯಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು. ‘ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಗೊಂದಲದ ಅವಶ್ಯಕತೆ ಇಲ್ಲ. ದಲೈ ಲಾಮಾ ಅವರೇ ಈ ಬಗ್ಗೆ  ನಿರ್ಧಾರ ಕೈಗೊಳ್ಳಬೇಕು ಎಂಬುದು ಬೌದ್ಧ ಧರ್ಮದ  ಮತ್ತು ದಲೈ ಲಾಮಾ ಅವರ ಅನುಯಾಯಿಗಳ ಬಯಕೆ. ಈ ಬಗ್ಗೆ ಸರ್ಕಾರವಾಗಲೀ ನಾನಾಗಲೀ ಏನನ್ನೂ ಹೇಳುವ ಅಗತ್ಯ ಇಲ್ಲ’ ಎಂದು ಹೇಳಿದರು.
ಕಿರಣ್‌ ರಿಜಿಜು
ಕಿರಣ್‌ ರಿಜಿಜು
ಸಂಸತ್‌ನಲ್ಲಿ ಭಾರತ–ಚೀನಾ ಬಂಧದ ಬಗ್ಗೆ ಚರ್ಚೆಯಾಗಲಿ: ಕಾಂಗ್ರೆಸ್‌
ಭಾರತ–ಚೀನಾ ಸಂಬಂಧದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿ ಎಂದು ಕಾಂಗ್ರೆಸ್‌ ಶುಕ್ರವಾರ ಒತ್ತಾಯಿಸಿದೆ. ‘ಈ ಬಗ್ಗೆ ಚರ್ಚೆ ನಡೆದಲ್ಲಿ ಚೀನಾ ದೇಶವು ನೇರವಾಗಿ ಅಥವಾ ಪಾಕಿಸ್ತಾನದ ಮೂಲಕ ಭಾರತದ ಮೇಲೆ ಒಡ್ಡುತ್ತಿರುವ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಕುರಿತು ವ್ಯಕ್ತವಾಗುವ ಸಾಮೂಹಿಕ ಪ್ರತಿಕ್ರಿಯೆಗಳಲ್ಲಿ ಒಮ್ಮತ ಮೂಡಲು ಸಾಧ್ಯ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT