<p><strong>ನವದೆಹಲಿ</strong>: ಇರಾನ್ನ ಐರಿಸ್ ಡೆನಾ ಹಡಗನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದುರುಳಿಸಿದ ಕೆಲ ದಿನಗಳ ಮುನ್ನ ಮತ್ತೊಂದು ಇರಾನ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ನಿಲುಗಡೆಗೆ ಭಾರತ ಅವಕಾಶ ನೀಡಿತ್ತು ಎಂದು ವರದಿ ತಿಳಿಸಿದೆ. </p><p>‘ಐರಿಸ್ ಲವನ್ ಹಡಗು ಮಾರ್ಚ್ 4ರಂದು ಕೊಚ್ಚಿ ಬಂದರಿನಲ್ಲಿ ನಿಲುಗಡೆ ಮಾಡಿತ್ತು. ಹಡಗಿನ ಸಿಬ್ಬಂದಿಗೆ ಮಾನವೀಯತೆ ದೃಷ್ಟಿಯಿಂದ ಕೊಚ್ಚಿ ನೌಕಾ ನೆಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.</p><p>ಐರಿಸ್ ಲವನ್ ಹಡಗಿನಲ್ಲಿ ತುರ್ತು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನೆರವಿಗಾಗಿ ಇರಾನ್ ಮನವಿ ಮಾಡಿತ್ತು. ಅದರಂತೆ, ಮಾರ್ಚ್ 1ರಂದು ಡಾಕಿಂಗ್ಗೆ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ</p><p>ಇರಾನ್ನ ಐರಿಸ್ ಡೇನಾ ಹಡಗನ್ನು ಅಮೆರಿಕ ಮುಳುಗಿಸಿದ ಒಂದು ದಿನದ ಮೊದಲು ಇರಾನ್ ಕಡೆಯಿಂದ ಭಾರತಕ್ಕೆ ಮನವಿ ಬಂದಿತ್ತು.</p><p> ವಿಶಾಖಪಟ್ಟಣದಲ್ಲಿ ಯುದ್ಧ ತಾಲೀಮಿನಲ್ಲಿ ಪಾಲ್ಗೊಂಡ ಬಳಿಕ ಐರಿಸ್ ಡೇನಾ ಹಡಗು ಇರಾನ್ಗೆ ಹಿಂದಿರುಗುತ್ತಿತ್ತು. ಬುಧವಾರ ನಡೆದ ಈ ದಾಳಿಯಲ್ಲಿ 87 ನಾವಿಕರು ಮೃತಪಟ್ಟಿದ್ದರು.</p> .ಮುಂದೆಂದೂ ದಾಳಿ ಮಾಡಲ್ಲ: ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ.ಹೊರ್ಮುಜ್ ಜಲಸಂಧಿ ಮುಚ್ಚುವುದರಿಂದ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಏಕೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇರಾನ್ನ ಐರಿಸ್ ಡೆನಾ ಹಡಗನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದುರುಳಿಸಿದ ಕೆಲ ದಿನಗಳ ಮುನ್ನ ಮತ್ತೊಂದು ಇರಾನ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ನಿಲುಗಡೆಗೆ ಭಾರತ ಅವಕಾಶ ನೀಡಿತ್ತು ಎಂದು ವರದಿ ತಿಳಿಸಿದೆ. </p><p>‘ಐರಿಸ್ ಲವನ್ ಹಡಗು ಮಾರ್ಚ್ 4ರಂದು ಕೊಚ್ಚಿ ಬಂದರಿನಲ್ಲಿ ನಿಲುಗಡೆ ಮಾಡಿತ್ತು. ಹಡಗಿನ ಸಿಬ್ಬಂದಿಗೆ ಮಾನವೀಯತೆ ದೃಷ್ಟಿಯಿಂದ ಕೊಚ್ಚಿ ನೌಕಾ ನೆಲೆಯಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.</p><p>ಐರಿಸ್ ಲವನ್ ಹಡಗಿನಲ್ಲಿ ತುರ್ತು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನೆರವಿಗಾಗಿ ಇರಾನ್ ಮನವಿ ಮಾಡಿತ್ತು. ಅದರಂತೆ, ಮಾರ್ಚ್ 1ರಂದು ಡಾಕಿಂಗ್ಗೆ ಅನುಮತಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ</p><p>ಇರಾನ್ನ ಐರಿಸ್ ಡೇನಾ ಹಡಗನ್ನು ಅಮೆರಿಕ ಮುಳುಗಿಸಿದ ಒಂದು ದಿನದ ಮೊದಲು ಇರಾನ್ ಕಡೆಯಿಂದ ಭಾರತಕ್ಕೆ ಮನವಿ ಬಂದಿತ್ತು.</p><p> ವಿಶಾಖಪಟ್ಟಣದಲ್ಲಿ ಯುದ್ಧ ತಾಲೀಮಿನಲ್ಲಿ ಪಾಲ್ಗೊಂಡ ಬಳಿಕ ಐರಿಸ್ ಡೇನಾ ಹಡಗು ಇರಾನ್ಗೆ ಹಿಂದಿರುಗುತ್ತಿತ್ತು. ಬುಧವಾರ ನಡೆದ ಈ ದಾಳಿಯಲ್ಲಿ 87 ನಾವಿಕರು ಮೃತಪಟ್ಟಿದ್ದರು.</p> .ಮುಂದೆಂದೂ ದಾಳಿ ಮಾಡಲ್ಲ: ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ.ಹೊರ್ಮುಜ್ ಜಲಸಂಧಿ ಮುಚ್ಚುವುದರಿಂದ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಏಕೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>