<p><strong>ಕಠ್ಮಂಡು:</strong> ಕಳೆದ ವರ್ಷ ನಡೆದಿದ್ದ ಜೆನ್–ಝಿ ಪ್ರತಿಭಟನೆ ಹತ್ತಿಕ್ಕಿದ್ದಕ್ಕಾಗಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಬಂಧನ ವಿರೋಧಿಸಿ ನೇಪಾಳದಲ್ಲಿ ಸತತ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ ನಡುವೆಯೂ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೂವರು ಪ್ರಧಾನಿಗಳ ವಿರುದ್ಧದ ತನಿಖೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.</p>.<p>ನೇಪಾಳದಲ್ಲಿ ರಚನೆಯಾದ ಬಾಲೇಂದ್ರ ಶಾ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ಜೆನ್–ಝಿ ಪ್ರತಿಭಟನೆಗಳ ಕುರಿತ ತನಿಖಾ ಆಯೋಗದ ವರದಿಯನ್ನು ಜಾರಿ ತರಲು ನಿರ್ಧರಿಸಿದ ನಂತರ ಈ ಬಂಧನಗಳು ನಡೆದಿವೆ. ಪ್ರತಿಭಟನೆಯಲ್ಲಿ 76 ಜನರು ಮೃತಪಟ್ಟಿದ್ದರು.</p>.<p>ಒಲಿ ಮತ್ತು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಶನಿವಾರ ಬಂಧಿಸಲಾಗಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಇಂಧನ ಸಚಿವ, ನೇಪಾಳಿ ಕಾಂಗ್ರೆಸ್ ನಾಯಕ ದೀಪಕ್ ಖಡ್ಕಾ ಅವರನ್ನು ಭಾನುವಾರ ಬಂಧಿಸಲಾಗಿತ್ತು.</p>.<p>ಖಡ್ಕಾ ಬಂಧನದ ನಂತರ ನೇಪಾಳದ ಹಣ ಅಕ್ರಮ ವರ್ಗಾವಣೆ ತನಿಖಾ ಇಲಾಖೆ (ಡಿಎಂಎಲ್ಐ) ಮತ್ತು ನೇಪಾಳ ಪೊಲೀಸರು ಮಾಜಿ ಪ್ರಧಾನಿಗಳಾದ ಶೇರ್ ಬಹದ್ದೂರ್ ದೇವುಬಾ, ಪುಪ್ಫ ಕಮಮ್ ದಹಾಲ್ ಮತ್ತು ಒಲಿ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.</p>.<p>ಪ್ರಕರಣವನ್ನು ವಿವರವಾದ ತನಿಖೆ ನಡೆಸುವುದಕ್ಕೂ ಮೊದಲು ಇಲಾಖೆಯು ಸುಮಾರು 6 ತಿಂಗಳ ಕಾಲ ಪ್ರಾಥಮಿಕ ವಿಚಾರಣೆಗಳನ್ನು ನಡೆಸಿತ್ತು ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.</p>.<p>ಶಾಂತವಾದ ಪ್ರತಿಭಟನೆ ಒಲಿ ಅವರ ನೇಪಾಳ ಕಮ್ಯುನಿಸ್ಟ್ ಪಕ್ಷ (ಯುನೈಟೆಡ್ ಮಾರ್ಕ್ಸಿಸ್ಟ್–ಲೆನಿನಿಸ್ಟ್) ಹಾಗೂ ಅದರ ವಿದ್ಯಾರ್ಥಿ ಮತ್ತು ಇತರ ಸಂಘಟನೆಗಳ ನೂರಾರು ಸದಸ್ಯರು ಸೋಮವಾರ ಬೆಳಿಗ್ಗೆ ನಯಾ ಬನೇಶ್ವರ್ ಪ್ರದೇಶದಲ್ಲಿ ಜಮಾಯಿಸಿ ಸೇಡಿನ ರಾಜಕೀಯ ಕೊನೆಗೊಳಿಸಲು ಮತ್ತು ಒಲಿಯನ್ನು ತಕ್ಷಣವೇ ಬಿಡುಗಡೆ ಮಾಡಲು ಆಗ್ರಹಿಸಿದರು. ಶನಿವಾರ ಮತ್ತು ಭಾನುವಾರ ಪಕ್ಷವು ಆಯೋಜಿಸಿದ್ದ ಪ್ರತಿಭಟನೆಗಳಿಗೆ ಹೋಲಿಸಿದರೆ ಸೋಮವಾರದ ಪ್ರತಿಭಟನೆ ಶಾಂತವಾಗಿತ್ತು. ಭಾನುವಾರದ ಪ್ರತಿಭಟನೆಯಲ್ಲಿ ‘ಗಲಭೆ ನಿಗ್ರಹ’ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಡಜನ್ಗೂ ಹೆಚ್ಚು ಯುಎಂಲ್ ಕಾರ್ಯಕರ್ತರು ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ಕಳೆದ ವರ್ಷ ನಡೆದಿದ್ದ ಜೆನ್–ಝಿ ಪ್ರತಿಭಟನೆ ಹತ್ತಿಕ್ಕಿದ್ದಕ್ಕಾಗಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಬಂಧನ ವಿರೋಧಿಸಿ ನೇಪಾಳದಲ್ಲಿ ಸತತ ಮೂರನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ ನಡುವೆಯೂ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೂವರು ಪ್ರಧಾನಿಗಳ ವಿರುದ್ಧದ ತನಿಖೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.</p>.<p>ನೇಪಾಳದಲ್ಲಿ ರಚನೆಯಾದ ಬಾಲೇಂದ್ರ ಶಾ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ಜೆನ್–ಝಿ ಪ್ರತಿಭಟನೆಗಳ ಕುರಿತ ತನಿಖಾ ಆಯೋಗದ ವರದಿಯನ್ನು ಜಾರಿ ತರಲು ನಿರ್ಧರಿಸಿದ ನಂತರ ಈ ಬಂಧನಗಳು ನಡೆದಿವೆ. ಪ್ರತಿಭಟನೆಯಲ್ಲಿ 76 ಜನರು ಮೃತಪಟ್ಟಿದ್ದರು.</p>.<p>ಒಲಿ ಮತ್ತು ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಶನಿವಾರ ಬಂಧಿಸಲಾಗಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಇಂಧನ ಸಚಿವ, ನೇಪಾಳಿ ಕಾಂಗ್ರೆಸ್ ನಾಯಕ ದೀಪಕ್ ಖಡ್ಕಾ ಅವರನ್ನು ಭಾನುವಾರ ಬಂಧಿಸಲಾಗಿತ್ತು.</p>.<p>ಖಡ್ಕಾ ಬಂಧನದ ನಂತರ ನೇಪಾಳದ ಹಣ ಅಕ್ರಮ ವರ್ಗಾವಣೆ ತನಿಖಾ ಇಲಾಖೆ (ಡಿಎಂಎಲ್ಐ) ಮತ್ತು ನೇಪಾಳ ಪೊಲೀಸರು ಮಾಜಿ ಪ್ರಧಾನಿಗಳಾದ ಶೇರ್ ಬಹದ್ದೂರ್ ದೇವುಬಾ, ಪುಪ್ಫ ಕಮಮ್ ದಹಾಲ್ ಮತ್ತು ಒಲಿ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.</p>.<p>ಪ್ರಕರಣವನ್ನು ವಿವರವಾದ ತನಿಖೆ ನಡೆಸುವುದಕ್ಕೂ ಮೊದಲು ಇಲಾಖೆಯು ಸುಮಾರು 6 ತಿಂಗಳ ಕಾಲ ಪ್ರಾಥಮಿಕ ವಿಚಾರಣೆಗಳನ್ನು ನಡೆಸಿತ್ತು ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.</p>.<p>ಶಾಂತವಾದ ಪ್ರತಿಭಟನೆ ಒಲಿ ಅವರ ನೇಪಾಳ ಕಮ್ಯುನಿಸ್ಟ್ ಪಕ್ಷ (ಯುನೈಟೆಡ್ ಮಾರ್ಕ್ಸಿಸ್ಟ್–ಲೆನಿನಿಸ್ಟ್) ಹಾಗೂ ಅದರ ವಿದ್ಯಾರ್ಥಿ ಮತ್ತು ಇತರ ಸಂಘಟನೆಗಳ ನೂರಾರು ಸದಸ್ಯರು ಸೋಮವಾರ ಬೆಳಿಗ್ಗೆ ನಯಾ ಬನೇಶ್ವರ್ ಪ್ರದೇಶದಲ್ಲಿ ಜಮಾಯಿಸಿ ಸೇಡಿನ ರಾಜಕೀಯ ಕೊನೆಗೊಳಿಸಲು ಮತ್ತು ಒಲಿಯನ್ನು ತಕ್ಷಣವೇ ಬಿಡುಗಡೆ ಮಾಡಲು ಆಗ್ರಹಿಸಿದರು. ಶನಿವಾರ ಮತ್ತು ಭಾನುವಾರ ಪಕ್ಷವು ಆಯೋಜಿಸಿದ್ದ ಪ್ರತಿಭಟನೆಗಳಿಗೆ ಹೋಲಿಸಿದರೆ ಸೋಮವಾರದ ಪ್ರತಿಭಟನೆ ಶಾಂತವಾಗಿತ್ತು. ಭಾನುವಾರದ ಪ್ರತಿಭಟನೆಯಲ್ಲಿ ‘ಗಲಭೆ ನಿಗ್ರಹ’ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಡಜನ್ಗೂ ಹೆಚ್ಚು ಯುಎಂಲ್ ಕಾರ್ಯಕರ್ತರು ಗಾಯಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>