<p><strong>ಹವಾನಾ:</strong> ಇಂಧನ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವ ಸಲುವಾಗಿ ಕ್ಯೂಬಾವು ಅಮೆರಿಕದ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದೆ.</p>.<p>ಈ ಕುರಿತು ವದಂತಿಗಳು ಹಬ್ಬುತ್ತಿದ್ದ ಬೆನ್ನಲ್ಲೇ, ಮಾತುಕತೆ ನಡೆದಿರುವುದನ್ನು ಕ್ಯೂಬಾ ಅಧ್ಯಕ್ಷ ಮಿಗೇಲ್ ಡಿಯಾಸ್ ಖಾನೀಲ್ ಖಚಿತಪಡಿಸಿದ್ದಾರೆ.</p>.<p>ಇಲ್ಲಿಯವರೆಗೆ ವೆನೆಜುವೆಲಾವು ಕ್ಯೂಬಾಕ್ಕೆ ಇಂಧನ ಪೂರೈಸುತ್ತಿತ್ತು. ಆದರೆ, ಇದರ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಸೆರೆಹಿಡಿದ ಬಳಿಕ, ಇಂಧನ ಪೂರೈಕೆಯನ್ನು ಅಮೆರಿಕ ತಡೆದಿತ್ತು. ಇದರಿಂದಾಗಿ ಕ್ಯೂಬಾದಲ್ಲಿ ಭಾರಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ.</p>.<p>‘ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯವಾದ ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ, ಮಾತುಕತೆಗಳ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಅಂತರರಾಷ್ಟ್ರೀಯ ಬೆಳವಣಿಗೆಗಳು ಮಾತುಕತೆ ನಡೆಯುವಂತೆ ಮಾಡಿವೆ’ ಎಂದು ಮಿಗೇಲ್ ಡಿಯಾಸ್ ಖಾನೀಲ್ ಹೇಳಿದ್ದಾರೆ.</p>.<p>ಖಾನೀಲ್ ಅವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶ್ವೇತ ಭವನವು, ‘ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಮಾತುಕತೆಯ ನೇತೃತ್ವ ವಹಿಸಿದ್ದಾರೆ. ಕ್ಯೂಬಾದ ನೀತಿಗಳು ಹಾಗೂ ಆಡಳಿತವನ್ನು ಬದಲಾಯಿಸಬೇಕು ಎಂಬ ಉದ್ದೇಶವಿದೆ’ ಎಂದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹವಾನಾ:</strong> ಇಂಧನ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುವ ಸಲುವಾಗಿ ಕ್ಯೂಬಾವು ಅಮೆರಿಕದ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿದೆ.</p>.<p>ಈ ಕುರಿತು ವದಂತಿಗಳು ಹಬ್ಬುತ್ತಿದ್ದ ಬೆನ್ನಲ್ಲೇ, ಮಾತುಕತೆ ನಡೆದಿರುವುದನ್ನು ಕ್ಯೂಬಾ ಅಧ್ಯಕ್ಷ ಮಿಗೇಲ್ ಡಿಯಾಸ್ ಖಾನೀಲ್ ಖಚಿತಪಡಿಸಿದ್ದಾರೆ.</p>.<p>ಇಲ್ಲಿಯವರೆಗೆ ವೆನೆಜುವೆಲಾವು ಕ್ಯೂಬಾಕ್ಕೆ ಇಂಧನ ಪೂರೈಸುತ್ತಿತ್ತು. ಆದರೆ, ಇದರ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಸೆರೆಹಿಡಿದ ಬಳಿಕ, ಇಂಧನ ಪೂರೈಕೆಯನ್ನು ಅಮೆರಿಕ ತಡೆದಿತ್ತು. ಇದರಿಂದಾಗಿ ಕ್ಯೂಬಾದಲ್ಲಿ ಭಾರಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ.</p>.<p>‘ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯವಾದ ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ, ಮಾತುಕತೆಗಳ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಅಂತರರಾಷ್ಟ್ರೀಯ ಬೆಳವಣಿಗೆಗಳು ಮಾತುಕತೆ ನಡೆಯುವಂತೆ ಮಾಡಿವೆ’ ಎಂದು ಮಿಗೇಲ್ ಡಿಯಾಸ್ ಖಾನೀಲ್ ಹೇಳಿದ್ದಾರೆ.</p>.<p>ಖಾನೀಲ್ ಅವರ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶ್ವೇತ ಭವನವು, ‘ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಮಾತುಕತೆಯ ನೇತೃತ್ವ ವಹಿಸಿದ್ದಾರೆ. ಕ್ಯೂಬಾದ ನೀತಿಗಳು ಹಾಗೂ ಆಡಳಿತವನ್ನು ಬದಲಾಯಿಸಬೇಕು ಎಂಬ ಉದ್ದೇಶವಿದೆ’ ಎಂದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>